#CoconutShell | ತೆಂಗಿನ ಗೆರಟೆಯಿಂದ ರಕ್ಷಾಬಂಧನ | ತೆಂಗಿನ ಗೆರಟೆಯ ಮೌಲ್ಯವರ್ಧನೆ | ಪುತ್ತೂರಿನ ಕೋಡಿಂಬಾಡಿಯಲ್ಲಿ ಮಹಿಳೆಯರ ಪ್ರಯತ್ನ |

August 25, 2023
11:49 AM
ತೆಂಗಿನ ಗೆರಟೆಯ ಮೂಲಕ ವಿವಿಧ ಕಲಾಕೃತಿಗಳನ್ನು ಮಾಡಲಾಗುತ್ತಿದೆ. ಇದೀಗ ಪುತ್ತೂರಿನ ಕೋಡಿಂಬಾಡಿಯ ಮಹಿಳಾ ತಂಡಗಳು ರಕ್ಷಾಬಂಧನ ತಯಾರಿ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
Advertisement

ತೆಂಗಿನಕಾಯಿಯ ಗೆರಟೆಯಿಂದ ರಕ್ಷಾಬಂಧನ RakshaBandhan ತಯಾರಿಕೆಯ ಪ್ರಯತ್ನ ನಡೆಯುತ್ತಿದೆ. ಈ ಹೆಜ್ಜೆಯಲ್ಲಿ ಮಹಿಳೆಯರು ಯಶಸ್ಸು ಕಾಣುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಕೋಡಿಂಬಾಡಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಸಂಜೀವಿನಿ ಒಕ್ಕೂಟದ ಮಹಿಳೆಯರು ತೆಂಗಿನ ಕಾಯಿಯ ಗೆರಟೆಯ ಮೂಲಕ ವಿವಿಧ ವಸ್ತುಗಳನ್ನು ತಯಾರಿಸುತ್ತಿದ್ದಾರೆ.

Advertisement

Advertisement
Advertisement

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕೋಡಿಂಬಾಡಿ ಗ್ರಾಮದ ಶ್ರೀ ಮಹಾಲಿಂಗೇಶ್ವರ ಸಂಜೀವಿನಿ ಒಕ್ಕೂಟದ ಸದಸ್ಯರು ಈಗ ತೆಂಗಿನಕಾಯಿಯ ಗೆರಟೆಯ ಮೂಲಕ ಕಲಾಕೃತಿ ರಚನೆಯ ಮೂಲಕ ಈಗಾಗಲೇ ಸುದ್ದಿಯಾಗಿದ್ದಾರೆ.  ಸುಮಾರು ಮಂದಿ ಮಹಿಳೆಯರು ಗೆರಟೆಯಿಂದ ಮಾಡಬಹುದಾದ ಕಲಾಕೃತಿಗಳ ಬಗ್ಗೆ ತರಬೇತಿ ಪಡೆದಿದ್ದಾರೆ. ತೆಂಗಿನ ಮೌಲ್ಯವರ್ಧನೆಯ ಮೂಲಕ ಗ್ರಾಮೀಣ ಭಾಗದಲ್ಲಿ ಮಹಿಳಾ ಆರ್ಥಿಕ ಸ್ವಾವಲಂಬನೆಯ ಕಡೆಗೆ ಹೆಜ್ಜೆ ಇಡುತ್ತಿದ್ದಾರೆ. ಈಗಾಗಲೇ ಹಲವು ಉತ್ಪನ್ನಗಳನ್ನು ತಯಾರು ಮಾಡಿದ್ದಾರೆ. ಇದೀಗ ರಕ್ಷಾಬಂಧನದ ಪ್ರಯುಕ್ತ ತೆಂಗಿನ ಗೆರಟೆಯಿಂದ ರಕ್ಷಾಬಂಧನವನ್ನು ತಯಾರಿಸುತ್ತಿದ್ದಾರೆ.

Advertisement

Advertisement

ನಬಾರ್ಡ್ ದಕ್ಷಿಣ ಕನ್ನಡ ಮತ್ತು ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ,  ಸಂಜೀವಿನಿ ಒಕ್ಕೂಟ ಹಾಗೂ ದ ಕ ಜಿಲ್ಲಾ ತೆಂಗು ರೈತ ಉತ್ಪಾದಕ ಸಂಸ್ಥೆಯ ವತಿಯಿಂದ ಮಹಿಳೆಯರಿಗೆ ತರಬೇತಿ ನೀಡಲಾಗಿತ್ತು. ತೆಂಗಿನ ಗೆರಟೆಯ ಮೂಲಕ ವಿವಿಧ ಬಗೆಯ ಉತ್ಪನ್ನಗಳನ್ನು ತಯಾರಿಸುವ ಬಗ್ಗೆ ತರಬೇತಿ ನೀಡಲಾಗಿದೆ. ಕೋಡಿಂಬಾಡಿಯ ಮಹಾಲಿಂಗೇಶ್ವರ ಸಂಜೀವಿನಿ ಒಕ್ಕೂಟದ ಮಹಿಳೆಯರು  ಫೆಬ್ರವರಿ ತಿಂಗಳಲ್ಲಿ ತರಬೇತಿ ಪಡೆದಿದ್ದು, ಒಟ್ಟು ಮೂರು ತಂಡಗಳಾಗಿ ವಿಂಗಡಿಸಲಾಗಿದೆ. ಮೂರೂ ತಂಡಗಳಿಗೆ ಪಾಲಿಶ್ ಮತ್ತು ಕಟಿಂಗ್ ಹೀಗೆ ಎಲ್ಲಾ ವಿಭಾಗದಲ್ಲೂ ಪರಿಣತಿ ಇದೆ.ಈಗ ಗಟ್ಟಿಮುಟ್ಟಾದ ಕೀಚೈನ್‌, ಅಡುಗೆ ಮನೆಗೆ ಬೇಕಾದ ಪಾತ್ರೆಗಳು, ಕಪ್‌, ಸ್ಮರಣಿಕೆ ಇತ್ಯಾದಿ ಮಾಡಿದ್ದಾರೆ. ಈ ಬಾರಿ ತ್ರಿವರ್ಣದ ಬ್ಯಾಡ್‌ ಕೂಡ ತಯಾರಿಸಿದ್ದಾರೆ. ಮಹಿಳಾ ತಂಡದ ಕೆಲಸಗಳು ಹೆಚ್ಚು ಗಮನ ಸೆಳೆದಿದೆ.

Advertisement

ಈ ತಂಡದಲ್ಲಿ 30 ಮಂದಿ ಮಹಿಳೆಯರು 3 ತಂಡಗಳಾಗಿ ಕೆಲಸ ಮಾಡುತ್ತಿದ್ದಾರೆ. ಜನನಿ, ಅಕ್ಷಯ ಹಾಗೂ ಜ್ಞಾನ ಸಂಜೀವಿನಿ ಘಟಕಗಳಾಗಿ ಕೆಲಸ ಆರಂಭಿಸಿದ್ದಾರೆ. ಕೆಲವರು ಮನೆಗಳಲ್ಲಿ ಹಾಗೂ ಕೋಡಿಂಬಾಡಿ ಗ್ರಾಪಂ ನೀಡಿರುವ ಕಟ್ಟದಲ್ಲಿ ಕೆಲಸ ಮಾಡುತ್ತಾರೆ. ಕಳೆದ 3 ತಿಂಗಳಿನಿಂದ ಕೆಲಸ ಮಾಡುತ್ತಿರುವ ಮಹಿಳೆಯರು ಪ್ಲಾಸ್ಟಿಕ್‌ ಬಳಸದೆಯೇ ಹಲವು ಉತ್ಪನ್ನಗಳನ್ನು ತಯಾರು ಮಾಡುವಷ್ಟು ಕುಶಲತೆಯನ್ನು ಈಗ ಪಡೆದಿದ್ದಾರೆ. ಸದ್ಯ ಸಂಜೀವಿನಿ ಒಕ್ಕೂಟವು ಸದಸ್ಯರು ತಯಾರಿಸಿರುವ ಉತ್ಪನ್ನಗಳ ಮಾರಾಟವನ್ನೂ ಮಾಡುತ್ತಿದ್ದಾರೆ.

Advertisement

ತಮ್ಮ ಬಿಡುವಿನ ವೇಳೆ ಮಹಿಳೆಯರು ಮನೆಯಲ್ಲಿಯೇ ವಿವಿಧ ಕರಕುಶಲ ವಸ್ತುಗಳನ್ನು ತಯಾರು ಮಾಡುತ್ತಿದ್ದಾರೆ. ಮನೆಯಲ್ಲಿಯೇ ಇರುವ ಆದರೆ ಎಸೆದು ವ್ಯರ್ಥವಾಗುವ ವಸ್ತುಗಳು ಈಗ ಕಲಾತ್ಮಕವಾಗಿ ಮಾರುಕಟ್ಟೆಗೆ ತಲುಪು ಸಾಧ್ಯವಾಗಿದೆ. ಸದ್ಯ ಮಹಿಳೆಯರು ಆನ್‌ ಲೈನ್‌ ಹಾಗೂ ಪರಿಚಯಸ್ಥರ ಮೂಲಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಾರೆ.  ಮುಂದೆ ಗ್ರಾಮೀಣ ಸಂತೆಯ ಮೂಲಕ ಮಹಿಳೆಯರು ಇಂತಹ ವಸ್ತುಗಳ ಮಾರಾಟ ಮಾಡಲು ಸಾಧ್ಯವಿದೆ. ತೆಂಗಿನ ಗೆರಟೆಯ ಉತ್ಪನ್ನಗಳನ್ನು ದ ಕ ಜಿಲ್ಲಾ ತೆಂಗು ರೈತ ಉತ್ಪಾದಕ ಸಂಸ್ಥೆಯು ಮಾರುಕಟ್ಟೆ ವ್ಯವಸ್ಥೆ ಮಾಡುವುದಾಗಿ ಹೇಳಿದೆ. ಹೀಗಾಗಿ ಮಹಿಳೆಯರಿಗೆ ಮಾರುಕಟ್ಟೆ ವ್ಯವಸ್ಥೆಯೂ ಲಭ್ಯವಾದರೆ ಗ್ರಾಮೀಣ ಆರ್ಥಿಕತೆಯ ಮೇಲೆ ಹೆಚ್ಚಿನ ಪರಿಣಾಮ ಬೀರಬಹುದಾಗಿದೆ.

Advertisement

ಮಹಿಳಾ ಸ್ವಾವಲಂಬನೆಯ ಮೂಲಕ ಗ್ರಾಮೀಣ ಭಾಗದಲ್ಲೂ ಹೆಚ್ಚು ಚಟುವಟಿಕೆ ಆರಂಭವಾಗಲು ಮತ್ತು ಈ ಮೂಲಕ ಗ್ರಾಮೀಣ ಆರ್ಥಿಕತೆ ಬೆಳವಣಿಗೆಗೆ ಪ್ರಯತ್ನ ಸಾಗುತ್ತಿದೆ.

ಹೆಚ್ಚಿನ ಮಾಹಿತಿಗೆ ಹಾಗೂ ಗೆರಟೆಯ ಉತ್ಪನ್ನಗಳಿಗೆ : 9880454373

Advertisement

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಹೇಶ್ ಪುಚ್ಚಪ್ಪಾಡಿ

ಕೃಷಿಕ, ಪತ್ರಕರ್ತ 15 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

ಇದನ್ನೂ ಓದಿ

ಚೀನಾವನ್ನು ಸೈಡ್‌ಲೈನ್‌ ಮಾಡಿದ ಯುಎಸ್‌ | ಯುಎಸ್‌ನ ವಾಲ್‌ಮಾರ್ಟ್‌ಗೆ ಭಾರತದಿಂದ ಚಿಲ್ಲರೆ ವಸ್ತುಗಳ ರಫ್ತು | ಈ ವರ್ಷ ವಾಲ್‌ಮಾರ್ಟ್‌ ಆಮದು ಮಾಡಿಕೊಂಡ ವಸ್ತು ಎಷ್ಟು..? |
December 1, 2023
2:10 PM
by: The Rural Mirror ಸುದ್ದಿಜಾಲ
ಲೆಮನ್​ ಗ್ರಾಸ್​ ಬೆಳೆಯ ಮೂಲಕ ಬದುಕು ಬದಲಾಯಿಸಿದ ಕುಟುಂಬ | ನಕ್ಸಲ್‌ ಪೀಡಿತ ಪ್ರದೇಶದ ರೈತ ದಂಪತಿಯ ಯಶೋಗಾಥೆ
December 1, 2023
1:25 PM
by: The Rural Mirror ಸುದ್ದಿಜಾಲ
ತುರಿಗಜ್ಜಿ (ಸ್ಕೇಬಿಸ್) ಎಂದರೇನು? | ಹೋಮಿಯೋಪತಿಯಲ್ಲಿದೆ ಪರಿಣಾಮಕಾರಿ ಚಿಕಿತ್ಸೆ |
December 1, 2023
12:55 PM
by: The Rural Mirror ಸುದ್ದಿಜಾಲ
ಪಾಕಿಸ್ತಾನದ ಆರ್ಥಿಕ ಸಮಸ್ಯೆ ಹಲವು ದೇಶಗಳಿಗೆ ಹೊಡೆತ…! | ಹೊರ ದೇಶಗಳಿಂದ ಆಮದಾಗುತ್ತಿದ್ದ ಗೋಧಿಯ ಮೇಲೆ ನಿಷೇಧ ಹೇರಿದ ಪಾಕ್‌ |
December 1, 2023
12:44 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror