ಸತ್ಯಮೇವ ಜಯತೇ

November 13, 2020
11:05 AM
ಸ್ವಾತಂತ್ರ್ಯ ನಮ್ಮ ಜನ್ಮಸಿದ್ಧ ಹಕ್ಕು. ವಾಕ್ ಸ್ವಾತಂತ್ರ್ಯ ಪ್ರತಿಯೊಬ್ಬರಿಗೂ ಇದೆ. ಸಂವಿಧಾನವು ಭಾರತದ ಪ್ರಜೆಗಳಿಗೆ ವಿಶೇಷವಾದ ಹಕ್ಕುಗಳನ್ನು ಕೊಟ್ಟಿದೆ. ಸಮಾನತೆಯ ಹಕ್ಕು, ಸ್ವಾತಂತ್ರ್ಯದ ಹಕ್ಕುಗಳು, ಶೋಷಣೆಯ ವಿರುದ್ಧದ ಹಕ್ಕುಗಳು ಅವುಗಳಲ್ಲಿ ಕೆಲವು. ನಮ್ಮ ದೇಶ , ನಮ್ಮ ನೆಲ ಯಾವತ್ತೂ ನಮಗೆ ಮುಖ್ಯವೇ. ಇಲ್ಲಿನ ಸಂಸ್ಕೃತಿ , ಧರ್ಮ, ಆಚಾರಣೆಗಳು ಎಲ್ಲವೂ ಕೂಡ ಅದರದ್ದೇ ಆದ ಐತಿಹ್ಯವನ್ನು ಹೊಂದಿದೆ. ನಾವು ಮೂಲ ಭಾರತೀಯರು ತಲೆ ಬಾಗ ಬೇಕಾದುದು ಮಾತೃಭೂಮಿ ಹಾಗೂ ಮಾತೆಗೆ ಮಾತ್ರ. ಹೀಗಿರುವಾಗ ದೇಶದ ಬಗ್ಗೆ ಕೀಳಾಗಿ ಮಾತನಾಡುವರನ್ನ,
ದೇಶದ ಸಂಪತ್ತನ್ನು ಲೂಟಿ ಹೊಡೆಯುವವರ ವಿರುದ್ಧ ಮಾತನಾಡಿದರೆ ತಪ್ಪಾಗುತ್ತದೆ.

Advertisement
Advertisement

ನಮ್ಮ ದೇಶದಲ್ಲಿ ಹುಟ್ಟಿ, ಅನ್ನ ನೀರು ಉಂಡು , ಇಲ್ಲಿನ ಶಾಲೆಗಳಲ್ಲೇ ಕಲಿತು, ದೇಶದ ಋಣದಲ್ಲೇ ಬಿದ್ದುಕೊಂಡಿದ್ದು ಭಾರತಕ್ಕೆ ದ್ರೋಹ ಬಗೆಯುತ್ತಿರುವವರ ಮುಖವಾಡವನ್ನು ಕಿತ್ತೊಗೆಯುವುದು ತಪ್ಪಾಗುತ್ತದೆ. ರಿಪಬ್ಲಿಕ್ ಟಿ.ವಿಯ ಮುಖ್ಯಸ್ಥ ಅರ್ನಬ್ ಗೋಸ್ವಾಮಿಯ ಬಂಧನದ ಹಿಂದಿನ ಕತೆಯೂ ಇದುವೆ. ಹೊಗಳು ಭಟ್ಟ ಪತ್ರಿಕೋದ್ಯಮಿಗಳಿಂದ ವಿಭಿನ್ನವಾಗಿರುವ ಅರ್ನಬ್ ನಿಜವಾದ ಜರ್ನಲಿಸ್ಟ್.

ಪತ್ರಕರ್ತರು ನಿಜವಾಗಿಯೂ ಮಾಡಬೇಕಾದದ್ದೇನು? ಸುತ್ತಲಿನ ಪ್ರಪಂಚದಲ್ಲಿ ಏನೇನು ನಡೆಯುತ್ತಿದೆ, ನಿಜವಾಗಿಯೂ ಏನಾಗ ಬೇಕು ಎಂಬುದರ ಕೂಲಂಕುಷ ವಿವರ. ಇದು ಸಮಾಜದ ಕೊನೆಯ ವ್ಯಕ್ತಿಯನ್ನು ತಲುಪುವಂತೆ ಮಾಡುವುದು ಪತ್ರಕರ್ತನ ಕರ್ತವ್ಯ. ಸಮಸ್ಯೆಗಳನ್ನು ತೆರೆದಿಡುವುದು, ಪರಿಹಾರದ ನಿಟ್ಟಿನಲ್ಲಿ ಮಾಡಬಹುದಾದ ಕೆಲಸಗಳೇನು ಎಂಬ ಚರ್ಚೆಗಳಿಗೆ ವೇದಿಕೆಯನ್ನು ಒದಗಿಸುವುದು , ಸಂಬಂದ ಪಟ್ಟವರ ಗಮನಕ್ಕೆ ತರುವುದು. ಇದು ಸದ್ಯದ ಕಮಿಲ ಗ್ರಾಮದ ಹೋರಾಟವಾದರೂ ಸರಿ , ರಾಷ್ಟ್ರಮಟ್ಟದ ಸಮಸ್ಯೆಗಳಾದರೂ ಸರಿ ಹೋರಾಟದಲ್ಲಿ ಪತ್ರಕರ್ತನ ಪ್ರಾಮುಖ್ಯತೆ ಎದ್ದು ಕಾಣುತ್ತದೆ. ಸಮಸ್ಯೆಗಳನ್ನು ಎತ್ತಿ ತೋರಿಸಲು ಅವರೇ ಆಗ ಬೇಕಷ್ಟೇ.

ಆದರೆ ಪಟ್ಟಭದ್ರ ಹಿತಾಸಕ್ತಿಗಳು ಇಂತಹ ನಿಜ ಹೋರಾಟಗಾರರ ಬಾಯಿ ಮುಚ್ಚಿಸುವಲ್ಲಿ ವ್ಯವಸ್ಥಿವಾಗಿ ಕೆಲಸ ಮಾಡುತ್ತವೆ. ಅರ್ನಬ್ ಗೋಸ್ವಾಮಿಯ ಬಂಧನದಲ್ಲೂ ಇಂತಹ ವಿಷಯಗಳೇ ಪ್ರಮುಖ ಪಾತ್ರವಹಿಸಿದ್ದು. ಆದರೆ ಇಂದು ಜನರು ಎಚ್ಚೆತ್ತು ಕೊಂಡಿದ್ದಾರೆ. ದೇಶದ ಒಳಿತು ಯಾರ ಕೈಯಲ್ಲಿದೆ ಎಂಬುದನ್ನು ಅರ್ಥಮಾಡಿಕೊಳ್ಳುತ್ತಿದ್ದಾರೆ. ಕುರ್ಚಿ ರಾಜಕೀಯದಿಂದ,ಜಾತಿ ರಾಜಕಾರಣದಿಂದ , ರಾಜಕಾರಣಿಗಳು ಹೊರಬರಬೇಕಾಗಿದೆ. ಭಾರತವನ್ನು ಒಡೆದು ಆಳಲು ಪ್ರಯತ್ನಿಸುತ್ತಿರುವ ಶತ್ರುಗಳಿಂದ ದೇಶವನ್ನು ಕಾಪಾಡುವುದು ಇಂದಿನ ನಮ್ಮ ಅನಿವಾರ್ಯತೆ. ದೇಶ ಕಟ್ಟುವ ಕೆಲಸಕ್ಕೆ ನಿರತರಾಗಿರುವ ಎಲ್ಲರಿಗೂ ನೈತಿಕ ಬೆಂಬಲದ ಅಗತ್ಯ ಬಹಳವಿದೆ. ಎಲ್ಲರೂ ತಳ ಮಟ್ಟದಿಂದಲೇ ಒಂದಾಗ ಬೇಕಾಗಿದೆ. ಸತ್ಯಮೇವ ಜಯತೇ..
ವಂದೇ ಮಾತರಂ.

-ಅಶ್ವಿನಿ ಮೂರ್ತಿ ಅಯ್ಯನಕಟ್ಟೆ

Advertisement

Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಬದುಕು ಪುರಾಣ | ನಾವ್ಯಾಕೆ ‘ಶಕುನಿ’ಗಳಾಗುತ್ತಿದ್ದೇವೆ?
June 22, 2025
7:00 AM
by: ನಾ.ಕಾರಂತ ಪೆರಾಜೆ
ಹೊಸರುಚಿ | ಹಲಸಿನ ಕಾಯಿ ಐಸ್ ಕ್ರೀಮ್
June 21, 2025
7:00 AM
by: ದಿವ್ಯ ಮಹೇಶ್
ಸಸ್ಯ ಪರಿಚಯ | ಕರ್ಲೆಂಕಿ
June 20, 2025
11:18 PM
by: ಜಯಲಕ್ಷ್ಮಿ ದಾಮ್ಲೆ
ಏಕೆ ಕೆಲವು ಹಿಂಡಿ ದನಗಳಿಗೆ ಹಿಡಿಸುವುದಿಲ್ಲ…?
June 19, 2025
9:51 PM
by: ಎ ಪಿ ಸದಾಶಿವ ಮರಿಕೆ

You cannot copy content of this page - Copyright -The Rural Mirror

Join Our Group