The Rural Mirror ಕಾಳಜಿ

#RuralMirror | ಶಾಲಾ ಮಕ್ಕಳಿಗೆ ಸಮಸ್ಯೆ | ಕೊಲ್ಲಮೊಗ್ರದ ಕಡಂಬಳದಲ್ಲಿ ಸಂಪರ್ಕ ರಸ್ತೆ ತಕ್ಷಣ ಬೇಕಿದೆ |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಗ್ರಾಮೀಣ ಭಾಗದಲ್ಲಿ ನಿತ್ಯವೂ ಒಂದಲ್ಲ ಒಂದು ಸಮಸ್ಯೆ. ರಸ್ತೆ, ಸೇತುವೆ, ವಿದ್ಯುತ್‌, ನೆಟ್ವರ್ಕ್..‌ ಈ ವಿಷಯಗಳು ಗ್ರಾಮೀಣ ಭಾಗದಲ್ಲಿ ಯಾವಾಗಲೂ ಚರ್ಚೆಯ ವಿಷಯ. ಇದೀಗ ಸೇತುವೆ ರಚನೆಯ ಹಂತದಲ್ಲಿದೆ, ಆದರೆ ಸಂಪರ್ಕ ರಸ್ತೆ ಇಲ್ಲದೆ ಶಾಲಾ ಮಕ್ಕಳು ಪರದಾಟದ ಸ್ಥಿತಿಯಲ್ಲಿರುವ ಸಂಗತಿಯೊಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಗ್ರಾಮೀಣ ಭಾಗವಾದ ಕೊಲ್ಲಮೊಗ್ರದಿಂದ ವರದಿಯಾಗಿದೆ.

Advertisement
Advertisement

ಸುಳ್ಯ ತಾಲೂಕಿನ ಗ್ರಾಮೀಣ ಭಾಗವಾದ  ಕೊಲ್ಲಮೊಗ್ರ ಸಂಪರ್ಕ ಹೊಂದಿರುವ ಪುಟ್ಟ ಹಳ್ಳಿ ಕಡಂಬಳ. ಸುಮಾರು 20-30 ಮನೆಗಳು ಇರುವ ಪ್ರದೇಶ ಇದು. ಇಲ್ಲಿ ಹರಿಯುವ ಹೊಳೆಯೊಂದು ಈ ಊರನ್ನು ಸಂಪರ್ಕ ಮಾಡಲು ಅಡ್ಡಿಯಾಗಿತ್ತು. ಸೇತುವೆ ನಿರ್ಮಾಣದ ಬೇಡಿಕೆ ಇತ್ತು. ಆ ಬೇಡಿಕೆ ಪೂರೈಕೆಯಾಗುತ್ತಿದೆ, ಸೇತುವೆ ನಿರ್ಮಾಣ ಹಂತದಲ್ಲಿದೆ. ಆದರೆ ಸದ್ಯ ಸಂಪರ್ಕ ರಸ್ತೆ ಇಲ್ಲದೆ ಶಾಲಾ ಮಕ್ಕಳು ಪರದಾಟ ನಡೆಸುವಂತಾಗಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.

Advertisement
ಶಾಲಾ ಮಕ್ಕಳು ಈ ರಸ್ತೆಯಲ್ಲಿ ನಿತ್ಯವೂ ಬರುತ್ತಿರುವುದರಿಂದ ತಕ್ಷಣವೇ ಕಡಂಬಳ ಸಂಪರ್ಕ ಸೇತುವೆ ಕಾಮಗಾರಿಯಲ್ಲಿ ತಾತ್ಕಾಲಿಕ ಸಂಪರ್ಕ ವ್ಯವಸ್ಥೆ ಮಾಡಿಸಬೇಕಿದೆ.
ಬಾಲಸುಬ್ರಹ್ಮಣ್ಯ ಎನ್‌ ಜಿ, ಗ್ರಾಮಸ್ಥ

ಕೊಲ್ಲಮೊಗ್ರ  ಕಡಂಬಳ ರಸ್ತೆಯಲ್ಲಿ ಸೇತುವೆ ನಿರ್ಮಾಣವಾಗುತ್ತಿದೆ. ಸದ್ಯ ಪಿಲ್ಲರ್‌ ಮಾತ್ರಾ ರಚನೆಯಾಗಿದೆ. ಈಗ ಮಳೆಯೂ ಆರಂಭವಾಗಿದೆ. ಕಳೆದ ಬಾರಿ ಹಾಗೂ ಅದಕ್ಕಿಂತ ಹಿಂದೆ ರಸ್ತೆ ಸಂಪರ್ಕ ಸರಿಯಾಗಿಲ್ಲದೆ ಹಾಗೂ ಹೊಳೆಯ ಕಾರಣದಿಂದ ಭಾರೀ ಮಳೆಯಾದರೆ 20 ಕುಟುಂಬ ಕೊಲ್ಲಮೊಗ್ರ ಪೇಟೆಯನ್ನು ಸಂಪರ್ಕ ಕಳೆದುಕೊಳ್ಳುತ್ತಿದ್ದರು. ತೀರಾ ಗ್ರಾಮೀಣ ಪ್ರದೇಶವಾದ್ದರಿಂದ ಪರದಾಟ ನಿತ್ಯವೂ ಇತ್ತು. ಇದೀಗ ಮಳೆಯ ಸಂದರ್ಭ ಹೊಸ ಸೇತುವೆ ನಿರ್ಮಾಣ ನಡೆಯುತ್ತಿದೆ. ಈ ಬಾರಿಯೂ ಇಲ್ಲಿನ ಜನರು ಹೊಳೆ ದಾಟಲು ಸಂಕಷ್ಟ ಪಡುವಂತಾಗಿದೆ. ಅದರಲ್ಲೂ ಶಾಲಾ ಮಕ್ಕಳಿಗೆ ನಡೆದಾಡಲು ಸಂಕಷ್ಟವಾಗಿದೆ.  ಸುಮಾರು 15 – ಮಕ್ಕಳ ಈ ದಾರಿಯಾಗಿ ಬರುತ್ತಾರೆ. ಪ್ರಾಥಮಿಕ ಶಾಲಾ ಮಕ್ಕಳೂ ಇದ್ದಾರೆ. ಹೀಗಾಗಿ ಪೋಷಕರಿಗೂ ಭಯದ ವಾತಾವರಣ ನಿರ್ಮಾಣವಾಗಿದೆ. ಮಳೆಯಾದಾಗ ಸೇತುವೆ ಇಲ್ಲದ, ಸಂಪರ್ಕ ಸರಿಯಾಗಿಲ್ಲದ ಈ ದಾರಿಯಲ್ಲಿ ಮಕ್ಕಳು ಬರುವುದು  ಆತಂಕವೂ ಆಗಿದೆ. ಹೀಗಾಗಿ  ಸಂಬಂಧಿತರು ತಕ್ಷಣ ಗಮನಹರಿಸಿ ಸಮಸ್ಯೆ ಬಗೆಹರಿಸಲು ಒತ್ತಾಯ ಕೇಳಿಬಂದಿದೆ.

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಬದುಕು ಪುರಾಣ | ಅಂದು ಒಬ್ಬ ಬಕಾಸುರ.. ಇಂದು?

ಭೋಜನವೆಂದರೆ ಉದರಾಗ್ನಿಯನ್ನು ತಣಿಸುವ ಯಜ್ಞ. ಉದರಾಗ್ನಿಗೆ ಖಾದ್ಯಗಳೇ ಆಜ್ಯಗಳು. ಯಜ್ಞವೆಂದಾಗ ಶ್ರದ್ಧೆ, ಭಕ್ತಿ ಮತ್ತು…

21 hours ago

ಪರಿಘ ಯೋಗ, ಈ 5 ರಾಶಿಗೆ ಅತ್ಯಂತ ಶುಭ..!

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

21 hours ago

ಹವಾಮಾನ ವರದಿ | 07-06-2025 | ಜೂನ್ 11 ರಿಂದ ಕರಾವಳಿ ಜಿಲ್ಲೆಗಳ ಹೆಚ್ಚಿನ ಭಾಗಗಳಲ್ಲಿ ಉತ್ತಮ ಮಳೆ

ಅರಬ್ಬಿ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ಉಂಟಾಗಿದ್ದು, ಇದರ ಪ್ರಭಾವದಿಂದ ಜೂನ್ 11 ರಿಂದ…

2 days ago

ಸುಸ್ಥಿರ ಅಭಿವೃದ್ಧಿ ಯಾವಾಗಲೂ ತತ್ವಶಾಸ್ತ್ರ ಮತ್ತು ಸಿದ್ಧಾಂತದ ಮೂಲತತ್ವಾಗಿದೆ

ಇತ್ತೀಚಿನ  ದಿನಗಳಲ್ಲಿ ಮಾಲಿನ್ಯದ ಬಗ್ಗೆ ಹೆಚ್ಚುತ್ತಿರುವ ಕಾಳಜಿ, ಪರಿಸರ ಸಂರಕ್ಷಣೆಯ ಬಗ್ಗೆ ಚಿಂತಿಸುವಂತೆ…

2 days ago

ನಿಮಗೆ ಸಾಡೇಸಾತಿ ಶುರುವಾಗಿದ್ರೆ ಶನಿ ನೀಡ್ತಾನೆ ಈ 6 ಸೂಚನೆ..!

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷ್ಗಳನ್ನು ಸಂಪರ್ಕಿಸಿ 9535156490

2 days ago

ಹೊಸರುಚಿ | ಹಲಸಿನ ಹಣ್ಣಿನ ಮಲ್ಪುರಿ

ಹಲಸಿನ ಹಣ್ಣಿನ ಮಲ್ಪುರಿಗೆ ಬೇಕಾಗುವ ಸಾಮಗ್ರಿಗಳು : ಹಲಸಿನ ಹಣ್ಣಿನ ಪಲ್ಪ್ 1/2 ಕಪ್,…

2 days ago