ಶಿರಾಡಿ ಘಾಟಿಯಲ್ಲಿ ವಾರಾಂತ್ಯದ ಟ್ರಾಫಿಕ್‌ ಜಾಮ್‌ಗೆ ಬ್ರೇಕ್‌ ಯಾವಾಗ? ಶಿರಾಡಿ ಘಾಟಿಗೆ ವಿಶೇಷ ಸಂಚಾರ ಯೋಜನೆ ಜಾರಿ ಅಗತ್ಯ

July 1, 2026
7:52 AM
ಶಿರಾಡಿ ಘಾಟಿಯಲ್ಲಿ ಪ್ರತಿ ವಾರಾಂತ್ಯ ಉಂಟಾಗುತ್ತಿರುವ ಟ್ರಾಫಿಕ್‌ ಜಾಮ್‌ಗೆ ವಿಶೇಷ ಸಂಚಾರ ನಿರ್ವಹಣಾ ಯೋಜನೆ ಜಾರಿಗೆ ತರಬೇಕೆಂಬ ಒತ್ತಾಯ ಹೆಚ್ಚುತ್ತಿದೆ. ಭಾರೀ ವಾಹನಗಳಿಗೆ ಸಮಯ ಮಿತಿ ಹಾಗೂ ಹೆಚ್ಚುವರಿ ಪೊಲೀಸ್‌ ನಿಯೋಜನೆ ಮಾಡಿದರೆ ಸಮಸ್ಯೆ ಬಹುತೇಕ ಕಡಿಮೆಯಾಗುವ ಸಾಧ್ಯತೆ ಇದೆ.

ಮಂಗಳೂರು–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಶಿರಾಡಿ ಘಾಟಿಯಲ್ಲಿ ಪ್ರತಿ ವಾರಾಂತ್ಯ ಮರುಕಳಿಸುತ್ತಿರುವ ಟ್ರಾಫಿಕ್‌ ಜಾಮ್‌ ಸಮಸ್ಯೆ ಈಗ ಗಂಭೀರ ಸ್ವರೂಪ ಪಡೆಯುತ್ತಿದೆ. ಶನಿವಾರ ಹಾಗೂ ಭಾನುವಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಮತ್ತು ಧರ್ಮಸ್ಥಳಕ್ಕೆ ಭೇಟಿ ನೀಡಿ ಮರಳುವ ವಾಹನಗಳ ಸಂಖ್ಯೆ ಹೆಚ್ಚಾಗುವುದರಿಂದ ಘಾಟಿಯಲ್ಲಿ ಗಂಟೆಗಟ್ಟಲೆ ವಾಹನಗಳು ಸಾಲುಗಟ್ಟಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.

Advertisement

ಕಳೆದ ಕೆಲವು ವಾರಗಳಲ್ಲಿ ಹಲವು ಪ್ರಯಾಣಿಕರು ಇದೇ ಅನುಭವವನ್ನು ಹಂಚಿಕೊಂಡಿದ್ದು, ಸ್ಥಳೀಯರು ಹಾಗೂ ವಾಹನ ಚಾಲಕರ ಪ್ರಕಾರ ಇದು ಹೊಸ ಸಮಸ್ಯೆಯಲ್ಲ. “ಪ್ರತಿ ವಾರವೂ ಶನಿವಾರ ಮತ್ತು ಭಾನುವಾರ ಇದೇ ಪರಿಸ್ಥಿತಿ ಎದುರಾಗುತ್ತಿದೆ” ಎಂಬುದು ಅವರ ಅಭಿಪ್ರಾಯವಾಗಿದೆ.

Advertisement

ಘಾಟಿ ರಸ್ತೆಯಲ್ಲಿ ಲಾರಿಗಳು ಹಾಗೂ ಟ್ಯಾಂಕರ್‌ಗಳಂತಹ ಭಾರೀ ವಾಹನಗಳು ನಿಧಾನವಾಗಿ ಚಲಿಸುವುದು ಸಹಜ. ಇದೇ ಸಮಯದಲ್ಲಿ ಸಾವಿರಾರು ಕಾರುಗಳು, ಬಸ್‌ಗಳು ಮತ್ತು ಪ್ರವಾಸಿ ವಾಹನಗಳು ಸೇರಿಕೊಳ್ಳುವುದರಿಂದ ಸಂಚಾರ ಸಂಪೂರ್ಣವಾಗಿ ನಿಧಾನಗತಿಯಾಗುತ್ತದೆ. ಒಂದು ಬಾರಿ ವಾಹನಗಳ ಸಾಲು ಆರಂಭವಾದರೆ, ನಂತರ ಕೆಲವರು ನಿಯಮ ಉಲ್ಲಂಘಿಸಿ ಮುಂದೆ ನುಗ್ಗಲು ಯತ್ನಿಸುವುದರಿಂದ ಟ್ರಾಫಿಕ್‌ ಜಾಮ್‌ ಇನ್ನಷ್ಟು ತೀವ್ರಗೊಳ್ಳುತ್ತದೆ.

Advertisement

ಇದರ ಪರಿಣಾಮವಾಗಿ ಘಾಟಿ ಏರುವ ವಾಹನಗಳು ಮಾತ್ರವಲ್ಲದೆ, ಇಳಿಯುವ ವಾಹನಗಳೂ ಗಂಟೆಗಟ್ಟಲೆ ರಸ್ತೆಯಲ್ಲೇ ಸಿಲುಕಿಕೊಳ್ಳುತ್ತವೆ. ಹಲವಾರು ಸಂದರ್ಭಗಳಲ್ಲಿ ಈ ಸಂಚಾರ ದಟ್ಟಣೆ ಶಿರಾಡಿಯಿಂದ ಹಾಸನದವರೆಗೂ ಪರಿಣಾಮ ಬೀರುತ್ತಿದೆ ಎಂಬುದು ಪ್ರಯಾಣಿಕರ ಅನುಭವವಾಗಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಫಾಲೋಮಾಡಲು ಇಲ್ಲಿ ಕ್ಲಿಕ್‌ ಮಾಡಿ

ಪೊಲೀಸ್‌ ನಿಯಂತ್ರಣದ ಕೊರತೆ? :  ವಾರಾಂತ್ಯ ಹಾಗೂ ರಜಾ ದಿನಗಳಲ್ಲಿ ಘಾಟಿಯ ಪ್ರಮುಖ ಸ್ಥಳಗಳಲ್ಲಿ ಸಮರ್ಪಕ ಪೊಲೀಸ್‌ ನಿಯೋಜನೆ ಇಲ್ಲದಿರುವ ಬಗ್ಗೆ ಹಲವು ವಾಹನ ಚಾಲಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ರಸ್ತೆ ಬದಿಯಲ್ಲಿ ಅನಿಯಂತ್ರಿತ ವಾಹನ ನಿಲುಗಡೆ, ಸಾಲು ಮುರಿದು ಮುಂದೆ ಸಾಗುವ ಪ್ರಯತ್ನಗಳು ಮತ್ತು ಸಂಚಾರ ನಿಯಂತ್ರಣದ ಕೊರತೆ ಜಾಮ್‌ ಮತ್ತಷ್ಟು ಹೆಚ್ಚಲು ಕಾರಣವಾಗುತ್ತಿದೆ.

Advertisement

 

View this post on Instagram

 

Advertisement

A post shared by Rural Mirror (@theruralmirror)

Advertisement

ಶಿರಾಡಿ ಘಾಟಿ ಕೇವಲ ಒಂದು ಘಾಟಿ ರಸ್ತೆ ಅಲ್ಲ. ಕರಾವಳಿ ಕರ್ನಾಟಕವನ್ನು ರಾಜ್ಯ ರಾಜಧಾನಿಯೊಂದಿಗೆ ಸಂಪರ್ಕಿಸುವ ಪ್ರಮುಖ ಜೀವನಾಡಿ. ವಾರಾಂತ್ಯದ ಟ್ರಾಫಿಕ್‌ ಸಮಸ್ಯೆ ಈಗ ಸಾಮಾನ್ಯ ತೊಂದರೆಯಲ್ಲ. ಪ್ರವಾಸೋದ್ಯಮ, ಧಾರ್ಮಿಕ ಯಾತ್ರೆ, ವ್ಯಾಪಾರ, ಸಾರ್ವಜನಿಕ ಸಾರಿಗೆ ಹಾಗೂ ತುರ್ತು ಸೇವೆಗಳ ಮೇಲೂ ಇದು ಪರಿಣಾಮ ಬೀರುತ್ತಿದೆ. ಹೀಗಾಗಿ ಈಗ ಅಗತ್ಯವಿರುವುದು ದೂರದೃಷ್ಟಿಯ ಸಂಚಾರ ನಿರ್ವಹಣೆ. ವಾರಾಂತ್ಯದ ವಿಶೇಷ ಟ್ರಾಫಿಕ್‌ ಯೋಜನೆಯನ್ನು ಸರ್ಕಾರ ಹಾಗೂ ಸಂಬಂಧಿತ ಇಲಾಖೆಗಳು ತಕ್ಷಣ ಜಾರಿಗೆ ತಂದರೆ ಸಾವಿರಾರು ಪ್ರಯಾಣಿಕರಿಗೆ ಅನುಕೂಲವಾಗಲಿದೆ

ಏನು ಮಾಡಬಹುದು? – ಸಾಧ್ಯ ಪರಿಹಾರಗಳು

Advertisement
  • ಶನಿವಾರ, ಭಾನುವಾರ ಹಾಗೂ ರಜಾ ದಿನಗಳಲ್ಲಿ ಶಿರಾಡಿ, ಗುಂಡ್ಯ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ವಿಶೇಷ ಪೊಲೀಸ್‌ ನಿಯೋಜನೆ.
  • ವಾರಾಂತ್ಯದಲ್ಲಿ ವಾಹನಗಳಿಗಾಗಿ ಪ್ರತ್ಯೇಕ ಸಂಚಾರ ನಿರ್ವಹಣಾ ಯೋಜನೆ ಜಾರಿ.
  • ಸಾಲು ಮುರಿದು ಮುಂದೆ ಸಾಗುವ ವಾಹನಗಳ ವಿರುದ್ಧ ಒಂದೆರಡು ಕಟ್ಟುನಿಟ್ಟಿನ ದಂಡ.
  • ರಸ್ತೆ ಬದಿಯ ಅನಧಿಕೃತ ಪಾರ್ಕಿಂಗ್‌ಗೆ ಸಂಪೂರ್ಣ ನಿರ್ಬಂಧ.
  • ಶನಿವಾರ ಹಾಗೂ ಭಾನುವಾರ ಮಧ್ಯಾಹ್ನದಿಂದ ಸಂಜೆ 7 ಗಂಟೆಯವರೆಗೆ ಲಾರಿಗಳು, ಟ್ಯಾಂಕರ್‌ಗಳು ಸೇರಿದಂತೆ ಭಾರೀ ವಾಹನಗಳ ಸಂಚಾರಕ್ಕೆ ತಾತ್ಕಾಲಿಕ ನಿರ್ಬಂಧ ಅಥವಾ ಸಮಯ ಮಿತಿ ವಿಧಿಸುವ ಬಗ್ಗೆ ಸರ್ಕಾರ ಪರಿಶೀಲನೆ ನಡೆಸಬೇಕು.
  • ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ವಾರಾಂತ್ಯದ ಟ್ರಾಫಿಕ್‌ ನಿರ್ವಹಣಾ ಯೋಜನೆ ರೂಪಿಸಬೇಕು.
  • ಲೈವ್ ಟ್ರಾಫಿಕ್‌ ಸ್ಥಿತಿಯ ಬಗ್ಗೆ ಗುಂಡ್ಯ ಹಾಗೂ ಸಕಲೇಶಪುರದಲ್ಲಿ ಡಿಜಿಟಲ್‌ ಮಾಹಿತಿ ಫಲಕಗಳು ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ನೇರ ಮಾಹಿತಿ ನೀಡಬೇಕು.

ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಫಾಲೋಮಾಡಲು ಇಲ್ಲಿ ಕ್ಲಿಕ್‌ ಮಾಡಿ

Advertisement

Weekend traffic congestion on the Shiradi Ghat stretch of NH-75 has become a recurring problem due to the combined movement of pilgrims, tourists and heavy vehicles. A dedicated weekend traffic management plan, increased police deployment and time restrictions for heavy vehicles could significantly ease congestion and improve road safety.

Advertisement

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

ಇದನ್ನೂ ಓದಿ

ಯುವಕರ ಮೊದಲ ಆದ್ಯತೆ ಏನಿರಬೇಕು? ರಾಜಕೀಯವಲ್ಲ, ಆರ್ಥಿಕ ಸ್ವಾವಲಂಬನೆ!
July 15, 2026
9:49 PM
by: ಅರುಣ್‌ ಕುಮಾರ್ ಕಾಂಚೋಡು
ಹವಾಮಾನ ವರದಿ | 15-07-2026 | ರಾಜ್ಯದಲ್ಲಿ ಮಳೆ ಯಾಕೆ ಕಡಿಮೆಯಾಗಿದೆ ? ಜುಲೈ 16 ರಿಂದ ಎಲ್ಲೆಲ್ಲಿ ಮಳೆ ಆರಂಭವಾಗಲಿದೆ?
July 15, 2026
2:10 PM
by: ಸಾಯಿಶೇಖರ್ ಕರಿಕಳ
ಕರ್ನಾಟಕದ ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್…! ಕಾರಣ..?
July 15, 2026
7:02 AM
by: ದ ರೂರಲ್ ಮಿರರ್.ಕಾಂ
ಕಸದ ತೆಂಗಿನಕಾಯಿಯೂ ಈಗ ರೈತರ ಸಂಪತ್ತು…! ಭುವನೇಶ್ವರದ ‘ವೇಸ್ಟ್ ಟು ವೆಲ್ತ್’ ಮಾದರಿ
July 14, 2026
7:12 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror