Advertisement
ಸುದ್ದಿಗಳು

#GaneshaFestival | ಇದು ಸಿಹಿ ಸಿಹಿ ಗಣಪತಿ | ಮಂಡ್ಯದಲ್ಲಿ ಪ್ರಥಮ ಬಾರಿಗೆ ಬೆಲ್ಲದ ಗಣಪ ತಯಾರಿ | ಪರಿಸರ ಸ್ನೇಹಿ ಬೆಲ್ಲದ ಗಣಪನಿಗೆ ಭಾರಿ ಬೇಡಿಕೆ |

Share

ಗಣೇಶ ಹಬ್ಬಕ್ಕೆ ಇನ್ನೇನು 2-3 ತಿಂಗಳು ಬಾಕಿ ಇರುವಾಗಲೇ ಗಣೇಶ ಮೂರ್ತಿ ತಯಾರಕರು ತಯಾರಿ ನಡೆಸುತ್ತಾರೆ. ಎಲ್ಲಿ ನೋಡಿದರಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್‌ನದ್ದೇ ಭರಾಟೆ. ಪರಿಸರ ಕಾಳಜಿ ಹಿನ್ನೆಲೆಯಲ್ಲಿ ಪಿಓಪಿ ಗಣೇಶ ಮೂರ್ತಿಗಳನ್ನು ಬ್ಯಾನ್‌ ಮಾಡಿದ್ರೂ, ಅದರ ಹಾವಳಿ ನಿಂತಿಲ್ಲ. ಆದರೆ ಇತ್ತೀಚೆಗೆ ಜನರೇ ಹೆಚ್ಚು ಪರಿಸರ ಸ್ನೇಹಿ ಗಣಪತಿ (Natural) ಮೂರ್ತಿಗಳ ಮೊರೆ ಹೋಗ್ತಿದ್ದಾರೆ. ಹಾಗಾಗಿ ತಯಾರಕರು ಹೆಚ್ಚು ಪರಿಸರ ಸ್ನೇಹಿ ಮೂರ್ತಿಗಳನ್ನೇ ತಯಾರುತ್ತಿದ್ದಾರೆ. ಇದೀಗ ಬೆಲ್ಲದ (Jaggery)  ಗಣಪನ ಮೂರ್ತಿಯನ್ನು  ಸಕ್ಕರೆನಾಡು ಮಂಡ್ಯದಲ್ಲಿದಲ್ಲಿ ತಯಾರಿಸಿ ಈಗ ಬೆಲ್ಲದ ಗಣಪನದ್ದೇ ಹವಾ. ಬೆಲ್ಲದಿಂದ ತಯಾರಾದ ಗಣಪನಿಗೆ ಎಲ್ಲಿಲ್ಲದ ಬೇಡಿಕೆ ಹೆಚ್ಚಾಗಿದೆ.

ಮಂಡ್ಯ ಅಂದ್ರೆ ಬರಿ ಸಕ್ಕರೆನಾಡಲ್ಲಾ. ಮಂಡ್ಯ ಬೆಲ್ಲಕ್ಕೂ ಈಗ ಸಾಕಷ್ಟು ಬೇಡಿಕೆ ಇದೆ. ಈಗ ಮಂಡ್ಯ ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದು, ಮಂಡ್ಯದಲ್ಲಿ ಪ್ರಥಮ ಬಾರಿಗೆ ಬೆಲ್ಲದ ಗಣಪನನ್ನ ತಯಾರು ಮಾಡಲಾಗ್ತಿದೆ. ಕೆಮಿಕಲ್ ಇಲ್ಲದ ಪಕ್ಕಾ ಪರಿಸರ ಸ್ನೇಹಿ ಬೆಲ್ಲದ ಗಣಪನನ್ನ ತಯಾರು ಮಾಡಿದ್ದಾರೆ.

ಕಡಿಮೆ ಖರ್ಚಿನಲ್ಲಿ ತಯಾರು: ಮಂಡ್ಯದ ವಿಕಾಸನ ಸಂಸ್ಥೆಯ ಸಹಯೋಗದೊಂದಿಗೆ ಹಳುವಾಡಿ ಗ್ರಾಮದ ತಮ್ಮಯ್ಯ ಎಂಬುವವರು ತಮ್ಮ ಹಾಲೆ ಮನೆಯಲ್ಲಿ ಗಣೇಶನ ಮೂರ್ತಿಗಳನ್ನ ತಯಾರು ಮಾಡ್ತಿದ್ದಾರೆ. ಸುಮಾರು 2 ಅಡಿ ಎತ್ತರದಷ್ಟು ಗಣೇಶ ಮೂರ್ತಿ ಹಾಗೂ ಅರ್ಧ ಅಡಿ ಎತ್ತರದಷ್ಟು ಗೌರಿ ಮೂರ್ತಿಗಳನ್ನ ಸಹ ತಯಾರು ಮಾಡಲಾಗ್ತಿದೆ. ಈ ಗಣೇಶ ಮೂರ್ತಿ ಅತಿ ಕಡಿಮೆ ಖರ್ಚಿನಲ್ಲಿ ತಯಾರು ಮಾಡಲಾಗ್ತಿದ್ದು, ಗಣೇಶ ಮೂರ್ತಿ ಕೊಂಡುಕೊಳ್ಳುವವರಿಗೂ ಇದು ಕೈಗೆಟುಕುವ ಬೆಲೆಗೆ ದೊರಕುತ್ತಿದೆ.

ಹಲವು ಜಿಲ್ಲೆಗಳಿಂದ ಬೇಡಿಕೆ : ಸದ್ಯ ಮಂಡ್ಯ ಬೆಲ್ಲದ ಗಣಪನಿಗೆ ರಾಜ್ಯದ ಹಲವು ಜಿಲ್ಲೆಗಳಿಂದ ಬೇಡಿಕೆ ಹೆಚ್ಚಾಗಿದೆ. ಅಲ್ಲದೆ ವಿಸರ್ಜನೆ ಸಂದರ್ಭದಲ್ಲಿ ಕೂಡ ನೀರಿಗೆ ಗಣಪನನ್ನ ಬಿಟ್ಟ ಬಳಿಕ ಬಹು ಬೇಗ ನೀರಿನಲ್ಲಿ ಗಣಪತಿ ಕರಗಲಿದೆ. ಹೀಗಾಗಿ ನೀವು ಕೂಡ ಈ ಬಾರಿ ಬೆಲ್ಲದ ಗಣಪತಿಗೆ ಜೈ ಎನ್ನುವ ಮೂಲಕ ಪರಿಸರಕ್ಕೆ ಹಾನಿಯೂಂಟು ಮಾಡುವ ಪಿಒಪಿ ಹಾಗೂ ವಿಷಕಾರಿ ಬಣ್ಣದ ಗಣಪನಿಗೆ ಗುಡ್ ಬೈ ಹೇಳಿ.

Source : Digital Media

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ತೆಂಗು–ಅಡಿಕೆ ನಡುವೆ ಏಲಕ್ಕಿ, ಮೆಣಸು, ಅರಿಶಿಣ | ತುಮಕೂರಿನಲ್ಲೂ ಬೆಳೆಗಾರರು ಪರ್ಯಾಯ ಆದಾಯದ ಕಡೆಗೆ ಹೆಜ್ಜೆ

ತೆಂಗು–ಅಡಿಕೆ ತೋಟಗಳ ನಡುವೆ ಅರಿಶಿಣ, ಏಲಕ್ಕಿ, ಮೆಣಸು ಬೆಳೆದು ತುಮಕೂರು ಜಿಲ್ಲೆಯ ರೈತರು…

1 day ago

ಮಳೆ ಕೊರತೆ ನೀಗಿಸಲು ಕರ್ನಾಟಕದಲ್ಲಿ ಮೋಡ ಬಿತ್ತನೆ

ಮುಂಗಾರು ಮಳೆಯ ಕೊರತೆ ಎದುರಿಸುತ್ತಿರುವ ರಾಜ್ಯದ ಹಲವು ಭಾಗಗಳಲ್ಲಿ ಮಳೆ ಹೆಚ್ಚಿಸಲು ಸರ್ಕಾರ…

1 day ago

ಕಸ್ತೂರಿ ರಂಗನ್ ವರದಿ ಜಾರಿಗೆ ಅವಕಾಶವಿಲ್ಲ

ಕಸ್ತೂರಿ ರಂಗನ್ ವರದಿ ಜಾರಿಗೆ ಕರ್ನಾಟಕ ಸರ್ಕಾರ ಅವಕಾಶ ನೀಡುವುದಿಲ್ಲ ಎಂದು ಶಿಕ್ಷಣ…

1 day ago

ಪ್ರತೀ ವರ್ಷ “ಕ್ಲೈಮೇಟ್ ರಿಪೋರ್ಟ್ ಕಾರ್ಡ್” ಏಕೆ ಬೇಕು..? ನಮ್ಮ ನಗರ-ಹಳ್ಳಿಗಳು ಹವಾಮಾನ ಬದಲಾವಣೆಗೆ ಎಷ್ಟು ಸಿದ್ಧ?

ಭಾರತದ 126 ಪ್ರಮುಖ ನಗರಗಳ ಹವಾಮಾನ ಸಿದ್ಧತೆಯನ್ನು ಅಳೆಯಲಾಗಿದ್ದರೂ, 2021ರ ಮೌಲ್ಯಮಾಪನದಲ್ಲಿ ರಾಷ್ಟ್ರೀಯ…

2 days ago

ಭಾರತದ ಕಾಫಿಗೆ ಜಾಗತಿಕ ಬೇಡಿಕೆ ಹೆಚ್ಚಳ : ‘ಇಂಡಿ ಕಾಫಿ’ಗೆ ಹೊಸ ಬ್ರ್ಯಾಂಡ್‌ ಒತ್ತು

ಭಾರತದ ಕಾಫಿ ರಫ್ತು ಗಳಿಕೆ 2021-22ರ ಸುಮಾರು 1 ಶತಕೋಟಿ ಡಾಲರ್‌ನಿಂದ 2025-26ರಲ್ಲಿ…

2 days ago

ಕಸವೆಂದು ಎಸೆಯುವ ಮೀನಿನ ಮುಳ್ಳು–ಹುರುಪೆಯಲ್ಲಿ ‘ಸಂಜೀವಿನಿ’!

ಮೀನಿನ ಮುಳ್ಳು ಮತ್ತು ಹುರುಪೆಯನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ ಹಲ್ಲುಗಳ ಪುನರ್ ನಿರ್ಮಾಣ ಹಾಗೂ…

2 days ago