Advertisement
MIRROR FOCUS

ಹಾಳೆತಟ್ಟೆಯ ಬಳಿಕ ಈಗ ಮಾವಿನಹಣ್ಣು | ಭಾರತದ 15 ಮಾವಿನ ಹಣ್ಣು ಶಿಪ್‌ಮೆಂಟ್‌ಗಳನ್ನು ತಿರಸ್ಕರಿಸಿದ ಅಮೇರಿಕಾ |

Share

ಭಾರತದಿಂದ ಅಮೆರಿಕಕ್ಕೆ ರಪ್ತಾಗುತ್ತಿದ್ದ ಮಾವಿನಹಣ್ಣುಗಳಿದ್ದ 15 ಶಿಪ್‌ಮೆಂಟ್‌ಗಳನ್ನು ಅಮೆರಿಕ ತಿರಸ್ಕರಿಸಿದೆ. ಈ ತಿಂಗಳ ಆರಂಭದಲ್ಲಿ ಅಡಿಕೆ ಹಾಳೆತಟ್ಟೆಯನ್ನು ಕೂಡಾ ಅಮೇರಿಕಾ ತಿರಸ್ಕರಿಸಿದೆ. ಎರಡಕ್ಕೂ ಕಾರಣ ಬೇರೆ ಬೇರೆ ನೀಡಿದೆ. ಅಡಿಕೆ ಹಾಳೆತಟ್ಟೆ ತಿರಸ್ಕಾರಕ್ಕೆ ಎಫ್‌ಡಿಎ ನಿಯಮ ಹಾಗೂ ಅಡಿಕೆ ಹಾಳೆತಟ್ಟೆ ಹಾನಿ ಎನ್ನುವ ಕಾರಣ ನೀಡಿದರೆ, ಮಾವಿನಹಣ್ಣು ರಫ್ತು ವಿಚಾರದಲ್ಲಿ  ಕೀಟನಾಶಕ ಬಳಕೆಗೆ ಸಂಬಂಧಿಸಿದ ದಾಖಲೆಗಳಲ್ಲಿ ವ್ಯತ್ಯಾಸದ ಕಾರಣ ಹೇಳಿದೆ. ಈಗ ಮಹಾರಾಷ್ಟ್ರದ ಮಾವಿನಹಣ್ಣುಗಳಿದ್ದ 15 ಶಿಪ್‌ಮೆಂಟ್‌ಗಳನ್ನು ಅಮೆರಿಕ ತಿರಸ್ಕರಿಸಿದೆ. ಇದರಿಂದಾಗಿ ಭಾರತದ ರಫ್ತುದಾರರಿಗೆ ಸುಮಾರು 4.28 ಕೋಟಿ ರೂ. ನಷ್ಟವಾಗಿದೆ. …..ಮುಂದೆ ಓದಿ….

ಅಮೇರಿಕಾದ ಲಾಸ್ ಏಂಜಲೀಸ್, ಸ್ಯಾನ್ ಫ್ರಾನ್ಸಿಸ್ಕೋ ಮತ್ತು ಅಟ್ಲಾಂಟಾದ ವಿಮಾನ ನಿಲ್ದಾಣಗಳಲ್ಲಿ ಕನಿಷ್ಠ 15  ಶಿಪ್‌ಮೆಂಟ್‌ ಗಳಿಗೆ ಪ್ರವೇಶ ನಿರಾಕರಿಸಲಾಗಿದೆ. ಮೇ 8 ಮತ್ತು 9 ರಂದು ನವಿ ಮುಂಬೈನ ವಾಶಿಯಲ್ಲಿರುವ ಯುನೈಟೆಡ್ ಸ್ಟೇಟ್ಸ್ ಡಿಪಾರ್ಟ್ಮೆಂಟ್ ಆಫ್ ಅಗ್ರಿಕಲ್ಚರ್ (ಯುಎಸ್ಡಿಎ) ಮೇಲ್ವಿಚಾರಣೆಯಲ್ಲಿ ಮಾವಿನ ಹಣ್ಣುಗಳನ್ನು ವಿಕಿರಣ ಚಿಕಿತ್ಸೆಗೆ ಒಳಪಡಿಸಲಾಗಿತ್ತು.ಆದರೆ, ಅಮೆರಿಕದ ಕಸ್ಟಮ್ಸ್ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿದಾಗ ದೋಷಗಳು ಕಂಡುಬಂದಿವೆ. ಹೀಗಾಗಿ ಮಾವಿನ ಹಣ್ಣು ಅಮೇರಿಕಾದಲ್ಲಿ ಇಳಿಕೆಯಾಗಿಲ್ಲ.  ಪ್ರವೇಶ ನಿರಾಕರಿಸಲಾದ ಮಾವಿನ ಸರಕುಗಳನ್ನು ಭಾರತಕ್ಕೆ ಹಿಂತಿರುಗಿಸಲಾಗುತ್ತಿತ್ತು ಅಥವಾ ನಾಶಪಡಿಸಲಾಗುತ್ತಿತ್ತು. ಮಾವಿನಹಣ್ಣುಗಳು ಬೇಗನೆ ಕೊಳೆಯುವ ಗುಣ ಮತ್ತು ಹಿಂತಿರುಗಿಸುವ ಲಾಜಿಸ್ಟಿಕ್ಸ್‌ನ ಹೆಚ್ಚಿನ ವೆಚ್ಚದಿಂದಾಗಿ, ರಫ್ತುದಾರರು ಮಾವಿನಹಣ್ಣನ್ನು ಅಲ್ಲಿಯೇ ವಿಲೇವಾರಿ ಮಾಡಲು ನಿರ್ಧರಿಸಿದ್ದಾರೆ. ಹೀಗಾಗಿ ಸುಮಾರು 4.2 ಕೋಟಿ ರೂ. ನಷ್ಟವಾಗಿದೆ ಎಂದು ಎಕನಾಮಿಕ್ ಟೈಮ್ಸ್ ವರದಿ ತಿಳಿಸಿದೆ.

ಮಹಾರಾಷ್ಟ್ರದ ಇತರ ಭಾಗಗಳ ಜೊತೆಗೆ ರತ್ನಗಿರಿಯು ಅಲ್ಫೋನ್ಸೊ ಮಾವಿನಹಣ್ಣು ಹೆಸರುವಾಸಿಯಾಗಿದೆ, ಇವುಗಳಿಗೆ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ, ವಿಶೇಷವಾಗಿ ಅಮೆರಿಕದಲ್ಲಿ ಹೆಚ್ಚಿನ ಬೇಡಿಕೆಯಿದೆ.  ಅಮೆರಿಕವು ಬಹಳ ಹಿಂದಿನಿಂದಲೂ ಭಾರತದ ಮಾವಿನ ಹಣ್ಣುಗಳಿಗೆ, ವಿಶೇಷವಾಗಿ ಅಲ್ಫೋನ್ಸೊದಂತಹ ಪ್ರೀಮಿಯಂ ಪ್ರಭೇದಗಳಿಗೆ, ಅತಿದೊಡ್ಡ ರಫ್ತು ಮಾರುಕಟ್ಟೆಯಾಗಿದೆ. ವಾಸ್ತವವಾಗಿ, ಅಮೆರಿಕವು ಭಾರತದ ಒಟ್ಟು ಮಾವಿನ ರಫ್ತಿನ ಸರಿಸುಮಾರು 40% ಅನ್ನು ಆಮದು ಮಾಡಿಕೊಳ್ಳುತ್ತದೆ. ರಫ್ತು ಸಮಸ್ಯೆ ಇದುರೆಗೂ ಆಗಿಲ್ಲ. ಈಗ ಸಮಸ್ಯೆ ಆಗಿರುವ ಬಗ್ಗೆಯೂ ಕಾರಣ ತಿಳಿದಿಲ್ಲ ಎಂದು ಕೆಲವು ರಫ್ತುದಾರರು ಹೇಳಿದ್ದಾರೆ.

ಅಡಿಕೆ ಹಾಳೆತಟ್ಟೆ ರಫ್ತು ಬಳಿಕವೂ ಇದೇ ಮಾದರಿಯ ಸಮಸ್ಯೆಯನ್ನು ರಫ್ತುದಾರರ ಅನುಭವಿಸಿದ್ದಾರೆ. ಅಡಿಕೆ ಹಾನಿಕಾರಕ ಎನ್ನುವ ಅಂಶವನ್ನು ಹೇಳುತ್ತಾ ಅಡಿಕೆ ಹಾಳೆತಟ್ಟೆಯೂ ಹಾನಿಕಾರಕ ಎಂದು ಹೇಳಿದೆ. ಇದಕ್ಕಾಗಿ FDA ವರದಿಯನ್ನು ಉಲ್ಲೇಖಿಸಲಾಗಿತ್ತು. ಇದೀಗ ಅಡಿಕೆ ಹಾಳೆತಟ್ಟೆ ಉದ್ಯಮ ಕೂಡಾ ಸಂಕಷ್ಟವನ್ನು ಅನುಭವಿಸಿದೆ. ಅಮೇರಿಕಾಕ್ಕೆ ಅಡಿಕೆ ಹಾಳೆತಟ್ಟೆ ರಫ್ತು ಮಾಡಲು ಸಂಕಷ್ಟವಾಗಿದೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ತೂಗುಸೇತುವೆಗಳ ಸರದಾರ ಡಾ. ಗಿರೀಶ್‌ ಭಾರದ್ವಾಜ್‌ ಅವರಿಗೆ ಗ್ರಾಮೀಣ ಭಾರತದ ಭಾವಪೂರ್ಣ ನಮನ

ತೂಗುಸೇತುವೆಗಳ ಮೂಲಕ ಸಾವಿರಾರು ಗ್ರಾಮಗಳ ಬದುಕನ್ನು ಜೋಡಿಸಿದ ಪದ್ಮಶ್ರೀ ಡಾ. ಗಿರೀಶ್‌ ಭಾರದ್ವಾಜ್‌ಗೆ…

8 minutes ago

ಪದ್ಮಶ್ರೀ ಡಾ. ಗಿರೀಶ್‌ ಭಾರದ್ವಾಜ್‌ ನಿಧನ – ‘ತೂಗುಸೇತುವೆಗಳ ಸರದಾರ’ ಇನ್ನಿಲ್ಲ

ಪದ್ಮಶ್ರೀ ಪುರಸ್ಕೃತ ಡಾ. ಗಿರೀಶ್‌ ಭಾರದ್ವಾಜ್‌ ಅವರು ನಿಧನರಾಗಿದ್ದಾರೆ. ಕಡಿಮೆ ವೆಚ್ಚದ ತೂಗುಸೇತುವೆಗಳ…

4 hours ago

ಸಂಕಷ್ಟದಿಂದ ರೈತರನ್ನು ರಕ್ಷಿಸುವ ಶಕ್ತಿ ಗೋ ಆಧಾರಿತ ಆರ್ಥಿಕತೆಗಿದೆ – ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡಣವೀಸ್

ಗೋ ಆಧಾರಿತ ಆರ್ಥಿಕ ವ್ಯವಸ್ಥೆ ರೈತರ ಸಂಕಷ್ಟಕ್ಕೆ ಶಾಶ್ವತ ಪರಿಹಾರ ನೀಡಬಲ್ಲದು ಎಂದು…

4 hours ago

ಜೂನ್‌ನಲ್ಲಿ 40% ಮಳೆ ಕೊರತೆ – ಜುಲೈನಲ್ಲಿ ಮುಂಗಾರು ಭರ್ಜರಿ..! ದೇಶಾದ್ಯಂತ ಮಳೆ ಚುರುಕು

ಜೂನ್‌ನಲ್ಲಿ ದಾಖಲಾಗಿದ್ದ ಮಳೆ ಕೊರತೆ ಜುಲೈ ಆರಂಭದ ಭಾರೀ ಮಳೆಯಿಂದ ವೇಗವಾಗಿ ಕಡಿಮೆಯಾಗುತ್ತಿದೆ.…

15 hours ago

ರಾಜ್ಯದ 9 ಜಿಲ್ಲೆಗಳಲ್ಲಿ ಜುಲೈ 9 ರಿಂದ 11ರವರೆಗೆ ಭಾರೀ ಮಳೆ ಸಾಧ್ಯತೆ – IMD ಯೆಲ್ಲೋ ಅಲರ್ಟ್

ಜುಲೈ 9ರಿಂದ 11ರವರೆಗೆ ರಾಜ್ಯದ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಭಾರೀ…

15 hours ago

E20 ಪೆಟ್ರೋಲ್‌ನಿಂದ ಮೈಲೇಜ್ ಕಡಿಮೆಯಾಗುತ್ತದೆಯೇ? ಹಳೆಯ ವಾಹನಗಳಿಗೆ ಅಪಾಯ ಇದೆಯೇ?

E20 ಪೆಟ್ರೋಲ್ ಬಳಕೆಯಿಂದ ಸುಮಾರು 3–5% ಮೈಲೇಜ್ ಕುಸಿಯುವ ಸಾಧ್ಯತೆ ಇದೆ. ಆದರೆ…

20 hours ago