MIRROR FOCUS

ವಿದ್ಯುತ್‌ ಲೈನ್‌ ಕ್ಲಿಯರ್‌ಗೆ ಟೊಂಗೆಯ ಬದಲಿಗೆ ಮರವೇ ಢಮಾರ್….!‌ | ಹಸಿರು ಬೇಡುವ ದೇಶದ ಬೇಡಿಕೆ ನಡುವೆ ಇಲಾಖೆಗಳೇ ಹೀಗೆ ಮಾಡಿದರೆ…?

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ವಿಶ್ವದೆಲ್ಲೆಡೆ ಮರ ಉಳಿಸಿ-ಗಿಡ ಬೆಳೆಸಿ , ಹಸಿರು ರಕ್ಷಿಸಿ ಎಂದು ಕರೆ ನೀಡುತ್ತಿದೆ. ತಾಪಮಾನ ವಿಪರೀತವಾಗಿ ದೇಶದ ಹಲವು ಕಡೆ ಜನರು ಸಾಯುತ್ತಿದ್ದಾರೆ. ಈ ತಾಪಮಾನ ಇಳಿಕೆಗೆ ಹಲವು ಪ್ರಯತ್ನಗಳು ನಡೆಯಬೇಕಿದೆ. ಇದರ ಒಂದು ಭಾಗವೇ ಗಿಡ-ಮರಗಳನ್ನು ಉಳಿಸುವುದು ಹಾಗೂ ಬೆಳೆಸುವುದು. ಹೀಗಾಗಿ ಈಗ ಗ್ರಾಮೀಣ ಭಾಗದಲ್ಲಿ ಸವಾಲಿನ ಕೆಲಸ ವಿದ್ಯುತ್‌ ಸರಬರಾಜು ಹಾಗೂ ಗಿಡ-ಮರಗಳ ಉಳಿಸುವುದು…!…….ಮುಂದೆ ಓದಿ…..

Advertisement

ಸುಳ್ಯ ತಾಲೂಕಿನ ಅಮರಮುಡ್ನೂರು, ಅಮರ ಪಡ್ನೂರು,  ಚೊಕ್ಕಾಡಿ-ಪೈಲಾರು-ಕುಕ್ಕುಜಡ್ಕ ಮೊದಲಾದ ಕಡೆಗಳಲ್ಲಿ ವಿದ್ಯುತ್‌ ಲೈನ್‌ ಕಾಡಿನ ನಡುವೆ ಹೋಗುತ್ತಿದೆ. ಗಾಳಿ ಬಂದಾಗ ಮರದ ಗೆಲ್ಲುಗಳು ತಂತಿಗೆ ತಾಗುತ್ತವೆ. ವಿದ್ಯುತ್‌ ಸರಬರಾಜಿಗೆ ತೊಂದರೆಯಾಗುತ್ತದೆ. ಹೀಗಾಗಿ ಪ್ರತೀ ಬಾರಿ ವಿದ್ಯುತ್‌ ಲೈನ್‌ ದುರಸ್ತಿ ಕಾರ್ಯ, ತಂತಿಗೆ ತಾಗುವ ಮರದ ಗೆಲ್ಲು, ಹಸಿರು ಸೊಪ್ಪು ಇತ್ಯಾದಿಗಳನ್ನು ತೆರವು ಮಾಡುವ ಕೆಲಸ ನಡೆಯುತ್ತದೆ. ಈ ಬಾರಿ ವಿದ್ಯುತ್‌ ತಂತಿ ಪಕ್ಕದಲ್ಲಿರುವ ಮರಗಳನ್ನು ಸಣ್ಣ ಗಿಡಗಳನ್ನು ಬುಡದಿಂದಲೇ ಕಡಿದು ಹಾಕಲಾಗಿದೆ. ಈ ಕೃತ್ಯದ ಬಗ್ಗೆ ಈಗ ಚರ್ಚೆ ಆರಂಭವಾಗಿದೆ. ಮರದ, ಗಿಡದ ಗೆಲ್ಲುಗಳನ್ನು ಮಾತ್ರವೇ ಕಡಿಯುವ ಬದಲಾಗಿ ಇಡೀ ಮರವನ್ನು ಕಡಿದು ಹಾಕಿರುವ ಬಗ್ಗೆ ಪರಿಸರ ಪ್ರೇಮಿಗಳು ವಿಷಾದ ವ್ಯಕ್ತಪಡಿಸಿದ್ದಾರೆ. ಇಡೀ ದೇಶವೇ ಹಸಿರು ಉಳಿಸುವ ಬಗ್ಗೆ ಹೆಜ್ಜೆ ಇರಿಸಿದರೆ ಇಲ್ಲಿ ಬುಡದಿಂದಲೇ ಗಿಡ-ಮರಗಳನ್ನು ಕಡಿಯುವ ಅಗತ್ಯ ಇರಲಿಲ್ಲ ಎಂದು ವಿಷಾದಿಸಿದ್ದಾರೆ.…….ಮುಂದೆ ಓದಿ…..

ಗ್ರಾಮೀಣ ಭಾಗಗಳ ಮೂಲಭೂತ ಸೌಕರ್ಯಗಳಲ್ಲಿ ವಿದ್ಯುತ್‌ ಕೂಡಾ ಒಂದು. ವಿದ್ಯುತ್‌ ಸರಬರಾಜಿಗೆ ಹಲವು ಸಮಸ್ಯೆಗಳು ಇವೆ. ಹಲವು ಕಡೆಗಳಲ್ಲಿ ಅರಣ್ಯದ ನಡುವೆಯೇ ವಿದ್ಯುತ್‌ ತಂತಿ ಹಾದುಹೋಗುತ್ತದೆ. ಹೀಗಾಗಿ ಪ್ರತೀ ಬಾರಿ ಮಳೆಗಾಲ ಆರಂಭದ ಹೊತ್ತಿಗೆ ವಿದ್ಯುತ್‌ ತಂತಿ ಕ್ಲಿಯರ್‌ ಮಾಡುವ ಕೆಲಸ ನಡೆಯುತ್ತಿತ್ತು. ಈ ಸಮಯದಲ್ಲಿ ತಂತಿಗೆ ತಾಗುವ ಮರದ ಟೊಂಗೆ, ಹಸಿರು ಬಳ್ಳಿ, ಸಣ್ಣ ಗೆಲ್ಲುಗಳನ್ನು ಸವರುವ ಕೆಲಸ ನಡೆಯುತ್ತಿತ್ತು. ಆದರೆ ಈ ಬಾರಿ ಚೊಕ್ಕಾಡಿಯ ಈ ಪ್ರದೇಶದಲ್ಲಿ ರಸ್ತೆ ಬದಿಯೇ ಮರಗಳನ್ನು ಕಡಿಯಲಾಗಿದೆ. ಇದು ವಿಷಾದಕ್ಕೆ ಕಾರಣವಾಗಿದೆ.…….ಮುಂದೆ ಓದಿ…..

ಒಂದು ಕಡೆ ಅರಣ್ಯ ಇಲಾಖೆ ಹಾಗೂ ಸಾಮಾಜಿಕ ಅರಣ್ಯವು ರಸ್ತೆ ಬದಿ ಗಿಡಗಳನ್ನು ನೆಡುವುದು, ಕೆಲವು ಕಡೆ ವಿದ್ಯುತ್‌ ತಂತಿಯ ಕೆಳಭಾಗವೇ ಸಾಲು ಸಾಲು ಗಿಡಗಳನ್ನು ನೆಡುವುದು, ಇನ್ನೊಂದು ಕಡೆ ಮರದ ಗೆಲ್ಲುಗಳು ತಾಗುತ್ತವೆ ಎಂದು ಮರವನ್ನೇ ಕಡಿಯುವುದು..!. ಈ ವೈರುಧ್ಯದ ಬಗ್ಗೆಯೇ ಈಗ ಹೆಚ್ಚು ಚರ್ಚೆಯಾಗಬೇಕಿದೆ ಎಂಬುದು ಪರಿಸರ ಪ್ರಿಯರ ಅಭಿಪ್ರಾಯ.

ಈಚೆಗೆ ಕೇರಳ ಹೈಕೋರ್ಟ್‌ ಕೂಡಾ ತೀರ್ಪೊಂದನ್ನು ನೀಡಿದೆ. ಅಭಿವೃದ್ಧಿ ಅಥವಾ ವಾಣಿಜ್ಯ ಉದ್ದೇಶದ ಸಂದರ್ಭ ಇಡೀ ಮರವನ್ನೇ ಉರುಳಿಸಬಾರದು, ತೊಂದರೆಯಾಗುವ ಮರದ ಟೊಂಗೆಯನ್ನು ಕತ್ತರಿಸಿ ಅಥವಾ ಸಮಸ್ಯೆಯಾಗುವ ಭಾಗದಿಂದ ಮರವನ್ನು ಕತ್ತರಿಸಿ, ಇಡೀ ಮರವನ್ನು ತುಂಡರಿಸಬಾರದು ಎಂದು ತೀರ್ಪು ನೀಡಿದೆ. ಇದರ ಅರ್ಥ ಇಡೀ ದೇಶಕ್ಕೆ ಇಂದು ಹಸಿರಿನ ಅವಶ್ಯಕತೆ ಇದೆ. ಅಗತ್ಯಕ್ಕೆ ತಕ್ಕಷ್ಟು ಮಾತ್ರವೇ ಗೆಲ್ಲುಗಳನ್ನು ತುಂಡರಿಸಿ, ಇಡೀ ಮರವನ್ನು ಕಡಿಯುವುದು ಕಡಿಮೆಯಾಗಲಿ ಎನ್ನುವುದು ಆಶಯವಾಗಿದೆ. ಹವಾಮಾನ ವೈಪರೀತ್ಯ ನಿಯಂತ್ರಣಕ್ಕೆ ಪರಿಸರದ ಉಳಿವಿನಿಂದ ಮಾತ್ರಾ ಸಾಧ್ಯವಿದೆ. ಇಲಾಖೆಗಳು ಈ ನೆಲೆಯಲ್ಲಿ ಯೋಚನೆ ಮಾಡಬೇಕಿದೆ. ಇನ್ನು ಮುಂದೆ ಅನಗತ್ಯವಾಗಿ ಸಾರ್ವಜನಿಕ ಉದ್ದೇಶಗಳಲ್ಲಿ ಬೇಕಾಬಿಟ್ಟಿ ಮರ ತುಂಡರಿಸಿದಂತೆ ಎಚ್ಚರಿಕೆ ವಹಿಸಬೇಕಿದೆ. ಅದೂ ಇಲಾಖೆಗಳು ಈ ದೃಷ್ಟಿಯಿಂದ ಹೆಚ್ಚಿನ ಮುತುವರ್ಜಿ ವಹಿಸಬೇಕಿದೆ.

 

Electricity supply is disrupted, it can have serious consequences for the residents of these rural areas. Not only does the cutting of trees for the installation of electricity lines harm the environment, but it also puts wildlife habitats at risk. Finding a balance between providing electricity to rural communities and preserving the forests is crucial. Sustainable solutions such as underground cabling or utilizing renewable energy sources can help mitigate the impact on forests while ensuring reliable electricity supply. It is essential for policymakers and stakeholders to work together to address this issue in a responsible and sustainable manner.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಸರಕಾರಿ ಶಾಲೆಯಲ್ಲಿ ಬೆಳೆಸಿದ ತರಕಾರಿ ಜಿಲ್ಲಾಧಿಕಾರಿಗೆ ಕೊಡುಗೆ

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕುತ್ಲೂರು ಸರಕಾರಿ ಶಾಲೆ ವಿದ್ಯಾರ್ಥಿ ವಿದ್ಯಾರ್ಥಿನಿಯರು…

17 minutes ago

ಅನ್ನದ ಪರಿಮಳ ಮನವರಳಿಸ ಬಹುದಲ್ಲವೇ..!

ಅನ್ನದ ಪರಿಮಳ ಎಷ್ಟು ಸೊಗಸು. ಅಡುಗೆ ಮನೆಯ ಭಾಷೆಯೇ ಅಂತಹದ್ದು.

10 hours ago

ಹೆಚ್ಚಿನ ಮೌಲ್ಯದ ಹಣ್ಣಿನ ಬೆಳೆಗಳ ಕುರಿತು ಚರ್ಚೆ | ಹಲಸು , ಡ್ರಾಗನ್‌ಫ್ರುಟ್‌ ಕೃಷಿಯ ಕಡೆಗೆ ಆದ್ಯತೆ |

ಭಾರತದ ವಿವಿಧ ಕಡೆಗಳಲ್ಲಿ ಉತ್ಪಾದಕತೆಯನ್ನು ಹೆಚ್ಚಿಸುವ ಸಾಮರ್ಥ್ಯ ಇರುವ ಡ್ರಾಗನ್‌ ಫ್ರುಟ್(ಕಮಲಂ) ಹಾಗೂ…

10 hours ago

ದೆಹಲಿಯಲ್ಲಿ ಹೀಟ್‌ವೇವ್‌ , ಬಿಹಾರದಲ್ಲಿ ಮಳೆ, ಕರ್ನಾಟಕದಲ್ಲಿ ಬಿಸಿ ಗಾಳಿ ಎಚ್ಚರಿಕೆ |

ಏಪ್ರಿಲ್ ಮಧ್ಯದ ವೇಳೆಗೆ ದೆಹಲಿಯಲ್ಲಿ ತಾಪಮಾನವು 40 ಡಿಗ್ರಿಗಿಂತ ಹೆಚ್ಚಾಗಬಹುದು, ಈ ಬಾರಿ…

13 hours ago

ಹೊಸರುಚಿ| ಗುಜ್ಜೆ ರೋಲ್

ಗುಜ್ಜೆ ರೋಲ್ ಗೆ ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ : ಮೊದಲಿಗೆ ಗುಜ್ಜೆ ಕಟ್…

13 hours ago

ಅಮರನಾಥ ಯಾತ್ರೆಗೆ ನೋಂದಣಿ ಪ್ರಕ್ರಿಯೆ ಆರಂಭ | ಜೂನ್‌ 29 ರಿಂದ ಯಾತ್ರೆ ಆರಂಭ |

ಹಿಂದೂಗಳ ಪವಿತ್ರ ಯಾತ್ರಾಸ್ಥಳ, ವಾರ್ಷಿಕ ಪವಿತ್ರ ಅಮರನಾಥ ಯಾತ್ರೆ  ಜೂನ್‌ 29 ರಿಂದ, …

13 hours ago