ಸೇವಾ ಯಜ್ಞದಲ್ಲಿ ಪುತ್ತಿಲ ಪರಿವಾರ | ಸುಳ್ಯದಲ್ಲಿ ಪ್ಲಾಸ್ಟಿಕ್ ಹೊದಿಕೆಯ ಮನೆ | ಮನೆ ನಿರ್ಮಿಸುವ ಯೋಜನೆ ಹಾಕಿಕೊಂಡ ಪುತ್ತಿಲ ಪರಿವಾರ |

September 18, 2023
10:50 AM
ಪುತ್ತಿಲ ಪರಿಹಾರ ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿದೆ. ಅಶಕ್ತರಿಗೆ ನೆರವಾಗುವ ಮೂಲಕ ಸಮಾಜಕ್ಕೆ ಶಕ್ತಿ ತುಂಬುವ ಕೆಲಸವನ್ನು ಮಾಡುತ್ತಿದೆ.

ಸಮಾಜಮುಖಿ ಕಾರ್ಯಗಳಲ್ಲಿ ಪುತ್ತಿಲ ಪರಿವಾರ ಮತ್ತಷ್ಟು ಸಕ್ರಿಯವಾಗಿದೆ. ಕಳೆದ ಕೆಲವು ದಿನಗಳಿಂದ ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ಸಕ್ರಿಯವಾಗಿ ಪುತ್ತಿಲ ಪರಿವಾರ ತೊಡಗಿಸಿಕೊಂಡಿದೆ. ಅಶಕ್ತರಿಗೆ ನೆರವಾಗುವ ಮೂಲಕ ಮಾನವೀಯ ಸೇವಾ ಕಾರ್ಯದಲ್ಲಿದೆ. ಇದೀಗ ಸುಳ್ಯದಲ್ಲಿ ಕೂಲಿ ಕೆಲಸಕ್ಕೆ ಹೋಗುವ ಮಹಿಳೆಯೋರ್ವರು ಪ್ಲಾಸ್ಟಿಕ್ ಹೊದಿಕೆಯ ಮನೆಯಲ್ಲಿ ತನ್ನ ಮೂವರು ಮಕ್ಕಳ ಜೊತೆ ವಾಸಿಸುತಿದ್ದಾರೆ. ಇದಕ್ಕಾಗು ಶಾಶ್ವತ ಮನೆ ನಿರ್ಮಾಣ ಯೋಜನೆಯ ಗುರಿಯನ್ನು ಪುತ್ತಿಲ ಪರಿವಾರ ಇರಿಸಿಕೊಂಡಿದೆ.

ಸುಳ್ಯ ನಗರದ ಶಾಂತಿನಗರದಲ್ಲಿ ಕೂಲಿ ಕೆಲಸಕ್ಕೆ ಹೋಗುವ ಮಹಿಳೆಯೋರ್ವರು ಪ್ಲಾಸ್ಟಿಕ್ ಹೊದಿಕೆಯ ಮನೆಯಲ್ಲಿ ತನ್ನ ಮೂವರು ಮಕ್ಕಳ ಜೊತೆ ವಾಸಿಸುತಿದ್ದರು. ಈ ಬಗ್ಗೆ ಮಾಹಿತಿ ಪಡೆದು ಅರುಣ್‌ ಕುಮಾರ್‌ ಪುತ್ತಿಲ ಹಾಗೂ ಪುತ್ತಿಲ ಪರಿವಾರದ ಸದಸ್ಯರು ಸ್ಥಳಕ್ಕೆ ಭೇಟಿ ನೀಡಿ ಇವರ ಸಮಸ್ಯೆ ಬಗ್ಗೆ ಮಾತುಕತೆ ನಡೆಸಿ ಸುಳ್ಯ ನಗರ ಪಂಚಾಯತ್ ಮುಖ್ಯ ಅಧಿಕಾರಿ ಸುಧಾಕರ್ ಜೊತೆ ಮಾತನಾಡಿದರು. ಮನೆಗೆ ಸಂಬಂಧಿಸಿದ ದಾಖಲೆ ಪತ್ರಗಳ ಸಮಸ್ಯೆ ಇತ್ಯರ್ಥ ಆದ ತಕ್ಷಣ ಇಲಾಖೆಯ ಸಹಾಯದಿಂದ ಪುತ್ತಿಲ ಪರಿವಾರದ ನೇತೃತ್ವದಲ್ಲಿ ಮನೆ ನಿರ್ಮಿಸುವ ಯೋಜನೆ ಹಾಕಿಕೊಂಡಿದ್ದಾರೆ.

ಈ ಸಂದರ್ಭ ಅರುಣ್ ಕುಮಾರ್‌ ಪುತ್ತಿಲ ,ಸುಧಾಕರ್ ಬಾಟೋಳಿಮೂಲೆ ಅಲೆಟ್ಟಿ, ದಿನೇಶ್ ಅಡ್ಕಾರ್ ಸಹಿತ ಹಲವು ಪ್ರಮುಖರು ಇದ್ದರು.

ಇದೇ ವೇಳೆ ಪುತ್ತಿಲ ಪರಿವಾರದ ಸದಸ್ಯ ಮುಂಡೂರು ಗ್ರಾಮದ ಪುತ್ತಿಲ ನಿವಾಸಿಯಾಗಿರುವ ಸತೀಶ ಅವರಿಗೆ ಅನಾರೋಗ್ಯದ ನಿಮಿತ್ತ ಪುತ್ತಿಲ ಪರಿವಾರದ ಸೇವಾ ಸಮರ್ಪಣೆಯ ಭಾಗವಾಗಿ ಸಂಗ್ರಹಿಸಲಾದ ಸಹಾಯಧನವನ್ನು ಮಂಗಳವಾರ ವಿತರಣೆ ಮಾಡಲಾಗಿದೆ. ಪುತ್ತಿಲ ಪರಿವಾರದ ಸದಸ್ಯರು ಮನೆಗೆ ಭೇಟಿ ಮಾಡಿ ಸಹಾಯಧನವನ್ನು ಸತೀಶ್ ರವರಿಗೆ ವಿತರಿಸಿದರು.

ಈ ಸಂದರ್ಭದಲ್ಲಿ ಅರುಣ್ ಕುಮಾರ್ ಪುತ್ತಿಲ, ಸುದೀರ್ ಶೆಟ್ಟಿ ನೇಸರ, ಅನಿಲ್ ಕುಮಾರ್ ಕನ್ನಾರ್ನೂಜಿ, ಬಾಲಚಂದ್ರ ಸೊರಕೆ, ಅಶೋಕ್ ನಾಯ್ಕ್ ಪುತ್ತಿಲ, ಪ್ರಸಾದ್ ಪುತ್ತಿಲ, ಧನಂಜಯ ಕಲ್ಲಮ, ಜನಾರ್ಧನ ಎ, ಮೋನಪ್ಪ ಗೌಡ, ಹರೀಶ್ ನಾಯ್ಕ್ ಪುತ್ತಿಲ, ಪುರಂದರ ಗೌಡ ಮತ್ತಿತರರು ಉಪಸ್ಥಿತರಿದ್ದರು

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕೃಷಿ ಸಂಕಷ್ಟ ಎಂದರೆ ರೈತನ ಸಾಲ ಮಾತ್ರವಲ್ಲ – ಕೃಷಿ ಕಾರ್ಮಿಕರ ರಕ್ಷಣೆಯೂ ಅಗತ್ಯ
September 4, 2026
7:21 AM
by: ದ ರೂರಲ್ ಮಿರರ್.ಕಾಂ
ಹಂತ ಹಂತವಾಗಿ 16 ಸಾವಿರ ಶಿಕ್ಷಕರ ನೇಮಕ – ಅನುದಾನಿತ ಶಾಲೆಗಳಿಗೂ 6 ಸಾವಿರ ಹುದ್ದೆ – ಸಚಿವ ಮಧು ಬಂಗಾರಪ್ಪ
September 4, 2026
7:04 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 03-09-2026 | ಕರಾವಳಿ–ಮಲೆನಾಡಿನಲ್ಲಿ ಮತ್ತೆ ಮಳೆಯ ಸಾಧ್ಯತೆ…?
September 3, 2026
1:13 PM
by: ಸಾಯಿಶೇಖರ್ ಕರಿಕಳ
ಹಿಮಾಲಯದಲ್ಲಿ ಹಿಮ ಕರಗಿದರೆ ಅದರ ಪರಿಣಾಮ ಎಲ್ಲಿಗೆ ತಲುಪುತ್ತದೆ? – ಹಿಮಾಲಯದ ದುರಂತದ ಬಳಿಕ ನೇಪಾಳದ ಪ್ರಧಾನಿ ಎಚ್ಚರಿಕೆ
September 3, 2026
7:08 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror