Advertisement

ಗ್ರಾಮೀಣಾಭಿವೃದ್ಧಿ ಕಡೆಗೆ ಹೆಜ್ಜೆ | ಉಬರಡ್ಕ-ನೀರಬಿದಿರೆ ರಸ್ತೆಗೆ ಪೂರ್ಣ ಪ್ರಮಾಣದ ಕಾಂಕ್ರೀಟೀಕರಣದ ಬೇಡಿಕೆಗೆ ವರ್ಷಗಳೆಷ್ಟು ? | ಅಧಿಕಾರಿಗಳೇ ಗಮನಿಸಿ |

Share

ಮಿರರ್ ಅಭಿವೃದ್ಧಿ ಅಭಿಯಾನ
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಉಬರಡ್ಕ ಮಿತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಉಬರಡ್ಕ-ನೀರಬಿದಿರೆ ರಸ್ತೆಗೆ ಸುಮಾರು 60 ವರ್ಷಕ್ಕಿಂತ ಹೆಚ್ಚು ವರ್ಷಗಳಿಂದ ಬಳಕೆಯಲ್ಲಿದೆ. ಈ ರಸ್ತೆಯು ನೀರಬಿದಿರೆ ಮೂಲಕ ನಗರ ಪಂಚಾಯತ್ ರಸ್ತೆಯಾದ ದುಗ್ಗಲಡ್ಕ-ನೀರಬಿದಿರೆ-ಕೊಡಿಯಾಲಬೈಲು-ಸುಳ್ಯ  ರಸ್ತೆಗೆ ಸಂಪರ್ಕ ಕಲ್ಪಿಸುವುದಲ್ಲದೇ, ಉಬರಡ್ಕ ಮಿತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಎರಡು ಪ.ಜಾತಿ ಕಾಲೋನಿಗಳಾದ ದೊಡ್ಡಡ್ಕ ಕಾಲೋನಿ ಮತ್ತು ಕೊಡಿಯಾಲಬೈಲು ಕಾಲೋನಿಯನ್ನು ಕೂಡಾ ಸಂಪರ್ಕಿಸುತ್ತದೆ. ಸದ್ರಿ ಉಬರಡ್ಕ-ನೀರಬಿದಿರೆ ರಸ್ತೆಯು ಸುಮಾರು 1.5 ಕಿ.ಮೀ ಉದ್ದವನ್ನು ಹೊಂದಿರುತ್ತದೆ. ಈ ರಸ್ತೆಗೆ ಸಂಪೂರ್ಣ ಡಾಮರೀಕರಣವಾಗಬೇಕು ಎಂಬುದು ಹಲವು ವರ್ಷಗಳ ಬೇಡಿಕೆಯಾಗಿದೆ.

 

ಉಬರಡ್ಕ ಮಿತ್ತೂರು ಗ್ರಾಮ ವ್ಯಾಪ್ತಿಯ ಅರ್ಧಭಾಗದ ಜನರು ಉಬರಡ್ಕ ಮಿತ್ತೂರು ಗ್ರಾಮದ ಕೇಂದ್ರಸ್ಥಾನವನ್ನು ತಲುಪಲು ಈ ರಸ್ತೆಯನ್ನೇ ಅವಲಂಬಿಸಿದ್ದು, ಅತೀ ಮುಖ್ಯವಾದ ಗ್ರಾಮೀಣ ರಸ್ತೆಯಾಗಿರುತ್ತದೆ. ಸುಮಾರು 6 ಕಿ.ಮೀ ದೂರದ ಕೊಡಿಯಾಲಬೈಲ್ ಜನವಸತಿ ಪ್ರದೇಶದಿಂದ ತಮ್ಮ ಕೆಲಸ ಕಾರ್ಯಗಳನ್ನು ನಿರ್ವಹಿಸಲು ಪಂಚಾಯತ್ ಕಚೇರಿ, ಗ್ರಾಮ ಲೆಕ್ಕಾಧಿಕಾರಿಕಚೇರಿ, ಅಂಚೆ ಕಚೇರಿ ಮತ್ತು ಸಹಕಾರಿ ಸಂಘದ ಕಚೇರಿಗಳಿಗೆ ಈ ರಸ್ತೆಯನ್ನೇ ಅವಲಂಬಿಸಿದ್ದಾರೆ. ಉಬರಡ್ಕ ಮಿತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಅರ್ಧದಷ್ಟು ಜನವಸತಿ ಪ್ರದೇಶದ ಮತದಾರರು ಈ ಭಾಗದಲ್ಲೇ ಇದ್ದಾರೆ. ಇಂತಹ ರಸ್ತೆಯನ್ನು ಇಂದಿನವರೆಗೂ ಗ್ರಾಮ ಪಂಚಾಯತ್ 14 ಮತ್ತು 15ನೇ ಹಣಕಾಸು ಅನುದಾನದಲ್ಲಿ ಸುಮಾರು 4.50 ಲಕ್ಷದಲ್ಲಿ 100 ಮೀ ನಷ್ಟು ಕಾಂಕ್ರೇಟೀಕರಣ ಹಾಗೂ ಸಣ್ಣ ಅನುದಾನದಲ್ಲಿ ರಸ್ತೆ ದುರಸ್ಥಿ ಆಗಿದ್ದು ಬಿಟ್ಟರೆ ಪೂರ್ಣ ಪ್ರಮಾಣದ ಅಭಿವೃದ್ದಿ ಕಂಡಿಲ್ಲ. ಪ್ರತಿ ವರ್ಷ ಸುರಿಯುವ ಭಾರಿ ಮಳೆಗೆ ಸದ್ರಿ ರಸ್ತೆಗೆ ತೀವ್ರ ಹಾನಿಯಾಗುವುದರಿಂದ ರಸ್ತೆ ಸಂಚಾರಕ್ಕೆ ಕಷ್ಟವಾಗುತ್ತದೆ. ಮಳೆಗಾಲದ ಸಂದರ್ಭದಲ್ಲಿ ನೀರು ರಸ್ತೆಯ ಮಧ್ಯೆ ಭಾಗದಲ್ಲಿ ಹಾದುಹೋಗಿ ರಸ್ತೆಯ ಮಧ್ಯದಲ್ಲಿಯೇ ಗುಂಡಿಗಳಾಗಿವೆ. ಇದರಿಂದ ವಾಹನ ಸಂಚಾರಕ್ಕೆ ಅಪಾಯವಾಗುವ ಸಂಭವ ಉಂಟಾಗುವ ಸಾಧ್ಯತೆ ಇರುತ್ತದೆ.

 


ಈ ರಸ್ತೆಗೆ ಗ್ರಾಮ ವ್ಯಾಪ್ತಿಯಲ್ಲಿ ಹರಿಯುವ ಕಂದಡ್ಕ-ಉಬರಡ್ಕ ಹೊಳೆಯ ಮಧ್ಯೆ ದೊಡ್ಡಡ್ಕ ಎಂಬಲ್ಲಿ ಕಾಲುಸಂಕವಿರುತ್ತದೆ. ಈ ಕಾಲುಸಂಕವು ಕೂಡಾ ಅತ್ಯಂತ ಶಿಥಿಲಾವಸ್ಥೆಯಲ್ಲಿ ಇದ್ದು, ಇದರ ಎರಡು ಬದಿಯಲ್ಲಿರುವ ಕಬ್ಬಿಣದ ಪೈಪ್ ಗಳು ಮುರಿದಿದ್ದು, ಕೆಲವೊಂದು ಪೈಪ್ ಗಳು ಕಳ್ಳತನವಾಗುತ್ತಿದೆ. ಕಾಲುಸಂಕದ ಅಡಿಭಾಗದಲ್ಲಿಯೂ ಸಿಮೆಂಟ್ ಸಹ ಎದ್ದು ಹೋಗಿದ್ದು  ಮುರಿದು ಸಂಪರ್ಕ ಕಡಿತಗೊಳ್ಳುವ ಭೀತಿ  ಈ ಪ್ರದೇಶದ ಜನರಲ್ಲಿದೆ. ಸದ್ಯ ಈ ಸೇತುವೆಯಲ್ಲಿ ಕೇವಲ ದ್ವಿಚಕ್ರ ವಾಹನಗಳು ಹಾಗೂ ಸಣ್ಣ ರಿಕ್ಷಾದಂತಹ ವಾಹನಗಳು ಮಾತ್ರ ಸಂಚರಿಸಲು ಸಾಧ್ಯವಾಗುತ್ತದೆ. ಘನ ವಾಹನಗಳ ಸಂಚಾರಕ್ಕೆ ಕೇವಲ ಬೇಸಿಗೆ ಕಾಲದಲ್ಲಿ ಮಾತ್ರ ಸಾಧ್ಯವಾಗುತ್ತದೆ. ಆದ್ದರಿಂದ ಉಬರಡ್ಕ-ನೀರಬಿದಿರೆ ರಸ್ತೆಗೆ ಪೂರ್ಣ ಪ್ರಮಾಣದ ಕಾಂಕ್ರೀಟೀಕರಣ ಹಾಗೂ ಸೇತುವೆಯ ನಿರ್ಮಾಣವು ಈ ಭಾಗದ ಸಾರ್ವಜನಿಕರ ಅತೀ ಮುಖ್ಯ ಬೇಡಿಕೆಯಾಗಿದೆ.

(ಮಾಹಿತಿ-ಬರಹ : ರಜೀಶ್ ನೀರಬಿದಿರೆ )

 

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹಗಲು ನಿದ್ರೆ ಅನೇಕ ರೋಗಗಳಿಗೆ ಆಹ್ವಾನ ; ಔಷಧಿಗಿಂತ ಉತ್ತಮ ಜೀವನಶೈಲಿಯೇ ಪರಿಹಾರ: ರಾಘವೇಶ್ವರ ಶ್ರೀ

ಹಗಲು ನಿದ್ರೆ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ರಾಘವೇಶ್ವರ ಶ್ರೀ ಎಚ್ಚರಿಸಿದ್ದಾರೆ.…

50 minutes ago

ಕೇರಳದಲ್ಲಿ ಭಾರಿ ಮಳೆ ಆರ್ಭಟ : ಮಲಪ್ಪುರಂನಲ್ಲಿ ಸರಣಿ ಭೂಕುಸಿತ , ಸಂಚಾರ ಸಂಪೂರ್ಣ ಸ್ಥಗಿತ

ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಭಾರಿ ಮಳೆಯಿಂದ ರಾಜ್ಯ ಹೆದ್ದಾರಿಯಲ್ಲಿ ಭೂಕುಸಿತ ಸಂಭವಿಸಿ ವಾಹನ…

4 hours ago

ಆಕೆ ಏಕೆ ತನ್ನ ನೋವನ್ನು ಯಾರಿಗೂ ಹೇಳುವುದಿಲ್ಲ..?

ಕುಟುಂಬದ ನೆಮ್ಮದಿಗಾಗಿ ತನ್ನ ನೋವನ್ನೂ ಮರೆಮಾಚುವ ಅಮ್ಮಂದಿರ ಮೌನ ತ್ಯಾಗವನ್ನು 'ತಿರುವು' ಅಂಕಣ…

6 hours ago

ಹಿಂದೂ ಮಹಾಸಾಗರದ ಹವಾಮಾನದಲ್ಲಿ ಹಠಾತ್ ಬದಲಾವಣೆ – ಮತ್ತೆ ಮಹಾಮಳೆಗೆ ಕಾರಣವಾಗುತ್ತಿದೆಯೇ?

ಹಿಂದೂ ಮಹಾಸಾಗರದ ಹವಾಮಾನ ಬದಲಾವಣೆ ಹಾಗೂ ಸಕಾರಾತ್ಮಕ IOD ಪರಿಣಾಮದಿಂದ ಕರ್ನಾಟಕದಲ್ಲಿ ಮುಂಗಾರು…

9 hours ago