Advertisement
MIRROR FOCUS

ಪುತ್ತೂರಿನಲ್ಲಿ ಹಲಸು ಹಣ್ಣು ಮೇಳ | ಸಮಗ್ರ ಕೃಷಿ ಉದ್ಯಮಶೀಲತೆಗೆ ಪ್ರೋತ್ಸಾಹ ಹಾಗೂ ಪ್ರಚಾರ ನೀಡುವ ಉದ್ದೇಶ

Share

ಹಲಸು(Jack Fruit) ಹಾಗು ಪ್ರದೇಶದ ಇತರ ಸಕಾಲಿಕ ಹಣ್ಣುಗಳ(Fruit) ಕೃಷಿಗೆ(Agriculture) ಮತ್ತು ಕೃಷಿಕರಿಗೆ, ಹಣ್ಣು ಸಂಸ್ಕರಣೆ ಹಾಗು ಮೌಲ್ಯವರ್ಧನೆಗೆ, ಸಾಂಪ್ರದಾಯಿಕ ಹಣ್ಣು, ಅಡುಗೆ, ಆಹಾರ, ಅದರ ಜತೆಗೆ ಸಮಗ್ರ ಕೃಷಿ ಉದ್ಯಮಶೀಲತೆಗೆ(Business) ಪ್ರೋತ್ಸಾಹ ಹಾಗೂ ಪ್ರಚಾರ ನೀಡುವ ಉದ್ದೇಶದಿಂದ ನವತೇಜ, ಪುತ್ತೂರು(Puttur) ಸ್ಥಳೀಯ ಪ್ರಗತಿಪರ ಸಂಸ್ಥೆಗಳ ಸಹಭಾಗಿತ್ವದಲ್ಲಿ ಪ್ರತಿ ವರ್ಷ ನಡೆಸಿಕೊಂಡು ಬರುತ್ತಾ ಇರುವ ಹಲಸು ಹಣ್ಣು ಮೇಳದ(Jack Fruit Mela) ಏಳನೇ ಆವೃತ್ತಿ ಇದೇ ಮೇ ತಿಂಗಳ 24-25-26 ರಂದು ಪುತ್ತೂರಿನ ಜೈನ ಭವನದಲ್ಲಿ ನಡೆಯಲಿದೆ.

ಈ ಮೂರು ದಿನಗಳ ಹಣ್ಣು ಮೇಳದಲ್ಲಿ ವಿವಿಧ ಹಣ್ಣುಗಳ ಗಿಡಗಳು, ಪ್ರಾದೇಶಿಕ ಹಾಗು ದೇಸಿ ವಿದೇಶಿ ಹಣ್ಣುಗಳ ಪ್ರದರ್ಶನ ಹಾಗು ಮಾರಾಟ, ಹಣ್ಣು ಹಾಗು ಕೃಷಿ ಉದ್ಯಮ, ಸ್ವಾದಿಷ್ಟ ಆಹಾರ ಮೇಳ ಹೀಗೆ ಸುಮಾರು 60 ವಿವಿಧ ಮಳಿಗೆಗಳು ಇರಲಿವೆ. ಸೀಮಿತ ಸ್ಥಳ, ಉತ್ತಮ ವ್ಯವಸ್ಥೆ ಎರಡನ್ನೂ ಗಮನ ಇಟ್ಟುಕೊಂಡು ನಿಯಮಿತ ಮಳಿಗೆಗಳ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮದ ಉದ್ದೇಶ ಆಧಾರದಲ್ಲಿ ಹಲಸು – ಹಣ್ಣು – ಕೃಷಿ – ಆಹಾರ ಸಂಬಂಧ ಉದ್ಯಮ ಪ್ರಸ್ತುತಿಗಳಿಗೆ ಪ್ರಾಶಸ್ತ್ಯ ಆಧಾರದಲ್ಲಿ ಹಂಚಿಕೆ ಮಾಡಲಾಗುತ್ತದೆ.

ಈಗಾಗಲೇ ಹಂತ ಹಂತವಾಗಿ ಸ್ಥಳೀಯ ಸಮುದಾಯದಲ್ಲಿ ಉತ್ತಮ ಪ್ರಚಾರ ಪಡೆಯುತ್ತಾ, ಸಾರ್ವಜನಿಕರ ಪ್ರೋತ್ಸಾಹ ಹೆಚ್ಚುತ್ತಾ ಬೆಳೆದಿರುವ ಹಲಸು ಹಣ್ಣು ಮೇಳಕ್ಕೆ ಈ ವರ್ಷ ಇನ್ನೂ ಉತ್ತಮ ರೀತಿಯ ಸಾರ್ವಜನಿಕ ಸ್ಪಂದನೆ ನಿರೀಕ್ಷೆ ಇಟ್ಟುಕೊಂಡಿದ್ದೇವೆ. ಅದಕ್ಕೆ ಪೂರಕ ಸಿದ್ಧತೆ, ಪ್ರಚಾರ ಮಾಡುತ್ತಾ ಇದ್ದೇವೆ. ಮೇಳದಲ್ಲಿ ಭಾಗವಹಿಸಲು ಇಚ್ಛಿಸುವವರು ಮಳಿಗೆಗಳ ಮಾಹಿತಿ ಹಾಗು ಖಚಿತ ಮಾಡುವ ಬಗ್ಗೆ ಕೂಡಲೇ ಸುಹಾಸ್ ಮರಿಕೆ 948-053-5708 ಅವರನ್ನು ಸಂಪರ್ಕಿಸಬೇಕು ಎಂದು ವಿನಂತಿ.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ದಕ್ಷಿಣ ಕನ್ನಡದಲ್ಲಿ ಉಷ್ಣಾಂಶ ಏರಿಕೆ | ಬಿಸಿಲ ಬೇಗೆಯಿಂದ ತಪ್ಪಿಸಿಕೊಳ್ಳಲು ಆರೋಗ್ಯಾಧಿಕಾರಿ ಎಚ್ಚರಿಕೆ

ದಕ್ಷಿಣ ಕನ್ನಡದಲ್ಲಿ ಉಷ್ಣಾಂಶ ಏರಿಕೆಯಾಗುತ್ತಿರುವ ಹಿನ್ನೆಲೆ ಮುಂಜಾಗೃತಾ ಕ್ರಮ ಅಗತ್ಯವಾಗಿದೆ. ನೀರು ಹೆಚ್ಚು…

25 minutes ago

ಕೃಷಿಕರ ಜೀವನಾಡಿ ‘ಕ್ಯಾಂಪ್ಕೊ’ ವಿಟ್ಲ ಶಾಖೆಗೆ ನೂತನ ಕಟ್ಟಡ | ಮಾರ್ಚ್ 27ರಂದು ಶಂಕುಸ್ಥಾಪನೆ

ವಿಟ್ಲದಲ್ಲಿ ₹12 ಕೋಟಿ ವೆಚ್ಚದ ಕ್ಯಾಂಪ್ಕೊ ನೂತನ ಕಟ್ಟಡಕ್ಕೆ ಮಾರ್ಚ್ 27ರಂದು ಶಂಕುಸ್ಥಾಪನೆ…

40 minutes ago

ಕೃಷಿಗೆ ಹವಾಮಾನ ಅಪಾಯ ಹೆಚ್ಚಳ | ರೈತರಿಗೆ ಕಠಿಣ ಕಾಲ ಬರುವ ಸೂಚನೆ ? ದೇಶದ 310 ಜಿಲ್ಲೆಗಳು ಅಪಾಯ ವಲಯದಲ್ಲಿ..!

ದೇಶದ 651 ಜಿಲ್ಲೆಗಳ ಹವಾಮಾನ ಅಪಾಯ ಮೌಲ್ಯಮಾಪನದಲ್ಲಿ 310 ಜಿಲ್ಲೆಗಳು ಹೆಚ್ಚು ದುರ್ಬಲವೆಂದು…

1 day ago

ಹವಾಮಾನ ವರದಿ | 25.03.2026 | ಕರಾವಳಿಯಲ್ಲಿ ಇಂದು ಸಂಜೆ ಮಳೆ ಸಾಧ್ಯತೆ | ಏಪ್ರಿಲ್‌ 5ರವರೆಗೆ ಬೇಸಿಗೆ ಮಳೆ ಸಕ್ರಿಯ!

26.03.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ರಾಜ್ಯದ ವಿವಿಧ…

2 days ago

ಹವಾಮಾನ ವರದಿ | 24-03-2026 | ಕರ್ನಾಟಕದಲ್ಲಿ ಮತ್ತೆ ಮಳೆ ಅಲರ್ಟ್‌ | ಈ ದಿನದಿಂದ ಮಳೆ ವ್ಯಾಪ್ತಿ ಹೆಚ್ಚಳ ಸಾಧ್ಯತೆ..!

ರಾಜ್ಯದ ಹಲವು ಭಾಗಗಳಲ್ಲಿ ಸಂಜೆ ಗುಡುಗು ಸಹಿತ ಮಳೆಯ ಸಾಧ್ಯತೆ ಮುಂದುವರಿದಿದೆ. ಮಾರ್ಚ್‌…

3 days ago