ಮುಗಿಲ ಮಾರಿಗೆ ರಾಗರತಿಯಾ..
ಮುಗಿಲ ಮಾರಿಗೆ ರಾಗರತಿಯಾ..
ನಂಜ ಏರಿತ್ತಾ…ಆಗ ಸಂಜೇ ಆಗಿತ್ತಾ
ಆಗ ಸಂಜೇ ಆಗಿತ್ತಾ…
ನೆಲದ ಅಂಚಿಗೆ ಮಂಜಿನ ಮುಸುಕೂ
ಹ್ಯಾಂಗೊ ಬಿದ್ದಿತ್ತಾ , ಗಾಳಿಗೆ ಮೇಲಕ್ಕೆದ್ದಿತ್ತಾ..
ಗಾಳಿಗೆ ಮೇಲಕ್ಕೆದ್ದಿತ್ತಾ….
ಮುಗಿಲ ಮಾರಿಗೇ ರಾಗ ರತಿಯಾ..
ನಂಜ ಏರಿತ್ತಾ…ಆಗ ಸಂಜೇ ಆಗಿತ್ತಾ…..
ವಾವ್…… ದ.ರಾ. ಬೇಂದ್ರೆಯವರು ತಮ್ಮ “ರಾಗರತಿ” ಗೀತೆಯಲ್ಲಿ ಪ್ರಕೃತಿಯ ಸೊಬಗು ಮತ್ತು ಬಾವ ವಿಕಾರದ ವರ್ಣನೆಯನ್ನು ಅದ್ಬುತವಾಗಿ ಸೆರೆ ಹಿಡಿದಿದ್ದಾರೆ.
ಹೌದಲ್ಲಾ….. ವಿಶೇಷವಾಗಿ ಮೂಡಣದ ಊರಿಗೆ ಸುಬ್ಬಪ್ಪನ ರಥೋತ್ಸವದೊಂದಿಗೆ ಮುಗಿಲ ತೇರಿನ ಕೊನೆಯ ದಿನಗಳೂ ಹೌದು. ದೈವಿಕ ನಿಯಮವೋ, ಪ್ರಾಕೃತಿಕ ಘಟನೆಯೋ…ಸುಬ್ರಹ್ಮಣ್ಯ ಷಷ್ಠೀ ನಮ್ಮೂರಿಗೆ ಮಳೆಯ ಕೊನೆಯ ದಿನಗಳ ಸೂಚಕ.(ಪ್ರಕೃತಿ ಮತ್ತು ದೈವಿಕ ಎರಡೂ ಒಂದೇ) ಅದರಂತೆಯೇ ಸುಬ್ಬಪ್ಪ, ನಿನ್ನೆ ಷಷ್ಠೀ ಉತ್ಸವ ಸಂಭ್ರಮಿಸಿ ಗರ್ಭಗುಡಿ ಸೇರಿದ ನಂತರ ವರುಣ ತನ್ನ ಕರ್ತವ್ಯ ನಿರ್ವಹಣೆಗೆ ಹಾಜರಾಗೇಬಿಟ್ಟ.ಯಾರ ಪ್ರಚೋದನೆಯೋ, ಯಾವ ನಿಯಮವೋ ಸುಬ್ಬಪ್ಪನ ರಥೋತ್ಸವದ ಸಮಾಪನ ವರುಣನಿಗೆ ಹೇಗೆ ಗೊತ್ತಾಯಿತೋ…ಉತ್ಸವದ ಸಂಧರ್ಬ ಘಟಿಸಿರಬಹುದಾದ ಮಾನುಷ ಸಹಜ ಕೊಳೆಯನ್ನು ತೊಳೆದೇ ಬಿಟ್ಟ. ….ಯಬ್ಬ..ಎತ್ತಣ ಮಾಮರ
ಎತ್ತಣ ಕೋಗಿಲೆ ,
ಎತ್ತಣೆತ್ತಿಂದ ಸಂಭಂದವಯ್ಯಾ..
ಬೆಟ್ಟದಾ ನೆಲ್ಲಿಕಾಯಿ
ಸಮುದ್ರದೊಳಗಣ ಉಪ್ಪು
ಎತ್ತಣೆತ್ತಿಂದ ಸಂಬಂಧವಯ್ಯಾ…..
ಈ ಎತ್ತಣೆತ್ತಿನ ಸಂಭಂಧವೇ ನಾವೆಲ್ಲಾ ದೇವರೂ,ಪ್ರಕೃತಿ, ಶಕ್ತಿ ಎಂದು ನಂಬೋದಲ್ಲವೇ…ಈ ಸೂಕ್ಷ್ಮಗಳ ಅರಿಯುದರಲ್ಲೇ ,ಅರಿತು ನಡೆಯುವುದರಲ್ಲೇ ನಿಜ ಜೀವನೋತ್ಸಾಹ ಇರೋದು…
ಅದನ್ನೇ ದ.ರಾ ಬೇಂದ್ರೆಯವರು….. ಮಾನವನೂ ರಾಗವೆಂಬ ಮುಗಿಲು ರತಿಯಾಗಿ ಮನವೆಂಬ ನೆಲದಂಚಿಗೆ ಮಂಜಿನಂತೆ ಮುಸುಕಾಗಿ ಆವರಿಸಿ ಬಿದ್ದಾಗ ತನಗೆ ಅರಿಯದೇ ಹೊಸ ಜೀವ ಚೈತನ್ಯವೊಂದು ಹೊರ ಸೂಸುವುದರನ್ನು ಬಹಳ ಚೆನ್ನಾಗಿ ವರ್ಣಿಸಿದ್ದಾರೆ….
ಧೀಯೋಯೋನಃ ಪ್ರಚೋದಯಾತ್…. ಎಂದಷ್ಟೇ ನಮ್ಮ ಪ್ರಾರ್ಥನೆ.
# ಟಿ ಆರ್ ಸುರೇಶ್ಚಂದ್ರ ಕಲ್ಮಡ್ಕ
( ಮುಗಿಲ ಮಾರಿಗೆ ರಾಗರತಿಯಾ….. ಹಾಡು ಇಲ್ಲಿದೆ…..)
ದಕ್ಷಿಣ ಕನ್ನಡದ ಮಲೆನಾಡು ತಪ್ಪಲಿನ ಸುಬ್ರಹ್ಮಣ್ಯ, ಸುಳ್ಯ, ಕಡಬ ಸೇರಿದಂತೆ ಹಲವು ಪ್ರದೇಶಗಳಲ್ಲಿ…
ಆಗಸ್ಟ್ 26ರಿಂದ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಾಗುವ ಲಕ್ಷಣಗಳಿದ್ದು, ಕರಾವಳಿ…
ಎಲ್ ನಿನೋ ಪರಿಣಾಮದಿಂದ ಮಳೆ ಕಡಿಮೆಯಾಗಬಹುದು ಎಂಬ ನಿರೀಕ್ಷೆಯ ನಡುವೆಯೂ ಕರಾವಳಿಯಲ್ಲಿ ಆಗಸ್ಟ್ನಲ್ಲಿ…
ಸುಮಾರು 35 ವರ್ಷಗಳ ಹಿಂದೆ ಡಾ. ವಿಘ್ನೇಶ್ವರ ವರ್ಮುಡಿಯವರು ಮುಂದಿಟ್ಟಿದ್ದ ಅಡಿಕೆ ಮಾರುಕಟ್ಟೆ…
ಭಾರತದ ರಾಷ್ಟ್ರೀಯ ಕೀಟ ಕಣ್ಗಾವಲು ವ್ಯವಸ್ಥೆ ಈಗ 73 ಬೆಳೆಗಳು ಮತ್ತು 436…
ICAR 16 ಹೊಸ ಜಾನುವಾರು ಮತ್ತು ನಾಯಿ ತಳಿಗಳಿಗೆ ರಾಷ್ಟ್ರೀಯ ನೋಂದಣಿ ನೀಡಿದ್ದು,…