ಪ್ರಮುಖ

#Yashobhoomi | ಜನ್ಮ ದಿನದ ಅಂಗವಾಗಿ ದೆಹಲಿಯಲ್ಲಿ ಯಶೋಭೂಮಿ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ | ವಿಶ್ವದರ್ಜೆಯ ಪ್ರದರ್ಶನ ಕೇಂದ್ರದ ಉದ್ಘಾಟನೆ

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಇಂದು ಪ್ರಧಾನಿ ನರೇಂದ್ರ ಮೋದಿಯವರ ಜನ್ಮ ದಿನ. ನಾಡಿನಾದ್ಯಂತ ಭಾರತೀಯರು ವಿಶೇಷ ರೀತಿಯಲ್ಲಿ ಪ್ರಧಾನಿಯವರ ಹುಟ್ಟು ಹಬ್ಬವನ್ನು ಆಚರಿಸಿದ್ದಾರೆ. ಅನೇಕರು ಮೋದಿಯವರಿಗೆ ಜನ್ಮ ದಿನದ ಶುಭಾಶಯಗಳನ್ನು ರವಾನಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ 73ನೇ ಜನ್ಮದಿನದ ಪ್ರಯುಕ್ತ ವಿಶ್ವದರ್ಜೆಯ ಪ್ರದರ್ಶನ ಕೇಂದ್ರದ ಉದ್ಘಾಟನೆಯನ್ನು ಪ್ರಧಾನಿಯವರು ಮಾಡಿದ್ದಾರೆ. ರಾಷ್ಟ್ರರಾಜಧಾನಿಯ ದ್ವಾರಕಾ ಪ್ರದೇಶದಲ್ಲಿ ಪ್ರಧಾನಿಯವರು ತಮ್ಮ ಜನ್ಮದಿನದಂದು ಇಂಡಿಯಾ ಇಂಟರ್ನ್ಯಾಷನಲ್ ಕನ್ವೆನ್ಷನ್ ಎಕ್ಸ್​ಪೋ ಸೆಂಟರ್​ನ ಮೊದಲ ಹಂತವನ್ನು ಉದ್ಘಾಟಿಸಿದ್ದಾರೆ. ಯಶೋಭೂಮಿ ಎಂದು ಕರೆಯಲಾಗುವ ಈ ಎಕ್ಸ್​ಪೋ ಸೆಂಟರ್ಗೆ ಎಕ್ಸ್​ಪ್ರೆಸ್​ವೆ ಕನೆಕ್ಟಿವಿಟಿ ಕೂಡ ನೀಡಲಾಗಿದೆ.

Advertisement

ದ್ವಾರಕಾ ಸೆಕ್ಟರ್ 21ನಲ್ಲಿರುವ ಏರ್ಪೋರ್ಟ್, ಮೆಟ್ರೋ ಎಕ್ಸ್​ಪ್ರೆಸ್ ಲೈನ್ ಅನ್ನು ಯಶೋಭೂಮಿ ಮೆಟ್ರೋ ಸ್ಟೇಷನ್​ವರೆಗೂ ವಿಸ್ತರಿಸಲಾಗಿದೆ. ಯಶೋಭೂಮಿ ಮೆಟ್ರೋಸ್ಟೇಷನ್ ಸ್ಥಳವು ದ್ವಾರಕಾ ಸೆಕ್ಟರ್ 25ರಲ್ಲಿ ಇದೆ. ನರೇಂದ್ರ ಮೋದಿ ಅವರು ಏರ್​ಪೋರ್ಟ್ ಲೈನ್ ವಿಸ್ತರಣೆಗೆ ಚಾಲನೆ ಕೊಟ್ಟ ಬಳಿಕ ಮೆಟ್ರೋ ರೈಲಿನಲ್ಲಿ ಸಾಮಾನ್ಯ ಜನರ ಜೊತೆ ಕುಳಿತು ಪ್ರಯಾಣಿಸಿದರು.

ಯಶೋಭೂಮಿ ವಿಶೇಷತೆಗಳೇನು?

  • ಯಶೋಭೂಮಿ ಎಂಬುದು ಇಂಡಿಯಾ ಇಂಟರ್ನ್ಯಾಷನಲ್ ಕನ್ವೆನ್ಷನ್ ಅಂಡ್ ಎಕ್ಸ್​ಪೋ ಸೆಂಟರ್ (ಐಐಸಿಸಿ). ಅಂತಾರಾಷ್ಟ್ರೀಯ ಸಭೆ, ಸಮಾರಂಭ, ಪ್ರದರ್ಶನಗಳನ್ನು ಆಯೋಜಿಸಲು ಇರುವ ಬೃಹತ್ ಕೇಂದ್ರವಾಗಿದೆ. ಇಂಥ ಸೌಲಭ್ಯ ಹೊಂದಿರುವ ವಿಶ್ವದ ಬೃಹತ್ ಕಟ್ಟಡಗಳ ಪೈಕಿ ಯಶೋಭೂಮಿ ಒಂದೆನಿಸಿದೆ.
  • ಯಶೋಭೂಮಿಯ ಒಟ್ಟು ಯೋಜನಾ ಸ್ಥಳ ಬರೋಬ್ಬರಿ 8.9 ಲಕ್ಷ ಚದರ ಮೀಟರ್ ವಿಸ್ತೀರ್ಣದ್ದಾಗಿದೆ. ಇದರಲ್ಲಿ ಕಟ್ಟಡ ನಿರ್ಮಾಣ ಪ್ರದೇಶ 1.8 ಲಕ್ಷ ಚದರ ಮೀಟರ್ ವಿಸ್ತೀರಣದ್ದಾಗಿದೆ.
  • ಯಶೋಭೂಮಿ ನಿರ್ಮಾಣಕ್ಕೆ ಅಂದಾಜು 5,000 ಕೋಟಿ ರುಪಾಯಿಗೂ ಹೆಚ್ಚು ವೆಚ್ಚವಾಗುತ್ತಿದೆ.
  • ಯಶೋಭೂಮಿಯ ಕನ್ವೆನ್ಷನ್ ಸೆಂಟರ್ ಅನ್ನು 73,000 ಚದರ ಮೀಟರ್ ಜಾಗದಲ್ಲಿ ನಿರ್ಮಿಸಲಾಗಿದೆ. ಇದರಲ್ಲಿ ಮುಖ್ಯ ಆಡಿಟೋರಿಯಂ, 13 ಮೀಟಿಂಗ್ ರೂಮ್ ಸೇರಿದಂತೆ 15 ಕನ್ವೆನ್ಷನ್ ರೂಮ್​ಗಳು ಒಳಗೊಂಡಿವೆ.
  • ಯಶೋಭೂಮಿಯಲ್ಲಿ ಪರಿಸರಸ್ನೇಹಿ ಎನಿಸುವ ಹಲವು ಫೀಚರ್​ಗಳಿವೆ. ತ್ಯಾಜ್ಯನೀರು ನಿರ್ವಹಣೆ ವ್ಯವಸ್ಥೆ ಇದೆ. ಮಳೆನೀರು ಸಂಗ್ರಹಿಸುವ ವ್ಯವಸ್ಥೆ ಇದೆ. ಮೇಲ್ಚಾವಣಿ ಸೌರ ಫಲಕಗಳಿವೆ. ಈ ಕಟ್ಟಡಗಳ ಸಂಕೀರ್ಣಕ್ಕೆ ಇಂಡಿಯನ್ ಗ್ರೀನ್ ಬಿಲ್ಡಿಂಗ್ ಕೌನ್ಸಿಲ್​ನಿಂದ ಅತ್ಯುಚ್ಚವೆನಿಸುವ ಪ್ಲಾಟಿನಂ ಪ್ರಮಾಣಪತ್ರ ಕೊಡಲಾಗಿದೆ.
  • ಯಶೋಭೂಮಿ ಸಂಕೀರ್ಣದಲ್ಲಿರುವ ಪ್ರಮುಖ ಆಡಿಟೋರಿಯಂ ಅಥವಾ ಸಭಾಂಗಣವನ್ನು ವಿಶೇಷವಾಗಿ ನಿರ್ಮಿಸಲಾಗಿದೆ. ಶಬ್ದದ ನಿರ್ವಹಣೆ ಉತ್ತಮವಾಗಿರುವಂತೆ ನಿರ್ಮಿಸಲಾಗಿದೆ. ವಿಶ್ವದರ್ಜೆ ಮಟ್ಟದ ಆಡಿಟೋರಿಯಂ ಇದಾಗಿದೆ.

Source : Digital Media

Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಕಾವೇರಿ ನದಿ ನೀರು ಮಲಿನ ತಡೆಯಲು ಕ್ರಮ | ಅಸ್ತಿ ವಿಸರ್ಜನೆ ಮಾಡದಂತೆ ಸೂಚನೆ

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಕಾವೇರಿ ನದಿ ತೀರದಲ್ಲಿ ಅಸ್ತಿ ವಿಸರ್ಜನೆ ಮಾಡಿ ನದಿ…

4 hours ago

ಸ್ವಾತಂತ್ರ್ಯಕ್ಕಾಗಿ ಮದುವೆ

ಕುಟುಂಬ ಎಂಬುದು ಸಮಾಜದ ಆಧಾರ ಸ್ಥಂಭ. ಮದುವೆ ಎಂಬುದು ಈ ಸ್ಥಂಭದ ತಳಪಾಯ.…

4 hours ago

ಅಡಿಕೆ ಕೊಳೆರೋಗ | ಸಿಎಂ ಜೊತೆ ಶಾಸಕ ಅಶೋಕ್ ಕುಮಾರ್ ರೈ ಚರ್ಚೆ

ದ ಕ ಜಿಲ್ಲೆಯಲ್ಲಿ ಅಡಿಕೆಗೆ ಕೊಳೆರೋಗ ಭಾದಿಸಿದ್ದು ಇದರಿಂದ ಅಡಿಕೆ ಬೆಳೆಗಾರರು ಸಂಕಷ್ಟಕ್ಕೆ…

10 hours ago

ಹವಾಮಾನ ವರದಿ | 14-08-2025 | ಆ.20 ರವರೆಗೂ ಮಳೆ -ತುಂತುರು ಮಳೆ

15.08.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ :…

10 hours ago

ಸಗಣಿಯಿಂದ 5500 ಕಿಮೀ ಮಾಲಿನ್ಯ ರಹಿತ ಪ್ರಯಾಣ..!

ಒಂದು ಹಸುವಿನ ಸಗಣಿಯಿಂದ ಪ್ರತಿ ವರ್ಷ 225 ಲೀಟರ್ ಪೆಟ್ರೋಲ್‌ಗೆ ಸಮಾನವಾದ ಮೀಥೇನ್…

18 hours ago

ಬಾಗಿಲು ಇಲ್ಲದ ಮನೆಯಂತಾದ ಕನ್ನಡ ಸ್ಥಿತಿ : ರಾಘವೇಶ್ವರ ಶ್ರೀ

ಕನ್ನಡದ ಸ್ಥಿತಿ ಇಂದು ಬೇಲಿ ಇಲ್ಲದ ತೋಟದಂತೆ, ಬಾಗಿಲಿಲ್ಲದ ಮನೆಯಂತಾಗಿದ್ದು, ನಾಲಿಗೆ ಶುದ್ಧೀಕರಣ,…

18 hours ago