Advertisement
MIRROR FOCUS

ಮರುಭೂಮಿ ನಾಡು ದುಬೈನಲ್ಲಿ 75 ವರ್ಷಗಳಲ್ಲೇ ದಾಖಲೆ ಮಳೆ…! | ಪ್ರವಾಹಕ್ಕೆ UAE ತತ್ತರ |

Share

ದುಬೈಯಂತಹ ಮರುಭೂಮಿ(Desert) ನಾಡಿನಲ್ಲಿ ಮಳೆ(Rain) ಅನ್ನೋದೇ ಅಪರೂಪ. ಎತ್ತ ನೋಡಿದರು ಮರಳುಗಾಡು. ಅದು ಬಿಟ್ಟರೆ ಸಮುದ್ರ(Ocean). ಮರಗಳೇ(Tree) ಇಲ್ಲದ ನಾಡಲ್ಲಿ ಮಳೆ ಅನ್ನೋದು ವಿರಳ. ಆದರೆ ಈಗ ದುಬೈಯಲ್ಲಿ (Dubai Rain) ಎತ್ತ ನೋಡಿದರೂ ಜಲರಾಶಿ. ಐಷಾರಾಮಿ ನಗರ ದುಬೈನಲ್ಲಿರುವ ಮಾಲ್, ವಿಮಾನ ನಿಲ್ದಾಣಗಳು (Airport) ಸಂಪೂರ್ಣ ಜಲಾವೃತವಾಗಿದೆ. ಭಾರೀ ಗುಡುಗು ಸಹಿತ ಅಬ್ಬರಿಸಿದ ಮಳೆರಾಯನ(Heavy Rain) ಪ್ರತಾಪಕ್ಕೆ UAE ಯ ಕೆಲವು ಭಾಗಗಳಲ್ಲಿ ಪ್ರವಾಹ (Flood) ಸೃಷ್ಟಿಯಾಗಿದೆ. ಪ್ರಮುಖ ರಸ್ತೆಮಾರ್ಗಗಳು, ವಿಮಾನ ನಿಲ್ದಾಣಗಳು, ಮೆಟ್ರೋ ಮಾರ್ಗಗಳು ಸಂಪೂರ್ಣ ಜಲಮಯವಾಗಿದೆ. ಸುದ್ದಿ ಸಂಸ್ಥೆಗಳ ವರದಿ ಪ್ರಕಾರ, ಮಂಗಳವಾರ ಯುಎಇಗೆ ಅಪ್ಪಳಿಸಿದ ಚಂಡಮಾರುತಗಳು ದುಬೈನಲ್ಲಿ ಒಂದೂವರೆ ವರ್ಷಗಳ ನಂತರ ಭಾರೀ ಮಳೆಯಾಗಿದೆ. ದುಬೈ ನಗರಕ್ಕಿಂತ ಯುಎಇಯ ಪೂರ್ವ ಕರಾವಳಿಯಲ್ಲಿರುವ ಎಮಿರೇಟ್ ಫುಜೈರಾದಲ್ಲಿ ಹೆಚ್ಚು ಮಳೆಯಾಗಿದೆ. ಮಂಗಳವಾರ 145 ಮಿಲಿಮೀಟರ್‌ಗಳಷ್ಟು (5.7 ಇಂಚುಗಳು) ಮಳೆ ಬಿದ್ದಿದೆ.

75 ವರ್ಷಗಳಲ್ಲೇ ಹೆಚ್ಚು ಮಳೆ: ಪ್ರವಾಹದ ಆರ್ಭಟಕ್ಕೆ ಉತ್ತರದ ಎಮಿರೇಟ್ ರಾಸ್ ಅಲ್-ಖೈಮಾದಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ. ಪ್ರವಾಹದ ನೀರಲ್ಲಿ ವಾಹನ ಸಿಲುಕಿ 70 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ ಎಂದು ಅಲ್ಲಿನ ಪೊಲೀಸರು ತಿಳಿಸಿದ್ದಾರೆ. ವಿಶ್ವದ ಅತಿದೊಡ್ಡ ಶಾಪಿಂಗ್ ಕೇಂದ್ರಗಳಲ್ಲಿ ಒಂದಾದ ಮಾಲ್ ಆಫ್ ಎಮಿರೇಟ್ಸ್‌ನಲ್ಲಿ ಪ್ರವಾಹ ನೀರು ತುಂಬಿಕೊಂಡಿದೆ. ಮಾಲ್ ನಲ್ಲಿರುವ ಶಾಪ್ ಗಳ ಸೀಲಿಂಗ್ ನಲ್ಲಿ ನಿರಂತರ ಮಳೆಯಿಂದ ನೀರು ಹರಿದಿದೆ. 75 ವರ್ಷಗಳ ನಂತರ ಹೆಚ್ಚು ಮಳೆಯಾಗಿದೆ ಎಂದು ಕೆಲವರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಶಾರ್ಜಾ ಸಿಟಿ ಜಲಾವೃತ: ನಿರಂತರ ಮಳೆಯಿಂದಾಗಿ ಶಾರ್ಜಾ ಸಿಟಿ ಸೆಂಟರ್ ಮತ್ತು ದೇರಾ ಸಿಟಿ ಸೆಂಟರ್ ಕೂಡ ಸಂಪೂರ್ಣ ಜಲಾವೃತವಾಗಿದ್ದು, ಜನರು ಪ್ರವಾಹದ ನೀರಲ್ಲಿ ಸಿಲುಕಿದ್ದಾರೆ. ವಿಮಾನ ನಿಲ್ದಾಣಗಳಲ್ಲೂ ನೀರು ನಿಂತಿದ್ದು, ವಿಮಾನಗಳ ಹಾರಾಟದಲ್ಲೂ ತೊಂದರೆಯಾಗಿದೆ. ಟ್ಯಾಕ್ಸಿ ವೇನಲ್ಲೂ ಅತಿ ಹೆಚ್ಚು ನೀರು ತುಂಬಿಕೊಂಡು ಪ್ರವಾಹದ ಮೂಲಕ ಟರ್ಮಿನಲ್‌ಗಳನ್ನು ತಲುಪಲು ಪ್ರಯಾಣಿಕರು ಹೆಣಗಾಡಿದ್ದಾರೆ. ಕೆಲವು ರಸ್ತೆಗಳು ಪ್ರವಾಹ ನೀರಿನಿಂದ ಕಣ್ಮರೆಯಾಗಿದ್ದು, ವಾಹನ ಸವಾರರು ತಮ್ಮ ವಾಹನಗಳನ್ನು ಹೊರ ತೆಗೆಯಲು ಹರಸಾಹಸ ಪಟ್ಟಿದ್ದಾರೆ. ಅಧಿಕಾರಿಗಳು ನೀರನ್ನು ಪಂಪ್ ಮಾಡಲು ರಸ್ತೆಗಳು ಮತ್ತು ಹೆದ್ದಾರಿಗಳಿಗೆ ಟ್ಯಾಂಕರ್ ಲಾರಿಗಳನ್ನು ಕಳುಹಿಸಿದ್ದಾರೆ. ಕೆಲ ಮನೆಗಳಿಗೂ ನೀರು ನುಗ್ಗಿದೆ.

24 ಗಂಟೆಗಳ ಅವಧಿಯಲ್ಲಿ 142 ಮಿಲಿಮೀಟರ್‌ ಮಳೆ: ದುಬೈನಲ್ಲಿ 24 ಗಂಟೆಗಳ ಅವಧಿಯಲ್ಲಿ 142 ಮಿಲಿಮೀಟರ್‌ಗಿಂತಲೂ ಹೆಚ್ಚು ಮಳೆಯಾಗಿದೆ. ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮಾಹಿತಿಯ ಪ್ರಕಾರ ಎಮಿರೇಟ್ ಸರಾಸರಿ ವರ್ಷದಲ್ಲಿ 94.7 ಮಿಲಿಮೀಟರ್ ಮಳೆಯಾಗಿದೆ. ಮಿಂಚು, ಗುಡುಗು ಸಹಿತ ಭಾರೀ ಮಳೆಯಾಗುತ್ತಿದ್ದು, ವಿಶ್ವದ ಅತಿ ಎತ್ತರದ ಕಟ್ಟಡವಾದ ಬುರ್ಜ್ ಖಲೀಫಾದ ತುದಿಯಲ್ಲಿ ಮಿಂಚಿನ ಸ್ಪರ್ಶ ತಾಗಿದೆ. UAEನಲ್ಲಿ ಸಾಮಾನ್ಯವಾಗಿ ಹೆಚ್ಚು ಮಳೆಯಾಗುವುದಿಲ್ಲ. ಮಳೆಗಾಲದಲ್ಲಿ ಮಾತ್ರ ಕೊಂಚ ಮಳೆಯಾಗುತ್ತಿತ್ತು. ಮಳೆ ಸರಿಯಾಗದ ಕಾರಣ ಅಲ್ಲಿನ ಒಳಚರಂಡಿ ವ್ಯವಸ್ಥೆಗಳು ಸಹ ಸರಿಯಾಗಿಲ್ಲ. ಈಗ ಸಂಭವಿಸಿರುವ ದಿಢೀರ್ ಪ್ರವಾಹದಿಂದ ಮನೆ, ರಸ್ತೆಗಳು, ವಾಣಿಜ್ಯ ಕಟ್ಟಡಗಳು ಸೇರಿದಂತೆ ಎಲ್ಲಾ ಕಡೆ ಮಳೆ ನೀರು ತುಂಬಿದೆ. ಬಹ್ರೇನ್, ಕತಾರ್ ಮತ್ತು ಸೌದಿ ಅರೇಬಿಯಾದಲ್ಲೂ ಮಳೆಯಾಗಿದೆ.

18 ಮಂದಿ ಸಾವು : ವಿಮಾನಗಳ ಮಾಹಿತಿ ನೀಡುವ ಫ್ಲೈಟ್ ರಾಡರ್ 24 ವೆಬ್ ಸೈಟ್ ವರದಿ ಪ್ರಕಾರ, ದುಬೈ ವಿಮಾನನಿಲ್ದಾಣದಲ್ಲಿ 5 ಅಂಶಗಳಿಂದ ಹಾರಾಟಗಳಲ್ಲಿ ಏರುಪೇರಾಗಿದೆ ಎಂದು ಮಂಗಳವಾರ ತಿಳಿಸಿದೆ. ಹವಾಮಾನದಲ್ಲಿನ ವಿಪರೀತ ಬದಲಾವಣೆಯಿಂದ ವಿಮಾನಗಳಲ್ಲಿ ವಿಳಂಬ, ಹಾರಾಟ ರದ್ದು ಪರಿಸ್ಥಿತಿಗಳು ಎದುರಾಗಿತ್ತು. ನ್ಯಾಷನಲ್ ಕಮಿಟಿ ಫಾರ್ ಎಮರ್ಜೆನ್ಸಿ ಮ್ಯಾನೇಜ್ಮೆಂಟ್ ತಿಳಿಸಿರುವಂತೆ, ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ಸುಮಾರು 18 ಜನ ಸಾವನ್ನಪ್ಪಿದ್ದಾರೆ. ಇದರಲ್ಲಿ 10 ಶಾಲಾ ಮಕ್ಕಳೇ ಇದ್ದಾರೆ ಎಂದು ತಿಳಿದು ಬಂದಿದೆ. ಶಾಲಾ ವಾಹನ ನೀರಲ್ಲಿ ಕೊಚ್ಚಿ ಹೋದ ಕಾರಣ ಅದರಲ್ಲಿದ್ದ 10 ಮಕ್ಕಳು ಸಾವನ್ನಪ್ಪಿರುವುದಾಗಿ ತಿಳಿಸಿದೆ.
– ಅಂತರ್ಜಾಲ ಮಾಹಿತಿ
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಜಗತ್ತು ನಮ್ಮ ಜೊತೆಗಿದೆ ಎಂಬ ಭ್ರಮೆ

ಜಗತ್ತು ಸದಾ ನಮ್ಮ ಜೊತೆಗಿರುತ್ತದೆ ಎಂಬ ನಿರೀಕ್ಷೆಗಿಂತ, ಪರಿಸ್ಥಿತಿ ಬದಲಾದರೂ ನಮ್ಮ ದಾರಿಯಲ್ಲಿ…

2 days ago

ತೆಂಗಿನ ಎಣ್ಣೆಯಿಂದ ವಿಮಾನದ ಇಂಧನ ? ಜೆಟ್‌ ಎಂಜಿನ್‌ ಪರೀಕ್ಷೆಯಲ್ಲಿ ಕುತೂಹಲ ಮೂಡಿಸಿದ ಫಲಿತಾಂಶ

ಮಾರುಕಟ್ಟೆಗೆ ಯೋಗ್ಯವಲ್ಲದ ತೆಂಗಿನಕಾಯಿಯಿಂದ ಪಡೆದ ತೆಂಗಿನ ಎಣ್ಣೆಯನ್ನು ಬಳಸಿ ಸುಸ್ಥಿರ ವಿಮಾನ ಇಂಧನ…

2 days ago

ಕೃಷಿ ಇನ್ನು ಕೇವಲ ಬೆಳೆ ಬೆಳೆಯುವುದಲ್ಲ – ಯುವಕರಿಗೆ ಸ್ಟಾರ್ಟ್‌ಅಪ್ ಕ್ಷೇತ್ರ

ಕೃಷಿ ಮತ್ತು ಕೃಷಿ ಸಂಬಂಧಿತ ಕ್ಷೇತ್ರಗಳು ಯುವ ಉದ್ಯಮಶೀಲತೆಗೆ ಮುಂದಿನ ದೊಡ್ಡ ಅವಕಾಶಗಳಾಗಿದ್ದು,…

2 days ago

ಬರಪೀಡಿತ ಪ್ರದೇಶಗಳ ರೈತರಿಗೆ ಗುಡ್‌ನ್ಯೂಸ್ ; ಬೆಳೆ ವಿಮೆ ನೋಂದಣಿ ಅವಧಿ ವಿಸ್ತರಣೆ

ಕರ್ನಾಟಕದ ಬರಪೀಡಿತ ಪ್ರದೇಶಗಳಲ್ಲಿ ಬೆಳೆ ವಿಮೆ ನೋಂದಣಿ ಹಾಗೂ ಪ್ರೀಮಿಯಂ ಕಡಿತದ ಅವಧಿಯನ್ನು…

2 days ago

ರಾಜ್ಯದ 102 ತಾಲೂಕುಗಳಲ್ಲಿ ಬರದ ಛಾಯೆ – ತಿಂಗಳಾಂತ್ಯಕ್ಕೆ ಕೇಂದ್ರಕ್ಕೆ ವರದಿ ಸಲ್ಲಿಕೆ

ಕರ್ನಾಟಕದ 102 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಉಂಟಾಗಿದ್ದು, ಈ ತಿಂಗಳಾಂತ್ಯಕ್ಕೆ ಕೇಂದ್ರ ಸರ್ಕಾರಕ್ಕೆ…

2 days ago

ಮಂಗಳೂರಿನ ಅಶ್ಮಿತ್ ಎ.ಜೆ. ಅವರಿಗೆ ‘ಸರಿಗಮಪ 2026’ರ ಕಿರೀಟ

ಮಂಗಳೂರಿನ ಅಶ್ಮಿತ್ ಎ.ಜೆ. ಅವರು ಝೀ ಕನ್ನಡದ ‘ಸರಿಗಮಪ 2026’ರ ವಿಜೇತರಾಗಿ ₹20…

2 days ago