Advertisement
ಸುದ್ದಿಗಳು

ಹತ್ತು ಮೂಟೆ ಈರುಳ್ಳಿ ಮಾರಾಟ- ರೈತನ ಕೈಗೆ ಬಂದಿದ್ದು ಕೇವಲ ಎರಡು ರೂಪಾಯಿ – ಇದೆಂತ ಬದುಕು ರೈತರದ್ದು..?

Share

ಇದು ಕೇಳಲು ವಿಚಿತ್ರ ಅನ್ನಿಸಿದ್ರೂ, ರೈತರ ಬದುಕಿನ ಸ್ಪಷ್ಟ ಚಿತ್ರಣ ಮಾತ್ರ ಇದುವೆ. ಹೌದು.. ಹರಾಜು ಮೂಲಕ 10 ಮೂಟೆಗಳಲ್ಲಿ 512 ಕೆಜಿ ಈರುಳ್ಳಿ ಮಾರಾಟ ಮಾಡಿ ಈರುಳ್ಳಿ ಉತ್ಪಾದಕರ ಕೈಗೆ ಕೇವಲ ಎರಡು ರೂಪಾಯಿ ಸಿಕ್ಕಿದೆ.  ಅದನ್ನು ತೀರಿಸಲು ವ್ಯಾಪಾರಿ ಎರಡು ರೂಪಾಯಿ ಚೆಕ್ ನೀಡಿ ರೈತನನ್ನು ಲೇವಡಿ ಮಾಡಿದರು.

ಯಾವ ಬೆಲೆಯಾದರೇನು..? ರೈತನ ಗೋಳು ಒಂದೇ.. ಕಳೆದ ಕೆಲವು ದಿನಗಳಿಂದ ಈರುಳ್ಳಿ ಬೆಲೆ ಪ್ರತಿದಿನ ಕುಸಿಯುತ್ತಿದೆ. ಇದರಿಂದ ರೈತರು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸೊಲ್ಲಾಪುರದಲ್ಲಿ ನಡೆದ ಘಟನೆ ನಿಜಕ್ಕೂ ರೈತನ ಬದುಕಿಗೆ ಹಿಡಿದ ಕೈ ಗನ್ನಡಿ. 512 ಕೆಜಿ ಈರುಳ್ಳಿ ಮಾರಾಟ ಮಾಡಿದ ನಂತರ ಸಂಬಂಧಪಟ್ಟ ರೈತನಿಗೆ ಕೇವಲ ಎರಡು ರೂಪಾಯಿ ಚೆಕ್ ಸಿಕ್ಕಿರುವುದು ಬೆಳಕಿಗೆ ಬಂದಿದೆ. ಸ್ವಾಭಿಮಾನಿ ಶೆಟ್ಕರ್ ಸಂಘಟನೆಯ ಮುಖಂಡ, ಮಾಜಿ ಸಂಸದ ರಾಜು ಶೆಟ್ಟಿ ಈ ಪರಿಸ್ಥಿತಿಯನ್ನು ತೆರೆದಿಟ್ಟಿದ್ದಾರೆ.

ಬಾರ್ಶಿ ತಾಲೂಕಿನ ಬೋರಗಾಂವದ ರೈತ ರಾಜೇಂದ್ರ ಚವ್ಹಾಣ ಅವರಿಗೆ ಈ ಕಹಿ ಅನುಭವವಾಗಿದೆ. ಚವ್ಹಾಣ ಅವರು ತಮ್ಮ ಜಮೀನಿನಲ್ಲಿ ಬೆಳೆದ ಈರುಳ್ಳಿಯನ್ನು ಫೆ.17ರಂದು ಸೊಲ್ಲಾಪುರದ ಮಾರುಕಟ್ಟೆ ಯಾರ್ಡ್‌ನಲ್ಲಿರುವ ಸೂರ್ಯ ಟ್ರೇಡರ್ಸ್‌ಗೆ ಮಾರಾಟಕ್ಕೆ ತಂದಿದ್ದರು. ಸೂರ್ಯ ಟ್ರೇಡರ್ಸ್‌ನ ಚಾಲಕ ಮತ್ತು ಅಡತ್ ವ್ಯಾಪಾರಿ ನಾಸೀರ್ ಖಲೀಫಾ ಇದನ್ನು ಹರಾಜು ಮೂಲಕ ಖರೀದಿದಾರ ವ್ಯಾಪಾರಿಗೆ ಕೆಜಿಗೆ ಒಂದು ರೂಪಾಯಿಗೆ ಮಾರಾಟ ಮಾಡಿದ್ದಾರೆ.

512 ಕೆಜಿ ಈರುಳ್ಳಿ ಕೆಜಿಗೆ ಒಂದು ರೂಪಾಯಿಗೆ 512 ರೂಪಾಯಿ ಆಯಿತು. ಇದರಿಂದ ಹಮಾಲಿ, ತೊಲಾಯಿ, ಬಾಡಿಗೆ, ನಗದು ಹಣ ಹಿಂಪಡೆಯಲಾಗಿದೆ. ಸಂಬಂಧಿಸಿದ ರೈತರಿಗೆ ಕೇವಲ ಎರಡು ರೂಪಾಯಿ ಚೆಕ್ ಅನ್ನು ನೀಡಲಾಗಿದ್ದು, ಅದೂ 15 ದಿನಗಳ ನಂತರ ಅಂದರೆ ಮಾರ್ಚ್ 8ಕ್ಕೆ ಡ್ರಾ ಮಾಡಲಾಗುವುದು.  ಇದು ಒಂದು ರೀತಿಯಲ್ಲಿ ರೈತನ ಕ್ರೂರ ಅಣಕ. ಹೀಗಿರುವಾಗ ರೈತರು ಬದುಕುವುದಾದರೂ ಹೇಗೆ ಎಂದು ಶೆಟ್ಟಿ ಸಿಟ್ಟಿನ ಪ್ರಶ್ನೆ ಕೇಳಿದ್ದಾರೆ.

ಆಡಳಿತಗಾರರಿಗೆ ನಾಚಿಕೆಯಾಗಬೇಕು, ಈಗ ರೈತರು ಹೇಗೆ ಬದುಕಬೇಕು ಹೇಳಿ? ಒಂದೆಡೆ ಹಣ ಬಾಕಿ ಉಳಿಸಿಕೊಂಡಿರುವುದರಿಂದ ರೈತರ ವಿದ್ಯುತ್ ಸಂಪರ್ಕ ಕಡಿತಗೊಂಡು ಕಣ್ಣೆದುರೇ ಬೆಳೆ ನಾಶವಾಗಿದೆ. ಎಂದು ಮಾಜಿ ಸಂಸದ ರಾಜು ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಸಂಪತ್ತು ಹೆಚ್ಚಾದರೆ ಬದುಕು ಶ್ರೀಮಂತವಾಗುತ್ತದೆಯೇ..?

ಸಂಪತ್ತು ಮತ್ತು ಸೌಲಭ್ಯಗಳು ಹೆಚ್ಚಿರುವುದೇ ನಿಜವಾದ ಶ್ರೀಮಂತಿಕೆಯಲ್ಲ; ಅವುಗಳನ್ನು ವಿವೇಕದಿಂದ ಬಳಸುವ ಮನಸ್ಸು…

4 hours ago

ಹವಾಮಾನ ವರದಿ | 10-09-2026 | ಕರ್ನಾಟಕದಲ್ಲಿ ಮಳೆ ಏಕೆ ಇಳಿಮುಖವಾಗುತ್ತಿದೆ..?

ಸೆ.11ರಿಂದ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಮಳೆಯ ಸಾಧ್ಯತೆ ಕಡಿಮೆಯಾಗಲಿದ್ದು, ಬಿಸಿಲು ಹೆಚ್ಚಾಗುವ ಲಕ್ಷಣಗಳಿವೆ.…

15 hours ago

ರಾಜ್ಯದಲ್ಲಿ ವಿದ್ಯುತ್‌ ಸಂಕಷ್ಟದ ಸುಳಿವು – ರಾತ್ರಿ 6.30 ರಿಂದ 9ರವರೆಗೆ ಪೂರೈಕೆ ವ್ಯತ್ಯಯ ಸಾಧ್ಯತೆ

ದುರ್ಬಲ ಮುಂಗಾರು ಮತ್ತು ಜಲ–ಪವನ ವಿದ್ಯುತ್‌ ಉತ್ಪಾದನೆ ಕುಸಿತದಿಂದ ರಾಜ್ಯದಲ್ಲಿ ವಿದ್ಯುತ್‌ ಪೂರೈಕೆಯ…

16 hours ago

ಪರಿಸರ ಸ್ನೇಹಿ ಗೌರಿ-ಗಣೇಶ ಹಬ್ಬ : ಮಂಗಳೂರು ಮಹಾನಗರಪಾಲಿಕೆ ಸೂಚನೆ

2026ರ ಗೌರಿ-ಗಣೇಶ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸುವಂತೆ ಮಂಗಳೂರು ಮಹಾನಗರಪಾಲಿಕೆ ಸೂಚಿಸಿದ್ದು, POP…

1 day ago

ಹವಾಮಾನ ವರದಿ | 09-09-2026 | ಕರ್ನಾಟಕದಲ್ಲಿ ಮಳೆಯ ಚಿತ್ರಣ ಬದಲಾಗುತ್ತಿದೆ – ಸೆ.11ರಿಂದ ಕರಾವಳಿಯಲ್ಲಿ ಬದಲಾವಣೆ

ಕರ್ನಾಟಕದಲ್ಲಿ ಮಳೆಯ ಸಾಧ್ಯತೆ ಒಟ್ಟಾರೆ ಇಳಿಮುಖವಾಗುತ್ತಿದ್ದು, ಕರಾವಳಿಯಲ್ಲಿ ಸೆ.11ರಿಂದ ಮಳೆ ಕಡಿಮೆಯಾಗುವ ಲಕ್ಷಣಗಳಿವೆ.…

2 days ago

ಕ್ಯಾಂಪ್ಕೋ ಅಭಿವೃದ್ಧಿಯ ಹಾದಿಯಲ್ಲಿ: ₹2,900 ಕೋಟಿ ಅಡಿಕೆ ವ್ಯವಹಾರದ ನಡುವೆ ಮುಂದಿರುವ ಸವಾಲುಗಳೇನು?

2025-26ರಲ್ಲಿ ಕ್ಯಾಂಪ್ಕೋದ ಅಡಿಕೆ ಖರೀದಿ ಪ್ರಮಾಣ ಹಿಂದಿನ ವರ್ಷಕ್ಕಿಂತ ಕಡಿಮೆಯಾಗಿದ್ದರೂ, ಬೆಲೆ ಏರಿಕೆಯಿಂದ…

2 days ago