Opinion

ಜಲಸಂರಕ್ಷಣೆಯ ಮಾದರಿ | ತೋಡಿಗೆ ಕಟ್ಟವ ಕಟ್ಟಿ | ಜೀವಜಲವ ಉಳಿಸಿ ನೀರುಣಿಸಿ, ಜಲಮೂಲ ಉಳಿಸಿ |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಪುತ್ತೂರಿನ ಎ. ಪಿ. ಸದಾಶಿವ ಮರಿಕೆ ಅವರು ಸಾವಯವ ಕೃಷಿಕರು(Agriculturist). ಇವರು ಕೃಷಿಯಲ್ಲಿ ಅನೇಕ ಪ್ರಯೋಗಗಳನ್ನು ಮಾಡಿದ್ದಾರೆ, ಹಾಗೇ ಮಾಡುತ್ತಲೂ ಇದ್ದಾರೆ. ಈಗ ಕೃಷಿ ಮಾಡುವವರಿಗೆ, ಮುಂದೆ ಮಾಡಲಿರುವವರಿಗೆ ಇವರ ಮಾಹಿತಿ, ಅನುಭವ ಸಾಕಷ್ಟು ಅನುಕೂಲ. ತಮ್ಮ ಕೃಷಿಯ ಅನುಭವಗಳನ್ನು ಬರಹಗಳ ಮೂಲಕ ಅಲ್ಲದೆ ಅನೇಕರಿಗೆ ಸಲಹೆಗಳನ್ನು ನೀಡುತ್ತಾ ಪ್ರೋತ್ಸಾಹಿಸುತ್ತಿದ್ದಾರೆ. ಇಲ್ಲಿ ತಾವು ಕಂಡಿರುವ ತೋಡಿಗೆ ಕಟ್ಟ ಕಟ್ಟಿದ ಬಗ್ಗೆ ಹೇಳಿದ್ದನ್ನು ಕೇಳಿಕೊಂಡು ಪ್ರಭಾವಿತರಾದವರು ಕಟ್ಟ ಕಟ್ಟಿದ ಅನುಭವದ ಬಗ್ಗೆ ಹಂಚಿಕೊಂಡಿದ್ದಾರೆ.ಅದರ ವಿವರವನ್ನು ಅವರೇ ಬರೆದಿದ್ದಾರೆ.. ಇಲ್ಲಿದೆ ವಿವರ...

Advertisement
Advertisement

ಪುತ್ತೂರು ತಾಲೂಕಿನ ಕೆಮ್ಮಿಂಜೆ ಗ್ರಾಮದ ಕೆಮ್ಮಿಂಜೆ ಬಯಲು ಎಂಬಲ್ಲಿ ಅನೇಕ ವರ್ಷಗಳಿಂದ ಕೃಷಿ ಮಾಡಿಕೊಂಡಿರುವವರು  ವಿಜಯಕೃಷ್ಣ ದರ್ಭೆ . ಅವರ ತೋಟದ ಬದಿಯಲ್ಲಿ ಸಣ್ಣದೊಂದು ತೋಡು. ಆ ತೋಡಿನಲ್ಲಿ ಜನವರಿ ಕೊನೆಯವರೆಗೆ ಸಣ್ಣದಾದ ಹರಿವು ಇರುತ್ತದೆಯಂತೆ. ನನ್ನ ತಗಡಿನ ಕಟ್ಟದಿಂದ ಪ್ರೇರಿತರಾಗಿ ಅದಕ್ಕೊಂದು ಕಟ್ಟ ಕಟ್ಟುವ ಯೋಚನೆ ಬಂತಂತೆ. ಕಳೆದ ವರ್ಷ ಆ ಬಗ್ಗೆ ವಿಚಾರ ವಿನಿಮಯ ನಡೆದಿತ್ತು. ಒಂದೇ ಬಾರಿಗೆ ಧುಮುಕಿದರೆ ಹಣ ಪೋಲು ಎಂದಾಗಬಹುದೇ? ಎಂಬ ಭಯದಲ್ಲಿ ಈ ವರ್ಷ ಸರಳ ಕಟ್ಟಕ್ಕೆ ಧುಮುಕಿಯೇ ಬಿಟ್ಟರು.

ಅಲ್ಲೇ ಬದಿಯಲ್ಲಿ ಧಾರಾಳವಾಗಿದ್ದ ಓಟೆ ಬಿದಿರು, ಆಧಾರ ಸ್ತಂಭವಾಗಿ ಮರದ ಗೂಟ, ಗೂಟದ ಭದ್ರತೆಗಾಗಿ ಆಧಾರ ಮೂಂಡು ಇಷ್ಟು ಸಿದ್ಧತೆ ನಡೆಸಿ 17 ಅಡಿ ಅಗಲ, ಮೂರು ಅಡಿ ಎತ್ತರಕ್ಕೆ ಬಿದಿರಿನ ಕಟ್ಟದ ತಯಾರಿಯಾಯಿತು. ನೀರು ನಿಲ್ಲುವುದಕ್ಕಾಗಿ ಎದುರುಬದಿಯಿಂದ ಸಿಲ್ಪಾಲಿನ್ ಶೀಟನ್ನು ಹೊದಿಸಿ ಬಿಟ್ಟರು. ಏರಿ ಬಂದ ನೀರನ್ನು ನೋಡಿ ಸಂತೋಷವನ್ನು ಹಂಚಿಕೊಂಡಿದ್ದಾರೆ. ಮುಂದಿನ ವರ್ಷದ ಭದ್ರಕಟ್ಟಕ್ಕಾಗಿ ಮನಸ್ಸಿನ ಸಿದ್ಧತೆಯಲ್ಲಿ ತೊಡಗಿಕೊಂಡಿದ್ದಾರಂತೆ. ವಿಜಯ ಕೃಷ್ಣರ ಸ್ಪೂರ್ತಿ ಬೇರೆಯವರಿಗೂ ಕಟ್ಟಕ್ಕೆ ಸ್ಪೂರ್ತಿ ತುಂಬಲಿ.

ಎ. ಪಿ. ಸದಾಶಿವ ಮರಿಕೆ

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

2028ರ ವೇಳೆಗೆ ಭಾರತದ ಉಪಗ್ರಹ ಸಂವಹನದ ಮಾರುಕಟ್ಟೆ 20 ಶತಕೋಟಿ  ಡಾಲರ್

ವಿಶ್ವ ದೂರ ಸಂಪರ್ಕ ಮತ್ತು ಮಾಹಿತಿ ಸೊಸೈಟಿ ದಿನ ಹಿನ್ನೆಲೆಯಲ್ಲಿ ಭಾರತೀಯ ದೂರಸಂಪರ್ಕ…

2 hours ago

ಕಬ್ಬು ಪೂರೈಸಿದ ರೈತರಿಗೆ 15 ದಿನದೊಳಗೆ ಸಕ್ಕರೆ ಕಾರ್ಖಾನೆಗಳು ಹಣ ಪಾವತಿಸುವಂತೆ ಮಂಡ್ಯ  ಜಿಲ್ಲಾಧಿಕಾರಿ ಸೂಚನೆ

ಮಂಡ್ಯದಲ್ಲಿ ಸಕ್ಕರೆ ಕಾರ್ಖಾನೆಗಳು  ಕಬ್ಬು ಸರಬರಾಜು ಮಾಡುವ ರೈತರಿಗೆ 15 ದಿನದೊಳಗೆ ಹಣ…

2 hours ago

ಗದಗದಲ್ಲಿ  ಸೂರ್ಯಕಾಂತಿ ಹುಟ್ಟುವಳಿ ಖರೀದಿಸಲು ಪ್ರತಿ ಕ್ವಿಂಟಲ್ ಗೆ 7280 ರೂಪಾಯಿ ಬೆಂಬಲ ಬೆಲೆ ನಿಗದಿ

2024-25 ನೇ ಸಾಲಿನ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಸೂರ್ಯಕಾಂತಿ ಹುಟ್ಟುವಳಿ…

2 hours ago

ಹಾಳೆತಟ್ಟೆಯ ಬಳಿಕ ಈಗ ಮಾವಿನಹಣ್ಣು | ಭಾರತದ 15 ಮಾವಿನ ಹಣ್ಣು ಶಿಪ್‌ಮೆಂಟ್‌ಗಳನ್ನು ತಿರಸ್ಕರಿಸಿದ ಅಮೇರಿಕಾ |

ಕಳೆದ ವಾರ ಅಡಿಕೆ ಹಾಳೆತಟ್ಟೆಯನ್ನು ಅಮೇರಿಕಾ ರಫ್ತು ಮಾಡಿತ್ತು, ಅದಾಗಿ ಈಗ ಮಾವಿನಹಣ್ಣು…

5 hours ago

ದೀಪ ಹಚ್ಚುವಾಗ ಈ ತಪ್ಪುಗಳನ್ನು ಎಂದಿಗೂ ಮಾಡಬೇಡಿ

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ . 9535156490

6 hours ago