ಶ್ರೀಕೃಷ್ಣ ಚರಿತಾಮೃತ – ಕಾವ್ಯಮಾಲೆ

December 14, 2021
10:04 PM

ಸುಮಾರು 800 ಪುಟಗಳಷ್ಟು ವಿಸ್ತಾರವಾಗಿ ಬರೆದಿರುವ ಕೃತಿ “ಶ್ರೀಕೃಷ್ಣ ಚರಿತಾಮೃತ -ಕಾವ್ಯಮಾಲೆ”. ಇದರ ಕೃತಿಕಾರರು ನಿವೃತ್ತ ಮುಖ್ಯೋಪಾಧ್ಯಾಯರಾದಗೋಪಾಲ ಭಟ್ ಸಿಎಚ್. ಇದರ ವಿಶೇಷತೆ ಏನು ಎಂಬುದರ ಬಗ್ಗೆ ಡಾ ಕೊಳ್ಚಪ್ಪೆ ಗೋವಿಂದ ಭಟ್ ಮಂಗಳೂರು ಇವರು ವಿವರಿಸಿದ್ದಾರೆ.

ಲೀಲಾ ಮೂರ್ತಿಯಾದ ಶ್ರೀ ಕೃಷ್ಣನ ಮಹಿಮೆಯನ್ನು ವಿದ್ವಾಂಸರು ಅವರವರ ಭಾವಕ್ಕೆ ಸರಿಯಾಗಿ ವ್ಯಾಖ್ಯಾನಿಸಿದ್ದಾರೆ.
ಶ್ರೀ ಮಹಾವಿಷ್ಣುವಿನ ದಶಾವತಾರಗಳಲ್ಲಿ ಶ್ರೀ ಕೃಷ್ಣನ ಅವತಾರವೇ ಪರಿಪೂರ್ಣವೆಂದು ಪ್ರಾಜ್ಞರ ಅನಿಸಿಕೆ. ಅಂತಹ ಮಹಾಮಹಿಮನ ಚರಿತ್ರೆ ಒಂದು ಪುಣ್ಯ ಕಥನವೂ, ಭಕ್ತಿ ಸಾಹಿತ್ಯವು ಆಗಿದೆ. ಪಾಪ ಹಾರಕ ಮತ್ತು ಮಾರ್ಗದರ್ಶಕ ವಾಗಿರುವುದರಿಂದ ಅದಕ್ಕೆ ವಿಶೇಷ ಮಹತ್ವ. ಇಂತಹ ಕಥಾನಕವನ್ನು ಸುಮಾರು 800 ಪುಟಗಳಷ್ಟು ವಿಸ್ತಾರವಾಗಿ ಬರೆದಿರುವ ಕೃತಿ “ಶ್ರೀಕೃಷ್ಣ ಚರಿತಾಮೃತ -ಕಾವ್ಯಮಾಲೆ”. ಇದರ ಕೃತಿಕಾರರು ನಿವೃತ್ತ ಮುಖ್ಯೋಪಾಧ್ಯಾಯರಾದ ಗೋಪಾಲ ಭಟ್ ಸಿ ಎಚ್. ಇದು ಅವರ ಒಂದು ಉತ್ಕೃಷ್ಟವಾದ ಕೊಡುಗೆ. ಷಟ್ಪದಿ ರೂಪದಲ್ಲಿ ಸರಳವಾಗಿ ಓದಿಸಿಕೊಂಡು ಹೋಗುವ ಭಾಮಿನಿಯ ರೂಪದಲ್ಲಿದೆ.

ಒಟ್ಟು 172 ಖಂಡಗಳಲ್ಲಿ (ಅಧ್ಯಾಯಗಳಲ್ಲಿ) ರಚಿಸಲ್ಪಟ್ಟ ಈ ಸುದೀರ್ಘ ಚರಿತಾಮೃತ ಓದುಗ ಸ್ನೇಹಿಯಾಗಿರುವುದು ಕೃತಿಯ ಹೆಗ್ಗಳಿಕೆ. ಸರಳ ಕನ್ನಡದಲ್ಲಿ ಬರೆದಿರುವುದರಿಂದ ಹೆಚ್ಚಿನ ವಿದ್ವತ್ತನ್ನು ಬೇಡುವುದಿಲ್ಲ. ಭಾಷಾ ಚಮತ್ಕಾರ ವನ್ನು ಪ್ರಯತ್ನಪೂರ್ವಕವಾಗಿ ತುರುಕದಿರುವುದರಿಂದ ಸ್ವಾಭಾವಿಕವಾಗಿ ಮೂಡಿಬಂದಿದೆ.

ಈ ಕೃತಿಯ ಮಹತ್ತು ಎಂದರೆ ಅಧ್ಯಾಯ 144-161ರ ವರೆಗೆ ಭಗವದ್ಗೀತೆಯ ಅಷ್ಟಾದಶ ಅಧ್ಯಾಯಗಳು ಈ ಕೃತಿಯಲ್ಲಿ ಅಡಕವಾಗಿವೆ. ಕೃಷ್ಣಾಮೃತದಲ್ಲಿ ಕಲ್ಲುಸಕ್ಕರೆಯ ಸವಿಯು ಸೇರಿಕೊಂಡು ಸ್ವಾದಿಷ್ಟವಾಗಿದೆ.

ಗೋಪಾಲ್ ಭಟ್ ಸಿಎಚ್ ಅವರು ಪ್ರಕಾಶನ ಮಾಡಿದ ಈ ಕೃತಿಯ ಬೆಲೆ ರೂ 700. ಈ ಪತ್ರಿಕೆಯ ಓದುಗರಿಗೆ ಅಂಚೆ ವೆಚ್ಚ ಸೇರಿ ರೂ 500 ರಲ್ಲಿ ಪ್ರತಿಗಳನ್ನು 9745492565 ನಂಬರನ್ನು ಸಂಪರ್ಕಿಸಿ ಪಡೆಯಬಹುದಾಗಿದೆ.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮೈಸೂರಿನಲ್ಲಿ ಸೆ. 22 ರಿಂದ ಅಕ್ಟೋಬರ್ 1 ರವರೆಗೆ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಮೇಳ
September 20, 2025
7:08 AM
by: The Rural Mirror ಸುದ್ದಿಜಾಲ
ಮಾಗುವುದು ಸಾಧನೆ ಬೀಗುವುದು ಸುಮ್ಮನೆ
September 16, 2025
7:14 AM
by: ದ ರೂರಲ್ ಮಿರರ್.ಕಾಂ
ಕಡಬದ ಸಮ್ಯಕ್ತ್ ಜೈನ್ ಅವರಿಗೆ ‘ಚಂದನ ರತ್ನ ಪ್ರಶಸ್ತಿ’ ಗೌರವ
August 8, 2025
6:37 AM
by: The Rural Mirror ಸುದ್ದಿಜಾಲ
58ನೇ ಜ್ಞಾನಪೀಠ ಪ್ರಶಸ್ತಿ  ಪ್ರದಾನ | ಜಗದ್ಗುರು ರಾಮಭದ್ರಾಚಾರ್ಯ ಅವರಿಗೆ ಜ್ಞಾನಪೀಠ ಪ್ರಶಸ್ತಿ ಪ್ರದಾನ
May 17, 2025
10:22 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror