Advertisement
MIRROR FOCUS

ಪುತ್ತೂರು ಮಿನಿ‌ವಿಧಾನ ಸೌಧದಲ್ಲಿ ಕೈ ಕೊಟ್ಟ ಲಿಫ್ಟ್…..!! : ವಿಕಲಚೇತನರಿಗೆ ಸಂಕಷ್ಟ

Share

ಸರ್ವ ಸುಸಜ್ಜಿತ ಪುತ್ತೂರು ಮಿನಿ‌ವಿಧಾನ ಸೌಧ. ಸಮರ್ಥ ಶಾಸಕರು. ಹಾಗಿದ್ದರೂ ಪುತ್ತೂರು ಮಿನಿವಿಧಾನ ಸೌಧದ ಲಿಫ್ಟ್ ವ್ಯವಸ್ಥೆ ಕೈಕೊಟ್ಟಿದೆ. ಇದರಿಂದಾಗಿ ವಿಕಲಚೇತನರು ಸಂಕಷ್ಟ ಪಡಬೇಕಾಗಿದೆ. ಶುಕ್ರವಾರ ವೀಲ್ ಚಯರ್ ಮೂಲಕ ವಿಕಲಚೇತನರೊಬ್ಬರನ್ನು ಕಚೇರಿಯಲ್ಲಿನ ತುರ್ತು ಕೆಲಸಕ್ಕೆ ಕರೆತಂದ ವಿಡಿಯೋ ಈಗ ವೈರಲ್ ಆಗಿದೆ.

ಪುತ್ತೂರು ಮಿನಿವಿಧಾನ ಸೌಧ ಸರ್ವ ಸುಸಜ್ಜಿತವಾಗಿ‌ ನಿರ್ಮಾಣವಾಗಿದೆ.‌ಎಲ್ಲಾ ಕಚೇರಿಗಳೂ ಒಂದೇ ಕಡೆ ಇರಬೇಕು ಎಂಬುದು ಸರಕಾರದ ಉದ್ದೇಶ. ಆದರೆ ಆರಂಭದಲ್ಲಿ ನೋಂದಣಿ‌ ಇಲಾಖೆ ಮಿನಿವಿಧಾನ ಸೌಧಕ್ಕೆ‌ ವರ್ಗಾವಣೆ ಆಗುವುದಕ್ಕೆ ನೀಡಿರುವುವ ಕಾರಣವೂ ಇದೇ ಆಗಿತ್ತು. ಅಲ್ಲಿನ ಮೇಲಿನ‌ ಮಹಡಿಗೆ ವಿಕಲಚೇತನರಿಗೆ ತೆರಳಲು ಕಷ್ಟ ಎನ್ನುವ ಮಾತಿತ್ತು.‌ಇದಕ್ಕಾಗಿ ಆಗಿನ ಸಹಾಯಕ ಕಮೀಶನರ್, ಈಗಿನ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆವಿ ಅವರು ಲಿಫ್ಟ್ ವ್ಯವಸ್ಥೆ ಮಾಡಿಸಲು ಕ್ರಮ ಕೈಗೊಂಡು ಎಲ್ಲಾ ಇಲಾಖೆಗಳೂ ಒಂದೇ ಕಡೆ ಲಭ್ಯವಾಗುವಂತೆ, ವಿಕಲಚೇತನರಿಗೂ ವ್ಯವಸ್ಥೆ ಆಗುವಂತೆ ಮಾಡಿದ್ದರು.

ಇದೀಗ ಲಿಫ್ಟ್ ವ್ಯವಸ್ಥೆ ಹಾಳಾಗಿ 15 ದಿನ ಕಳೆದರೂ ದುರಸ್ತಿಯಾಗಿಲ್ಲ.‌ಹೀಗಾಗಿ ಸಮಸ್ಯೆ ಆಗಿದೆ ಎಂದು ದೂರುತ್ತಾರೆ ವಿಕಲಚೇತನರು. ಶಾಸಕರ ಕಚೇರಿಯೂ ಇದೇ ಮಿನಿವಿಧಾನ ಸೌಧದಲ್ಲಿದ್ದರೂ ವ್ಯವಸ್ಥೆ ಸುಧಾರಿಸದ ಬಗ್ಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

‘ಅನ್ನಂ ಬ್ರಹ್ಮ’ ಭಾವದಿಂದ ಆಹಾರ ಸೇವಿಸಿದರೆ ಮುಕ್ತಿಯ ಸಾಧನ – ರಾಘವೇಶ್ವರ ಶ್ರೀ

ಗೋಕರ್ಣದಲ್ಲಿ ನಡೆದ 'ಅನ್ನಂ ಬ್ರಹ್ಮ' ಪ್ರವಚನದಲ್ಲಿ ರಾಘವೇಶ್ವರ ಭಾರತೀ ಶ್ರೀಗಳು ಭೋಜನವೇ ಅದ್ವೈತ…

5 hours ago

ಕೃಷಿ ಅಧಿಕಾರಿ ನೇಮಕಾತಿ ಪರೀಕ್ಷೆ ತಾತ್ಕಾಲಿಕ ಮುಂದೂಡಿಕೆ | ಪ್ರತಿಭಟನಾನಿರತ ವಿದ್ಯಾರ್ಥಿಗಳಿಗೆ ಸಚಿವ ಪ್ರಿಯಾಂಕ್ ಖರ್ಗೆ ಭರವಸೆ

ಕೃಷಿ ಅಧಿಕಾರಿ ನೇಮಕಾತಿ ಪರೀಕ್ಷೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಪ್ರತಿಭಟನಾನಿರತ ಕೃಷಿ ವಿದ್ಯಾರ್ಥಿಗಳಿಗೆ ಸರ್ಕಾರ…

6 hours ago

ಬರ್ಮಾ ಅಡಿಕೆ ಕಳ್ಳಸಾಗಣೆ ವಿರುದ್ಧ ಇಡಿ ಬಿಗಿ ಕ್ರಮ – ಇಬ್ಬರು ಉದ್ಯಮಿಗಳ ಮನೆಗಳ ಮೇಲೆ ದಾಳಿ

ಬರ್ಮಾ ಅಡಿಕೆ ಕಳ್ಳಸಾಗಣೆ ಮತ್ತು ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಇಡಿ ಸಿಲ್ಚಾರ್‌ನ…

7 hours ago

ದೇಹ–ಮನಸ್ಸು–ಆತ್ಮದ ಸಮತೋಲನವೇ ನಿಜವಾದ ಆರೋಗ್ಯ: ಆಯುರ್ವೇದದ ಪರಮ ಗುರಿ ಆತ್ಮಜ್ಞಾನ – ರಾಘವೇಶ್ವರ ಶ್ರೀ

ದೇಹ, ಮನಸ್ಸು ಮತ್ತು ಆತ್ಮದ ಸಮತೋಲನವೇ ನಿಜವಾದ ಆರೋಗ್ಯ ಎಂದು ರಾಮಚಂದ್ರಾಪುರ ಶ್ರೀ…

1 day ago