MIRROR FOCUS

ಸುಳ್ಯದಲ್ಲಿ ನಾಮಾಮಿ ಕ್ರಿಯಾಶೀಲತೆ | ಮನೆಯಂಗಳಕ್ಕೆ ಬಂತು “ಕಾಡು ಕಿತ್ತಳೆ ” | ಸುಳ್ಯದಲ್ಲಿ ನಡೆಯಿತು ಲೋಕಾರ್ಪಣೆ ಕಾರ್ಯಕ್ರಮ |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಅಳಿಯುವ ಅಂಚಿನಲ್ಲಿರುವ ಕಾಡಿನ ಕಿತ್ತಳೆಯೊಂದು ನಾಡಿಗೆ ಬಂದಿದೆ. ಇಂತಹದ್ದೊಂದು ಕಿತ್ತಳೆ ಕಾಡಿನಲ್ಲಿ ಇತ್ತು, ಅಳಿದು ಹೋಗುತ್ತಿರುವ ಬಗ್ಗೆ ಚರ್ಚೆ ನಡೆದು ಸುಳ್ಯದ ನಾಮಾಮಿ ಬಳಗವು ತಕ್ಷಣವೇ ಜಾಗೃತಗೊಂಡಿತ್ತು. ಇದೀಗ ಅಳಿವಿನಂಚಿಗೆ ತಲಪಿದ್ದ ನಾಯಿಕಿತ್ತಳೆ ಅಥವಾ ಕಾಡುಕಿತ್ತಳೆ ನಾಡಿಗೆ ತಲಪಿದೆ. ಭಾನುವಾರ ಈ ಗಿಡಗಳ ಲೋಕಾರ್ಪಣಾ ಕಾರ್ಯಕ್ರಮ ಸುಳ್ಯದಲ್ಲಿ ನಡೆಯಿತು.ನಾಡಿಗೊಂದು ಮಾದರಿ ಕಾರ್ಯಕ್ರಮ ಹಾಗೂ  ಉತ್ತಮ ಸಂದೇಶ ಸುಳ್ಯದಿಂದ ನೀಡಲಾಯಿತು.

Advertisement
Advertisement

ಸುಳ್ಯದ ನಾಮಾಮಿ( ನಾಡ ಮಾವಿನ ಮಿತ್ರರು) ಬಳಗವು ನಾಡ ಮಾಡವು ರಕ್ಷಣೆಯತ್ತ, ಅಳಿವಿನಂಚಿಗೆ ತಲಪುತ್ತಿದ್ದ ವಿಶೇಷ ತಳಿಗಳ ರಕ್ಷಣೆ ಮಾಡುತ್ತಿತ್ತು. ಇದಕ್ಕಾಗಿ ಕಸಿ ತರಬೇತಿ ಕಾರ್ಯಕ್ರಮ ನಡೆಸಿ ಪ್ರತೀ ಕೃಷಿಕನೂ ಕಸಿ ಕಟ್ಟುವ ತರಬೇತಿ ಪಡೆದು ಅಳಿವಿನಂಚಿನಲ್ಲಿರುವ ಗಿಡಗಳ ರಕ್ಷಣೆಗೆ ಇಳಿಯಬೇಕು ಎಂದು ಪ್ರೇರೇಪಣೆ ನೀಡಿತ್ತು. ಈ ತಂಡದಲ್ಲಿ  ಜಯರಾಮ ಮುಂಡೋಳಿಮೂಲೆ, ಶ್ರೀಶಕುಮಾರ್‌ , ಶ್ಯಾಮ ಭಟ್‌ ಗೊರಗೋಡಿ, ಜಗದೀಶ್‌ ಕೆ ಪಿ , ಜಗದೀಶ ಪರಮಲೆ ಸಹಿತ ಇನ್ನೂ ಕೆಲವರು ಇದ್ದರು.

ನಾಯಿಕಿತ್ತಳೆ ಹಣ್ಣು

ಕಸಿ ಕಟ್ಟುವ ತರಬೇತಿಯನ್ನು ಈ ತಂಡವು ಹಲವರಿಗೆ ನೀಡಿತ್ತು. ಮೂರು ಬಾರಿ ತರಬೇತಿ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಈ ವೇಳೆ ಚರ್ಚೆಗೆ ಬಂದದ್ದು ನಾಯಿಕಿತ್ತಳೆ ಅಥವಾ ಕಾಡುಕಿತ್ತಳೆ. ತಕ್ಷಣವೇ ಇದೊಂದು ಚರ್ಚೆಗೆ ಬಂದು ಅಡಿಕೆ ಪತ್ರಿಕೆ ಸಂಪಾದಕ ಶ್ರೀಪಡ್ರೆ ಸಹಿತ ಹಲವರು ಇದಕ್ಕೆ ಬೆನ್ನೆಲುಬಾಗಿ ನಿಂತು ಇದಕ್ಕೊಂದು ಅಭಿಯಾನದ ರೂಪ ನೀಡಿದರು. ಅನೇಕ ಕಡೆ ಕಾಡು ಕಿತ್ತಳೆ, ನಾಯಿ ಕಿತ್ತಳೆ  ಎಂದು ಬೇರೆ ಬೇರೆ ಹೆಸರಿನಲ್ಲಿ ಕರೆಯಿಸಿಕೊಳ್ಳುತ್ತಿದೆ, ಆದರೆ ವಿನಾಶದಂಚಿನಲ್ಲಿರುವುದು ಬೆಳಕಿಗೆ ಬಂದಿತ್ತು. ಕೂಡಲೇ ಕಸಿ ಕಟ್ಟುವ ಮೂಲಕ ಈ ಕಿತ್ತಳೆಯ ರಕ್ಷಣೆಗೆ ಮುಂದಾದ ನಾಮಾಮಿ ಈಗ 300 ಕ್ಕೂ ಅಧಿಕ ನಾಯಿಕಿತ್ತಳೆ ಗಿಡಗಳನ್ನು ಲೋಕಾರ್ಪಣೆ ಮಾಡಿತು.

ಕಸಿಗಿಡಗಳ ಲೋಕಾರ್ಪಣೆ ಮಾಡಿದ ಪತ್ರಕರ್ತ ಶ್ರೀಪಡ್ರೆ

ಭಾನುವಾರ ಈ ಗಿಡಗಳ ಲೋಕಾರ್ಪಣಾ ಕಾರ್ಯಕ್ರಮ ನಡೆಯಿತು. ನಾಯಿಕಿತ್ತಳೆಯ ಕಸಿ ಗಿಡಗಳನ್ನು ಲೋಕಾರ್ಪಣೆ ಮಾಡಿದ ಅಡಿಕೆ ಪತ್ರಿಕೆ ಸಂಪಾದಕ ಶ್ರೀಪಡ್ರೆ ಮಾತನಾಡಿ, ಕಿತ್ತಳೆಯಲ್ಲಿ ಹಲವು ವೈವಿಧ್ಯಗಳು ಇವೆ. ಬೇರೆ ಬೇರೆ ಕಡೆ ಬೇರೆ ಬೇರೆ ಹೆಸರಿನಲ್ಲಿ ಕರೆಯಲಾಗುತ್ತದೆ. ಕೃಷಿಯಲ್ಲಿ ಬೆಳವಣಿಗೆ ಎಂದರೆ ಬಹುಬೆಳೆಗಳು ಅಗತ್ಯ ಇದೆ. ಅಡಿಕೆಯ ಜೊತೆಗೆ ಇಂತಹ ಹಣ್ಣಿನ ಗಿಡಗಳನ್ನೂ ಖುಷಿಗಾಗಿ ಬೆಳೆಸುವ ಹಾಗೂ ಅಳಿವಿನಂಚಿನಲ್ಲಿರುವ ಗಿಡಗಳ ರಕ್ಷಣೆಗೆ ಮುಂದಾಗಬೇಕಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ  ಕೆ ಎಂ ರಮೇಶ್‌

ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದ ಹೊಸಪೇಟೆಯ ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ  ಕೆ ಎಂ ರಮೇಶ್‌ ಮಾತನಾಡಿ, ಬೆಳೆ ಅಭಿವೃದ್ಧಿಗೆ ಹಾಗೂ ಬೆಳೆ ರಕ್ಷಣೆಗೆ ಪ್ರತಿಯೊಬ್ಬರೂ ಪ್ರಯತ್ನ ಮಾಡಿಬೇಕಿದೆ. ಜಗತ್ತಿನ ಅತೀ ದೊಡ್ಡ ವೈವಿಧ್ಯತೆಯ ತಳಿ ಕಿತ್ತಳೆಯಲ್ಲಿದೆ. ಹೀಗಾಗಿ ಇಂತಹ ವಿಶೇಷ ತಳಿಗಳ ರಕ್ಷಣೆ ಅಗತ್ಯ ಇದೆ ಎಂದರು.

Advertisement

ಸಭಾಧ್ಯಕ್ಷತೆ ವಹಿಸಿದ್ದ ನಾಮಾಮಿ ತಂಡದ ಶ್ಯಾಮ ಭಟ್‌ ಗೊರಗೋಡಿ, ಕೃಷಿಯಲ್ಲಿ ಆಸಕ್ತಿಯ ಜೊತೆಗೆ ಹಣ್ಣುಗಳ ಬೆಳೆ, ತಳಿ ವೈವಿಧ್ಯತೆಯಲ್ಲಿನ ಆಸಕ್ತಿಯೇ ಈ ತಂಡ ಬೆಳವಣಿಗೆಗೆ ಕಾರಣವಾಯಿತು. ಈ ಕಾರಣದಿಂದ ಅಳಿವಿನಂಚಿನಲ್ಲಿರುವ ತಳಿಯೊಂದರ ರಕ್ಷಣೆಗೆ ನಾವೆಲ್ಲರೂ ಇಳಿಯಬೇಕಾಯಿತು ಎಂದರು.

ನಾಮಾಮಿ ತಂಡದ ಶ್ರೀಶಕುಮಾರ್‌ ಸ್ವಾಗತಿಸಿದರು. ಜಯರಾಮ ಮುಂಡೋಳಿಮೂಲೆ ಪ್ರಸ್ತಾವನೆಗೈದರು. ಜಗದೀಶ್‌ ಕೆ ಪಿ  ವಂದಿಸಿದರು. ಮೋಹಿನಿ ಕಾರ್ಯಕ್ರಮ ನಿರೂಪಿಸಿದರು. ಇದೇ ಕಾಡುಕಿತ್ತಳೆ ಗಿಡಗಳ ರಕ್ಷಣೆಗೆ ಸಹಕರಿಸಿದ ಹಲವು ಪ್ರಮುಖರನ್ನು ಗೌರವಿಸಲಾಯಿತು. ಇದೀಗ ಕಾಡುಕಿತ್ತಳೆ ಅಥವಾ ನಾಯಿ ಕಿತ್ತಳೆ  ಕಸಿಗಿಡಗಳನ್ನು ಆಸಕ್ತರಿಗೆ ನೀಡಲು ನಾಮಾಮಿ ತಂಡ ಸಿದ್ಧವಾಗಿದೆ.

ನಾಯಿಕಿತ್ತಳೆ ಕಸಿ ಗಿಡಗಳು

launch program of Grafted orange Plants, was held in Sullia. It was led by the Namami team Sullia. here protected the endangered Orange plant.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

Published by
ಮಹೇಶ್ ಪುಚ್ಚಪ್ಪಾಡಿ

Recent Posts

ಜೂನ್ 15 ರಂದು ಮಿಥುನ ರಾಶಿಗೆ ಸೂರ್ಯ | 12 ರಾಶಿಗಳ ಫಲಾಫಲ ಹೀಗಿದೆ….

ಹೆಚ್ಚಿನ ವಿವರಗಳನ್ನು ಪಡೆಯಲು ಜ್ಯೋತಿಷ್ಯರೊಂದಿಗೆ ಸಂಪರ್ಕಿಸಬಹುದು. 9535156490

11 hours ago

ಬದುಕು ಪುರಾಣ | ಶ್ರೀಮಂತಿಕೆ ‘ಪಾಸ್ ಬುಕ್ಕಿನಲ್ಲಿ’ ಇರುವುದಲ್ಲ!

ಜಗತ್ತಿನಲ್ಲಿ ಎಲ್ಲವನ್ನೂ ಹಣದಿಂದಲೇ ಖರೀದಿ ಮಾಡಲು ಸಾಧ್ಯವಿಲ್ಲ. ನೀತಿ, ನಡತೆ, ಬದ್ಧತೆಗಳು  ಹಣ ಕೊಟ್ಟರೂ…

11 hours ago

ಜೂನ್ 1 : ಯಕ್ಷಗುರು ಪಾಲೆಚ್ಚಾರು ಗೋವಿಂದ ನಾಯಕರಿಗೆ ‘ಈಶಾವಾಸ್ಯ ಪ್ರಶಸ್ತಿ’ | ಗೋವಿಂದ ಗಾಥೆ’ ಕೃತಿ ಅನಾವರಣ

ಯಕ್ಷಗುರು, ಭಾಗವತ ಶ್ರೀ ಪಾಲೆಚ್ಚಾರು ಗೋವಿಂದ ನಾಯಕ್ ಅವರಿಗೆ ‘ಈಶಾವಾಸ್ಯ ಪ್ರಶಸ್ತಿ ಪುರಸ್ಕಾರ’…

20 hours ago

ಬೆಂಗಳೂರು ನಗರದಲ್ಲಿ ಮೇ ತಿಂಗಳಲ್ಲಿ 315 ಮಿಮೀ ಸಾರ್ವಕಾಲಿಕ ದಾಖಲೆ ಮಳೆ

ಬೆಂಗಳೂರು ನಗರದಲ್ಲಿ ಮೇ ತಿಂಗಳಲ್ಲಿ 315 ಮಿಲಿಮೀಟರ್ ಮಳೆಯಾಗಿದ್ದು, ಇದು ಸಾರ್ವಕಾಲಿಕ ದಾಖಲೆಯಾಗಿದೆ.…

20 hours ago

ಹಾಲು ಉತ್ಪಾದನೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಮುಂಚೂಣಿ

ಹಾಲು ಉತ್ಪಾದನೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಮುಂಚೂಣಿಯಲ್ಲಿದ್ದು, ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನದ…

20 hours ago

ಕೇರಳದ ವಯನಾಡು ಭಾಗದಲ್ಲಿ ಧಾರಾಕಾರ ಮಳೆ | ಕಬಿನಿ ಜಲಾಶಯದ ಒಳಹರಿವಿನಲ್ಲಿ ಏರಿಕೆ

ಕೇರಳದ ವಯನಾಡು ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿರುವ ಪರಿಣಾಮ ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲೂಕಿನ…

20 hours ago