ಎಂ.ಬಿ.ಎ ಮುಗಿಸಿ ಕೃಷಿಗೆ ಮರಳಿದ ಯುವಕ | ಮೇಕೆ ಸಾಕಾಣಿಕೆಯಿಂದ ಲಾಭ ಗಳಿಸಿದ ರೈತ |

January 31, 2022
7:41 PM

ಎಂ.ಬಿ.ಎ ಮುಗಿಸಿ ಬೆಂಗಳೂರಿನಲ್ಲಿ ಕಾರ್ಪೊರೇಟ್ ಕಂಪೆನಿಯಲ್ಲಿ ಎಚ್.ಆರ್ ಆಗಿ ಕೆಲಸ ಮಾಡುತ್ತಿದ್ದ ಯುವಕ ಕೃಷಿಗೆ ಮರಳಿ ಯಶಸ್ಸು ಕಂಡಿದ್ದಾರೆ.ವಿಜಯಪುರ ನಗರದ ಗ್ಯಾಂಗ್ ಬಾವಡಿ ಬಡಾವಣೆಯ ನಿವಾಸಿಯಾದ ಸಾಯಿನಾಥ್ ಶೇರಖಾನ್ ಈಗ ಆದರ್ಶ ಕೃಷಿನಾಗಿದ್ದಾರೆ.

ಮೂಲತಃ ವಿಜಯಪುರ ನಗರದ ಗ್ಯಾಂಗ್ ಬಾವಡಿ ಬಡಾವಣೆಯ ನಿವಾಸಿಯಾದ ಸಾಯಿನಾಥ್ ಶೇರಖಾನ್ ಎಂ.ಬಿ.ಎ ಮುಗಿಸಿ ಬೆಂಗಳೂರಿನಲ್ಲಿ ಕಾರ್ಪೊರೇಟ್ ಕಂಪೆನಿಯಲ್ಲಿ ಎಚ್.ಆರ್ ಆಗಿ ಕೆಲಸ ಮಾಡುತ್ತಿದ್ದರು. ತಿಂಗಳಿಗೆ 40 ಸಾವಿರ ಸಂಬಳವನ್ನು ಪಡೆಯುತ್ತಿದ್ದರು. ಕೃಷಿ ಅವರ ಆಸಕ್ತಿಯ ವಿಷಯವಾಗಿತ್ತು. ಹೀಗಾಗಿ ಕೆಲಸವನ್ನು ಬಿಟ್ಟು ಮರಳಿ ಊರಿಗೆ ಬಂದು ಈಗ ಯುವಜನಾಂಗಕ್ಕೆ ಮಾದರಿ ರೈತನಾಗಿದ್ದಾರೆ.

ತನ್ನ ಎಂಟು ಎಕರೆ ಜಮೀನಿನಲ್ಲಿ 6 ಎಕರೆಯಷ್ಟು ಕಬ್ಬು ಹಾಗೂ ಉಳಿದ ಎರಡು ಎಕರೆ ಪ್ರದೇಶದಲ್ಲಿ ಮೇವನ್ನು ಬೆಳೆಸಿ  ಆಡು ಸಾಕುತ್ತಿದ್ದಾರೆ. ಒಂದು ತಿಂಗಳ ಆಡು ಮರಿಗೆ 16 ರಿಂದ 20 ಸಾವಿರ ಹಣ ಕೊಟ್ಟು ಖರೀದಿ ಮಾಡಿಕೊಂಡು ಹೋಗುತ್ತಾರೆ. ಜಿಲ್ಲೆಯ ರೈತರು ಮಾತ್ರವಲ್ಲ ಮಹಾರಾಷ್ಟ್ರ ರಾಜ್ಯದ ರೈತರು ಸಹಿತ ಸಾಯಿನಾಥ್ ಬಳಿಯಿಂದ ಆಡು ಖರೀದಿ ಮಾಡುತ್ತಾರೆ.

ತಿಂಗಳಿಗೆ ನಲವತ್ತು ಸಾವಿರ ಪಡೆಯುತ್ತಿದ್ದ ಸಾಯಿನಾಥ್ ಶೇರಖಾನ್ ಅವರು ಈಗ ಒಂದು ವರ್ಷದಲ್ಲಿ ಆಡುಗಳಿಂದ ಸುಮಾರು 10 ರಿಂದ 14 ಲಕ್ಷದಷ್ಟು ಆದಾಯ ಗಳಿಸುತ್ತಿದ್ದಾರೆ. ಇವರ ಈ ಮಾದರಿಯಿಂದ ಹಲವಾರು ಯುವ ರೈತರು ಸಹ ಪ್ರೇರಣೆಯನ್ನು ಪಡೆದು ಬದುಕಲು ನೂರು ದಾರಿಯಿದೆ ಛಲವಿದ್ದರೆ ಸಾಕು ಎನ್ನುತ್ತಿದ್ದಾರೆ.

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಜಗತ್ತು ನಮ್ಮ ಜೊತೆಗಿದೆ ಎಂಬ ಭ್ರಮೆ
August 26, 2026
5:00 PM
by: ಮಹೇಶ್ ಪುಚ್ಚಪ್ಪಾಡಿ
ತೆಂಗಿನ ಎಣ್ಣೆಯಿಂದ ವಿಮಾನದ ಇಂಧನ ? ಜೆಟ್‌ ಎಂಜಿನ್‌ ಪರೀಕ್ಷೆಯಲ್ಲಿ ಕುತೂಹಲ ಮೂಡಿಸಿದ ಫಲಿತಾಂಶ
August 26, 2026
10:44 AM
by: ದ ರೂರಲ್ ಮಿರರ್.ಕಾಂ
ಕೃಷಿ ಇನ್ನು ಕೇವಲ ಬೆಳೆ ಬೆಳೆಯುವುದಲ್ಲ – ಯುವಕರಿಗೆ ಸ್ಟಾರ್ಟ್‌ಅಪ್ ಕ್ಷೇತ್ರ
August 26, 2026
6:52 AM
by: ದ ರೂರಲ್ ಮಿರರ್.ಕಾಂ
ಬರಪೀಡಿತ ಪ್ರದೇಶಗಳ ರೈತರಿಗೆ ಗುಡ್‌ನ್ಯೂಸ್ ; ಬೆಳೆ ವಿಮೆ ನೋಂದಣಿ ಅವಧಿ ವಿಸ್ತರಣೆ
August 25, 2026
10:36 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror