Opinion

ಜಲಸಂರಕ್ಷಣೆಯ ಮಾದರಿ | ತೋಡಿಗೆ ಕಟ್ಟವ ಕಟ್ಟಿ | ಜೀವಜಲವ ಉಳಿಸಿ ನೀರುಣಿಸಿ, ಜಲಮೂಲ ಉಳಿಸಿ |

Share

ಪುತ್ತೂರಿನ ಎ. ಪಿ. ಸದಾಶಿವ ಮರಿಕೆ ಅವರು ಸಾವಯವ ಕೃಷಿಕರು(Agriculturist). ಇವರು ಕೃಷಿಯಲ್ಲಿ ಅನೇಕ ಪ್ರಯೋಗಗಳನ್ನು ಮಾಡಿದ್ದಾರೆ, ಹಾಗೇ ಮಾಡುತ್ತಲೂ ಇದ್ದಾರೆ. ಈಗ ಕೃಷಿ ಮಾಡುವವರಿಗೆ, ಮುಂದೆ ಮಾಡಲಿರುವವರಿಗೆ ಇವರ ಮಾಹಿತಿ, ಅನುಭವ ಸಾಕಷ್ಟು ಅನುಕೂಲ. ತಮ್ಮ ಕೃಷಿಯ ಅನುಭವಗಳನ್ನು ಬರಹಗಳ ಮೂಲಕ ಅಲ್ಲದೆ ಅನೇಕರಿಗೆ ಸಲಹೆಗಳನ್ನು ನೀಡುತ್ತಾ ಪ್ರೋತ್ಸಾಹಿಸುತ್ತಿದ್ದಾರೆ. ಇಲ್ಲಿ ತಾವು ಕಂಡಿರುವ ತೋಡಿಗೆ ಕಟ್ಟ ಕಟ್ಟಿದ ಬಗ್ಗೆ ಹೇಳಿದ್ದನ್ನು ಕೇಳಿಕೊಂಡು ಪ್ರಭಾವಿತರಾದವರು ಕಟ್ಟ ಕಟ್ಟಿದ ಅನುಭವದ ಬಗ್ಗೆ ಹಂಚಿಕೊಂಡಿದ್ದಾರೆ.ಅದರ ವಿವರವನ್ನು ಅವರೇ ಬರೆದಿದ್ದಾರೆ.. ಇಲ್ಲಿದೆ ವಿವರ...

Advertisement

ಪುತ್ತೂರು ತಾಲೂಕಿನ ಕೆಮ್ಮಿಂಜೆ ಗ್ರಾಮದ ಕೆಮ್ಮಿಂಜೆ ಬಯಲು ಎಂಬಲ್ಲಿ ಅನೇಕ ವರ್ಷಗಳಿಂದ ಕೃಷಿ ಮಾಡಿಕೊಂಡಿರುವವರು  ವಿಜಯಕೃಷ್ಣ ದರ್ಭೆ . ಅವರ ತೋಟದ ಬದಿಯಲ್ಲಿ ಸಣ್ಣದೊಂದು ತೋಡು. ಆ ತೋಡಿನಲ್ಲಿ ಜನವರಿ ಕೊನೆಯವರೆಗೆ ಸಣ್ಣದಾದ ಹರಿವು ಇರುತ್ತದೆಯಂತೆ. ನನ್ನ ತಗಡಿನ ಕಟ್ಟದಿಂದ ಪ್ರೇರಿತರಾಗಿ ಅದಕ್ಕೊಂದು ಕಟ್ಟ ಕಟ್ಟುವ ಯೋಚನೆ ಬಂತಂತೆ. ಕಳೆದ ವರ್ಷ ಆ ಬಗ್ಗೆ ವಿಚಾರ ವಿನಿಮಯ ನಡೆದಿತ್ತು. ಒಂದೇ ಬಾರಿಗೆ ಧುಮುಕಿದರೆ ಹಣ ಪೋಲು ಎಂದಾಗಬಹುದೇ? ಎಂಬ ಭಯದಲ್ಲಿ ಈ ವರ್ಷ ಸರಳ ಕಟ್ಟಕ್ಕೆ ಧುಮುಕಿಯೇ ಬಿಟ್ಟರು.

ಅಲ್ಲೇ ಬದಿಯಲ್ಲಿ ಧಾರಾಳವಾಗಿದ್ದ ಓಟೆ ಬಿದಿರು, ಆಧಾರ ಸ್ತಂಭವಾಗಿ ಮರದ ಗೂಟ, ಗೂಟದ ಭದ್ರತೆಗಾಗಿ ಆಧಾರ ಮೂಂಡು ಇಷ್ಟು ಸಿದ್ಧತೆ ನಡೆಸಿ 17 ಅಡಿ ಅಗಲ, ಮೂರು ಅಡಿ ಎತ್ತರಕ್ಕೆ ಬಿದಿರಿನ ಕಟ್ಟದ ತಯಾರಿಯಾಯಿತು. ನೀರು ನಿಲ್ಲುವುದಕ್ಕಾಗಿ ಎದುರುಬದಿಯಿಂದ ಸಿಲ್ಪಾಲಿನ್ ಶೀಟನ್ನು ಹೊದಿಸಿ ಬಿಟ್ಟರು. ಏರಿ ಬಂದ ನೀರನ್ನು ನೋಡಿ ಸಂತೋಷವನ್ನು ಹಂಚಿಕೊಂಡಿದ್ದಾರೆ. ಮುಂದಿನ ವರ್ಷದ ಭದ್ರಕಟ್ಟಕ್ಕಾಗಿ ಮನಸ್ಸಿನ ಸಿದ್ಧತೆಯಲ್ಲಿ ತೊಡಗಿಕೊಂಡಿದ್ದಾರಂತೆ. ವಿಜಯ ಕೃಷ್ಣರ ಸ್ಪೂರ್ತಿ ಬೇರೆಯವರಿಗೂ ಕಟ್ಟಕ್ಕೆ ಸ್ಪೂರ್ತಿ ತುಂಬಲಿ.

ಎ. ಪಿ. ಸದಾಶಿವ ಮರಿಕೆ

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಮ್ಯಾನ್ಮಾರ್‌ನಿಂದ ಅಕ್ರಮ ಅಡಿಕೆ ಆಮದು | ಮಿಜೋರಾಂ ಅಡಿಕೆ ಬೆಳೆಗಾರರಿಗೆ ಸವಾಲು

ಆಮದು ಕಾರಣದಿಂದ ಮಿಜೋರಾಂ ಅಡಿಕೆ ಬೆಳೆಗಾರರು ಸ್ಪರ್ಧಾತ್ಮಕ ಬೆಲೆಯಲ್ಲಿ ತಮ್ಮ ಉತ್ಪನ್ನಗಳನ್ನು ಮಾರಾಟ…

6 hours ago

ಈಗ ಮನಸುಗಳಿಗೇ ಒಂದು ಬ್ರಹ್ಮಕಲಶ ಯಾಕಾಗಬೇಕು…?

ಇಂದು ಯಾವುದೇ ಪ್ರಮುಖ ಕ್ಷೇತ್ರಗಳನ್ನು ಗಮನಿಸಿ, ಅಲ್ಲೊಂದು ವಿವಾದ ಇಲ್ಲದೇ ಇರುವುದೇ ಇಲ್ಲ.…

7 hours ago

ಉತ್ತರ ಭಾರತದಲ್ಲಿ ಆವರಿಸಿದ ಬಿಸಿಗಾಳಿ | 27 ಹವಾಮಾನ ಕೇಂದ್ರಗಳಲ್ಲಿ 43 ಡಿಗ್ರಿಗಿಂತ ಹೆಚ್ಚಿನ ತಾಪಮಾನ |

ಈ ವಾರ ದೆಹಲಿ, ರಾಜಸ್ಥಾನ , ಗುಜರಾತ್, ಮಧ್ಯಪ್ರದೇಶ , ಮಹಾರಾಷ್ಟ್ರ ಮತ್ತು…

8 hours ago

ಹೊಸರುಚಿ | ಗುಜ್ಜೆ ಕಡಲೆ ಗಸಿ

ಗುಜ್ಜೆ ಕಡಲೆ ಗಸಿಗೆ ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ: ಗುಜ್ಜೆ 1…

8 hours ago

ಸ್ಥಳೀಯ ಉತ್ಪನ್ನ ಉತ್ತೇಜನ, ಪರಿಸರ ಸಂರಕ್ಷಣೆಗೆ ಪ್ರಧಾನಿ ಕರೆ

ಸ್ಥಳೀಯ ಉತ್ಪನ್ನ ಉತ್ತೇಜನ, ಪರಿಸರ ಸಂರಕ್ಷಣೆ ಸೇರಿದಂತೆ ಉತ್ತಮ ಯೋಗಕ್ಷೇಮಕ್ಕೆ 9 ಸಂಕಲ್ಪಗಳನ್ನು …

8 hours ago

ರೆಪೋ ದರದಲ್ಲಿ ಶೇಕಡ  0.25ರಷ್ಟು  ಕಡಿತ | ಶೇಕಡ 6.25ರಿಂದ ಶೇಕಡ 6ಕ್ಕೆ  ಇಳಿಕೆ

ಭಾರತೀಯ ರಿಸರ್ವ್ ಬ್ಯಾಂಕ್ ನ  ಹಣಕಾಸು ನೀತಿ ಸಮಿತಿ ಹಲವು  ಮಹತ್ವದ ನಿರ್ಧಾರಗಳನ್ನು…

8 hours ago