ಶಾಲೆ ಆರಂಭ | ಯೋಜಿತ ಮತ್ತು ಪರಿಣಾಮಕಾರಿ ಆರಂಭದ ಅಗತ್ಯ

May 22, 2025
7:17 AM
ಶಾಲೆಯ  ಯೋಜಿತ ಮತ್ತು ಪರಿಣಾಮಕಾರಿ ಆರಂಭಕ್ಕೆ  ವಿದ್ಯಾರ್ಥಿ – ಪೋಷಕ – ಶಿಕ್ಷಕ  ಇವರೆಲ್ಲರ  ಪಾತ್ರ ಅತ್ಯಂತ ಮಹತ್ವದ್ದಾಗಿದೆ.  ಪ್ರತಿಯೊಂದು ಹೊಸ ಶೈಕ್ಷಣಿಕ ವರ್ಷವು ಹೊಸ ಅವಕಾಶಗಳ ದ್ವಾರವಾಗಿದ್ದು, ಸರಿಯಾದ ತಯಾರಿಯಿಂದ ನಾವು ಅದನ್ನು ಸಾರ್ಥಕಗೊಳಿಸಬಹುದು.  ವಿದ್ಯಾರ್ಥಿಗಳು ,ಪೋಷಕರು  ಹಾಗೂ ಶಿಕ್ಷಕರು  ಈ ಮೂರುತರದ  (Triangle) ಸಮನ್ವಯತೆಯ  ಪಾಲನೆ ಮೇಲೆ  ಯಶಸ್ಸು ಅವಲಂಬಿತವಾಗಿದೆ.

ಶಾಲೆಯ  ಯೋಜಿತ ಮತ್ತು ಪರಿಣಾಮಕಾರಿ ಆರಂಭಕ್ಕೆ  ವಿದ್ಯಾರ್ಥಿ – ಪೋಷಕ – ಶಿಕ್ಷಕ  ಇವರೆಲ್ಲರ  ಪಾತ್ರ ಅತ್ಯಂತ ಮಹತ್ವದ್ದಾಗಿದೆ.  ಪ್ರತಿಯೊಂದು ಹೊಸ ಶೈಕ್ಷಣಿಕ ವರ್ಷವು ಹೊಸ ಅವಕಾಶಗಳ ದ್ವಾರವಾಗಿದ್ದು, ಸರಿಯಾದ ತಯಾರಿಯಿಂದ ನಾವು ಅದನ್ನು ಸಾರ್ಥಕಗೊಳಿಸಬಹುದು.  ವಿದ್ಯಾರ್ಥಿಗಳು ,ಪೋಷಕರು  ಹಾಗೂ ಶಿಕ್ಷಕರು  ಈ ಮೂರುತರದ  (Triangle) ಸಮನ್ವಯತೆಯ  ಪಾಲನೆ ಮೇಲೆ  ಯಶಸ್ಸು ಅವಲಂಬಿತವಾಗಿದೆ.

Advertisement
Advertisement

ವಿದ್ಯಾರ್ಥಿಗಳು ಮಾಡಬೇಕಾದ ತಯಾರಿ : ಹೊಸ ಶೈಕ್ಷಣಿಕ ವರ್ಷವು ಹೊಸ ಆರಂಭ. ಹಳೆ ಎಡವಟ್ಟುಗಳನ್ನು ಮರೆತು ಹೊಸ ಉತ್ಸಾಹದಿಂದ ಮುಂದುವರೆಯಬೇಕಾಗಿದೆ ಮತ್ತು  ಸಮಯಪಾಲನೆ ಮತ್ತು ವಿಷಯದ ಮೇಲೆ ಗಮನ ಅಭಿವೃದ್ಧಿಪಡಿಸಲು ( focussed  ) ದಿನಚರಿಯ ಅಭ್ಯಾಸ ಶುರುಮಾಡಬೇಕಿದೆ . ಸಾಧ್ಯವಾಧಷ್ಟು ಮೊಬೈಲ್ ಅಥವಾ ಟಿವಿ ಬಳಕೆಯನ್ನು ನಿಯಂತ್ರಿಸಿ, ಓದಿಗೆ ತಯಾರಿ ಮಾಡಿಕೊಳ್ಳಬೇಕು. ಹಿಂದಿನ ತರಗತಿಯ ಪಠ್ಯವನ್ನು ಪುನರಾವೃತ್ತಿ ಮಾಡಿ – ಮುಖ್ಯ ಅಂಶಗಳನ್ನು ನೆನಪಿನಲ್ಲಿಡಿ.ಮತ್ತು ಹೊಸ ತರಗತಿಯ ಪಠ್ಯಪುಸ್ತಕಗಳನ್ನು ಪಡೆದು, ಮೇಲಿಂದ  ಮೇಲೆ ಅವಲೋಕನ ಮಾಡಿದರೆ ಪಾಠ ಶ್ರವಣಕ್ಕೆ ಆಸಕ್ತಿ ಹುಟ್ಟುತ್ತದೆ. ಸ್ವತಃ  ಮಾಡಬೇಕಾದ ಕೆಲಸಗಳ ಪಟ್ಟಿ (TO DO LIST ) ಅಥವಾ ಸ್ಟಡಿ ಪ್ಲ್ಯಾನ್ ಸಿದ್ಧಮಾಡಿಕೊಳ್ಳಿ.

ಶಾಲೆ ಆರಂಭದ ಚೆಕ್‌ಲಿಸ್ಟ್ (Checklist for Parents & Students)

(A) ಶೈಕ್ಷಣಿಕ ಸಾಮಗ್ರಿಗಳು:

  • ಪಠ್ಯಪುಸ್ತಕಗಳು (Textbooks)
  • ಪುಸ್ತಕ ಬ್ಯಾಗ್ ಮತ್ತು ಪೆನ್ ಕಿಟ್
  • ನೋಟ್ ಬುಕ್ಸ್ (ವಿಷಯದ ಪ್ರಕಾರ)
  • ಪೆನ್, ಪೆನ್ಸಿಲ್, ಇರೆಸರ್, ಶಾರ್ಪನರ್
  • ಕಲಾ ವಸ್ತುಗಳು (ಅಗತ್ಯವಿದ್ದರೆ – ಕ್ರೇಯಾನ್, ಗ್ರಾಫ್ ಬುಕ್)

 (B)ತಯಾರಿ ಹಾಗೂ ವ್ಯವಸ್ಥೆ:

Advertisement
  • ಶಾಲೆಯ ಸಮವಸ್ತ್ರ ಜೂತೆ, ಟೈ, ಬೆಲ್ಟ್,ಶೂಸ್
  • ಐ.ಡಿ ಕಾರ್ಡ್ (ಅಪ್ಡೇಟ್ ಮಾಡಿಸಬೇಕು)
  • ನೀರಿನ ಬಾಟಲ್, ಟಿಫಿನ್ ಬಾಕ್ಸ್
  • ಎಲ್ಲಾ ವಸ್ತುಗಳಿಗೆ ಹೆಸರಿನ ಟ್ಯಾಗ್ ಹಾಕಿ
  • ಶಾಲಾ ಸಮಯಕ್ಕೆ ಅನುಗುಣವಾಗಿ ಅಲಾರಂ ಅಥವಾ ದಿನಚರಿ ರೂಪಿಸಿ

ಪ್ರಾಮಾಣಿಕತೆ, ಶಿಷ್ಟಾಚಾರ ಮತ್ತು ಶಿಸ್ತು ಮಕ್ಕಳಿಗೆ ಶ್ರೇಷ್ಠ ಸಂಸ್ಕಾರ ನೀಡುತ್ತವೆ.

ಪೋಷಕರ ತಯಾರಿ ಮತ್ತು ಪಾತ್ರ

  • ಮುಖ್ಯವಾಗಿ ಪೋಷಕರು ಪರ್ಯಾಯ ಶಿಕ್ಷಕರಾಗಡೇ  ಮಾರ್ಗದರ್ಶಕರಾಗಿದ್ದಾರೆ ಹೆಚ್ಚು ಪರಿಣಾಮಕಾರಿ
  • ಮಕ್ಕಳಿಂದ ಹೆಚ್ಚು ಅಂಕ ನಿರೀಕ್ಷಿಸುವ ಮೊದಲು ಅವರಿಗೆ ಬೇಕಾದ ಸಹಕಾರ ನೀಡಿ.
  • ಮಕ್ಕಳೊಂದಿಗೆ ನಿತ್ಯ 10–15 ನಿಮಿಷಗಳ ಗುಣಮಟ್ಟದ ಸಂವಾದ ಎಳೆಯುವ ಚಟುವಟಿಕೆಗೆ ಅಭ್ಯಾಸ ಮಾಡಿರಿ.
  • ಶಾಲೆಯೊಂದಿಗೆ ಸಹಕಾರ ಮತ್ತು ಸಂಪರ್ಕದಲ್ಲಿರಿ .ಶಾಲೆ ನೀಡುವ ಮಾಹಿತಿಯನ್ನು ಎಚ್ಚರಿಕೆಯಿಂದ ಗಮನಿಸಿ (ಡೈರಿ, ನೋಟಿಸ್, ವಾಟ್ಸಾಪ್ ಗ್ರೂಪ್).
  • ಪೋಷಕರ ಸಭೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ – ಇದು ಶಿಕ್ಷಕರೊಂದಿಗೆ ಉತ್ತಮ ಸಂಬಂಧಕ್ಕೆ ದಾರಿ ಮಾಡುತ್ತದೆ.ಮತ್ತು ಕಡ್ಡಾಯವಾಗಿ ಮಕ್ಕಳೆದುರು ಅವರು ಕಲಿಯುವ ಶಾಲೆಯನ್ನಾಗಲಿ,ಶಿಕ್ಷಕರನ್ನಾಗಲಿ ತೆಗಳಬೇಡಿ.
  • ಮಕ್ಕಳ ಆರೋಗ್ಯ ಮತ್ತು ಜೀವನಶೈಲಿ ಮೇಲೆ ಗಮನವಿರಿಸಿ ಮತ್ತು ಸರಿಯಾದ ಆಹಾರ, ನಿದ್ರೆ ಮತ್ತು ಶಾರೀರಿಕ ಚಟುವಟಿಕೆಗೆ ಪ್ರಾಧಾನ್ಯ ನೀಡಿ.
  • ಮಕ್ಕಳ ಭಾವನಾತ್ಮಕ ಆರೋಗ್ಯವನ್ನು ಅಳೆಯುತ್ತಿರಿ – ಬೇಧಭಾವ, ಒತ್ತಡ ಅಥವಾ ಆತಂಕದ ಲಕ್ಷಣಗಳನ್ನು ಗಮನಿಸಿ.ಮತ್ತು ಅವರಿಗೆ ಆತ್ಮವಿಶ್ವಾಸವನ್ನು ತುಂಬಿ .

ಶಿಕ್ಷಕರ ಪೂರ್ವಸಿದ್ಧತೆ

  • ಶಿಕ್ಷಕರು ಪಾಠಗಳ ಯೋಜನೆ ಮತ್ತು ಪೂರ್ತಿ ವರ್ಷದ ಅಗತ್ಯತೆಗಳ  ತಯಾರಿಯನ್ನು ಪ್ರಾರಂಭದಿಂದಲೇ ಮಾಡಿಕೊಂಡಿರಬೇಕು..
  • ಪಠ್ಯ ವಿಷಯದ ತಾಂತ್ರಿಕ ವಿನ್ಯಾಸ ಮಾಡುವುದು ಅವಶ್ಯಕ. ಮಾಧ್ಯಮಗಳ ಸಮರ್ಪಕ ಬಳಕೆ (ಪಿಕ್ಚರ್ ಕಾರ್ಡ್, ವಿಡಿಯೋ, ಚಾರ್ಟ್ ಇತ್ಯಾದಿ) ಉಪಯುಕ್ತ.
  • ಪ್ರತಿ ವಿದ್ಯಾರ್ಥಿಯ ಸಾಮರ್ಥ್ಯವನ್ನು ಗುರುತಿಸಿ , ಮೃದು ಶೈಕ್ಷಣಿಕ ಮತ್ತು ಪರಿಣಾಮಕಾರಿ ಮುನ್ನಡೆಗೆ ಯೋಜನೆ ರೂಪಿಸಿ.
  • ಡಿಜಿಟಲ್ ಉಪಕರಣಗಳನ್ನು ಕಲಿಕೆಯಲ್ಲಿ ಸಮರ್ಪಕವಾಗಿ ಬಳಸಲು ಅಭ್ಯಾಸ ಮಾಡುವುದರ ಮೂಲಕ ,ತಂತ್ರಜ್ಞಾನವನ್ನು ಪರಿಣಾಮ ಕಾರಿಯಾಗಿ ಬಳಸಿಕೊಳ್ಳುವುದು.
  • ಸ್ಮಾರ್ಟ್ ಬೋರ್ಡ್ ಮತ್ತು ಗೂಗಲ್ ಕ್ಲಾಸ್‌ರೂಂ, ನಂತಹ ತಂತ್ರಜ್ಞಾನಗಳು ಕಲಿಕೆಗೆ  ಹೆಚ್ಚಿನ ಸಹಾಯ ಮಾಡುತ್ತವೆ.
  • ಒತ್ತಡವಿಲ್ಲದ, ಸಮಾನತೆ ಹಾಗೂ ಗೌರವದ ಆಧಾರದ ಮೇಲೆ ವಿದ್ಯಾರ್ಥಿಗಳೊಂದಿಗೆ ಒಂದು ರೀತಿಯ ಸ್ನೇಹಯುತ ಸಂಬಂಧವನ್ನು ನಿರ್ಮಾಣಮಾಡುವುದರ ಮೂಲಕ ಒತ್ತಡ ರಹಿತ ಕಲಿಕೆ ವಿಧಾನವಾಗಬೇಕು.
  • ವಿದ್ಯಾರ್ಥಿಗಳು ಶ್ರಮಪೂರ್ವಕವಾಗಿ ಓದುವ, ತೊಡಗಿಸಿಕೊಳ್ಳುವ ಪರಿಸರವನ್ನು ನಿರ್ಮಿಸಬೇಕು.

ಶಾಲೆಯ ಹೊಸ ವರ್ಷದ ಆರಂಭವು ವಿದ್ಯಾರ್ಥಿಗಳಿಗೆ ಅವಕಾಶಗಳ ಮಹಾಪೂರ , ಪೋಷಕರಿಗೆ ಉಪಸ್ಥಿತಿಯ ಆಧಾರ, ಮತ್ತು ಶಿಕ್ಷಕರಿಗೆ ಪರಿವರ್ತನೆಯ ಶಕ್ತಿಕೇಂದ್ರವಾಗಿದೆ. ಈ ಮೂರು ಕಿಡಿಗೆ ಸಮಾನ ಪ್ರಮಾಣದಲ್ಲಿ ಎಣ್ಣೆ ಹಾಕಿದರೆ ಮಾತ್ರ ವಿದ್ಯೆಯ ದೀಪ ಪ್ರಕಾಶಿಸುತ್ತಿದೆ.

ಎಲ್ಲ  ಮಕ್ಕಳ ಶೈಕ್ಷಣಿಕ ಯಾತ್ರೆಯ ಭಾಗವಾಗಲು ನಿಮ್ಮೆಲ್ಲರಿಗೂ ಶುಭವಾಗಲಿ!

Advertisement
Advertisement

Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಕುಮಾರಸುಬ್ರಹ್ಮಣ್ಯ ಮುಳಿಯಾಲ

ಕುಮಾರ ಸುಬ್ರಹ್ಮಣ್ಯ ಮುಳಿಯಾಲ ಅವರು, ಬೆಂಗಳೂರಿನ ಬಯೋ ಕ್ರಾಸ್ ಕೆಮ್, ಎಲ್ಎಲ್ ಪಿ  ಎಂಬ ಔಷಧಿ ಕಂಪೆನಿಯಲ್ಲಿ ಮಾರಾಟ ಮತ್ತು ಮಾರುಕಟ್ಟೆ ವಿಭಾಗದ ನಿರ್ದೇಶಕ. ದ.ಕ. ಜಿಲ್ಲೆಯ ಪುತ್ತೂರಿನ ಸಮೀಪ ಹಿಂದಾರು ಎಂಬಲ್ಲಿ ಅಡಿಕೆ , ತೆಂಗು, ಕರಿಮೆಣಸು ಕೃಷಿ ಭೂಮಿ ಹೊಂದಿದ್ದಾರೆ. ಮೂಲತಃ ಅಡ್ಯನಡ್ಕ ಸಮೀಪದ ಮುಳಿಯಾಲದವರಾಗಿದ್ದು ಕೃಷಿ ಭೂಮಿ ಹೊಂದಿದ್ದು, ಕೃಷಿ ಚಿಂತನೆಗಳನ್ನು ಹೊಂದಿದ್ದಾರೆ.

ಇದನ್ನೂ ಓದಿ

ಹವಾಮಾನ ವರದಿ | 07-06-2025 | ಜೂನ್ 11 ರಿಂದ ಕರಾವಳಿ ಜಿಲ್ಲೆಗಳ ಹೆಚ್ಚಿನ ಭಾಗಗಳಲ್ಲಿ ಉತ್ತಮ ಮಳೆ
June 7, 2025
1:48 PM
by: ಸಾಯಿಶೇಖರ್ ಕರಿಕಳ
ಸುಸ್ಥಿರ ಅಭಿವೃದ್ಧಿ ಯಾವಾಗಲೂ ತತ್ವಶಾಸ್ತ್ರ ಮತ್ತು ಸಿದ್ಧಾಂತದ ಮೂಲತತ್ವಾಗಿದೆ
June 7, 2025
7:15 AM
by: The Rural Mirror ಸುದ್ದಿಜಾಲ
ನಿಮಗೆ ಸಾಡೇಸಾತಿ ಶುರುವಾಗಿದ್ರೆ ಶನಿ ನೀಡ್ತಾನೆ ಈ 6 ಸೂಚನೆ..!
June 7, 2025
6:58 AM
by: ದ ರೂರಲ್ ಮಿರರ್.ಕಾಂ
ಡೀಮ್ಡ್, ಸೆಕ್ಷನ್ 4 ಬಿಕ್ಕಟ್ಟು ಪರಿಹಾರಕ್ಕೆ ಶೀಘ್ರವೇ ಕೇಂದ್ರ, ಸುಪ್ರೀಂಗೆ ಮನವಿ | ಸಚಿವ ಈಶ್ವರ್ ಖಂಡ್ರೆ
June 6, 2025
9:39 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group