Advertisement
Opinion

ಶಾಲೆ ಆರಂಭ | ಯೋಜಿತ ಮತ್ತು ಪರಿಣಾಮಕಾರಿ ಆರಂಭದ ಅಗತ್ಯ

Share

ಶಾಲೆಯ  ಯೋಜಿತ ಮತ್ತು ಪರಿಣಾಮಕಾರಿ ಆರಂಭಕ್ಕೆ  ವಿದ್ಯಾರ್ಥಿ – ಪೋಷಕ – ಶಿಕ್ಷಕ  ಇವರೆಲ್ಲರ  ಪಾತ್ರ ಅತ್ಯಂತ ಮಹತ್ವದ್ದಾಗಿದೆ.  ಪ್ರತಿಯೊಂದು ಹೊಸ ಶೈಕ್ಷಣಿಕ ವರ್ಷವು ಹೊಸ ಅವಕಾಶಗಳ ದ್ವಾರವಾಗಿದ್ದು, ಸರಿಯಾದ ತಯಾರಿಯಿಂದ ನಾವು ಅದನ್ನು ಸಾರ್ಥಕಗೊಳಿಸಬಹುದು.  ವಿದ್ಯಾರ್ಥಿಗಳು ,ಪೋಷಕರು  ಹಾಗೂ ಶಿಕ್ಷಕರು  ಈ ಮೂರುತರದ  (Triangle) ಸಮನ್ವಯತೆಯ  ಪಾಲನೆ ಮೇಲೆ  ಯಶಸ್ಸು ಅವಲಂಬಿತವಾಗಿದೆ.

ವಿದ್ಯಾರ್ಥಿಗಳು ಮಾಡಬೇಕಾದ ತಯಾರಿ : ಹೊಸ ಶೈಕ್ಷಣಿಕ ವರ್ಷವು ಹೊಸ ಆರಂಭ. ಹಳೆ ಎಡವಟ್ಟುಗಳನ್ನು ಮರೆತು ಹೊಸ ಉತ್ಸಾಹದಿಂದ ಮುಂದುವರೆಯಬೇಕಾಗಿದೆ ಮತ್ತು  ಸಮಯಪಾಲನೆ ಮತ್ತು ವಿಷಯದ ಮೇಲೆ ಗಮನ ಅಭಿವೃದ್ಧಿಪಡಿಸಲು ( focussed  ) ದಿನಚರಿಯ ಅಭ್ಯಾಸ ಶುರುಮಾಡಬೇಕಿದೆ . ಸಾಧ್ಯವಾಧಷ್ಟು ಮೊಬೈಲ್ ಅಥವಾ ಟಿವಿ ಬಳಕೆಯನ್ನು ನಿಯಂತ್ರಿಸಿ, ಓದಿಗೆ ತಯಾರಿ ಮಾಡಿಕೊಳ್ಳಬೇಕು. ಹಿಂದಿನ ತರಗತಿಯ ಪಠ್ಯವನ್ನು ಪುನರಾವೃತ್ತಿ ಮಾಡಿ – ಮುಖ್ಯ ಅಂಶಗಳನ್ನು ನೆನಪಿನಲ್ಲಿಡಿ.ಮತ್ತು ಹೊಸ ತರಗತಿಯ ಪಠ್ಯಪುಸ್ತಕಗಳನ್ನು ಪಡೆದು, ಮೇಲಿಂದ  ಮೇಲೆ ಅವಲೋಕನ ಮಾಡಿದರೆ ಪಾಠ ಶ್ರವಣಕ್ಕೆ ಆಸಕ್ತಿ ಹುಟ್ಟುತ್ತದೆ. ಸ್ವತಃ  ಮಾಡಬೇಕಾದ ಕೆಲಸಗಳ ಪಟ್ಟಿ (TO DO LIST ) ಅಥವಾ ಸ್ಟಡಿ ಪ್ಲ್ಯಾನ್ ಸಿದ್ಧಮಾಡಿಕೊಳ್ಳಿ.

ಶಾಲೆ ಆರಂಭದ ಚೆಕ್‌ಲಿಸ್ಟ್ (Checklist for Parents & Students)

(A) ಶೈಕ್ಷಣಿಕ ಸಾಮಗ್ರಿಗಳು:

  • ಪಠ್ಯಪುಸ್ತಕಗಳು (Textbooks)
  • ಪುಸ್ತಕ ಬ್ಯಾಗ್ ಮತ್ತು ಪೆನ್ ಕಿಟ್
  • ನೋಟ್ ಬುಕ್ಸ್ (ವಿಷಯದ ಪ್ರಕಾರ)
  • ಪೆನ್, ಪೆನ್ಸಿಲ್, ಇರೆಸರ್, ಶಾರ್ಪನರ್
  • ಕಲಾ ವಸ್ತುಗಳು (ಅಗತ್ಯವಿದ್ದರೆ – ಕ್ರೇಯಾನ್, ಗ್ರಾಫ್ ಬುಕ್)

 (B)ತಯಾರಿ ಹಾಗೂ ವ್ಯವಸ್ಥೆ:

  • ಶಾಲೆಯ ಸಮವಸ್ತ್ರ ಜೂತೆ, ಟೈ, ಬೆಲ್ಟ್,ಶೂಸ್
  • ಐ.ಡಿ ಕಾರ್ಡ್ (ಅಪ್ಡೇಟ್ ಮಾಡಿಸಬೇಕು)
  • ನೀರಿನ ಬಾಟಲ್, ಟಿಫಿನ್ ಬಾಕ್ಸ್
  • ಎಲ್ಲಾ ವಸ್ತುಗಳಿಗೆ ಹೆಸರಿನ ಟ್ಯಾಗ್ ಹಾಕಿ
  • ಶಾಲಾ ಸಮಯಕ್ಕೆ ಅನುಗುಣವಾಗಿ ಅಲಾರಂ ಅಥವಾ ದಿನಚರಿ ರೂಪಿಸಿ

ಪ್ರಾಮಾಣಿಕತೆ, ಶಿಷ್ಟಾಚಾರ ಮತ್ತು ಶಿಸ್ತು ಮಕ್ಕಳಿಗೆ ಶ್ರೇಷ್ಠ ಸಂಸ್ಕಾರ ನೀಡುತ್ತವೆ.

ಪೋಷಕರ ತಯಾರಿ ಮತ್ತು ಪಾತ್ರ

  • ಮುಖ್ಯವಾಗಿ ಪೋಷಕರು ಪರ್ಯಾಯ ಶಿಕ್ಷಕರಾಗಡೇ  ಮಾರ್ಗದರ್ಶಕರಾಗಿದ್ದಾರೆ ಹೆಚ್ಚು ಪರಿಣಾಮಕಾರಿ
  • ಮಕ್ಕಳಿಂದ ಹೆಚ್ಚು ಅಂಕ ನಿರೀಕ್ಷಿಸುವ ಮೊದಲು ಅವರಿಗೆ ಬೇಕಾದ ಸಹಕಾರ ನೀಡಿ.
  • ಮಕ್ಕಳೊಂದಿಗೆ ನಿತ್ಯ 10–15 ನಿಮಿಷಗಳ ಗುಣಮಟ್ಟದ ಸಂವಾದ ಎಳೆಯುವ ಚಟುವಟಿಕೆಗೆ ಅಭ್ಯಾಸ ಮಾಡಿರಿ.
  • ಶಾಲೆಯೊಂದಿಗೆ ಸಹಕಾರ ಮತ್ತು ಸಂಪರ್ಕದಲ್ಲಿರಿ .ಶಾಲೆ ನೀಡುವ ಮಾಹಿತಿಯನ್ನು ಎಚ್ಚರಿಕೆಯಿಂದ ಗಮನಿಸಿ (ಡೈರಿ, ನೋಟಿಸ್, ವಾಟ್ಸಾಪ್ ಗ್ರೂಪ್).
  • ಪೋಷಕರ ಸಭೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ – ಇದು ಶಿಕ್ಷಕರೊಂದಿಗೆ ಉತ್ತಮ ಸಂಬಂಧಕ್ಕೆ ದಾರಿ ಮಾಡುತ್ತದೆ.ಮತ್ತು ಕಡ್ಡಾಯವಾಗಿ ಮಕ್ಕಳೆದುರು ಅವರು ಕಲಿಯುವ ಶಾಲೆಯನ್ನಾಗಲಿ,ಶಿಕ್ಷಕರನ್ನಾಗಲಿ ತೆಗಳಬೇಡಿ.
  • ಮಕ್ಕಳ ಆರೋಗ್ಯ ಮತ್ತು ಜೀವನಶೈಲಿ ಮೇಲೆ ಗಮನವಿರಿಸಿ ಮತ್ತು ಸರಿಯಾದ ಆಹಾರ, ನಿದ್ರೆ ಮತ್ತು ಶಾರೀರಿಕ ಚಟುವಟಿಕೆಗೆ ಪ್ರಾಧಾನ್ಯ ನೀಡಿ.
  • ಮಕ್ಕಳ ಭಾವನಾತ್ಮಕ ಆರೋಗ್ಯವನ್ನು ಅಳೆಯುತ್ತಿರಿ – ಬೇಧಭಾವ, ಒತ್ತಡ ಅಥವಾ ಆತಂಕದ ಲಕ್ಷಣಗಳನ್ನು ಗಮನಿಸಿ.ಮತ್ತು ಅವರಿಗೆ ಆತ್ಮವಿಶ್ವಾಸವನ್ನು ತುಂಬಿ .

ಶಿಕ್ಷಕರ ಪೂರ್ವಸಿದ್ಧತೆ

  • ಶಿಕ್ಷಕರು ಪಾಠಗಳ ಯೋಜನೆ ಮತ್ತು ಪೂರ್ತಿ ವರ್ಷದ ಅಗತ್ಯತೆಗಳ  ತಯಾರಿಯನ್ನು ಪ್ರಾರಂಭದಿಂದಲೇ ಮಾಡಿಕೊಂಡಿರಬೇಕು..
  • ಪಠ್ಯ ವಿಷಯದ ತಾಂತ್ರಿಕ ವಿನ್ಯಾಸ ಮಾಡುವುದು ಅವಶ್ಯಕ. ಮಾಧ್ಯಮಗಳ ಸಮರ್ಪಕ ಬಳಕೆ (ಪಿಕ್ಚರ್ ಕಾರ್ಡ್, ವಿಡಿಯೋ, ಚಾರ್ಟ್ ಇತ್ಯಾದಿ) ಉಪಯುಕ್ತ.
  • ಪ್ರತಿ ವಿದ್ಯಾರ್ಥಿಯ ಸಾಮರ್ಥ್ಯವನ್ನು ಗುರುತಿಸಿ , ಮೃದು ಶೈಕ್ಷಣಿಕ ಮತ್ತು ಪರಿಣಾಮಕಾರಿ ಮುನ್ನಡೆಗೆ ಯೋಜನೆ ರೂಪಿಸಿ.
  • ಡಿಜಿಟಲ್ ಉಪಕರಣಗಳನ್ನು ಕಲಿಕೆಯಲ್ಲಿ ಸಮರ್ಪಕವಾಗಿ ಬಳಸಲು ಅಭ್ಯಾಸ ಮಾಡುವುದರ ಮೂಲಕ ,ತಂತ್ರಜ್ಞಾನವನ್ನು ಪರಿಣಾಮ ಕಾರಿಯಾಗಿ ಬಳಸಿಕೊಳ್ಳುವುದು.
  • ಸ್ಮಾರ್ಟ್ ಬೋರ್ಡ್ ಮತ್ತು ಗೂಗಲ್ ಕ್ಲಾಸ್‌ರೂಂ, ನಂತಹ ತಂತ್ರಜ್ಞಾನಗಳು ಕಲಿಕೆಗೆ  ಹೆಚ್ಚಿನ ಸಹಾಯ ಮಾಡುತ್ತವೆ.
  • ಒತ್ತಡವಿಲ್ಲದ, ಸಮಾನತೆ ಹಾಗೂ ಗೌರವದ ಆಧಾರದ ಮೇಲೆ ವಿದ್ಯಾರ್ಥಿಗಳೊಂದಿಗೆ ಒಂದು ರೀತಿಯ ಸ್ನೇಹಯುತ ಸಂಬಂಧವನ್ನು ನಿರ್ಮಾಣಮಾಡುವುದರ ಮೂಲಕ ಒತ್ತಡ ರಹಿತ ಕಲಿಕೆ ವಿಧಾನವಾಗಬೇಕು.
  • ವಿದ್ಯಾರ್ಥಿಗಳು ಶ್ರಮಪೂರ್ವಕವಾಗಿ ಓದುವ, ತೊಡಗಿಸಿಕೊಳ್ಳುವ ಪರಿಸರವನ್ನು ನಿರ್ಮಿಸಬೇಕು.

ಶಾಲೆಯ ಹೊಸ ವರ್ಷದ ಆರಂಭವು ವಿದ್ಯಾರ್ಥಿಗಳಿಗೆ ಅವಕಾಶಗಳ ಮಹಾಪೂರ , ಪೋಷಕರಿಗೆ ಉಪಸ್ಥಿತಿಯ ಆಧಾರ, ಮತ್ತು ಶಿಕ್ಷಕರಿಗೆ ಪರಿವರ್ತನೆಯ ಶಕ್ತಿಕೇಂದ್ರವಾಗಿದೆ. ಈ ಮೂರು ಕಿಡಿಗೆ ಸಮಾನ ಪ್ರಮಾಣದಲ್ಲಿ ಎಣ್ಣೆ ಹಾಕಿದರೆ ಮಾತ್ರ ವಿದ್ಯೆಯ ದೀಪ ಪ್ರಕಾಶಿಸುತ್ತಿದೆ.

ಎಲ್ಲ  ಮಕ್ಕಳ ಶೈಕ್ಷಣಿಕ ಯಾತ್ರೆಯ ಭಾಗವಾಗಲು ನಿಮ್ಮೆಲ್ಲರಿಗೂ ಶುಭವಾಗಲಿ!

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಕುಮಾರಸುಬ್ರಹ್ಮಣ್ಯ ಮುಳಿಯಾಲ

ಕುಮಾರ ಸುಬ್ರಹ್ಮಣ್ಯ ಮುಳಿಯಾಲ ಅವರು, ಬೆಂಗಳೂರಿನ ಬಯೋ ಕ್ರಾಸ್ ಕೆಮ್, ಎಲ್ಎಲ್ ಪಿ  ಎಂಬ ಔಷಧಿ ಕಂಪೆನಿಯಲ್ಲಿ ಮಾರಾಟ ಮತ್ತು ಮಾರುಕಟ್ಟೆ ವಿಭಾಗದ ನಿರ್ದೇಶಕ. ದ.ಕ. ಜಿಲ್ಲೆಯ ಪುತ್ತೂರಿನ ಸಮೀಪ ಹಿಂದಾರು ಎಂಬಲ್ಲಿ ಅಡಿಕೆ , ತೆಂಗು, ಕರಿಮೆಣಸು ಕೃಷಿ ಭೂಮಿ ಹೊಂದಿದ್ದಾರೆ. ಮೂಲತಃ ಅಡ್ಯನಡ್ಕ ಸಮೀಪದ ಮುಳಿಯಾಲದವರಾಗಿದ್ದು ಕೃಷಿ ಭೂಮಿ ಹೊಂದಿದ್ದು, ಕೃಷಿ ಚಿಂತನೆಗಳನ್ನು ಹೊಂದಿದ್ದಾರೆ.

Published by
ಕುಮಾರಸುಬ್ರಹ್ಮಣ್ಯ ಮುಳಿಯಾಲ

Recent Posts

ಉತ್ತರ ಕರ್ನಾಟಕದಲ್ಲಿ ಬಿಸಿಗಾಳಿ ಅಲರ್ಟ್ | ಎಪ್ರಿಲ್ 15 -17 ರವರೆಗೆ ಆರೆಂಜ್ ಅಲರ್ಟ್ ಘೋಷಣೆ

ಉತ್ತರ ಕರ್ನಾಟಕದ ಐದು ಜಿಲ್ಲೆಗಳಲ್ಲಿ ಏಪ್ರಿಲ್ 15ರಿಂದ 17ರವರೆಗೆ ಬಿಸಿಗಾಳಿ ತೀವ್ರವಾಗುವ ಸಾಧ್ಯತೆ…

4 hours ago

ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಸ್ವಯಂಚಾಲಿತ ಹವಾಮಾನ ಕೇಂದ್ರ ಆರಂಭ

ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಸ್ವಯಂಚಾಲಿತ ಹವಾಮಾನ ಕೇಂದ್ರ ಆರಂಭವಾಗಿದೆ. ಇದು ರೈತರಿಗೆ ನಿಖರ…

5 hours ago

ವನ್ಯಜೀವಿಗಳಿಗೆ ಸಂತಾನಹರಣ ಚಿಂತನೆಗೆ ವಿರೋಧ

ವನ್ಯಜೀವಿಗಳಿಗೆ ಸಂತಾನಹರಣ ಚಿಂತನೆಗೆ ವಿರೋಧಿಸಿ ಚಾಮರಾಜನಗರದಲ್ಲಿ ರೈತರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.…

5 hours ago

ಬಾಳೆಬರೆ ಘಾಟಿಯಲ್ಲಿ ವಾಹನ ಸಂಚಾರ ತಾತ್ಕಾಲಿಕ ನಿಷೇಧ

ಬಾಳೆಬರೆ ಘಾಟಿಯಲ್ಲಿ ಕಾಮಗಾರಿ ಹಿನ್ನೆಲೆ ವಾಹನ ಸಂಚಾರ ತಾತ್ಕಾಲಿಕ ನಿಷೇಧಿಸಲಾಗಿದೆ. ಪ್ರಯಾಣಿಕರು ಪರ್ಯಾಯ…

5 hours ago

ಅಡಿಕೆ ಮಾರುಕಟ್ಟೆಯ ಸ್ಥಿತಿಗತಿ ಮತ್ತು ಬೆಳೆಗಾರರ ಅಭಿಪ್ರಾಯ : ಸಮೀಕ್ಷಾ ವರದಿ

ಅಡಿಕೆ ಮಾರುಕಟ್ಟೆಯಲ್ಲಿ ವರ್ತಕರ ಸಿಂಡಿಕೇಟ್ ಮತ್ತು ವಿದೇಶಿ ಆಮದು ಬೆಲೆ ಅಸ್ಥಿರತೆಗೆ ಕಾರಣವಾಗಿವೆ.…

20 hours ago

ಭಾರತದಲ್ಲಿ ವಿದ್ಯುತ್ ಉತ್ಪಾದನೆಗೆ ಐತಿಹಾಸಿಕ ಏರಿಕೆ : 55 ಗಿಗಾವ್ಯಾಟ್ ಹೆಚ್ಚಳ – ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

ಭಾರತದಲ್ಲಿ ವಿದ್ಯುತ್ ಉತ್ಪಾದನೆ ಸಾಮರ್ಥ್ಯದಲ್ಲಿ ಐತಿಹಾಸಿಕವಾಗಿ 55 ಗಿಗಾವ್ಯಾಟ್ ಹೆಚ್ಚಳವಾಗಿದೆ. ನವೀಕರಿಸಬಹುದಾದ ಇಂಧನ…

20 hours ago