Advertisement
ಅನುಕ್ರಮ

ಸವಿರುಚಿ | ಬೇಬಿ ಕಾರ್ನ್ ಮತ್ತು ಪೆಪ್ಪರ್ ಮಂಚೂರಿ |

Share
ಬೇಬಿ ಕಾರ್ನ್ ಮತ್ತು ಪೆಪ್ಪರ್ ಮಂಚೂರಿ (ಜೋಳ ಮತ್ತು ಕಾಳು ಮೆಣಸು ಮಂಚೂರಿ)
ಬೇಕಾಗುವ ಸಾಮಗ್ರಿಗಳು :
  • ಜೋಳ ಪ್ಯಾಕ್ 1.
  • ಕಾಳು ಮೆಣಸು ಹುಡಿ 2ಚಮಚ.
  • ಕಡಲೆ ಹಿಟ್ಟು 1/2 ಕಪ್.
  • ಜೋಳದ ಹುಡಿ 4ಚಮಚ.
  • ಮೈದಾ 3 ಚಮಚ.
  • ಹಸಿಮೆಣಸು 2 ( ಚಿಕ್ಕ ದಾಗಿ ತುಂಡು ಮಾಡಿ.)
  • ಬೆಳ್ಳುಳ್ಳಿ 8. (ಚಿಕ್ಕ ದಾಗಿ ತುಂಡು ಮಾಡಿ).
  • ಈರುಳ್ಳಿ 1 ಚಿಕ್ಕ ದಾಗಿ ತುಂಡು ಮಾಡಿ.
  • ಕ್ಯಾಪ್ಸಿಕಂ 1 (ಚಿಕ್ಕ ದಾಗಿ ತುಂಡು ಮಾಡಿ.)
  • ಶುಂಠಿ ಬೆಳ್ಳುಳ್ಳಿ ಪೇಸ್ಟ್ 1/2 ಚಮಚ.
  • ಉಪ್ಪು ರುಚಿಗೆ ತಕ್ಕಷ್ಟು.
  • ಟೊಮೆಟೊ ಸಾಸ್ 6ಚಮಚ.
  • ವಿನೇಗರ್ 2ಚಮಚ.
  • ಸೋಯಾ ಸಾಸ್ 2ಚಮಚ.
  • ಬೂಂದಿ ಕಾಳು 4ಚಮಚ.
  • ಎಣ್ಣೆ ಕರಿಯಲು.
ಮಾಡುವ ವಿಧಾನ : ಜೋಳ ಜೋಳವನ್ನು 2 ತುಂಡು ಮಾಡಿ ಬಿಸಿನೀರಿಗೆ ಹಾಕಿ 5 ನಿಮಿಷ ಕುದಿಸಿ ಸ್ಟವ್ ಆಫ್ ಮಾಡಿ. ಬಸಿದು ಬಿಡಿ.
ಹಿಟ್ಟು ಕಲೆಸಿಕೊಳ್ಳಲು. ಕಡಲೆ ಹುಡಿ, ಮೈದಾ, ಜೋಳದ ಹುಡಿ, ಕಾಳುಮೆಣಸು ಹುಡಿ, ಉಪ್ಪು, ನೀರು ಹಾಕಿ ಹಿಟ್ಟು ಕಲೆಸಿ.( ಬಜ್ಜಿ ಯ ಹದಕ್ಕೆ ಕಲಸಿ.)
ಜೋಳವನ್ನು ಹಿಟ್ಟಿಗೆ ಅದ್ದಿ ಕಾದ ಎಣ್ಣೆಯಲ್ಲಿ ಕೆಂಪಗೆ ಕರಿದು ತೆಗೆಯಿರಿ.
ನಂತರ ಬಾಣಲೆ ಬಿಸಿ ಆದಾಗ ಅದಕ್ಕೆ ಎಣ್ಣೆ ಹಾಕಿ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಹಸಿಮೆಣಸು, ಬೆಳ್ಳುಳ್ಳಿ, ಈರುಳ್ಳಿ ಹಾಕಿ ಫ್ರೈ ಮಾಡಿ. ನಂತರ  ಕ್ಯಾಪ್ಸಿಕಂ ಹಾಕಿ ಫ್ರೈ ಮಾಡಿ. ಸೊಯಾ ಸಾಸ್, ವಿನೆಗರ್ ,ಟೊಮೆಟೊ ಸಾಸ್ ಹಾಕಿ ಮಿಕ್ಸ್ ಮಾಡಿ. ನಂತರ ಎಣ್ಣೆ ಯಲ್ಲಿ ಕರಿದ ಜೋಳ ಜೋಳ, ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.ಬೂಂದಿ ಕಾಳು ಹಾಕಿ ಸವಿಯಿರಿ
# ದಿವ್ಯ ಮಹೇಶ್
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

Published by
ಮಿರರ್‌ ಡೆಸ್ಕ್‌

Recent Posts

ಹೊಸರುಚಿ | ಹಲಸಿನ ಹಣ್ಣಿನಿಂದ ಇಷ್ಟು ರುಚಿ ಸಿಗುತ್ತದಾ…? ಈ ಕಸ್ಟರ್ಡ್ ಮಿಸ್ ಮಾಡ್ಬೇಡಿ…!

ಹಲಸಿನ ಹಣ್ಣಿನಿಂದ ಸುಲಭವಾಗಿ ತಯಾರಿಸಬಹುದಾದ ಕಸ್ಟರ್ಡ್ ಬೇಸಿಗೆಯಲ್ಲಿ ಉತ್ತಮ ಡೆಸರ್ಟ್ ಆಯ್ಕೆಯಾಗಿದೆ. ಕಡಿಮೆ…

14 hours ago

ಹವಾಮಾನ ವರದಿ | 14-03-2026 | ಇಂದು ಕರಾವಳಿ ಜಿಲ್ಲೆಯಲ್ಲಿ ಮಳೆ ಸಾಧ್ಯತೆ – ರಾಜ್ಯದ ಹಲವೆಡೆ ಗುಡುಗು ಮಳೆ ಮುನ್ಸೂಚನೆ

ರಾಜ್ಯದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಸಂಜೆ ಹಾಗೂ ರಾತ್ರಿ ವೇಳೆಯಲ್ಲಿ ಗುಡುಗು…

19 hours ago

ಮಲೇಷ್ಯಾದಲ್ಲಿ ರಬ್ಬರ್ ಉತ್ಪಾದನೆ ಇಳಿಕೆ – ಭಾರತೀಯ ರೈತರಿಗೆ ಏನು ಸಂದೇಶ?

ಮಲೇಷ್ಯಾದಲ್ಲಿ ರಬ್ಬರ್ ಉತ್ಪಾದನೆ ಇಳಿಕೆ ಭಾರತೀಯ ರೈತರಿಗೆ ಬೆಲೆ ಬೆಂಬಲದ ಸೂಚನೆ ನೀಡುತ್ತಿದೆ.…

1 day ago

ಕಾಡಾನೆ ದಾಳಿಗೆ ಕಾಫಿ ತೋಟದ ಮಾಲೀಕ ಬಲಿ; ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರ ಆಕ್ರೋಶ

ಕೊಡಗಿನಲ್ಲಿ ಕಾಡಾನೆ ದಾಳಿಗೆ ಕಾಫಿ ತೋಟದ ಮಾಲೀಕ ಗಣಪತಿ ಮೃತಪಟ್ಟಿದ್ದಾರೆ. ಕಾಡಾನೆ ಹಾವಳಿ…

1 day ago

ಹಾಲಿನಲ್ಲಿ ಕಲಬೆರಕೆ ಪತ್ತೆಗೆ ವಿಶೇಷ ಕಿಟ್‌

ಹಾಲಿನ ಗುಣಮಟ್ಟ ಕಾಪಾಡಲು ಸಹಕಾರ ಸಂಘಗಳಿಗೆ ವಿಶೇಷ ಕಲಬೆರಕೆ ಪತ್ತೆ ಕಿಟ್‌ಗಳನ್ನು ವಿತರಿಸಲಾಗುತ್ತಿದೆ.

1 day ago

ಸೌದೆ ಬೇಡಿಕೆ ಏರಿಕೆ ಹಿನ್ನೆಲೆ | ಅಕ್ರಮ ಮರ ಕಡಿತಲೆ ತಡೆಯಲು ಸಚಿವ ಈಶ್ವರ ಖಂಡ್ರೆ ಕಟ್ಟುನಿಟ್ಟಿನ ಸೂಚನೆ

ಸೌದೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆ ಅಕ್ರಮ ಮರ ಕಡಿತಲೆ ತಡೆಯಲು ಸಚಿವ ಈಶ್ವರ…

1 day ago