Advertisement
ಸುದ್ದಿಗಳು

ವಿಶೇಷ ಗಿಡಮೂಲಿಕೆ ಔಷಧಿಗಳನ್ನು ಸಂರಕ್ಷಿಸುವ ಪ್ರಯತ್ನಕ್ಕೆ ಕೈಹಾಕಿದ ಅರಣ್ಯ ಇಲಾಖೆ

Share

ಹಸಿರಿನಲ್ಲಿ ಉಸಿರಿದೆ ಅಂತ ಬಲ್ಲವರು ಬಹಳ ಹಿಂದೆಯೇ ಹೇಳಿದ್ದಾರೆ. ನಮ್ಮ ಆರೋಗ್ಯ ಸಮಸ್ಯೆಗಳಿಗೆ(Health problem) ಪ್ರಕೃತಿಯಲ್ಲೇ(Nature) ಔಷಧಿ(Medicine) ಇದೆ ಎನ್ನುವುದು ಕೂಡ ಇದರ ಒಳಾರ್ಥವಾಗಿದೆ. ಏನಾದರೂ ಹೆಚ್ಚು ಕಮ್ಮಿಯಾಗಿ ರೋಗ ರುಜಿನ ಬಂದರೂ ಅದಕ್ಕೆ ತಕ್ಕುದಾದ ನಾಟಿ ಔಷಧಿಗಳು ಇರುತ್ತಿದ್ದವು. ಈ ಔಷಧಿಗಳ ಪೈಕಿ ಶುಂಠಿ, ಕಾಳು ಮೆಣಸು, ಜೀರಿಗೆ, ಜಾಯಿಕಾಯಿ, ತುಳಸಿ, ಪುದೀನ, ಬೇವು, ಹೀಗೆ ನುರಾರು ಬಗೆಯ ಔಷಧೀಯ ಸಸ್ಯಗಳು(Medicinal Plant) ಸೇರಿವೆ. ಆದರೆ ಕಾಲ ಕ್ರಮೇಣ ಈ ಸಸ್ಯಗಳು ಅವನತಿಯ ಹಾದಿ ಹಿಡದವು. ಆಧುನಿಕ ವೈದ್ಯ ಪದ್ಧತಿ ನಮ್ಮ ಪಾರಂಪರಿಕ ಔಷಧ ಶಾಸ್ತ್ರವನ್ನ ನಗಣ್ಯವಾಗುವಂತೆ ಮಾಡಿದೆ. ಹಾಗಾಗಿ ನಮ್ಮ ಪಶ್ಚಿಮ ಘಟ್ಟದಲ್ಲಿರುವ(Western Ghats) ವಿಶೇಷ ಗಿಡಮೂಲಿಕೆ ಔಷಧಿಗಳನ್ನ ಪತ್ತೆಹಚ್ಚುವ ಸಂರಕ್ಷಿಸುವ(Saving) ಪ್ರಯತ್ನಕ್ಕೆ ಅರಣ್ಯ ಇಲಾಖೆ(Forest Department) ಮುಂದಾಗಿದೆ.

ಪಶ್ಚಿಮಘಟ್ಟ, ಕರಾವಳಿ, ಬಯಲು ಸೀಮೆಯ ವಿವಿಧ ಔಷಧಿಗಳು ಕಣ್ಮರೆಯಾಗುತ್ತಿವೆ. ಆಸ್ಪತ್ರೆಗಳೇ ಇಲ್ಲದ ದಿನಗಳಲ್ಲಿ ಈ ಔಷಧೀಯ ಸಸ್ಯಗಳೇ ಮಾನವನ ಆರೋಗ್ಯ ಕಾಪಾಡುತ್ತಿದ್ದವು. ಹಾಗಾಗಿ ಈ ಔಷಧೀಯ ಸಸ್ಯಗಳನ್ನು ಗುರುತಿಸುವಂತಹ, ಸಂರಕ್ಷಿಸುವಂತಹ ಮಹತ್ವದ ಕಾರ್ಯಕ್ಕೆ ಅರಣ್ಯ ಇಲಾಖೆ ಮತ್ತು ಔಷಧಿ ಪ್ರಾಧಿಕಾರ ಕೈ ಹಾಕಿದೆ.

ಕೊಡಗಿನವರಾದ ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಈ ನಿಟ್ಟಿನಲ್ಲಿ ವಿಶೇಷ ಆಸಕ್ತಿವಹಿಸಿದ್ದಾರೆ. ಪಶ್ಚಿಮ ಘಟ್ಟ, ಕರಾವಳಿ ಮತ್ತು ಬಯಲು ಸೀಮೆಯ ವಿಶೇಷ ಔಷಧೀಯ ಸಸ್ಯಗಳನ್ನು ಗುರುತಿಸಿ ಅವುಗಳನ್ನು ಬೆಳೆಸುವ ಸಂರಕ್ಷಿಸುವ ಮತ್ತು ಔಷಧೀಯ ಉದ್ದೇಶಕ್ಕೆ ಪೂರೈಸುವ ಯೋಜನೆಗೆ ಕೈ ಹಾಕಿದ್ದಾರೆ. ಈಗಾಗಲೇ ಜಿಲ್ಲೆಗಳಲ್ಲಿ ಔಷಧೀಯ ಸಸ್ಯಗಳ ಕುರಿತು ಅರಿವು ಮೂಡಿಸುವ ಸಭೆ, ವಿಚಾರ ಸಂಕಿರಣಗಳನ್ನ ಆಯೋಜಿಸುತ್ತಿದ್ದಾರೆ.

ನಾಟಿ ಔಷಧಿ ಮತ್ತು ಔಷಧೀಯ ಸಸ್ಯಗಳ ಕುರಿತು ಮಾಹಿತಿ ಸಂಗ್ರಹಿಸುವುದು ಮತ್ತು ಸಂರಕ್ಷಿಸುವುದು ಅಷ್ಟು ಸುಲಭವಾಗಿಲ್ಲ. ಯಾಕಂದರೆ ನಾಟಿ ಔಷಧಿಗಳ ಗುಟ್ಟು ಬಿಟ್ಟು ಕೊಡಲು ನಾಟಿ ವಯದ್ಯರೇ ಸಿದ್ಧರಿರುವುದಿಲ್ಲ. ಅದು ಅಲ್ಲದೆ ಬಹಳಷ್ಟು ನಾಟಿ ವೈದ್ಯರು ಇಂದು ಜೀವಂತವಾಗಿಲ್ಲ. ಹಾಗಾಗಿ ಬಹಳಷ್ಟು ನಾಟಿ ಔಷಧಿಗಳು ಕೂಡ ಜನರ ಸಂಪರ್ಕ ಕಲೆದುಕೊಂಡಿದೆ. ಈ ಎಲ್ಲಾ ಸವಾಲುಗಳನ್ನ ಮೆಟ್ಟಿನಿಂತು ಜೀವವೈದ್ಯ ಮಂಡಳಿ ತನ್ನ ಪ್ರಯತ್ನದಲ್ಲಿ ಯಶಸ್ಸಾಗಲಿ ಎಂದು ಎಲ್ಲರು ಹಾರೈಸುತ್ತಿದ್ದಾರೆ.

ಗೋಪಾಲ್ ಸೋಮಯ್ಯ

ವಾಟ್ಸಪ್‌ ಮೂಲಕ ಬರೆದ ಬರಹವಾಗಿದೆ.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಪ್ರತೀ ವರ್ಷ “ಕ್ಲೈಮೇಟ್ ರಿಪೋರ್ಟ್ ಕಾರ್ಡ್” ಏಕೆ ಬೇಕು..? ನಮ್ಮ ನಗರ-ಹಳ್ಳಿಗಳು ಹವಾಮಾನ ಬದಲಾವಣೆಗೆ ಎಷ್ಟು ಸಿದ್ಧ?

ಭಾರತದ 126 ಪ್ರಮುಖ ನಗರಗಳ ಹವಾಮಾನ ಸಿದ್ಧತೆಯನ್ನು ಅಳೆಯಲಾಗಿದ್ದರೂ, 2021ರ ಮೌಲ್ಯಮಾಪನದಲ್ಲಿ ರಾಷ್ಟ್ರೀಯ…

2 hours ago

ಭಾರತದ ಕಾಫಿಗೆ ಜಾಗತಿಕ ಬೇಡಿಕೆ ಹೆಚ್ಚಳ : ‘ಇಂಡಿ ಕಾಫಿ’ಗೆ ಹೊಸ ಬ್ರ್ಯಾಂಡ್‌ ಒತ್ತು

ಭಾರತದ ಕಾಫಿ ರಫ್ತು ಗಳಿಕೆ 2021-22ರ ಸುಮಾರು 1 ಶತಕೋಟಿ ಡಾಲರ್‌ನಿಂದ 2025-26ರಲ್ಲಿ…

8 hours ago

ಕಸವೆಂದು ಎಸೆಯುವ ಮೀನಿನ ಮುಳ್ಳು–ಹುರುಪೆಯಲ್ಲಿ ‘ಸಂಜೀವಿನಿ’!

ಮೀನಿನ ಮುಳ್ಳು ಮತ್ತು ಹುರುಪೆಯನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ ಹಲ್ಲುಗಳ ಪುನರ್ ನಿರ್ಮಾಣ ಹಾಗೂ…

8 hours ago

ಕರ್ನಾಟಕ–ತಮಿಳುನಾಡು ಗಡಿಯಲ್ಲಿ ಆನೆಗಳಿಗಾಗಿ 3 ಹೊಸ ಕಾರಿಡಾರ್‌

ಕರ್ನಾಟಕ–ತಮಿಳುನಾಡು ಗಡಿಯಲ್ಲಿ ಆನೆಗಳ ಸುರಕ್ಷಿತ ಸಂಚಾರಕ್ಕೆ ಅನುಕೂಲವಾಗುವಂತೆ ತಮಿಳುನಾಡು ಮೂರು ಹೊಸ ಆನೆ…

19 hours ago

ಹವಾಮಾನ ವರದಿ | 29-08-2026 | ಕರ್ನಾಟಕದಲ್ಲಿ ಸೆಪ್ಟೆಂಬರ್‌ ಆರಂಭದಲ್ಲಿ ಮಳೆ ಚುರುಕಾಗುವ ಲಕ್ಷಣ…?

ಬಂಗಾಳಕೊಲ್ಲಿಯ ಬಾಂಗ್ಲಾದೇಶ ಕರಾವಳಿ ಭಾಗದಲ್ಲಿ ಮಧ್ಯಮ ಸ್ತರದ ತಿರುವಿಕೆ ಉಂಟಾಗಿದ್ದು, ಇದರ ಪ್ರಭಾವದಿಂದ…

19 hours ago

ಕಸ್ತೂರಿ ರಂಗನ್ ವರದಿ ಜಾರಿಗೆ ಅವಕಾಶವಿಲ್ಲ: ಪಶ್ಚಿಮಘಟ್ಟದ 1,449 ಗ್ರಾಮಗಳ ಬಗ್ಗೆ ಆತಂಕ ಬೇಡ ಎಂದ ಪರಮೇಶ್ವರ್

ಕಸ್ತೂರಿ ರಂಗನ್ ವರದಿಯನ್ನು ಯಾವುದೇ ಕಾರಣಕ್ಕೂ ಜಾರಿಗೆ ಅವಕಾಶ ನೀಡುವುದಿಲ್ಲ ಎಂದು ಉಪಮುಖ್ಯಮಂತ್ರಿ…

2 days ago