ಸುದ್ದಿಗಳು

ಚುನಾವಣಾ ಕಣ | ಪುತ್ತೂರಿನಲ್ಲಿ ನಂಬರ್‌ 7 ರ ಆಟ | ಸಂಖ್ಯಾ ಶಾಸ್ತ್ರದ ಭವಿಷ್ಯ ಏನು ಹೇಳಿದೆ… ? |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಚುನಾವಣಾ ಕಣದಲ್ಲಿ  ಈ ಬಾರಿ ಪುತ್ತೂರು ಕ್ಷೇತ್ರವು ಎಲ್ಲೆಡೆಯಿಂದಲೂ ಗಮನ ಸೆಳೆದಿದೆ. ಯಾರಾಗಬಹುದು ಶಾಸಕರು ಎನ್ನುವ ಕುತೂಹಲ ಎಲ್ಲೆಡೆಯೂ ಇದೆ ಈ ನಡುವೆ ಕುಮಾರಸುಬ್ರಹ್ಮಣ್ಯ ಮುಳಿಯಾಲ ಅವರು ಕೇರಳದ ಪ್ರಸಿದ್ಧ ಜ್ಯೋತಿಷಿಯೊಬ್ಬರ ಬಳಿ ಸಂಖ್ಯಾಶಾಸ್ತ್ರದ ಮಾಹಿತಿ ಪಡೆದಿದ್ದಾರೆ. ಈ ಬಗ್ಗೆ ಅವರು ಮಾಡಿರುವ ವಿಶ್ಲೇಷಣೆ ಇಲ್ಲಿದೆ…

Advertisement
Advertisement

17 – 04- 2023 ರಂದು ಅರುಣ್‌ ಕುಮಾರ್‌ ಪುತ್ತಿಲ  ನಾಮಪತ್ರ ಸಲ್ಲಿಸಿದ ದಿನ.ಇದನ್ನು ಎಲ್ಲಾ ಕೂಡಿಸಿದರೆ  ಸಂಖ್ಯೆ1. ಬರುತ್ತದೆ. ಚುನಾವಣಾ ದಿನಾಂಕ 10 . ಇದನ್ನೂ ಕೂಡಿಸಿದರೆ ಸಂಖ್ಯೆ1 . ಸೂರ್ಯನಿಂದ ಆಳಲ್ಪಡುವ ಈ ಸಂಖ್ಯೆ ನಾಯಕತ್ವದ ಗುಣ ಸೂಚಿಸುತ್ತದೆ .ಇವರು ತುಂಬಾ ಪ್ರಖರರು ಮತ್ತು ಪ್ರಮುಖರಾಗಿರುತ್ತಾರೆ ಇದು ಪ್ರಥಮ ಎಂಬುದನ್ನು ಸೂಚಿಸುತ್ತದೆ. ಅಂದರೆ ಗೆಲುವು ಎಂದು ಅರ್ಥ ಅಥವಾ ಹೊಸ ಶಖೆಯ ಪ್ರಾರಂಭ ಎಂಬ ಅರ್ಥ .ಶ್ರೇಣಿಯಲ್ಲಿ ಮೊದಲಿಗರಾಗುತ್ತಾರೆ ಎಂಬುದಾಗಿ ಯೋಚಿಸಬಹುದು.

ದಿನಾಂಕ17 ,ಅಂದರೆ  ಸಂಖ್ಯೆ 8. ಎಂಟು  ಅಷ್ಠದಿಕ್ಪಾಲಕರು ಎಂದು ಅರ್ಥ. ಇದರಿಂದ ಅಷ್ಠ ದಿಕ್ಪಾಲಕರ ಅನುಗ್ರಹ ಇದೆ ಎಂದು ತಿಳಿಯಬಹುದು. ಪುತ್ತಿಲರ ಕ್ರಮ ಸಂಖ್ಯೆ 7 . ಸಂಖ್ಯೆ  7 ಮಾತ್ರ ಸಾರ್ವತ್ರಿಕವಾಗಿ ಎಲ್ಲರಿಗೂ ಲಕ್ಕಿ7ನಂಬರ್. ಹಾಗಾಗಿಯೇ ಈ ಸಂಖ್ಯೆಯನ್ನು ಮಂಗಳಕರ, ಶುಭಪ್ರದ ಭಾವಿಸಿ ಆ ದಿನಂದಂದು ತಮ್ಮ ಕೆಲಸಕಾರ್ಯಗಳನ್ನು ಆರಂಭಿಸುತ್ತಾರೆ. ಅಂದರೆ ಪುತ್ತಿಲ ರ ಗೆಲುವುವಿನ ಶುಭಾರಂಭದ ಸಂಖ್ಯೆ ಅವರ ಕ್ರಮ ಸಂಖ್ಯೆಯಾಗಿ ಒದಗಿ ಬಂದಿದೆ.

ಜ್ಯೋತಿಷ್ಯಶಾಸ್ತ್ರದ ಪ್ರಕಾರ ಸಂಖ್ಯೆ 7 ಚಂದ್ರನನ್ನು ಸೂಚಿಸುತ್ತದೆ. ಈ ಸಂಖ್ಯೆಯಲ್ಲಿ ಹುಟ್ಟಿದವರು  ಸ್ವತಂತ್ರವಾಗಿ ಇರಲು ಬಯಸುತ್ತಾರೆ. ಇವರದು ತುಂಬಾ ತೀಕ್ಷ್ಣವಾದ ವ್ಯಕ್ತಿತ್ವ. ತಮ್ಮಷ್ಟಕ್ಕೆ ತಾವೇ ಕಷ್ಟಪಟ್ಟು ಕೆಲಸ ಮಾಡುತ್ತಾರೆ. ಇವರದು ವಿರಾಮ ಇಲ್ಲದಂತೆ ದುಡಿಯುವ ಜಾಯಮಾನ . ಪುತ್ತಿಲ ರದ್ದು ಇದೆ ವ್ಯಕ್ತಿತ್ವ. ಸಂಖ್ಯೆ7  ಸಪ್ತ ಋಷಿಗಳ ಪ್ರತೀಕ ಹಾಗಾಗಿ ನಮ್ಮ ಸನಾತನ ನಂಬಿಕೆಯ ಸಪ್ತಋಷಿಗಳ ಅನುಗ್ರಹವೂ ಪುತ್ತಿಲರಿಗೆ ಇದೆ ಎಂದಾಯಿತು. ಅಂದರೆ ಒಂದು ಕಡೆಯಿಂದ ದೇವಾದಿ ದೇವತೆಗಳ ಅನುಗ್ರಹ,  ಋಷಿಗಳ ಯೋಗಿಗಗಳ ಅನುಗ್ರಹ, ಪ್ರಕೃತಿಯ ಅನುಗ್ರಹ, ಅಸಂಖ್ಯ ಸಂಖ್ಯೆಯ ಜನರ ಅನುಗ್ರಹ ,  ಸ್ವಂತದ ಸಂಕಲ್ಪ ಶಕ್ತಿ, ಹಿಂದುತ್ವದ  ಭಾರತ ಮಾತೆಯ ಶ್ರಿರಕ್ಷೆ. ಹೀಗೇ ಎಲ್ಲಾ ಶಕ್ತಿಗಳೂ ಒಂದೇ ಕಡೆಗೆ ಕೇಂದ್ರೀಕೃತವಾಗಿರುವುದರಿಂದ ಅರುಣ್‌ ಕುಮಾರ್‌ ಅವರ ಪರವಾಗಿಯೇ ಅಲೆ ಕಂಡುಬರುತ್ತಿದೆ.

ಹೀಗೆ ಜಗತ್ತಿನ ಎಲ್ಲಾ ಅನುಗ್ರಹ ಕಾರಕ ಶಕ್ತಿಗಳು ಪುತ್ತಿಲರ ಪರವಾಗಿ ಇರುವಾಗ , ಮತ್ತು ಅವರು ನಾಮಪತ್ರ ಸಲ್ಲಿಸುವಾಗ ಕತ್ತಲೆಯ ಅಮಾವಾಸ್ಯೆಯಾಗಿರದೆ  ಭರವಸೆಯ ಬೆಳಕು ಬೆಳಗುತ್ತಿರುವಾಗ ಪ್ರತಿಸ್ಪರ್ದಿಗಳಿಗೆ ಗೆಲುವು ಮರೀಚಿಕೆಯೇ ಸರಿ. ಇಷ್ಟು ವರ್ಷಗಳಲ್ಲಿ ಏನಾಗಿದೆ ಎಂಬುದು ಲೆಕ್ಕಾಚಾರ ಅಲ್ಲ, ಈ ಸಲ  ಈ ಬಾರಿಯ ಸ್ಪರ್ಧಾ ಕಣದಲ್ಲಿ ಪುತ್ತಿಲರೋ ಪ್ರತಿಸ್ಪರ್ದಿಗಳೋ ಎಂಬ ಕಾಲಘಟ್ಟದಲ್ಲಿ  ಪ್ರಪಂಚದ ಸಕಲ ಶಕ್ತಿಗಳು ಪುತ್ತಿಲರ ಪರವಾಗಿದೆ. ಎಂಬುದರಲ್ಲಿ ಸಂಶಯವಿಲ್ಲ. ಹಾಗಾಗಿಯೇ ಈ ಬಾರಿ ಪುತ್ತೂರಿಗೆ ಪುತ್ತಿಲ ಎಂಬ ಟ್ರೆಂಡ್‌ ಕೂಡಾ ಸರಿಯಾಗುತ್ತಿದೆ.

Advertisement
ಬರಹ :
ಕುಮಾರ ಸುಬ್ರಹ್ಮಣ್ಯ ಮುಳಿಯಾಲ .
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹೊಸರುಚಿ | ಹಲಸಿನ ಹಣ್ಣಿನ ಗುಳಿ ಅಪ್ಪ

ಹಲಸಿನ ಹಣ್ಣಿನ ಗುಳಿ ಅಪ್ಪಕ್ಕೆ ಬೇಕಾಗುವ ಸಾಮಗ್ರಿಗಳು :  ಹಲಸಿನ ಹಣ್ಣು 2.1/2…

9 hours ago

ಜೂನ್‌ ತಿಂಗಳಿನಲ್ಲಿ ಈ ರಾಶಿಯವರಿಗೆ ಅದೃಷ್ಟವೆಲ್ಲಾ ನಿಮ್ಮದೇ..!

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತಾರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

11 hours ago

ಪ್ರಾದೇಶಿಕ ಒಪ್ಪಂದಕ್ಕೆ ಬಲಿಯಾಯಿತೇ ಕಾಳು ಮೆಣಸು..?

ಸಾಮನ್ಯವಾಗಿ ಒಂದು ಉತ್ಪನ್ನದ ಉತ್ಪಾದನೆ ಕುಸಿದಾಗ ಅದರ ಬೆಲೆ ಏರಿಕೆ ಆಗುವುದು ಸಹಜ.ಇಲ್ಲಿ…

11 hours ago

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಪರಾಧ ನಿಯಂತ್ರಣ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಮೊದಲ ಆದ್ಯತೆ-ಡಾ.ಅರುಣ್

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಪರಾಧ ನಿಯಂತ್ರಣ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಮೊದಲ…

17 hours ago

ಜೂನ್ 2ರ ವರೆಗೆ ರಾಜ್ಯದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ | ಹವಾಮಾನ ಇಲಾಖೆ ಎಚ್ಚರಿಕೆ

ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲಿ ಹಲವು ಕಡೆ…

18 hours ago