#HeavyRain | ಕರಾವಳಿಯಲ್ಲಿ ಒಮ್ಮೆಲೇ ಸುರಿದ ಧಾರಾಕಾರ ಮಳೆ | ಹಲವು ಕಡೆ 150 ಮಿಮೀ+ ಮಳೆ |

July 23, 2023
8:13 AM
ಕಳೆದ 24 ಗಂಟೆಯಲ್ಲಿ ಮಲೆನಾಡು, ಕರಾವಳಿ ಭಾಗದಲ್ಲಿ ಉತ್ತಮ ಮಳೆಯಾಗಿದೆ. ಹವಾಮಾನ ಆಸಕ್ತ, ಮಳೆ ದಾಖಲು ವಾಟ್ಸಪ್‌ ಗುಂಪಿನ ಮಾಹಿತಿ ಪ್ರಕಾರ ಹಲವು ಕಡೆಗಳಲ್ಲಿ 150 ಮಿಮೀ ಗಿಂತ ಅಧಿಕ ಮಳೆಯಾಗಿದೆ.

ಕಳೆದ ಎರಡು ದಿನಗಳಿಂದ ಕರಾವಳಿ, ಮಲೆನಾಡು ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿದೆ. ಕಳೆದ 24 ಗಂಟೆಯಲ್ಲಿ ಸುಳ್ಯ, ಪುತ್ತೂರು, ಬೆಳ್ತಂಗಡಿ ಸೇರಿದಂತೆ ಕರಾವಳಿ ಪ್ರದೇಶಗಳಲ್ಲಿ, ಮಲೆನಾಡು ಪ್ರದೇಶದಲ್ಲಿ 150 ಮಿಮೀ+ ಮಳೆಯಾಗಿದೆ. ಹವಾಮಾನ ಆಸಕ್ತರು ಹಾಗೂ ಮಳೆ ದಾಖಲು ವಾಟ್ಸಪ್‌ ಗುಂಪಿನ ಮಳೆ ಮಾಹಿತಿ ಪ್ರಕಾರ ಸುಳ್ಯ ತಾಲೂಕಿನಲ್ಲಿ ಅಧಿಕ ಮಳೆಯಾಗಿದೆ.

ಸುಳ್ಯದ ಕೊಲ್ಲಮೊಗ್ರದಲ್ಲಿ 199 ಮಿಮೀ ಮಳೆಯಾದರೆ, ಬೆಳ್ಳಾರೆ 160 ಮಿಮೀ, ಕಮಿಲ 193 ಮಿಮೀ, ಕಡಬ ಕೋಡಿಂಬಾಳ 162 ಮಿಮೀ, ಬಂಟ್ವಾಳ ಪುಣಚ 79 ಮಿಮೀ, ಕೊಳ್ತಿಗೆ 105 ಮಿಮೀ , ಸುಳ್ಯ 169 ಮಿಮೀ, ಪುತ್ತೂರು ಬಂಗಾರಡ್ಕ 155 ಮಿಮೀ, ಪುತ್ತೂರು ಬಲ್ನಾಡು 110 ಮಿಮೀ ಮಳೆ ದಾಖಲಾಗಿದೆ. ಕಾರ್ಕಳ ಬಜಗೋಳಿಯಲ್ಲಿ 282 ಮಿಮೀ , ಬಂಟ್ವಾಳ ಕೆಲಿಂಜ 135 ಮಿಮೀ,  ಬಳ್ಪ 207 ಮಿಮೀ, ರಾಮಕುಂಜ 170 ಮಿಮೀ, ಸುಳ್ಯ ನಡುಗಲ್ಲು 217 ಮಿಮೀ,  ಕಡಬ 212 ಮಿಮೀ, ದೊಡ್ಡತೋಟ 176 ಮಿಮೀ, ಮುರುಳ್ಯ 180 ಮಿಮೀ, ಬೆಳ್ತಂಗಡಿ 218 ಮಿಮೀ, ಮಡಪ್ಪಾಡಿ 189 ಮಿಮೀ, ಬಾಳಿಲ 171 ಮಿಮೀ, ಕಲ್ಲಾಜೆ 232 ಮಿಮೀ, ಉಬರಡ್ಕ 175 ಮಿಮೀ, ಎಣ್ಮೂರು 193 ಮಿಮೀ, ಸುಬ್ರಹ್ಮಣ್ಯ 165 ಮಿಮೀ,  ಕಾಸರಗೋಡು ಕಲ್ಲಕಟ್ಟ 165 ಮಿಮೀ, ಕಲ್ಮಡ್ಕ 180 ಮಿಮೀ ಮಳೆಯಾಗಿದೆ. ಚೆಂಬು 232 ಮಿಮೀ, ಎಡಮಂಗಲ 196 ಮಿಮೀ, ಮೆಟ್ಟಿನಡ್ಕ 228 ಮಿಮೀ,  ಕಂದ್ರಪ್ಪಾಡಿ 224 ಮಿಮೀ, ಪಂಬೆತ್ತಾಡಿ 210 ಮಿಮೀ, ಮಲ್ಲಾರ 203 ಮಿಮೀ ಮಳೆಯಾಗಿದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

ಇದನ್ನೂ ಓದಿ

ಹವಾಮಾನ ವರದಿ | 15-09-2026 | ಕರ್ನಾಟಕದಲ್ಲಿ ಮಳೆ ಮತ್ತೆ ಚುರುಕಾಗುವ ಸೂಚನೆ
September 15, 2026
12:30 PM
by: ಸಾಯಿಶೇಖರ್ ಕರಿಕಳ
ಸರಿಗಮಪ ಲಿಟಲ್ ಚಾಂಪ್ಸ್ 2026ರ ವಿಜೇತ ಅಶ್ಮಿತ್‌ಗೆ ಮಂಗಳೂರಿನಲ್ಲಿ ಅಭಿನಂದನೆ – ಪುಟ್ಟ ಕಲಾವಿದನ ಸಾಧನೆಯ ಹಿಂದಿನ ಪಯಣಕ್ಕೆ ಮೆಚ್ಚುಗೆ
September 14, 2026
2:55 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 14-09-2026 | ಸೆ.18ರ ಬಳಿಕ ಮಳೆ ಚಿತ್ರಣ ಬದಲಾಗಬಹುದೇ?
September 14, 2026
12:51 PM
by: ಸಾಯಿಶೇಖರ್ ಕರಿಕಳ
ನನ್ನ ಚಿತ್ರ-ನನ್ನ ಖುಷಿ | ಬಣ್ಣಗಳ ಮೂಲಕ ಅರಳಿದ ಗಣೇಶ
September 14, 2026
11:33 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror