ಸಾಕು ಪ್ರಾಣಿಗಳಿಗೆ,ಪಶುಗಳಿಗೆ,ಮನುಷ್ಯರಿಗೆ ಸಂಕಟ ಬಂದಾಗ ದೈವ-ದೇವರನ್ನು ನೆನಪಾಗುತ್ತದೆ. ಇಲ್ಲೂ ಹಾಗೆ, ಏನಾದರೂ ಸಂಕಟವಾದರೆ ತಕ್ಷಣ ನೆನಪಾಗುವುದು ಈ ದೈವ. ಹೀಗಾಗಿ ಇಲ್ಲಿ ಜೋಡಿ ದೈವಗಳಿಗೆ ಕೋಳಿ ಹಾರಿಸುದಾಗಿ ಪ್ರಾಥಿ೯ಸಿದರೆ ಸಂಕಷ್ಠ ದೂರವಾಗುವುದೆಂದು ನಂಬಿಕೆ ಇದೆ. ಈ ವಿಶೇಷವಾದ ದೈವದ ಕೋಲ ನಡೆಯುವುದು ಶಿಶಿಲೇಶ್ವರ ದೇವರ ಜಾತ್ರಾ ಸಮಯದಲ್ಲಿ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶಿಶಿಲೇಶ್ವರ ದೇವರ ಜಾತ್ರಾ ಸಮಯದಲ್ಲಿ ಕಿಲಮರಿತ್ತಾಯ ಜೋಡು ನೇಮವು ವೈಶಿಷ್ಟ್ಯವನ್ನು ಪಡೆದಿದೆ. ಜಾತ್ರಾ ಆರಂಭದ ದಿನ ಹಾಗೂ ಮರುದಿನ ಈ ನೇಮೋತ್ಸವ ನಡೆದುಕೊಂಡು ಬರುತ್ತಿದೆ. ದೈವರಾದನೆಯಲ್ಲಿ ದೈವದ ಅಣಿಗಳಿಗೆ ಮಹತ್ವದ ಪ್ರಾಧಾನ್ಯತೆ ಇದ್ದು, ಶಿಶಿಲದಲ್ಲಿರುವ ಕಿಲಮರಿತ್ತಾಯನ ಅಣಿ ಉಳಿದ ದೈವಗಳಂತಲ್ಲ. ಈ ದೈವದ ಅಣಿಯು ದೈವದ ಮುಂಭಾಗದಲ್ಲಿ ಇರುವುದೇ ಇಲ್ಲಿನ ವಿಶೇಷ. ಕಿಲಮರಿತ್ತಾಯ ಜೋಡಿ ದೈವಗಳಿಗೆ ನೇಮದ ಕೊನೆಯ ಹಂತದಲ್ಲಿ ಜೀವಂತ ಕೋಳಿಯನ್ನು ಅಡಿಕೆ ಹಾಳೆಯಿಂದ ನಿಮಿ೯ಸಿದ ದೈವದ ಅಣಿ ಮತ್ತುದೈವಕ್ಕೆ ಜೀವಂತ ಕೋಳಿ ಹಾರಿಸುವ ಪದ್ದತಿ ಇದೆ.ಹಾರಿಸಿದ ಕೋಳಿಗಳನ್ನು ನತ೯ಕ ಕುಟುಂಬಸ್ಥರು ಸಾಕಾಣಿಕೆ ಮಾಡುತ್ತಾರೆ.ಜೋಡಿ ದೈವಗಳಿಗೆ ಕೋಳಿ ಹಾರಿಸುದಾಗಿ ಪ್ರಾಥಿ೯ಸಿದರೆ ಸಂಕಷ್ಠ ದೂರವಾಗುವುದೆಂದು ನಂಬಿಕೆ ಇದೆ.
ಸಾಕು ಪ್ರಾಣಿಗಳಿಗೆ,ಪಶುಗಳಿಗೆ,ಮನುಷ್ಯರಿಗೆ ಸಂಕಟ ಬಂದಾಗ ಕಿಲಮರಿತ್ತಾಯ ಜೋಡಿ ದೈವಗಳಿಗೆ ನೇಮದ ಕೊನೆಯ ಹಂತದಲ್ಲಿ ಜೀವಂತ ಕೋಳಿಯನ್ನು ಅಡಿಕೆ ಹಾಳೆಯಿಂದ ನಿಮಿ೯ಸಿದ ದೈವದ ಅಣಿ ಮತ್ತುದೈವಕ್ಕೆ ಜೀವಂತ ಕೋಳಿ ಹಾರಿಸುತ್ತಾರೆ.
23.09.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…
ಬೆಳಗಾವಿ ಜಿಲ್ಲೆಯಲ್ಲಿ ಅತೀವೃಷ್ಟಿಯಿಂದ ಹಾನಿಗೊಳಗಾದ ಪ್ರತಿಯೊಬ್ಬ ರೈತರಿಗೂ ಬೆಳೆ ಪರಿಹಾರ ಒದಗಿಸಬೇಕು. ಜಂಟಿ…
ರಾಜ್ಯದಲ್ಲಿ ನೈಋತ್ಯ ಮುಂಗಾರು ದುರ್ಬಲವಾಗಿತ್ತು. ಕರಾವಳಿಯ ಕೆಲವು ಸ್ಥಳಗಳಲ್ಲಿ ಹಾಗೂ ದಕ್ಷಿಣ ಒಳನಾಡಿನ…
ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ಸಭೆ-ಸಮಾರಂಭಗಳಲ್ಲಿ ಪ್ಲಾಸ್ಟಿಕ್ ಪೆಟ್ ಮತ್ತು ಬಾಟಲ್…
ಸುಳ್ಯ ಹಾಗೂ ಪುತ್ತೂರು ತಾಲೂಕುಗಳನ್ನು ಬೆಸೆಯುವ ಪರ್ಲಿಕಜೆ-ಮಾವಿನಕಟ್ಟೆ ರಸ್ತೆ ಅಭಿವೃದ್ಧಿಗಾಗಿ ಎರಡು ದಶಕಗಳಿಂದ…
ಸೆಪ್ಟೆಂಬರ್ 22ರಿಂದ ಮಳೆ ಸ್ವಲ್ಪ ಜಾಸ್ತಿ ಆಗುವ ಲಕ್ಷಣಗಳಿದ್ದು ಮುಂದಿನ 5 ಅಥವಾ…