Uncategorized

ತಾಳ್ಮೆಗೆ ತಪಸ್ಸಿನ ಫಲವಿದೆ | ಮನಸ್ಸಿಗೆ ಸಮಾಧಾನ, ವ್ಯವದಾನ ಇಲ್ಲದೇ ಯಾವ ಸಾಧನೆಯೂ ಇಲ್ಲ | ರಾಘವೇಶ್ವರ ಶ್ರೀ |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ತಾಳ್ಮೆಗೆ ತಪಸ್ಸಿನ ಫಲ ಇದೆ. ತಾಳ್ಮೆ ಕಳೆದುಕೊಂಡರೆ ಅದರಿಂದ ಅನಾಹುತವಾಗುತ್ತದೆ. ಆತುರ, ಆತಂಕ, ಉದ್ವೇಗ ಅನಾಹುತಕ್ಕೆ ಕಾರಣವಾಗುತ್ತದೆ ಎಂದು ಹೊಸನಗರ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ನುಡಿದರು.

Advertisement
Advertisement
ಗೋಕರ್ಣದ ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಕೈಗೊಂಡಿರುವ ಗುರುಕುಲ ಚಾತುರ್ಮಾಸ್ಯದ ಅಂಗವಾಗಿ ಸೋಮವಾರ ನಡೆದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದ ಅವರು, ದುಡುಕಿ, ಅವಸರದಲ್ಲಿ ಕಾರ್ಯಗಳನ್ನು ಮಾಡಿದಾಗ ವಿಚಾರಕ್ಕೆ ಅವಕಾಶವಾಗದೇ ಅನಾಹುಗಳು ಸಂಭವಿಸುತ್ತವೆ. ಸಮರ್ಪಕತೆ ಹಾಗೂ ವೇಗ ಬರುವುದು ನಿಧಾನದ ಅಭ್ಯಾಸದಿಂದ. ತಾಳ್ಮೆಯ ಮಹತ್ವ ಇದು ಎಂದು ಬಣ್ಣಿಸಿದರು. ನಿರುದ್ವೇಗ, ನಿರಾತಂಕದಿಂದ ಕಾರ್ಯವನ್ನು ಮಾಡಿದಾಗ ಅದು ಉತ್ತಮ ಫಲ ನೀಡುತ್ತದೆ. ವೇಗ ಬರುವುದೂ ತಾಳ್ಮೆಯ ಮೂಲಕ. ತಾಳ್ಮೆಯ ಮೂಲಕ ಬಂದ ವೇಗ ಸಮರ್ಪಕತೆಗೆ ಕಾರಣವಾಗುತ್ತದೆ ಎಂದರು.
ಕಲಿಕೆಗೆ ತಾಳ್ಮೆ ಮುಖ್ಯ. ಯಾವುದನ್ನೇ ಕಲಿಯುವ ಮುನ್ನ ತಾಳ್ಮೆ ಕಲಿಯಬೇಕು. ತಾಳ್ಮೆಯ ಬದಲು ಅವಸರ ನಮ್ಮಲ್ಲಿ ಅನಗತ್ಯ ಆತಂಕವನ್ನು ಉಂಟು ಮಾಡುತ್ತದೆ. ಇದರ ಪರಿಣಾಮ ಒತ್ತಡ. ಒತ್ತಡದ ಪರಿಣಾಮ ಗ್ರಹಿಕೆಯ ಶಕ್ತಿಯನ್ನು ಬುದ್ಧಿ ಕಳೆದುಕೊಳ್ಳುತ್ತದೆ ಎಂದು ಉದಾಹರಣೆ ಸಹಿತ ವಿವರಿಸಿದರು. ಮನಸ್ಸಿಗೆ ಸಮಾಧಾನ, ವ್ಯವದಾನ ಇಲ್ಲದೇ ಯಾವ ಸಾಧನೆಯೂ ಇಲ್ಲ. ಸಮಾಧಾನ ಕಡಿಮೆಯಾಗಿ ಅವಸರ ಹೆಚ್ಚಿದಾಗ ಅನಾಹುತಗಳು ಹೆಚ್ಚುತ್ತವೆ. ಎಲ್ಲವೂ ಬೇಕಾಗುವ ಸಮಯದಲ್ಲಿ ಆಗಬೇಕು ಎಂಬ ಧಾವಂತದಲ್ಲಿ ಇಂದು ನಾವಿದ್ದೇವೆ. ಧಾವಂತದ ಬದುಕಿನಿಂದ ಅಕಾಲಿಕ ಮುಪ್ಪಿನಂಥ ಅಡ್ಡ ಪರಿಣಾಮಗಳೂ ಎದುರಾಗುತ್ತವೆ ಎಂದರು.
ಧಾವಂತದ ಬದುಕಿನ ದುಷ್ಪರಿಣಾಮವನ್ನು ಅರಿಯದೇ ನಾವು ಆ ಬದುಕಿಗೆ ಒಗ್ಗಿಕೊಳ್ಳುತ್ತಿದ್ದೇವೆ. ಆಯಾ ಕಾರ್ಯಕ್ಕೆ ಅಗತ್ಯ ಸಮಯವನ್ನು ವಿನಿಯೋಗಿಸಿದಾಗ ಮಾತ್ರ ಸೂಕ್ತ ಫಲ ದೊರಕುತ್ತದೆ. ಸಮಾಧಾನವನ್ನು, ಅವಸರವಿಲ್ಲದ ಬದುಕನ್ನು ನಾವು ರೂಢಿಸಿಕೊಳ್ಳವೇಕು ಎಂದು ಸೂಚಿಸಿದರು.ಇಂದಿನ ಜೀವನದಲ್ಲಿ ವೇಗ ಕಡಿಮೆಯಾಗುವ ಸಾಧ್ಯತೆ ಕಡಿಮೆ. ನಮ್ಮ ದೈನಂದಿನ ಕಾರ್ಯಗಳಲ್ಲಿ ತಾಳ್ಮೆ ವಹಿಸಿದಾಗ, ಎಲ್ಲ ಕಾರ್ಯಗಳು ಸುಸೂತ್ರವಾಗಿ ನಡೆಯುತ್ತದೆ. ತಾಳ್ಮೆಯೊಂದು ಬದುಕಿನಲ್ಲಿ ದೊರಕಿದರೆ ಉಳಿದೆಲ್ಲವೂ ಸಿಗುತ್ತದೆ ಎಂದು ವಿಶ್ಲೇಷಿಸಿದರು.
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಉತ್ತಮ ಮಳೆಯಿಂದ ಹಸಿರಾದ ವನ್ಯಜೀವಿ ತಾಣ | ಚಾಮರಾಜನಗರ ಜಿಲ್ಲೆಯ ಹಲವೆಡೆ ಹಸಿರು ಸಂಭ್ರಮ

ಉತ್ತಮ ಮಳೆಗೆ ಅರಣ್ಯ ಪ್ರದೇಶವೆಲ್ಲ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ, ಮಳೆ ಹನಿಗಳಿಗೆ ಮೈಯೊಡ್ಡಿದ…

30 minutes ago

50 ಕೋಟಿಗೂ ಹೆಚ್ಚು ಜನರು ಕೃಷಿ ಕ್ಷೇತ್ರದಲ್ಲಿದ್ದಾರೆ , ಜಿಡಿಪಿಗೆ ಕೃಷಿಯ ಕೊಡುಗೆ ಶೇಕಡಾ 18

ರಾಜ್ಯದ ಅಡಿಕೆ ಬೆಳೆ ಅತ್ಯಂತ ಉತ್ಕೃಷ್ಟ ಗುಣಮಟ್ಟದ್ದಾಗಿದ್ದು, ಇದರಲ್ಲಿ ಯಾವುದೇ ರಾಸಾಯನಿಕ ಇಲ್ಲ.…

1 hour ago

ಅಡಿಕೆ ಹಾಳೆ ರಫ್ತು ನಿರ್ಬಂಧದ ಸಂಕಷ್ಟದಿಂದ ಪಾರಾಗಲು ಕೈಗೊಳ್ಳಬಹುದಾದ ಪರಿಹಾರೋಪಾಯಗಳು

ನಿಷೇಧವು ಶಾಶ್ವತವಲ್ಲ, ಮತ್ತು ವೈಜ್ಞಾನಿಕ, ತಾಂತ್ರಿಕ, ಮತ್ತು ವಾಣಿಜ್ಯ ರಾಜತಾಂತ್ರಿಕ ಮಾರ್ಗದಿಂದ ಈ…

2 hours ago

ಅಡಿಕೆ ಎನ್ನುವ ಚಿನ್ನದ ಮೊಟ್ಟೆ ಇಡುವ ಕೋಳಿ | ವರವೋ ಶಾಪವೋ?

ಆಹಾರ ಧಾನ್ಯಗಳನ್ನು ಬೆಳೆಸುತ್ತಿದ್ದ ಕೃಷಿಕರು ಅಡಿಕೆ ಕೃಷಿಗೆ ಪರಿವರ್ತನೆ ಆಗಿ ಆಹಾರಕ್ಕಾಗಿ ಪರಾವಲಂಬಿಗಳು…

2 hours ago

ಹೊಸರುಚಿ | ಉಪ್ಪಿನಲ್ಲಿ ಹಾಕಿದ ಹಲಸಿನ ಕಾಯಿ ರೊಟ್ಟಿ

ಉಪ್ಪಿನಲ್ಲಿ ಹಾಕಿದ ಹಲಸಿನ ಕಾಯಿ ರೊಟ್ಟಿಗೆ ಬೇಕಾಗುವ ಸಾಮಗ್ರಿಗಳು: ಉಪ್ಪಿನಲ್ಲಿ ಹಾಕಿದ ಹಲಸಿನ ಕಾಯಿ…

4 hours ago

ಗುರು ಮತ್ತು ಬುಧ ದಶಾಂಕ ಯೋಗ | ಉದ್ಯೋಗದ ಮೇಲೆ ಜಾಕ್ಪಾಟ್ ದೊರೆಯಲಿದೆ

ಹೆಚ್ಚಿನ ಮಾಹಿತಿಗಾಗಿರಾಯರ ಪರಮಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

6 hours ago