ಹವಾಮಾನ ಕುತೂಹಲ | ಕಲ್ಲಾಜೆಯಲ್ಲಿ ಇದುವರೆಗೆ 1108 ಮಿಮೀ ಮಳೆ |

June 1, 2022
10:11 AM
News Summary
| ಕೃಷಿ ಬೆಳವಣಿಗೆಗೆ ಮಳೆ ಅಗತ್ಯ. ಹಾಗಿದ್ದರೆ ನಮ್ಮಲ್ಲಿ ಎಷ್ಟು ಮಳೆಯಾಗುತ್ತದೆ ? ಈ ಲೆಕ್ಕವನ್ನು ಈಗ ಕೃಷಿಕರು ಹಾಕುತ್ತಿದ್ದಾರೆ. ಅಂತಹದೊಂದು ಲೆಕ್ಕದ ಪ್ರಕಾರ ಸುಳ್ಯ ಕಲ್ಲಾಜೆಯಲ್ಲಿ ಇದುವರೆಗೆ ಉತ್ತಮ ಮಳೆ ಬಿದ್ದಿದೆ. |

ಮಳೆಗಾಲ ಆರಂಭವಾಗುತ್ತಿದೆ.ಜೂನ್.‌1 ರ ಬಳಿಕ ಮಳೆಗಾಲವೇ. ಈ ಬಾರಿ ಅದೇ ಸಮಯಕ್ಕೆ ಮಳೆ ಆರಂಭವಾಗುತ್ತಿದೆ. ಆದರೆ ಈಚೆಗೆ ಮುಂಗಾರು ಪೂರ್ವ ಮಳೆಯೂ ಉತ್ತಮವಾಗುತ್ತಿದೆ. ಕಾಡು ಹೊಂದಿರುವ ಪ್ರದೇಶಗಳಲ್ಲಿ ಈ ಬಾರಿಯೂ ಇದುವರೆಗೆ ಉತ್ತಮ ಮಳೆಯಾಗಿದೆ. ಸುಳ್ಯ ತಾಲೂಕಿನ ಕಲ್ಲಾಜೆಯಲ್ಲಿ  2022 ರ ಮೇ ವರೆಗೆ 1108 ಮಿಮೀ ಮಳೆಯಾಗಿದೆ. ಮೇ ತಿಂಗಳಲ್ಲಿಯೇ ಈ ಬಾರಿ 708 ಮಿಮೀ ಮಳೆಯಾಗಿದೆ.

Advertisement

ಮಳೆ ದಾಖಲು ಮಾಡುವ ಕೃಷಿಕರು ದಕ್ಷಿಣ ಕನ್ನಡ ಹಾಗೂ ವಿವಿಧ ಜಿಲ್ಲೆಗಳಲ್ಲಿ ಇದ್ದಾರೆ. ಹವಾಮಾನ ವೀಕ್ಷಣೆ ಹಾಗೂ ಮಳೆ ಬೀಳುವ ಲೆಕ್ಕಾಚಾರ, ಬೀಳುವ ಮಳೆಯ ಲೆಕ್ಕ ಇದರ ಆಧಾರದಲ್ಲಿ  ಕೃಷಿ ಕಾರ್ಯವನ್ನು ನಿರ್ಧರಿಸುವ ಯುವ ಕೃಷಿಕರೂ ಇದ್ದಾರೆ. ಕೃಷಿಕ ಪಿ ಜಿ ಎಸ್‌ ಎನ್‌ ಪ್ರಸಾದ್‌ ಅವರ ನೆರವಿನೊಂದಿಗೆ ಅನೇಕರು ಮಳೆ ಲೆಕ್ಕ ಆರಂಭಿಸಿದ್ದಾರೆ.  ಕಳೆದ ಕೆಲವು ಸಮಯಗಳ ವೀಕ್ಷಣೆಯ ಪ್ರಕಾರ ಕಾಡಂಚಿನ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುತ್ತಿದೆ. ಕೊಲ್ಲಮೊಗ್ರ, ಸುಬ್ರಹ್ಮಣ್ಯ, ಕಲ್ಲಾಜೆ, ಬಳ್ಪ, ಕಲ್ಮಡ್ಕ, ಎಣ್ಮೂರು, ಕಡಬ ಮೊದಲಾದ ಕಡೆಗಳಲ್ಲಿ ಉತ್ತಮ ಮಳೆಯಾಗುತ್ತದೆ.ಕಳೆದ ವರ್ಷಕ್ಕಿಂತ ಈ ವರ್ಷ ಮಳೆ ಬಿದ್ದ ಪ್ರಮಾಣ ಹೆಚ್ಚಾಗಿದೆ.

ಈ ವರ್ಷ ಸುಳ್ಯ ತಾಲೂಕಿನ ಕಲ್ಲಾಜೆಯಲ್ಲಿ  ಮೇ ತಿಂಗಳ ಅಂತ್ಯದವರೆಗೆ 1108 ಮಿಮೀ ಮಳೆಯಾಗಿದೆ. ಮೆಟ್ಟಿನಡ್ಕದಲ್ಲಿ 944 ಮಿಮೀ, ಎಣ್ಮೂರು 909 ಮಿಮೀ, ಬಳ್ಪ ಕೋಡಿಗದ್ದೆಯಲ್ಲಿ 904 ಮಿಮೀ, ಬಾಳಿಲದಲ್ಲಿ 826 ಮಿಮೀ, ಕಮಿಲ ಪುಚ್ಚಪ್ಪಾಡಿಯಲ್ಲಿ 807 ಮಿಮೀ , ಕಡಬ ಕೋಡಿಂಬಾಳದಲ್ಲಿ 698 ಮಿಮೀ,   ಬೆಳ್ಳಾರೆ ಕಾವಿನಮೂಲೆಯಲ್ಲಿ 630 ಮಿಮೀ, ಕೋಡಪದವಿನಲ್ಲಿ 361 ಮಿಮೀ.  ,  ಮಳೆಯಾಗಿದೆ.

 

 

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 18.04.2025 | ಕೆಲವು ಸೀಮಿತ ಪ್ರದೇಶದಲ್ಲಿ ಮಳೆ | ಎ.21ರಿಂದ ಮಳೆ ಹೆಚ್ಚಾಗುವ ಸಾಧ್ಯತೆ
April 18, 2025
3:26 PM
by: ಸಾಯಿಶೇಖರ್ ಕರಿಕಳ
ಸದ್ಯ ಮುಂಗಾರು ಮಳೆ ಆಶಾವಾದ | ಮುಂದಿರುವ ಸವಾಲುಗಳಲ್ಲಿ ತಾಪಮಾನವೇ ಪ್ರಮುಖ |
April 18, 2025
6:57 AM
by: The Rural Mirror ಸುದ್ದಿಜಾಲ
ಯಾಣವನ್ನು ಪ್ಲಾಸ್ಟಿಕ್ ಮುಕ್ತವಾಗಿಸಲು ಪಣ | ಅರಣ್ಯ ಇಲಾಖೆಯಿಂದ ಹಲವು ಕ್ರಮ
April 18, 2025
6:35 AM
by: The Rural Mirror ಸುದ್ದಿಜಾಲ
ಬೆಂಗಳೂರು-ಮುರುಡೇಶ್ವರ ಮತ್ತು ಬೆಂಗಳೂರು-ಕಣ್ಣೂರು ರೈಲು | ಎಲ್ ಹೆಚ್ ಬಿ ಬೋಗಿ ಅಳವಡಿಸಲು ನೈರುತ್ಯ ರೈಲ್ವೆ  ಸಜ್ಜು
April 18, 2025
6:23 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group