Advertisement
ರಾಷ್ಟ್ರೀಯ

ಸಾಧನೆ-ಸಾಹಸ | ಲೇಹ್‌ನಿಂದ ಮನಾಲಿಗೆ 60 ಗಂಟೆಗಳಲ್ಲಿ ತಡೆರಹಿತ ಸೈಕ್ಲಿಂಗ್ ಮಾಡಿದ ಪುಣೆ ಮಹಿಳೆ….!

Share

ಉತ್ಸಾಹಕ್ಕೆ ವಯಸ್ಸು ಅಡ್ಡಿಯಾಗುವುದಿಲ್ಲ, ಸಾಧನೆಗೂ ವಯಸ್ಸು ಅಡ್ಡಿಯಾಗದು. ಬೇಕಾದ್ದು ಯುವ ಮನಸ್ಸು ಮಾತ್ರಾ. ಇಂತದ್ದೊಂದು ಮಾತಿಗೆ ಸಾಕ್ಷಿಯಾದವರು ಈ ಮಹಿಳೆ.  ಪುಣೆಯ ಈ ಮಹಿಳೆಯ ಹೆಸರು ಪ್ರೀತಿ ಮಸ್ಕೆ. 

44 ವರ್ಷ ವಯಸ್ಸಿನವರು ಗೋಲ್ಡನ್ ಕ್ವಾಡ್ರಿಲ್ಯಾಟರಲ್ (6,000 ಕಿಮೀ) ನಲ್ಲಿ ಅತಿ ವೇಗದ ಮಹಿಳಾ ಸೈಕ್ಲಿಸ್ಟ್ ಎಂಬ ದಾಖಲೆಯನ್ನು ಮಾಡಿರುವ ಪುಣೆಯ ಮಹಿಳೆ ಪ್ರೀತಿ ಮಸ್ಕೆ  ಈಗ 60 ಗಂಟೆಗಳ ಒಳಗೆ ಲೇಹ್‌ನಿಂದ ಮನಾಲಿಗೆ (480 ಕಿಮೀ) ಪೆಡಲ್ ಮಾಡುವ ಮೂಲಕ ಮತ್ತೊಂದು ವಿಶ್ವ ಅಲ್ಟ್ರಾ ಸೈಕ್ಲಿಂಗ್ ದಾಖಲೆಯನ್ನು ಪ್ರಯತ್ನಿಸುತ್ತಿದ್ದಾರೆ.

ಇತ್ತೀಚೆಗೆ ಉತ್ತರಾಖಂಡ್‌ನಲ್ಲಿ ನಡೆದ  ಎತ್ತರದ ಸೈಕ್ಲಿಂಗ್ ಈವೆಂಟ್‌ನಲ್ಲಿ ಭಾರತ-ಚೀನಾ-ನೇಪಾಳ ಗಡಿಯಲ್ಲಿ 3,400 ಮೀಟರ್ ಸೈಕ್ಲಿಂಗ್‌ನಲ್ಲಿ ಭಾಗವಹಿಸಿದ್ದ ಇವರು  ಉತ್ತರಾಖಂಡ ಸರ್ಕಾರದಿಂದ ಆಹ್ವಾನಿತರಾದ ಪುಣೆಯ ಏಕೈಕ ಮಹಿಳಾ ಸೈಕ್ಲಿಸ್ಟ್ ಆಗಿದ್ದರು. ಈಗ ಲೇಹ್-ಮನಾಲಿಯ ಸವಾರಿಯಲ್ಲಿ ಅತ್ಯಂತ ಸವಾಲಿನ ಕೆಲಸವೆಂದರೆ ನಿದ್ರೆ ರಹಿತವಾಗಿ ಸೈಕ್ಲಿಂಗ್‌ ಮಾಡುವುದು. ಈ ಸವಾಲನ್ನು ತೆಗೆದುಕೊಂಡ ಪ್ರೀತಿ ಸಾಧನೆಯ ಹಾದಿಯಲ್ಲಿದ್ದಾರೆ.

ಎತ್ತರದ ಭೂಪ್ರದೇಶ ಇದಾಗಿರುವುದರಿಂದ ದೇಹ ಇಲ್ಲಿಗೆ ಒಗ್ಗಿಕೊಳ್ಳಲು ರೈಡ್‌ಗೆ ಕನಿಷ್ಠ ಹತ್ತು ದಿನಗಳ ಮೊದಲು ಲೇಹ್‌ನಲ್ಲಿರಬೇಕು ಎಂದು ಪ್ರೀತಿ ಹೇಳುತ್ತಾರೆ. ಪೌಷ್ಠಿಕಾಂಶದ ಕೊರತೆಯೂ ಅಗತ್ಯವಾಗಿರುವುದರಿಂದ ತ್ವರಿತ ಮತ್ತು ನಿರಂತರ ಶಕ್ತಿಯ ಮರುಪೂರಣಕ್ಕಾಗಿ ಹೆಚ್ಚಾಗಿ ಹೆಚ್ಚಿನ ಪ್ರೋಟೀನ್ ದ್ರವ ಆಹಾರವನ್ನು ಸೇವಿಸಬೇಕಾಗುತ್ತದೆ ಎಂದು ಪ್ರೀತಿ ಹೇಳುತ್ತಾರೆ.

ಕಳೆದ ವರ್ಷ, ಅವರು ಪುಣೆ-ಬೆಂಗಳೂರು-ಚೆನ್ನೈ-ಕೋಲ್ಕತ್ತಾ-ದೆಹಲಿ-ರಾಜಸ್ಥಾನ-ಮುಂಬೈ-ಪುಣೆ – ಗೋಲ್ಡನ್ ಚತುಷ್ಪಥ ಮಾರ್ಗವನ್ನು 24 ದಿನಗಳು ಮತ್ತು ಆರು ಗಂಟೆಗಳಲ್ಲಿ ಪೂರ್ಣಗೊಳಿಸಿದರು. ಈ ರೈಡ್ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ನಲ್ಲಿ ದಾಖಲಾಗಿತ್ತು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

Published by
ಮಿರರ್‌ ಡೆಸ್ಕ್‌

Recent Posts

ಹೊಸರುಚಿ | ಹಲಸಿನ ಹಣ್ಣಿನಿಂದ ಇಷ್ಟು ರುಚಿ ಸಿಗುತ್ತದಾ…? ಈ ಕಸ್ಟರ್ಡ್ ಮಿಸ್ ಮಾಡ್ಬೇಡಿ…!

ಹಲಸಿನ ಹಣ್ಣಿನಿಂದ ಸುಲಭವಾಗಿ ತಯಾರಿಸಬಹುದಾದ ಕಸ್ಟರ್ಡ್ ಬೇಸಿಗೆಯಲ್ಲಿ ಉತ್ತಮ ಡೆಸರ್ಟ್ ಆಯ್ಕೆಯಾಗಿದೆ. ಕಡಿಮೆ…

3 hours ago

ಹವಾಮಾನ ವರದಿ | 14-03-2026 | ಇಂದು ಕರಾವಳಿ ಜಿಲ್ಲೆಯಲ್ಲಿ ಮಳೆ ಸಾಧ್ಯತೆ – ರಾಜ್ಯದ ಹಲವೆಡೆ ಗುಡುಗು ಮಳೆ ಮುನ್ಸೂಚನೆ

ರಾಜ್ಯದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಸಂಜೆ ಹಾಗೂ ರಾತ್ರಿ ವೇಳೆಯಲ್ಲಿ ಗುಡುಗು…

9 hours ago

ಮಲೇಷ್ಯಾದಲ್ಲಿ ರಬ್ಬರ್ ಉತ್ಪಾದನೆ ಇಳಿಕೆ – ಭಾರತೀಯ ರೈತರಿಗೆ ಏನು ಸಂದೇಶ?

ಮಲೇಷ್ಯಾದಲ್ಲಿ ರಬ್ಬರ್ ಉತ್ಪಾದನೆ ಇಳಿಕೆ ಭಾರತೀಯ ರೈತರಿಗೆ ಬೆಲೆ ಬೆಂಬಲದ ಸೂಚನೆ ನೀಡುತ್ತಿದೆ.…

16 hours ago

ಕಾಡಾನೆ ದಾಳಿಗೆ ಕಾಫಿ ತೋಟದ ಮಾಲೀಕ ಬಲಿ; ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರ ಆಕ್ರೋಶ

ಕೊಡಗಿನಲ್ಲಿ ಕಾಡಾನೆ ದಾಳಿಗೆ ಕಾಫಿ ತೋಟದ ಮಾಲೀಕ ಗಣಪತಿ ಮೃತಪಟ್ಟಿದ್ದಾರೆ. ಕಾಡಾನೆ ಹಾವಳಿ…

16 hours ago

ಹಾಲಿನಲ್ಲಿ ಕಲಬೆರಕೆ ಪತ್ತೆಗೆ ವಿಶೇಷ ಕಿಟ್‌

ಹಾಲಿನ ಗುಣಮಟ್ಟ ಕಾಪಾಡಲು ಸಹಕಾರ ಸಂಘಗಳಿಗೆ ವಿಶೇಷ ಕಲಬೆರಕೆ ಪತ್ತೆ ಕಿಟ್‌ಗಳನ್ನು ವಿತರಿಸಲಾಗುತ್ತಿದೆ.

17 hours ago

ಸೌದೆ ಬೇಡಿಕೆ ಏರಿಕೆ ಹಿನ್ನೆಲೆ | ಅಕ್ರಮ ಮರ ಕಡಿತಲೆ ತಡೆಯಲು ಸಚಿವ ಈಶ್ವರ ಖಂಡ್ರೆ ಕಟ್ಟುನಿಟ್ಟಿನ ಸೂಚನೆ

ಸೌದೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆ ಅಕ್ರಮ ಮರ ಕಡಿತಲೆ ತಡೆಯಲು ಸಚಿವ ಈಶ್ವರ…

1 day ago