ಸುದ್ದಿಗಳು

ಯಂತ್ರಮೇಳ ಕೃಷಿಕರಿಗೆ ಏಕೆ ಬೇಕು ? | ಹುಡುಕಿದರೆ ಹೆಚ್ಚೇನು ಸಿಗದು…! , ಆದರೆ ಒಳನೋಟಕ್ಕೆ ಹೆಚ್ಚು ಸಿಗುವುದು..! | ಕೃಷಿಕ ಎ ಪಿ ಸದಾಶಿವ ಅಭಿಪ್ರಾಯ |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail
ಯಂತ್ರಮೇಳ ಅಥವಾ ಕೃಷಿ ಮೇಳಗಳ ಬಗ್ಗೆ ಆಗಾಗ್ಗೆ ಚರ್ಚೆ ಆಗುತ್ತದೆ. ಹೆಚ್ಚೇನು ಇಲ್ಲ, ಹೊಸದು ಇಲ್ಲ, ಮೇಳ ಮಾತ್ರಾ, ಅದೊಂದು ಜಾತ್ರೆ… , ಹೀಗೆಲ್ಲಾ ಉತ್ತರಗಳು ಇರುತ್ತವೆ. ಆದರೆ ಕೃಷಿಕ ಎ ಪಿ ಸದಾಶಿವ ಅದರ ಆಚೆಗೆ ವಿಶ್ಲೇಷಣೆ ಮಾಡಿದ್ದಾರೆ. ಪುತ್ತೂರಿನ ಕೃಷಿ ಯಂತ್ರಮೇಳದ ಬಗ್ಗೆ ಅವರು ವ್ಯಕ್ತಪಡಿಸಿರುವ ಅಭಿಪ್ರಾಯ ಇಲ್ಲಿದೆ…

ಬಹುದಿನಗಳಿಂದ ನಿರೀಕ್ಷಿಸುತ್ತಿದ್ದ ಪುತ್ತೂರಿನ ಯಂತ್ರಮೇಳ ಜನಾಕರ್ಷಣೀಯವಾಗಿ, ಯಶಸ್ವಿಯಾಗಿ ಸಂಪನ್ನಗೊಂಡಿತು. ಹೊಸತೇನಾದರೂ ಇದೆಯೇ ಎಂದು ಹುಡುಕಿ ಬಂದವರಿಗೆ ಹೆಚ್ಚೇನೂ ದೊರೆತಿರಲಾರದು. ಬಹುಶಃ ಇನ್ನು ಮುಂದೆ ಯಾವುದೇ ಮೇಳಗಳಲ್ಲಿ ಹೊಸತೇನನ್ನೂ ನಿರೀಕ್ಷಿಸಲಾಗದು. ಯಾವುದೇ ಹೊಸತು ಬಂದರೂ ನೂರಾರು ಯೂಟ್ಯೂಬ್ ಚಾನೆಲ್‌ ಗಳಲ್ಲಿ, ಫೇಸ್ಬುಕ್ ಗಳಲ್ಲಿ, ವಾಟ್ಸಪ್ ಗುಂಪುಗಳಲ್ಲಿ ಹರಿದು ಹಂಚಿ ಹೋಗಿಬಿಡುತ್ತದೆ. ಮೇಳಗಳಿಗೆ ಬರುವಾಗ ಸುದ್ದಿ ಹಳತಾಗಿಬಿಡುತ್ತದೆ.

Advertisement

ಅದೂ ಅಲ್ಲದೆ ಊರೂರುಗಳಲ್ಲಿ ಅಲ್ಲಲ್ಲಿ ಆಗಾಗ ಕೃಷಿ ಮೇಳಗಳು ನಡೆಯುತ್ತಲೇ ಇರುತ್ತದೆ. ಇಷ್ಟೆಲ್ಲಗಳ ಮಧ್ಯೆಯೂ ಸಾಮಾಜಿಕ ಜಾಲತಾಣಗಳಲ್ಲಿ ಕಂಡ ಆದರೂ ಕಣ್ಣಲ್ಲಿ ನೋಡದ ಅನೇಕ ವಸ್ತುಗಳನ್ನು ಕಾಣುವಂತಾಯಿತು. ಸ್ಕೂಟರಿಗೆ ಜೋಡಿಸಿದ ಡಂಪರ್, ಎಚ್ ಡಿ ಪಿ ಪೈಪನ್ನು ಜೋಡಿಸುವ ಸುಲಭ ಕನೆಕ್ಟರ್, ಎಚ್ ಡಿ ಪಿ ಕಮ್ ಪಿವಿಸಿ ಜೋಡಣೆ , ಮಣ್ಣಾಳದಲ್ಲಿ ಪಿವಿಸಿ ಪೈಪ್ ಅನ್ನು ಜೋಡಿಸುವ ಗಮ್ಲೆಸ್ ಕಪ್ಲಿಂಗ್ ಮುಂತಾದವು. ಹೋಲಿಸಿ ಪರಾಮರ್ಶಿಸಿ ತೆಗೆಯುದಿದ್ದರೆ ಒಂದೇ ತರದ ಯಂತ್ರಗಳ ಹಲವು ಕಂಪನಿಗಳು ಒಂದೇ ಜಾಗದಲ್ಲಿ ನೋಡುವಂತಾದುದು ಇಂತಹ ದೊಡ್ಡ ಮೇಳದ ವಿಶೇಷ.

ಹೆಚ್ಚು ಕಮ್ಮಿ ಎಲ್ಲಾ ಮೇಳಗಳಲ್ಲಿ ಗೋಷ್ಠಿಗಳು ಜನಾಕರ್ಷಣೆಯಲ್ಲಿ ವಿಫಲವಾಗುತ್ತದೆ. ತಿರುತಿರುಗಿ ಸುಸ್ತಾದಾಗ ಒಂದರೆ ಗಳಿಗೆಯ ವಿಶ್ರಾಂತಿಗಾಗಿ ಗೋಷ್ಠಿಯ ಸಭಾಭವನಕ್ಕೆ ಜನ ಬರುತ್ತಾರೆಯೇ ವಿನಹ : ವಿಷಯ ಸಂಗ್ರಹಕ್ಕಾಗಿ ಬರುವವರ ಸಂಖ್ಯೆ ಬಲು ವಿರಳ. ಇಂತಹ ವಿರಳಗಳ ಮಧ್ಯೆ ಆರಂಭದಲ್ಲಿ ಕಳೆ ಕಟ್ಟದಿದ್ದರೂ, ನಿಧಾನಕ್ಕೆ ಕಳೆಯೇರಿಸಿಕೊಂಡದ್ದು ಕೃಷಿ ರಸಪ್ರಶ್ನೆಗಳು. ಪಾಂಚಜನ್ಯ ರೇಡಿಯೋ ತಂಡ ಅನೇಕ ಕೃಷಿಕರನ್ನು ಕುಟ್ಟಿ ತಟ್ಟಿ ಎಬ್ಬಿಸಿ ಕೃಷಿ ಸಂಬಂಧಿ ವೈವಿಧ್ಯಮಯವಾದ ಪ್ರಶ್ನೆಗಳನ್ನು ಬಲು ಶ್ರಮದಿಂದ ತಯಾರಿಸಿಟ್ಟಿದ್ದರು. ಆ ಮೂಲಕ ಹಲವಾರು ಹೊಸ ವಿಷಯಗಳನ್ನು ತಿಳಿಯುವುದು ಅನೇಕರಿಗೆ ಸಾಧ್ಯವಾಗಿತ್ತು. ವಿದ್ಯಾರ್ಥಿ ಬಂಧುಗಳಲ್ಲಿ ಕೆಲವರಿಗೆ ನಮ್ಮ ಮನೆಯಲ್ಲೇ ನಡೆಯುವ ಕೃಷಿ ಪ್ರಕ್ರಿಯೆಗಳ ಬಗ್ಗೆ ಘೋರ ನಿರಾಸಕ್ತಿ ಆಶ್ಚರ್ಯ ತರುವಂತಿತ್ತು.

ಉದಾ : ಕುಸುಲಕ್ಕಿ ಮಾಡುವ ಬಗೆಎಂತು? ಅಡಿಕೆ ಕೊಯ್ಲಿನ ಸಮಯ ಯಾವಾಗ? ದನವೊಂದರ ಉದ್ದದ ಬಗ್ಗೆ ಕಲ್ಪನೆ ಬಾರದಿರುವುದು ಇವುಗಳೆಲ್ಲ ಕೆಲವು ನಿದರ್ಶನಗಳು. ಶಾಲಾ ವಿದ್ಯೆಯನ್ನು ಕಲಿಸಲು ಪ್ರೋತ್ಸಾಹಿಸುವ ಆತುರದಲ್ಲಿ ನಾವುಣ್ಣುವ ನೆಲದ ವಿದ್ಯೆಯನ್ನು ಬೋಧಿಸುವಲ್ಲಿ ನಮ್ಮಂತಹ ತಂದೆ ತಾಯಿಗಳ ವಿಫಲತೆಯೇ ಇದಕ್ಕೆ ಕಾರಣ.

ಪರಕೀಯ,ಸ್ವಕೀಯ,ಉಭಯ ರೀತಿಯಲ್ಲೂ ಪರಾಗಸ್ಪರ್ಶಿಸುವ ಸಸ್ಯ ವೈವಿಧ್ಯಗಳ ಕುರಿತಿನ ಅರಿವು ಕೆಲವಾರು ಪ್ರಶ್ನೆಗಳ ಮೂಲಕ ಹೊಸತನವನ್ನು ಸೃಷ್ಟಿಸಿತ್ತು. 1978 ನೇ ಇಸವಿಯಲ್ಲಿ ಹಾಳೆ ತಟ್ಟೆಯನ್ನು ಪ್ರಥಮವಾಗಿ ಸಂಶೋಧಿಸಿದವರು ಸುಳ್ಯದ ಗೌರಿಶಂಕರ್ ಎಂಬವರೆಂದು ಹೆಚ್ಚು ಕಮ್ಮಿ ಯಾರಿಗೂ ಗೊತ್ತಿರಲಾರದು. ಅವರು ಸಂಶೋಧಿಸಿದ ಈ ತಟ್ಟೆ ಈ ಮಟ್ಟಿಗೆ ವಿದೇಶಕ್ಕೆ ಪ್ರಯಾಣಿಸಬಲ್ಲುದೆಂದು ಆ ಕಾಲಕ್ಕೆ ಅರಿವೇ ಇದ್ದಿರಲಾರದು. ತೆರೆಯ ಮರೆಯಲ್ಲಿ ಕಳೆದು ಹೋಗುತ್ತಿದ್ದ ಇವರ ಹೆಸರು ಈ ಕಾರ್ಯಕ್ರಮದ ಮೂಲಕ ಮುನ್ನೆಲೆಗೆ ಬಂತು. ಇಂದಿನ ಬಲು ಸಣ್ಣ ಕಿಡಿಯೆ ಮುಂದಿನ ಬಲು ದೊಡ್ಡ ಉದ್ದಿಮೆ ಯಾಗಬಹುದು ಎಂಬುದಕ್ಕೆ ಇದು ಸಾಕ್ಷಿ. ಇಂತಹ ಹಲವು ವಿಷಯಗಳನ್ನು ರಸಪ್ರಶ್ನೆಯ ಮೂಲಕ ಸಂಗ್ರಹಿಸಿದ ರೇಡಿಯೋ ಪಾಂಚಜನ್ಯ ತಂಡಕ್ಕೆ ಅಭಿನಂದನೆಗಳನ್ನು ಸಲ್ಲಿಸಲೇಬೇಕು.

ಒಟ್ಟಿನಲ್ಲಿ ಸಂಪೂರ್ಣ ಯಂತ್ರ ಮೇಳ ವ್ಯವಸ್ಥಿತವಾದ ಅಚ್ಚುಕಟ್ಟಾದ ಕಾರ್ಯಕ್ರಮವಾಗಿ ಮೂಡಿ ಬಂದಿದೆ.

ಬರಹ :
ಎ.ಪಿ. ಸದಾಶಿವ ಮರಿಕೆ.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಎ ಪಿ ಸದಾಶಿವ ಮರಿಕೆ

ಸಾವಯವ ಕೃಷಿಕರು, ಪುತ್ತೂರು ಕಳೆದ ಹಲವಾರು ವರ್ಷಗಳಿಂದ ಸಾವಯವ ಕೃಷಿ, ಗೋಆಧಾರಿತ ಕೃಷಿಯ ಮೂಲಕ ಗಮನ ಸೆಳೆದ ಕೃಷಿಕ ಇವರು.

Published by
ಎ ಪಿ ಸದಾಶಿವ ಮರಿಕೆ

Recent Posts

ಸಹಜ ಸಾವನ್ನಪ್ಪುವ ಕಾಡುಪ್ರಾಣಿಗಳನ್ನು ಸುಡುವಂತಿಲ್ಲ | ಪ್ರಕೃತಿ ಚಕ್ರ ಕಾಪಾಡಲು ಸಹಕಾರಿ | ರಾಜ್ಯ ಸರ್ಕಾರದಿಂದ ಸುತ್ತೋಲೆ

ರಾಜ್ಯದ ವಿವಿಧ ಅರಣ್ಯ ಪ್ರದೇಶಗಳಲ್ಲಿ ಸಹಜವಾಗಿ ಸಾವನ್ನಪ್ಪುವ ಕಾಡುಪ್ರಾಣಿಗಳ ಕಳೇಬರವನ್ನು ಸುಡದೆ ಕಾಡಿನಲ್ಲಿಯೇ…

44 minutes ago

ಬದರೀನಾಥ ಧಾಮ ಯಾತ್ರಾ ಆರಂಭ | ಭಾರೀ ಪ್ರಮಾಣದಲ್ಲಿ ಆಗಮಿಸಿರುವ ಭಕ್ತರು | ಸುರಕ್ಷತೆಗಾಗಿಅರೆಸೇನಾ ಪಡೆ ನಿಯೋಜನೆ

ಉತ್ತರಾಖಂಡದ ಪ್ರಸಿದ್ಧ ಯಾತ್ರಾ ಕ್ಷೇತ್ರ ಬದರೀನಾಥ ಧಾಮವನ್ನು  ತೆರೆಯಲಾಗಿದೆ. ಮುಂಜಾನೆ 6 ಗಂಟೆಯ…

11 hours ago

ಅರಣ್ಯ ಭೂಮಿ ಕಬಳಿಸಲು ಪ್ರಯತ್ನಿಸುತ್ತಿರುವವರ ವಿರುದ್ಧ ಕಾನೂನು ಕ್ರಮ – ಅರಣ್ಯ ಸಚಿವ ಈಶ್ವರ ಖಂಡ್ರೆ

ಅರಣ್ಯ ಪ್ರದೇಶದಲ್ಲಿ ಆಗಿರುವ ಅಕ್ರಮ ಮಂಜೂರಾತಿ ರದ್ದುಪಡಿಸಿ, ಅರಣ್ಯ ಭೂಮಿ ಕಬಳಿಸಲು ಪ್ರಯತ್ನಿಸುತ್ತಿರುವವರ…

12 hours ago

ಅಡಿಕೆ ಧಾರಣೆ ಏರಿಕೆಗೆ ಕಾರಣ ಇದೆ | ಈಗ ಅಡಿಕೆ ಮಾರುಕಟ್ಟೆಗೆ ಅನ್ವಯಿಸುವ ಸಿದ್ಧಾಂತಗಳು ಯಾವುದು..?

ಈ ಬಾರಿ ಅಡಿಕೆ ಮಾರುಕಟ್ಟೆಯಲ್ಲಿ ಏರಿಳಿತ, ಅಡಿಕೆ ಬೆಳೆ ಕಡಿಮೆ, ಧಾರಣೆ ಏರಿಕೆ…

17 hours ago

2025: ಲಕ್ಷ್ಮೀನಾರಾಯಣ ಯೋಗ | ಈ ರಾಶಿಗೆ ಅದೃಷ್ಟದ ಬಾಗಿಲು ಓಪನ್

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜೋತಿಷಿಗಳನ್ನು ಸಂಪರ್ಕಿಸಿ 9535156490

17 hours ago

ರೈತರ ಪಂಪ್ ಸೆಟ್ ಗಳಿಗೆ ಹಗಲು ಹೊತ್ತಿನಲ್ಲಿಯೇ ವಿದ್ಯುತ್ ನೀಡಲು ತೀರ್ಮಾನ

ಕುಸುಮ್ ಯೋಜನೆ ಮೂಲಕ ಪ್ರತಿ ತಾಲ್ಲೂಕಿನಲ್ಲಿ 20 ಮೆ.ವ್ಯಾ ಸಾಮರ್ಥ್ಯದ ಸೋಲಾರ್ ವಿದ್ಯುತ್…

1 day ago