ಸುದ್ದಿಗಳು

#GaneshaFestival | ಇದು ಸಿಹಿ ಸಿಹಿ ಗಣಪತಿ | ಮಂಡ್ಯದಲ್ಲಿ ಪ್ರಥಮ ಬಾರಿಗೆ ಬೆಲ್ಲದ ಗಣಪ ತಯಾರಿ | ಪರಿಸರ ಸ್ನೇಹಿ ಬೆಲ್ಲದ ಗಣಪನಿಗೆ ಭಾರಿ ಬೇಡಿಕೆ |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಗಣೇಶ ಹಬ್ಬಕ್ಕೆ ಇನ್ನೇನು 2-3 ತಿಂಗಳು ಬಾಕಿ ಇರುವಾಗಲೇ ಗಣೇಶ ಮೂರ್ತಿ ತಯಾರಕರು ತಯಾರಿ ನಡೆಸುತ್ತಾರೆ. ಎಲ್ಲಿ ನೋಡಿದರಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್‌ನದ್ದೇ ಭರಾಟೆ. ಪರಿಸರ ಕಾಳಜಿ ಹಿನ್ನೆಲೆಯಲ್ಲಿ ಪಿಓಪಿ ಗಣೇಶ ಮೂರ್ತಿಗಳನ್ನು ಬ್ಯಾನ್‌ ಮಾಡಿದ್ರೂ, ಅದರ ಹಾವಳಿ ನಿಂತಿಲ್ಲ. ಆದರೆ ಇತ್ತೀಚೆಗೆ ಜನರೇ ಹೆಚ್ಚು ಪರಿಸರ ಸ್ನೇಹಿ ಗಣಪತಿ (Natural) ಮೂರ್ತಿಗಳ ಮೊರೆ ಹೋಗ್ತಿದ್ದಾರೆ. ಹಾಗಾಗಿ ತಯಾರಕರು ಹೆಚ್ಚು ಪರಿಸರ ಸ್ನೇಹಿ ಮೂರ್ತಿಗಳನ್ನೇ ತಯಾರುತ್ತಿದ್ದಾರೆ. ಇದೀಗ ಬೆಲ್ಲದ (Jaggery)  ಗಣಪನ ಮೂರ್ತಿಯನ್ನು  ಸಕ್ಕರೆನಾಡು ಮಂಡ್ಯದಲ್ಲಿದಲ್ಲಿ ತಯಾರಿಸಿ ಈಗ ಬೆಲ್ಲದ ಗಣಪನದ್ದೇ ಹವಾ. ಬೆಲ್ಲದಿಂದ ತಯಾರಾದ ಗಣಪನಿಗೆ ಎಲ್ಲಿಲ್ಲದ ಬೇಡಿಕೆ ಹೆಚ್ಚಾಗಿದೆ.

Advertisement
Advertisement

ಮಂಡ್ಯ ಅಂದ್ರೆ ಬರಿ ಸಕ್ಕರೆನಾಡಲ್ಲಾ. ಮಂಡ್ಯ ಬೆಲ್ಲಕ್ಕೂ ಈಗ ಸಾಕಷ್ಟು ಬೇಡಿಕೆ ಇದೆ. ಈಗ ಮಂಡ್ಯ ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದು, ಮಂಡ್ಯದಲ್ಲಿ ಪ್ರಥಮ ಬಾರಿಗೆ ಬೆಲ್ಲದ ಗಣಪನನ್ನ ತಯಾರು ಮಾಡಲಾಗ್ತಿದೆ. ಕೆಮಿಕಲ್ ಇಲ್ಲದ ಪಕ್ಕಾ ಪರಿಸರ ಸ್ನೇಹಿ ಬೆಲ್ಲದ ಗಣಪನನ್ನ ತಯಾರು ಮಾಡಿದ್ದಾರೆ.

ಕಡಿಮೆ ಖರ್ಚಿನಲ್ಲಿ ತಯಾರು: ಮಂಡ್ಯದ ವಿಕಾಸನ ಸಂಸ್ಥೆಯ ಸಹಯೋಗದೊಂದಿಗೆ ಹಳುವಾಡಿ ಗ್ರಾಮದ ತಮ್ಮಯ್ಯ ಎಂಬುವವರು ತಮ್ಮ ಹಾಲೆ ಮನೆಯಲ್ಲಿ ಗಣೇಶನ ಮೂರ್ತಿಗಳನ್ನ ತಯಾರು ಮಾಡ್ತಿದ್ದಾರೆ. ಸುಮಾರು 2 ಅಡಿ ಎತ್ತರದಷ್ಟು ಗಣೇಶ ಮೂರ್ತಿ ಹಾಗೂ ಅರ್ಧ ಅಡಿ ಎತ್ತರದಷ್ಟು ಗೌರಿ ಮೂರ್ತಿಗಳನ್ನ ಸಹ ತಯಾರು ಮಾಡಲಾಗ್ತಿದೆ. ಈ ಗಣೇಶ ಮೂರ್ತಿ ಅತಿ ಕಡಿಮೆ ಖರ್ಚಿನಲ್ಲಿ ತಯಾರು ಮಾಡಲಾಗ್ತಿದ್ದು, ಗಣೇಶ ಮೂರ್ತಿ ಕೊಂಡುಕೊಳ್ಳುವವರಿಗೂ ಇದು ಕೈಗೆಟುಕುವ ಬೆಲೆಗೆ ದೊರಕುತ್ತಿದೆ.

ಹಲವು ಜಿಲ್ಲೆಗಳಿಂದ ಬೇಡಿಕೆ : ಸದ್ಯ ಮಂಡ್ಯ ಬೆಲ್ಲದ ಗಣಪನಿಗೆ ರಾಜ್ಯದ ಹಲವು ಜಿಲ್ಲೆಗಳಿಂದ ಬೇಡಿಕೆ ಹೆಚ್ಚಾಗಿದೆ. ಅಲ್ಲದೆ ವಿಸರ್ಜನೆ ಸಂದರ್ಭದಲ್ಲಿ ಕೂಡ ನೀರಿಗೆ ಗಣಪನನ್ನ ಬಿಟ್ಟ ಬಳಿಕ ಬಹು ಬೇಗ ನೀರಿನಲ್ಲಿ ಗಣಪತಿ ಕರಗಲಿದೆ. ಹೀಗಾಗಿ ನೀವು ಕೂಡ ಈ ಬಾರಿ ಬೆಲ್ಲದ ಗಣಪತಿಗೆ ಜೈ ಎನ್ನುವ ಮೂಲಕ ಪರಿಸರಕ್ಕೆ ಹಾನಿಯೂಂಟು ಮಾಡುವ ಪಿಒಪಿ ಹಾಗೂ ವಿಷಕಾರಿ ಬಣ್ಣದ ಗಣಪನಿಗೆ ಗುಡ್ ಬೈ ಹೇಳಿ.

Advertisement

Source : Digital Media

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಹವಾಮಾನ ವರದಿ | 22.06.2025| ಜೂ.28 ರಿಂದ ಮಳೆ‌ ಕಡಿಮೆಯಾಗಲಿದೆಯಾ ?

23.06.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ :…

8 hours ago

ಇಲ್ಲಿ ರೈತರು ಕೀಟನಾಶಕಗಳ ಬದಲಿಗೆ ಬಾತುಕೋಳಿಗಳನ್ನು ಬಳಸುತ್ತಾರೆ..!

ರಾಸಾಯನಿಕ ನೀಡಿಯೇ ಇದುವರೆಗೆ ಕೃಷಿ ಮಾಡುವ ವಿಧಾನವಿತ್ತು. ಇದೀಗ ಕೀಟಗಳ ನಿಯಂತ್ರಣಕ್ಕೆ ಹಾಗೂ…

9 hours ago

ರಸ್ತೆ ಬದಿ ನೆಡಲಾಗಿರುವ ಮರಗಳ ಸುತ್ತ ಕನಿಷ್ಠ 1 ಮೀಟರ್ ರಸ್ತೆ  ಬ್ಲಾಕ್ ತೆರವಿಗೆ ಆದೇಶ

ಬಿಬಿಎಂಪಿ ವ್ಯಾಪ್ತಿಯಲ್ಲಿ ರಸ್ತೆ ಬದಿ ನೆಡಲಾಗಿರುವ ಮರಗಳ ಸುತ್ತ ಕನಿಷ್ಟ 1 ಮೀಟರ್…

10 hours ago

ಕೃಷಿಯಲ್ಲಿ ಹೆಚ್ಚಿನ ಇಳುವರಿಗಾಗಿ ಎಐ ಕೃಷಿ ನೀತಿ | ಅನುಷ್ಠಾನಕ್ಕಾಗಿ ಸರ್ಕಾರ 500 ಕೋಟಿ ಮೀಸಲು

ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ವೆಚ್ಚವನ್ನು ಕಡಿಮೆ ಮಾಡಲು ಕೃಷಿಯಲ್ಲಿ ಎಐ, ಡ್ರೋನ್‌ಗಳು ಮತ್ತು…

11 hours ago

ಭರದಿಂದ ನಡೆಯುತ್ತಿದೆ ಎತ್ತಿನಹೊಳೆ ಯೋಜನೆ | 2027ರೊಳಗೆ ಎತ್ತಿನಹೊಳೆ ನೀರು ಕೋಲಾರ ಭಾಗಕ್ಕೆ

ಎತ್ತಿನ ಹೊಳೆ  ಯೋಜನೆಯ  ಮೂಲಕ  ಬರಪೀಡಿತ ಜಿಲ್ಲೆಗಳಾದ ತುಮಕೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ…

12 hours ago

ಮಕರ ರಾಶಿಯಲ್ಲಿ ಚಂದ್ರ, ಈ 3 ರಾಶಿಗೆ ಯಶಸ್ಸು, ಸಂಪತ್ತು

ಹೆಚ್ಚಿನ ಮಾಹಿತಿ ಬೇಕಾದರೆ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

13 hours ago