ಪ್ರಮುಖ

ದೀಪಾವಳಿ ಹೀಗೆ ಆಚರಿಸೋಣ | ಈ ದೀಪಗಳಿಂದ ದೀಪ ಹಚ್ಚೋಣ |

Share

ದೀಪಗಳ ಹಬ್ಬ ದೀಪಾವಳಿಗೆ ಹತ್ತಿರ ಬಂದಿದೆ.ಕೆಲವೇ ದಿನಗಳಲ್ಲಿ ಮನೆ ಮನೆಗಳಲ್ಲಿ ದೀಪಾವಳಿಯ ಹಣತೆ ಬೆಳಗಲಿದೆ. ದೀಪದಿಂದ ದೀಪ ಹಚ್ಚುವ ವೇಳೆ ಒಂಚೂರು ಸಾಮಾಜಿಕ ಕಳಕಳಿ, ಕಾಳಜಿ ಇರಲಿ. ಅದಕ್ಕಾಗಿಯೇ ಈ ಪುಟ್ಟ “ದೀಪ”ಗಳು ತಯಾರಿಸಿದ ಹಣತೆಯನ್ನು ಬೆಳಗೋಣ.…..ಮುಂದೆ ಓದಿ….

Advertisement

ದೀಪಾವಳಿ ಹಬ್ಬದ ವೇಳೆ ಹಲವಾರು ಮಂದಿ ಹಣತೆಗಳ ಸಾಲನ್ನು ಇರಿಸಿ ಸಂಭ್ರಮಿಸುತ್ತಾರೆ. ಇಂತಹ ಸಂಭ್ರಮದಲ್ಲಿ ಒಂಚೂರು ಕಾಳಜಿ, ಸಾಮಾಜಿಕ ಕಳಕಳಿ ಇದ್ದರೆ..?. ನಿಜ, ಮಂಗಳೂರಿನ  ಚೇತನ ಬಾಲ ವಿಕಾಸ ಕೇಂದ್ರದ  ವಿಶೇಷಚೇತನ ಮಕ್ಕಳು ತಾವೇ ಸ್ವತ:  ಬಣ್ಣ ಬಳಿದು ಹಣತೆಗಳನ್ನು ಸಿದ್ಧಪಡಿಸುವ ಮೂಲಕ  ಮಾದರಿಯಾಗಿದ್ದಾರೆ. ಆ ದೀಪಗಳನ್ನು ಕೊಂಡುಕೊಳ್ಳುವ ಮೂಲಕ  ಆ ಮಕ್ಕಳ ಕುಶಲತೆಗೆ ಪ್ರೋತ್ಸಾಹ ನೀಡುವ ಅಗತ್ಯವಿದೆ.…..ಮುಂದೆ ಓದಿ….

ಮಂಗಳೂರು ನಗರದ ಕೊಡಿಯಾಲ್ ಬೈಲ್ ಸೇವಾಭಾರತಿ ಸಂಸ್ಥೆ ನಿರ್ವಹಿಸುತ್ತಿರುವ ಚೇತನ ಬಾಲ ವಿಕಾಸ ಕೇಂದ್ರದ ವಿಶೇಷಚೇತನ ಮಕ್ಕಳು ಬಣ್ಣದ ಬಣ್ಣದ ಹಣತೆಗಳನ್ನು ಸಿದ್ಧಪಡಿಸುತ್ತಿದ್ದು, ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಗುರುಗಳು ಹಾಗೂ ಮಾರ್ಗದರ್ಶಕರ ಸಹಾಯದಿಂದ ಈ ಮಕ್ಕಳು ಮಣ್ಣಿನ ದೀಪಗಳಿಗೆ ತಮ್ಮಿಷ್ಟದ ಬಣ್ಣಗಳನ್ನು ಬಳಿದು ಹಣತೆಗಳನ್ನು ತಯಾರಿಸುತ್ತಾರೆ. ಹೇಗೂ ದೀಪಾವಳಿಯ ವೇಳೆ ಹಣತೆ ಖರೀದಿ ಮಾಡುವ ವೇಳೆ ಒಂಚೂರು ಈ ಮುಗ್ದ ಮಕ್ಕಳ ಪ್ರೀತಿಯ ಬೆಲೆ ನೀಡಿದರೆ..? ಈ ಬಗ್ಗೆ ಯೋಚಿಸಿ. ಈ ಮುಗ್ದ ಮನಸ್ಸುಗಳು ಪ್ರೀತಿಯಿಂದ ತಯಾರಿಸಿದ  ಹಣತೆಗಳನ್ನು ಖರೀದಿಸುವ ಮೂಲಕ ವಿಶೇಷಚೇತನ ಮಕ್ಕಳನ್ನು ಪ್ರೋತ್ಸಾಹಿಸಿದಂತಾಗುತ್ತದೆ.…..ಮುಂದೆ ಓದಿ….

ಈ ಕೇಂದ್ರದಲ್ಲಿ 25 ವರ್ಷ ಮೇಲ್ಪಟ್ಟ ಸುಮಾರು 30 ವಿಶೇಷಚೇತನ ಮಕ್ಕಳಿದ್ದು, ಅವರು ಹಣತೆಗಳಿಗೆ ನಾಜೂಕಾಗಿ ಬಣ್ಣ ಬಳಿಯುತ್ತಾರೆ. ಅವರು ತಯಾರಿಸುವ ಉತ್ಪನ್ನಗಳಿಗೆ ಎಲ್ಲೆಲ್ಲೂ ಬೇಡಿಕೆ ಇದೆ. ಮುಂಬೈನಿಂದ ಮಣ್ಣಿನ ಹಣತೆಗಳನ್ನು ತಂದು ಅವುಗಳಿಗೆ ಬಣ್ಣ ಬಳಿದು ವಿವಿಧ ಚಿತ್ತಾರ ಮೂಡಿಸಲಾಗುತ್ತದೆ. ತಾವರೆ, ತುಳಸಿಕಟ್ಟೆ, ಮಾವು ಇತ್ಯಾದಿ ಶೈಲಿಯಲ್ಲಿ ಹಣತೆಗಳು ಇಲ್ಲಿ ಲಭ್ಯ. ಓರ್ವ ವಿಶೇಷಚೇತನ ವಿದ್ಯಾರ್ಥಿ ದಿನವೊಂದಕ್ಕೆ 25 ಹಣತೆಗಳನ್ನು ಶೃಂಗರಿಸಬಲ್ಲರು.

ಈ ದೇಶದ ಪ್ರಧಾನಿಗಳ ಕನಸಿನಂತೆ, ಕೌಶಲ್ಯಾಭಿವೃದ್ಧಿ, ಸ್ಟಾರ್ಟ್ಅಪ್, ಆತ್ಮನಿರ್ಭರ ಭಾರತ ಎನ್ನುವ ಮಾತಿನಿಂದ ಪ್ರೇರಣೆ ಪಡೆದು ನಮ್ಮ ಶಾಲೆಯ ವಿಶೇಷ ಸಾಮರ್ಥ್ಯದ ಮಕ್ಕಳ ಪ್ರತಿಭೆ ಹೊರಹಾಕಲು ವಿವಿಧ ಕಾರ್ಯಕ್ರಮ ಆಯೋಜಿಸುತ್ತೇವೆ, ಈ ಬಾರಿ ನಮ್ಮ ಮಕ್ಕಳೇ ಹಣತೆಗಳಿಗೆ ಬಣ್ಣ ಹಚ್ಚಿ ದೀಪಾವಳಿ ಆಚರಿಸುತ್ತಿದ್ದಾರೆ‌ ಎಂದು ಚೇತನ ಸಂಸ್ಥೆಯ ಕಾರ್ಯದರ್ಶಿ ನಾಗರಾಜ್ ಭಟ್ ಹೇಳುತ್ತಾರೆ.…..ಮುಂದೆ ಓದಿ….

ಮೊದಲು ಮಕ್ಕಳಿಗೆ ತರಬೇತಿ ಇರುತ್ತದೆ, ಯಾವ ಮಗು ಏನು ಮಾಡುತ್ತದೆ ಎನ್ನುವುದನ್ನು ಅವರ ಜೊತೆ ಕೆಲಸ ಮಾಡುತ್ತಾ ನೋಡಿಕೊಂಡು ನಂತರ ಬಣ್ಣ ಹಚ್ಚುವುದು ಇತ್ಯಾದಿ ಕೆಲಸ ನೀಡಲಾಗುತ್ತದೆ. ಆಗಸ್ಟ್‌ ತಿಂಗಳಿನಿಂದ ಈ ಕೆಲಸ ಆರಂಭವಾಗುತ್ತದೆ. ಹಣತೆ ಹಾಗೂ ಕ್ಯಾಂಡಲ್‌ ಕೆಲವು ವರ್ಷದ ಹಿಂದೆಯೇ ಮಾಡುತ್ತಿದ್ದರು. ಆದರೆ ಈಚೆಗೆ ಹಣತೆಗೆ ಬೇಡಿಕೆ ಇರುವುದರಿಂದ ಈಗ ಹಣತೆಗೇ ಆದ್ಯತೆ ನೀಡಲಾಗುತ್ತಿದೆ. ಇದರ ಜೊತೆಗೆ ಶಾಲೆ ಮಕ್ಕಳು ಪೇಪರ್ ಬ್ಯಾಗ್ ತಯಾರಿಕೆ, ಮಣ್ಣಿನ ದೀಪಗಳಿಗೆ ಬಣ್ಣ ಹಚ್ಚುವ ಕೆಲಸ ಮಾಡುತ್ತಾರೆ. ಈ ಹಣತೆಗಳಿಗೆ ಬೇಡಿಕೆಯೂ ಇದ್ದು ಹೊರರಾಜ್ಯಗಳಿಗೆ ಸರಬರಾಜು ಮಾಡಲಾಗುತ್ತಿದೆ ಎಂದು ಹೇಳುತ್ತಾರೆ ಸಂಸ್ಥೆಯ ಶಿಕ್ಷಕಿ ಮೀನಾಕ್ಷಿ.

ಚೇತನ ಸಂಸ್ಥೆಯ ಮಕ್ಕಳು ದೀಪಾವಳಿಗೆ ಬಣ್ಣ ಬಣ್ಣದ ಹಣತೆಗಳನ್ನು ರಚಿಸಿದ್ದು, ಇದು ಅವರ ಬಾಳಿನಲ್ಲೂ ಕತ್ತಲಿನಿಂದ ಬೆಳಕಿನೆಡೆಗೆ ಸಾಗುವಂತಾಗಬೇಕು ಎಂಬುದು ನಮ್ಮ ಅಭಿಲಾಷೆ ಎನ್ನುತ್ತಾರೆ ಪೋಷಕರಾದ ಲಕ್ಷ್ಮೀ ಪ್ರಭು.

ವಿಶೇಷ ಚೇತನ ಮಕ್ಕಳು  ತಯಾರಿಸಿದ ಈ ಹಣತೆಯನ್ನು ಖರೀದಿ ಮಾಡುವ ಮೂಲಕ ಮಕ್ಕಳಿಗೂ , ಮಕ್ಕಳ ಶ್ರಮಕ್ಕೂ ಬೆಲೆ ನೀಡಿದಂತಾಗುತ್ತದೆ. ಅದಲ್ಲದೆ, ದೀಪಾವಳಿಯೂ ಒಂದಷ್ಟು ಮಂದಿಗೆ ಬೆಳಕು ನೀಡಲು ಸಾಧ್ಯವಾಗುತ್ತದೆ.

ಸಂಪರ್ಕ : 8867875294

ನಿಮ್ಮ ಅಭಿಪ್ರಾಯ-ಶುಭಾಶಯ ಇಲ್ಲಿ ಹೇಳಿ…

The special children at Chetana BalaVikas Kendra, managed by Sevabharati organization, Kodiyalbail  in Mangalore city, are creating and selling colored clay lamps at affordable prices. With the assistance of their teachers and mentors, these children paint clay lamps in their preferred colors and produce the clay lamps. Consider the impact on these innocent children when purchasing  clay lamps during Dipavali. Imagine the positive influence on these young minds when they receive lovingly crafted clay lamps as gifts. diwali 2024

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ವಿಶೇಷ ಪ್ರತಿನಿಧಿ

ರೂರಲ್‌ ಮಿರರ್‌ ವಿಶೇಷ ಪ್ರತಿನಿಧಿ.

Published by
ವಿಶೇಷ ಪ್ರತಿನಿಧಿ

Recent Posts

ಹವಾಮಾನ ವರದಿ | 06-04-2025 | ಕೆಲವು ಕಡೆ ಸಾಮಾನ್ಯ ಮಳೆ ನಿರೀಕ್ಷೆ | ಎ.7 ರಿಂದ ಮಳೆಯ ಪ್ರಮಾಣ ಕಡಿಮೆ |

ರಾಜ್ಯದಲ್ಲಿ ಈಗಿನಂತೆ ಎಪ್ರಿಲ್ 7 ರಿಂದ ಮಳೆ ಕಡಿಮೆಯಾಗುವ ಲಕ್ಷಣಗಳಿದ್ದು, ಎಪ್ರಿಲ್ 9…

28 minutes ago

ಒಂದೆಡೆ ಮಳೆ-ಇನ್ನೊಂದೆಡೆ ಹೀಟ್‌ವೇವ್‌ | ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ

ಏಪ್ರಿಲ್ 7 ರಿಂದ 9 ರವರೆಗೆ ಪೂರ್ವ ಭಾರತದಲ್ಲಿ ಗುಡುಗು ಮತ್ತು ಮಿಂಚಿನೊಂದಿಗೆ…

8 hours ago

ಮ್ಯಾನ್ಮಾರ್‌ನ ಭೂಕಂಪ | ಭಾರತೀಯ ಸೇನಾ ಆಸ್ಪತ್ರೆಯಲ್ಲಿ 700 ಕ್ಕೂ ಅಧಿಕ ರೋಗಿಗಳಿಗೆ ಚಿಕಿತ್ಸೆ

ಮ್ಯಾನ್ಮಾರ್‌ ಭೂಕಂಪದ ಬಳಿಕ ವಿವಿಧ ರೀತಿಯಲ್ಲಿ ಭಾರತವು ನೆರವು ನೀಡುತ್ತಿದೆ. ಇದುವರೆಗೆ ಭಾರತೀಯ ಸೇನಾ…

9 hours ago

ಮಾನವ-ಆನೆ ಸಂಘರ್ಷ ತಡೆಗೆ ಕ್ರಮ | 200 ಕೋ. ರೂ. ವೆಚ್ಚದ ರೈಲ್ವೆ ಬ್ಯಾರಿಕೇಡ್ ಕಾಮಗಾರಿ

ರಾಜ್ಯದಲ್ಲಿ 6395 ಆನೆಗಳಿದ್ದು, ಕೊಡಗು, ಚಿಕ್ಕಮಗಳೂರು, ಹಾಸನ ಜಿಲ್ಲೆಯಲ್ಲಿ ಕಾಫಿ ತೋಟಗಳಲ್ಲಿ ನೂರಾರು…

10 hours ago

ಬೃಹಸ್ಪತಿ ಅಂದರೆ ಜ್ಞಾನವಂತ

ಬದುಕಿನ ದೀವಿಗೆ ಜ್ಞಾನ. ಅದು ಜ್ಞಾನ ದೀವಿಗೆ. ಜ್ಞಾನಕ್ಕೆ ಮುಪ್ಪಿಲ್ಲ, ಸಾವಿಲ್ಲ. ಅದು…

11 hours ago

ಪಶು ಸಖಿಯರ ಮಾಸಿಕ ಗೌರವಧನ ಹೆಚ್ಚಳ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ

ರಾಜ್ಯದಲ್ಲಿ 1 ಕೋಟಿ ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದು, ಬೇಸಿಗೆಯಲ್ಲಿ 89 ಲಕ್ಷ ಲೀಟರ್‌ಗೆ…

12 hours ago