ತಮ್ಮ ಹಿತವನ್ನೇ ಬಲಿಕೊಟ್ಟು ಪರೋಪಕಾರ ಮಾಡುವುದು ಸತ್ಪುರುಷರ ಲಕ್ಷಣ. ಪರೋಪಕಾರ, ಕರುಣೆಯನ್ನು ಬದುಕಿನಲ್ಲಿ ತುಂಬಿಕೊಂಡು ಬದುಕಿನ ಸಾರ್ಥಕತೆ ಗಳಿಸಿಕೊಳ್ಳೋಣ ಎಂದು ಎಂದು ಹೊಸನಗರ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಕರೆ ನೀಡಿದರು.
ಗೋಕರ್ಣದ ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಕೈಗೊಂಡಿರುವ ಗುರುಕುಲ ಚಾತುರ್ಮಾಸ್ಯದ ಅಂಗವಾಗಿ ಬುಧವಾರ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದ ಅವರು, ತಮಗೆ ತೊಂದರೆಯಾಗದಂತೆ ಪರೋಪಕಾರ ಮಾಡುವವರು ಸಾಮಾನ್ಯರು. ತಮ್ಮ ಸ್ವಾರ್ಥಕ್ಕಾಗಿ ಬೇರೆಯವರ ಶ್ರೇಯಸ್ಸು ಹಾಳು ಮಾಡುವವರು ಮಾನುಷ ರಾಕ್ಷಸರು. ಆದರೆ ತಮಗೆ ಯಾವ ಹಿತವೂ ಇಲ್ಲದಿದ್ದರೂ, ಬೇರೆಯವರಿಗೆ ತೊಂದರೆ ಕೊಡುವ ಇನ್ನೊಂದು ವರ್ಗವಿದೆ. ಇಂಥ ವರ್ಗವೂ ಇದೆ ಎದು ಬತೃಹರಿ ಹೇಳಿದ್ದಾಗಿ ವಿವರಿಸಿದರು. ತಾವು ಹಸಿದರೂ ಬೇರೆಯವರ ಹೊಟ್ಟೆ ತುಂಬಿಸುವ ಭಾವ ಅದು ಸತ್ಪುರಷರದ್ದು. ಬೇರೆಯವರ ಅಗತ್ಯ ನಮ್ಮ ಅಗತ್ಯಕ್ಕಿಂತ ದೊಡ್ಡದು ಎಂಬ ಭಾವ ಅದು. ತಮ್ಮ ಹೊಟ್ಟೆ ತುಂಬಿದ ಮೇಲೆ ಬೇರೆಯವರಿಗೆ ಕೊಡುವವರು ಸಾಮಾನ್ಯರು; ಹಸಿದವನ ರೊಟ್ಟಿಯನ್ನು ಕಸಿದು ತಿನ್ನುವವರು ಮಾನುಷ ರಾಕ್ಷಸರು; ಹೊಟ್ಟೆ ತುಂಬಿದ ವ್ಯಕ್ತಿ ಹಸಿದವನ ರೊಟ್ಟಿ ಕಿತ್ತುಕೊಂಡು ಎಸೆಯುವವನು ನಾಲ್ಕನೇ ವರ್ಗಕ್ಕೆ ಸೇರಿದವನು. ತನ್ನಲ್ಲೂ ಕರುಣೆ ಇಲ್ಲದ ದಾನವಾಧಮ, ತನ್ನಲ್ಲಿ ಮಾತ್ರ ಕನಿಕರ ಇರುವ ದಾನವ, ತನ್ನವರಲ್ಲಿ ಮಾತ್ರ ಕರುಣೆ ಇರುವ ಮಾನವ, ತನ್ನವರಲ್ಲದವರಲ್ಲೂ ಕನಿಕರ ತೋರುವ ಮಾನವೋತ್ತಮ ಹೀಗೆ ನಾಲ್ಕು ವರ್ಗವನ್ನು ಮೀರಿ ಐದನೇ ವರ್ಗ ಶತ್ರುಗಳಲ್ಲೂ ಕರುಣೆ ತೋರುವಂಥದ್ದು; ಐದನೇ ವರ್ಗದವರು ಗುರುಗಳೋ ಅಥವಾ ದೇವರೋ ಆಗಿರುತ್ತಾರೆ ಎಂದು ವಿಶ್ಲೇಷಿಸಿದರು. ತನಗೆ ಯಾವ ತೊಂದರೆಯೂ ಆಗಬಾರದು ಎನ್ನುವುದು ಸಹಜ ಬಯಕೆ. ಆದರೆ ತನ್ನ ಮೇಲೂ ಕನಿಕರ ಇಲ್ಲದ ನಿದರ್ಶನಗಳು ಹಿರಣ್ಯಕಶುಪು ಮತ್ತು ರಾವಣನ ಜೀವನದ ಕೆಲ ಘಟ್ಟಗಳನ್ನು ಉದಾಹರಿಸಬಹುದು. ಹಿರಣ್ಯಕಶುಪು ತಪಸ್ಸು ಮಾಡುವಾಗ ಮೈಮೇಲೆ ಹುತ್ತ ಬೆಳೆದು ಕೇವಲ ಎಲುಬು ಮಾತ್ರ ಉಳಿದಿತ್ತು. ಹಾಗೆ ತನ್ನ ಮೇಲೂ ಕನಿಕರ ಇಲ್ಲದ ಅಪರೂಪದ ನಿದರ್ಶನ ಇದು. ಅಂತೆಯೇ ರಾವಣ ಕೂಡಾ ಹತ್ತು ಸಾವಿರ ವರ್ಷ ತಪಸ್ಸು ಮಾಡಿ ತನ್ನ ಒಂದೊಂದೇ ತಲೆಯನ್ನು ಕಡಿದು ಬ್ರಹ್ಮದೇವರಿಗೆ ಅರ್ಪಿಸುತ್ತಾ ಬರುತ್ತಾನೆ. ಇದು ರಾವಣನಿಗೆ ತನ್ನ ಬಗೆಯೂ ಕನಿಕರ ಇಲ್ಲದ ಪರಿ ಇದು ಎಂದು ಬಣ್ಣಿಸಿದರು. ರಾಮಾಯಣದ ಕೊನೆಯಲ್ಲಿ ರಾವಣ ಸಾವಿಗಾಗಿ ಯುದ್ಧ ಮಾಡಿದ. ಇದು ಆತನ ಮೇಲೂ ಆತನಿಗೆ ಕನಿಕರ ಇರಲಿಲ್ಲ ಎಂದು ವಿವರಿಸಿದರು. ತನ್ನ ಮೇಲೆ ಮಾತ್ರ ಕರುಣೆ ಇರುವ ನಿದರ್ಶನ ಮಹಾಭಾರತದ ದುರ್ಯೋದನ. ತನ್ನವರೆಲ್ಲರನ್ನೂ ಯುದ್ಧದಲ್ಲಿ ಕಳೆದುಕೊಂಡ ಬಳಿಕ ಜೀವ ಉಳಿಸಿಕೊಳ್ಳುವ ಸಲುವಾಗಿ ವೈಶಂಪಾಯನ ಸರೋವರದಲ್ಲಿ ಅಡಗಿಕೊಳ್ಳುತ್ತಾನೆ ಎಂದರು.ಗೋಕರ್ಣದಲ್ಲಿ ನಡೆದ 'ಅನ್ನಂ ಬ್ರಹ್ಮ' ಪ್ರವಚನದಲ್ಲಿ ರಾಘವೇಶ್ವರ ಭಾರತೀ ಶ್ರೀಗಳು ಭೋಜನವೇ ಅದ್ವೈತ…
ಕೃಷಿ ಅಧಿಕಾರಿ ನೇಮಕಾತಿ ಪರೀಕ್ಷೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಪ್ರತಿಭಟನಾನಿರತ ಕೃಷಿ ವಿದ್ಯಾರ್ಥಿಗಳಿಗೆ ಸರ್ಕಾರ…
ಉಪಗ್ರಹ, ಡ್ರೋನ್, GIS, AI ಮತ್ತು ಮಷಿನ್ ಲರ್ನಿಂಗ್ ತಂತ್ರಜ್ಞಾನ ಬಳಸಿ ರಾಜ್ಯ…
ಬರ್ಮಾ ಅಡಿಕೆ ಕಳ್ಳಸಾಗಣೆ ಮತ್ತು ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಇಡಿ ಸಿಲ್ಚಾರ್ನ…
ಕರಾವಳಿ ಹಾಗೂ ಮಲೆನಾಡಿನಲ್ಲಿ ಆಗಸ್ಟ್ 10ರಿಂದ ಮಳೆಯ ಪ್ರಮಾಣ ಕಡಿಮೆಯಾಗುವ ಲಕ್ಷಣಗಳು ಗೋಚರಿಸಿವೆ.…
ದೇಹ, ಮನಸ್ಸು ಮತ್ತು ಆತ್ಮದ ಸಮತೋಲನವೇ ನಿಜವಾದ ಆರೋಗ್ಯ ಎಂದು ರಾಮಚಂದ್ರಾಪುರ ಶ್ರೀ…