ಸಾಹಿತ್ಯ

ಶ್ರೀಕೃಷ್ಣ ಚರಿತಾಮೃತ – ಕಾವ್ಯಮಾಲೆ

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಸುಮಾರು 800 ಪುಟಗಳಷ್ಟು ವಿಸ್ತಾರವಾಗಿ ಬರೆದಿರುವ ಕೃತಿ “ಶ್ರೀಕೃಷ್ಣ ಚರಿತಾಮೃತ -ಕಾವ್ಯಮಾಲೆ”. ಇದರ ಕೃತಿಕಾರರು ನಿವೃತ್ತ ಮುಖ್ಯೋಪಾಧ್ಯಾಯರಾದಗೋಪಾಲ ಭಟ್ ಸಿಎಚ್. ಇದರ ವಿಶೇಷತೆ ಏನು ಎಂಬುದರ ಬಗ್ಗೆ ಡಾ ಕೊಳ್ಚಪ್ಪೆ ಗೋವಿಂದ ಭಟ್ ಮಂಗಳೂರು ಇವರು ವಿವರಿಸಿದ್ದಾರೆ.

Advertisement
Advertisement

ಲೀಲಾ ಮೂರ್ತಿಯಾದ ಶ್ರೀ ಕೃಷ್ಣನ ಮಹಿಮೆಯನ್ನು ವಿದ್ವಾಂಸರು ಅವರವರ ಭಾವಕ್ಕೆ ಸರಿಯಾಗಿ ವ್ಯಾಖ್ಯಾನಿಸಿದ್ದಾರೆ.
ಶ್ರೀ ಮಹಾವಿಷ್ಣುವಿನ ದಶಾವತಾರಗಳಲ್ಲಿ ಶ್ರೀ ಕೃಷ್ಣನ ಅವತಾರವೇ ಪರಿಪೂರ್ಣವೆಂದು ಪ್ರಾಜ್ಞರ ಅನಿಸಿಕೆ. ಅಂತಹ ಮಹಾಮಹಿಮನ ಚರಿತ್ರೆ ಒಂದು ಪುಣ್ಯ ಕಥನವೂ, ಭಕ್ತಿ ಸಾಹಿತ್ಯವು ಆಗಿದೆ. ಪಾಪ ಹಾರಕ ಮತ್ತು ಮಾರ್ಗದರ್ಶಕ ವಾಗಿರುವುದರಿಂದ ಅದಕ್ಕೆ ವಿಶೇಷ ಮಹತ್ವ. ಇಂತಹ ಕಥಾನಕವನ್ನು ಸುಮಾರು 800 ಪುಟಗಳಷ್ಟು ವಿಸ್ತಾರವಾಗಿ ಬರೆದಿರುವ ಕೃತಿ “ಶ್ರೀಕೃಷ್ಣ ಚರಿತಾಮೃತ -ಕಾವ್ಯಮಾಲೆ”. ಇದರ ಕೃತಿಕಾರರು ನಿವೃತ್ತ ಮುಖ್ಯೋಪಾಧ್ಯಾಯರಾದ ಗೋಪಾಲ ಭಟ್ ಸಿ ಎಚ್. ಇದು ಅವರ ಒಂದು ಉತ್ಕೃಷ್ಟವಾದ ಕೊಡುಗೆ. ಷಟ್ಪದಿ ರೂಪದಲ್ಲಿ ಸರಳವಾಗಿ ಓದಿಸಿಕೊಂಡು ಹೋಗುವ ಭಾಮಿನಿಯ ರೂಪದಲ್ಲಿದೆ.

ಒಟ್ಟು 172 ಖಂಡಗಳಲ್ಲಿ (ಅಧ್ಯಾಯಗಳಲ್ಲಿ) ರಚಿಸಲ್ಪಟ್ಟ ಈ ಸುದೀರ್ಘ ಚರಿತಾಮೃತ ಓದುಗ ಸ್ನೇಹಿಯಾಗಿರುವುದು ಕೃತಿಯ ಹೆಗ್ಗಳಿಕೆ. ಸರಳ ಕನ್ನಡದಲ್ಲಿ ಬರೆದಿರುವುದರಿಂದ ಹೆಚ್ಚಿನ ವಿದ್ವತ್ತನ್ನು ಬೇಡುವುದಿಲ್ಲ. ಭಾಷಾ ಚಮತ್ಕಾರ ವನ್ನು ಪ್ರಯತ್ನಪೂರ್ವಕವಾಗಿ ತುರುಕದಿರುವುದರಿಂದ ಸ್ವಾಭಾವಿಕವಾಗಿ ಮೂಡಿಬಂದಿದೆ.

ಈ ಕೃತಿಯ ಮಹತ್ತು ಎಂದರೆ ಅಧ್ಯಾಯ 144-161ರ ವರೆಗೆ ಭಗವದ್ಗೀತೆಯ ಅಷ್ಟಾದಶ ಅಧ್ಯಾಯಗಳು ಈ ಕೃತಿಯಲ್ಲಿ ಅಡಕವಾಗಿವೆ. ಕೃಷ್ಣಾಮೃತದಲ್ಲಿ ಕಲ್ಲುಸಕ್ಕರೆಯ ಸವಿಯು ಸೇರಿಕೊಂಡು ಸ್ವಾದಿಷ್ಟವಾಗಿದೆ.

Advertisement

ಗೋಪಾಲ್ ಭಟ್ ಸಿಎಚ್ ಅವರು ಪ್ರಕಾಶನ ಮಾಡಿದ ಈ ಕೃತಿಯ ಬೆಲೆ ರೂ 700. ಈ ಪತ್ರಿಕೆಯ ಓದುಗರಿಗೆ ಅಂಚೆ ವೆಚ್ಚ ಸೇರಿ ರೂ 500 ರಲ್ಲಿ ಪ್ರತಿಗಳನ್ನು 9745492565 ನಂಬರನ್ನು ಸಂಪರ್ಕಿಸಿ ಪಡೆಯಬಹುದಾಗಿದೆ.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ದೇಸೀ ಗೋವು ಸಾಕಾಣಿಕೆಗೆ ಹಳ್ಳಿಯಷ್ಟೇ ಅಲ್ಲ, ನಗರದಲ್ಲೂ ಸಾಧ್ಯ

ದೇಸೀ ಗೋತಳಿ ಸಂರಕ್ಷಣೆಗೆ ಗ್ರಾಮೀಣ ಪ್ರದೇಶ, ಹಳ್ಳಿಯಷ್ಟೇ ಅಲ್ಲ, ನಗರದಲ್ಲೂ ಸಾಧ್ಯವಿದೆ. ದನ…

10 hours ago

ದುಡಿಯುವ ವರ್ಗದಲ್ಲಿ ಮಹಿಳೆಯರ ಸಹಭಾಗಿತ್ವಕ್ಕೆ ಆದ್ಯತೆ | ಮಹಿಳಾ ನೇತೃತ್ವದ ಅಭಿವೃದ್ಧಿಗೆ ಮುನ್ನುಡಿ

ದುಡಿಯುವ ವರ್ಗದಲ್ಲಿ ಮಹಿಳೆಯರ ಸಹಭಾಗಿತ್ವ ಹೆಚ್ಚಿಸುವುದು ಕೇಂದ್ರ ಸರ್ಕಾರದ ಆದ್ಯತೆಯಾಗಿದ್ದು, ಮಹಿಳಾ ನೇತೃತ್ವದ…

11 hours ago

ಹಾವೇರಿ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗೆ ಅಗತ್ಯವಿರುವ ರಸಗೊಬ್ಬರಕ್ಕೆ ಬೇಡಿಕೆ ಹೆಚ್ಚಳ

ಹಾವೇರಿ ಜಿಲ್ಲೆಯಲ್ಲಿ ಮುಂಗಾರು ಪೂರ್ವ ಹಾಗೂ ಮುಂಗಾರು ಮಳೆ ಉತ್ತಮ ರೀತಿಯಲ್ಲಿ ಸುರಿಯುತ್ತಿದ್ದು,…

11 hours ago

ಬಸವಸಾಗರ ಜಲಾಶಯದಿಂದ ನದಿಗೆ ಹರಿಸುವ ನೀರಿನ ಪ್ರಮಾಣದಲ್ಲಿ ಇಳಿಕೆ

ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ಗ್ರಾಮದ ಬಸವಸಾಗರ ಜಲಾಶಯದಿಂದ ನದಿಗೆ ಹರಿಸುವ…

11 hours ago

ಫಸಲ್ ವಿಮಾ ಯೋಜನೆ | ರೈತರಿಗೆ ಪರಿಹಾರ ನೀಡುವ ಮೂಲಕ ಆರ್ಥಿಕ ಭದ್ರತೆ

2025 ರ ಮುಂಗಾರು ಹಂಗಾಮಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ವಿಮಾ…

11 hours ago