Advertisement
ಸುದ್ದಿಗಳು

ಪುತ್ತೂರು ಬಾಲವನ ಉನ್ನತ ಕಲಾ ಕೇಂದ್ರವಾಗಿಸಲು ಒತ್ತಾಯ | ರಂಗಾಯಣದ ಐದನೇ ಘಟಕ ಬಾಲವನದಲ್ಲಾಗಲಿ |

Share

ಪುತ್ತೂರು: ನಾಡಿನ ಹೆಸರಾಂತ ಪ್ರದೇಶ ಪುತ್ತೂರಿನ ಡಾ.ಶಿವರಾಮ ಕಾರಂತ ಬಾಲವನವು ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರವಾಗಬೇಕು, ಪುತ್ತೂರಿನ ಕಲಾವಿದರನ್ನು ಗುರುತಿಸಿ ,ಅವರಿಗೆ ಉತ್ತಮ ಅವಕಾಶಗಳನ್ನು ಕೊಡುವಲ್ಲಿ ಹಾಗೂ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುವ ಹಾಗೆ ಈ ತಾಣವನ್ನು ಉನ್ನತ ಕಲಾ ಕೇಂದ್ರವಾಗಿ ಮಾಡಬೇಕು ಮಾತ್ರವಲ್ಲ ಕರ್ನಾಟಕ ರಂಗಾಯಣದ ಐದನೇ ಘಟಕವನ್ನು ಪುತ್ತೂರಿನ ಬಾಲವನದಲ್ಲಾಗಬೇಕು ಎಂದು ವಿವೇಕಾನಂದ ಪದವಿ ಕಾಲೇಜು ಪುತ್ತೂರು, ಕರ್ನಾಟಕ ಸಂಘ ಪುತ್ತೂರು, ವಿದ್ಯಾರಶ್ಮಿ ವಿದ್ಯಾಸಂಸ್ಥೆ ಸವಣೂರು  , ಕಾಡು ಬಳಗ ಪುತ್ತೂರು, ಗಾನಸಿರಿ ಕಲಾ ಕೇಂದ್ರ ಪುತ್ತೂರು, ವರ್ಣಕುಟೀರ ಕಲಾ ಸಂಸ್ಥೆ ಪುತ್ತೂರು, ರಂಗ ದೀಪ ತಂಡ ಪುತ್ತೂರು ಇವರ ತಂಡ ಶಾಸಕ ಸಂಜೀವ ಮಟಂದೂರು ಅವರಿಗೆ ಮನವಿ ಸಲ್ಲಿಸಿದ್ದಾರೆ.

ಬಾಲವನದಲ್ಲಿ ರಂಗಾಸಕ್ತರಲ್ಲಿ ರಂಗ ಚಟುವಟಿಕೆಗಳನ್ನು ತರಬೇತಿ ಮಾಡವ ಸಲುವಾಗಿ ,ಸ್ಥಳೀಯ ಕಲಾವಿದರನ್ನು ಒಳಗೊಂಡ ಸಮಿತಿಯನ್ನು ರಚಿಸಬೇಕೆಂದು ಹಾಗೂ ಕರ್ನಾಟಕ ರಂಗಾಯಣದ ಐದನೇ ಘಟಕವನ್ನು ಪುತ್ತೂರಿನ ಬಾಲವನಕ್ಕೆ ತರಿಸಬೇಕು,ಉತ್ತಮ ಕಲಾವಿದರನ್ನು ಪುತ್ತೂರಿನಿಂದ ರೂಪಿಸಲು ಅವಕಾಶಗಳನ್ನು ಮಾಡಿಕೊಡಬೇಕು ಎಂಬುದು ಎಲ್ಲರ ಬೇಡಿಕೆಯಾಗಿದೆ ಎಂದು  ಈ ತಂಡ ಒತ್ತಾಯಿಸಿದೆ.

ಈ ಸಂಧರ್ಭದಲ್ಲಿ ನಗರ ವಂಡಲ ಬಿ. ಜೆ. ಪಿ ಅಧ್ಯಕ್ಷ ರಾದ ಪಿ. ಜಿ. ಜಗನ್ನಿವಾಸ್ ರಾವ್ ,ರಾಘವೇಂದ್ರ ಎ ಎಂ, ನ್ಯಾಯವಾದಿ ಶಶಿಧರ್ ಬಿ ಎನ್, ಕಿರಣ್ ಕುಮಾರ್ ಗಾನಸಿರಿ, ಪ್ರವೀಣ್ ವರ್ಣಕುಟೀರ, ವೀಣಾ ತಂತ್ರಿ, ಯಶೋದ , ಹಾಗೂ ವಸಂತ ಲಕ್ಷ್ಮಿ ಮೊದಲಾದವರಿದ್ದರು.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಮಂಗಳೂರು ಅಡಿಕೆ ಮಾರುಕಟ್ಟೆ | ಸ್ಥಿರತೆಯಿಂದ ಏರಿಕೆಯತ್ತ ಮುಖ ಮಾಡಿದ ಧಾರಣೆ

ಅಡಿಕೆ ಮಾರುಕಟ್ಟೆ ಸ್ಥಿರದಿಂದ ಏರಿಕೆಯತ್ತ ಸಾಗುತ್ತಿದೆ. ಜೂನ್-ಜುಲೈನಲ್ಲಿ ಬೆಲೆ ಹೆಚ್ಚಾಗುವ ಸಾಧ್ಯತೆ ಇದೆ.

15 hours ago

ಜನಗಣತಿ 2026 – ಏಪ್ರಿಲ್ 1ರಿಂದ ಸ್ವಯಂ-ಎಣಿಕೆ ಆರಂಭ – ಸಹಕರಿಸಲು ಜಿಲ್ಲಾಧಿಕಾರಿ ಕರೆ

ಏಪ್ರಿಲ್ 1ರಿಂದ 15ರವರೆಗೆ ಸ್ವಯಂ-ಎಣಿಕೆ ಆರಂಭವಾಗಿದೆ. ಏಪ್ರಿಲ್ 16ರಿಂದ ಮನೆಗಳಿಗೆ ಭೇಟಿ ನೀಡಿ…

15 hours ago

ಹವಾಮಾನ ವರದಿ | 01-04-2026 | ಕರಾವಳಿ-ಮಲೆನಾಡಿನಲ್ಲಿ ಗುಡುಗು ಮಳೆ ಮುಂದುವರಿಕೆ – ಏ.10 ರಿಂದ ಮತ್ತೆ ಮಳೆ ಚುರುಕು ಸಾಧ್ಯತೆ!

ಏಪ್ರಿಲ್ 4ರವರೆಗೆ ಮಳೆ ಮುಂದುವರಿಯಲಿದೆ, ಬಳಿಕ ತಾತ್ಕಾಲಿಕ ಕಡಿಮೆ. ಏಪ್ರಿಲ್ 10ರಿಂದ ಮತ್ತೆ…

1 day ago

ಮಳೆಯ ನಡುವೆಯೂ ಉರಿಯುವ ಬಿಸಿಲು..! ಏಪ್ರಿಲ್–ಜೂನ್‌ನಲ್ಲಿ ಹವಾಮಾನ ಸವಾಲು..!

ಏಪ್ರಿಲ್‌ನಲ್ಲಿ ಮಳೆ ಹೆಚ್ಚಾದರೂ ಬಿಸಿಲು ಕಡಿಮೆಯಾಗುವುದಿಲ್ಲ ಎಂದು IMD ಎಚ್ಚರಿಸಿದೆ. ಏಪ್ರಿಲ್–ಜೂನ್ ಅವಧಿಯಲ್ಲಿ…

2 days ago

ಗ್ಯಾಸ್ ಸಿಲಿಂಡರ್ ಕೊರತೆ ಪರಿಣಾಮ : ರಾಜ್ಯದಲ್ಲಿ ವಿದ್ಯುತ್ ಬಳಕೆ 10% ಏರಿಕೆ

ಗ್ಯಾಸ್ ಸಿಲಿಂಡರ್ ಕೊರತೆಯಿಂದ ರಾಜ್ಯದಲ್ಲಿ ವಿದ್ಯುತ್ ಬಳಕೆ 10% ಏರಿಕೆಯಾಗಿದೆ. ಕೇಂದ್ರದ ನೀತಿಗಳ…

2 days ago

ಹಸಿರು ಅಮೋನಿಯಾ ಒಪ್ಪಂದಗಳು | ಭಾರತದ ಇಂಧನ ಭದ್ರತೆಗೆ ಹೊಸ ಬಲ..! 2030 ಗುರಿಗೆ ವೇಗ

ಹಸಿರು ಅಮೋನಿಯಾ ಒಪ್ಪಂದಗಳು ಭಾರತದ ಇಂಧನ ಭದ್ರತೆಗೆ ದೊಡ್ಡ ಬಲ ನೀಡಲಿವೆ. 2030ರೊಳಗೆ…

2 days ago