“ಉತ್ತಿಷ್ಠತ ಜಾಗ್ರತ ಪ್ರಾಪ್ಯ ವರಾನ್ನಿಬೋಧತ”
ಎದ್ದು ನಿಲ್ಲಿ, ಎಚ್ಚರವಾಗಿರಿ, ಗುರಿ ತಲುಪುವವರೆಗೆ ನಿಲ್ಲಬೇಡಿ ಎಂಬ ಉಪನಿಷತ್ತಿನ ಈ ಕರೆಯು ಇಂದು ನಮ್ಮ ಯುವಸಮಾಜಕ್ಕೆ ಇನ್ನಷ್ಟು ಪ್ರಸ್ತುತವಾಗಿದೆ. ಏಕೆಂದರೆ ಇಂದಿನ ಸಮಾಜದಲ್ಲಿ ಶಿಕ್ಷಣ ಹೆಚ್ಚಾಗಿದೆ; ಆದರೆ ಉದ್ಯೋಗಾರ್ಹತೆ ಕುಸಿದಿದೆ. ಪದವಿಗಳ ಸಂಖ್ಯೆ ಹೆಚ್ಚಾದರೂ, ಬದುಕನ್ನು ಕಟ್ಟಿಕೊಳ್ಳುವ ಕೌಶಲ್ಯಗಳು ವಿರಳವಾಗಿವೆ. ಈ ವೈರುಧ್ಯದ ಮಧ್ಯೆ ಕೌಶಲ್ಯಾಭಿವೃದ್ಧಿ ಮತ್ತು ಸ್ವಾವಲಂಬನೆ ಎಂಬುದು ಕೇವಲ ನೀತಿ ಪದಗಳಾಗದೇ, ಕಾಲದ ತತ್ವಶಾಸ್ತ್ರೀಯ ಅಗತ್ಯವಾಗಿ ನಮ್ಮ ಮುಂದೆ ನಿಂತಿದೆ.
ಅಂಕಗಳಾಚೆ ಇರುವ ಶೂನ್ಯತೆ – ಸವಾಲುಗಳ ವಾಸ್ತವ : ನಮ್ಮ ಶಿಕ್ಷಣ ವ್ಯವಸ್ಥೆ ಬಹುಪಾಲು ಕಾಲ ಅಂಕಗಳು ಮತ್ತು ಪ್ರಮಾಣಪತ್ರಗಳ ಸುತ್ತಲೇ ಸುತ್ತಿಕೊಂಡಿದೆ.
“ಶಿಕ್ಷಣಂ ನಾಮ ಕೇವಲಂ ಪುಸ್ತಕಜ್ಞಾನಂ ನ ಭವತಿ” ಎಂಬ ಪ್ರಾಚೀನ ಚಿಂತನೆಯಂತೆ, ಶಿಕ್ಷಣವೆಂದರೆ ಪುಸ್ತಕದ ಜ್ಞಾನ ಮಾತ್ರವಲ್ಲ. ಆದರೆ ನಾವು ಜೀವನೋಪಯೋಗಿ ಕೌಶಲ್ಯಗಳನ್ನು ಕಡೆಗಣಿಸಿದ್ದೇವೆ.
ಇದರ ಪರಿಣಾಮವಾಗಿ ಇಂದು ಕಂಡುಬರುವ ಸವಾಲುಗಳು:
ಈ ಎಲ್ಲಾ ಸಮಸ್ಯೆಗಳ ಮೂಲದಲ್ಲಿ ಇರುವುದೇ – ಸ್ವಾವಲಂಬನೆಯ ಚಿಂತನೆಯ ಕೊರತೆ.
ಕರ್ಮದ ತತ್ವ ಮತ್ತು ಕೌಶಲ್ಯದ ದಾರಿ : ಭಗವದ್ಗೀತೆ ಜೀವನಕ್ಕೆ ಕೊಟ್ಟ ದೊಡ್ಡ ಸಂದೇಶವೇ ಕರ್ಮದ ಗೌರವ. ಫಲದ ಭಯವಿಲ್ಲದೆ ಪ್ರಯತ್ನ ಮಾಡು ಎಂಬುದನ್ನು.ಕೌಶಲ್ಯಾಭಿವೃದ್ಧಿಯೂ ಹಾಗೇ. ಅದು ತಕ್ಷಣ ಫಲ ಕೊಡುವ ಮಾಯಾಜಾಲವಲ್ಲ; ನಿರಂತರ ಅಭ್ಯಾಸ ಮತ್ತು ಶ್ರಮದ ಫಲ. ಕಾರ್ಯಗಳು ಕನಸುಗಳಿಂದಲ್ಲ, ಶ್ರಮದಿಂದಲೇ ಸಿದ್ಧಿಸುತ್ತವೆ.
ಇಂದಿನ ಯುವಕರು ಮೊದಲು “ನನಗೆ ಏನು ಬರುತ್ತದೆ?” ಎಂಬ ಪ್ರಶ್ನೆಯನ್ನು ಕೇಳಿಕೊಳ್ಳಬೇಕು. ಆ ಉತ್ತರವೇ ಕೌಶಲ್ಯದ ಬೀಜ.
ಸ್ವಾವಲಂಬನೆ ಎಂಬುದು ಆರ್ಥಿಕತೆಯಲ್ಲ, ಆತ್ಮಗೌರವದ ಪ್ರಶ್ನೆ.ಸ್ವಾವಲಂಬನೆ ಎಂದರೆ ಕೇವಲ ಸ್ವಂತ ಆದಾಯವಲ್ಲ; ಅದು ಆತ್ಮಗೌರವದ ಸ್ಥಿತಿ.“ಪರಾಶ್ರಯೇಣ ದೌರ್ಬಲ್ಯಂ, ಸ್ವಾಶ್ರಯೇಣ ತು ಪೌರುಷಮ್” – ಪರಾವಲಂಬನೆ ದುರ್ಬಲತೆ; ಸ್ವಾವಲಂಬನೆ ಶೌರ್ಯ.ವ್ಯಕ್ತಿಯೇ ತನ್ನ ಮಿತ್ರನೂ ಹೌದು , ಶತ್ರುವೂ ಹೌದು . ಸ್ವಾವಲಂಬನೆ ಮನಸ್ಸಿನಿಂದ ಆರಂಭವಾಗುತ್ತದೆ. ಅವಕಾಶಗಳು ಹೊರಗೆ ಸಿಗುತ್ತವೆ; ಆದರೆ ಆತ್ಮವಿಶ್ವಾಸ ಒಳಗೆ ಹುಟ್ಟಬೇಕು.
ಪರಿಹಾರಗಳು – ಚಿಂತನೆಯ ಪರಿವರ್ತನೆ : ಈ ಸವಾಲುಗಳಿಗೆ ಪರಿಹಾರವು ಕೇವಲ ಸರ್ಕಾರಿ ಯೋಜನೆಗಳಲ್ಲಿ ಇಲ್ಲ; ಅದು ಸಮಾಜದ ಸಮೂಹ ಚಿಂತನೆಗೆ ಸಂಬಂಧಿಸಿದದ್ದು.
ಗ್ರಾಮದ ಯುವಕನೊಬ್ಬ ತನ್ನ ಊರಿನ ಕೃಷಿ ಉತ್ಪನ್ನಗಳಿಗೆ ಮೌಲ್ಯವರ್ಧನೆ ಮಾಡಿ ಸ್ವಂತ ಉದ್ಯಮ ಆರಂಭಿಸಿದರೆ, ಆತ ಕೇವಲ ತನ್ನ ಬದುಕನ್ನೇ ಅಲ್ಲ ,ತನ್ನ ಊರಿನ ಆತ್ಮವಿಶ್ವಾಸವನ್ನೂ ಕಟ್ಟುತ್ತಾನೆ.
ಧನಾತ್ಮಕ ಚಿಂತನೆ – ಸಮಾಜದ ಭವಿಷ್ಯ : ಸತ್ಪ್ರಯತ್ನ ಮಾಡುವವನು ನಾಶವಾಗುವುದಿಲ್ಲ.ಈ ವಿಶ್ವಾಸವೇ ಯುವಕರನ್ನು ಮುನ್ನಡೆಸಬೇಕು. ಸ್ವಾವಲಂಬನೆ ವೈಯಕ್ತಿಕ ಯಶಸ್ಸಲ್ಲ; ಅದು ಸಮಾಜದ ಆರ್ಥಿಕ, ಸಾಂಸ್ಕೃತಿಕ ಮತ್ತು ನೈತಿಕ ಸ್ಥಿರತೆಯ ಮೂಲ. ಅಂಕಗಳು ಜೀವನದ ಆರಂಭ ಮಾತ್ರ. ಕೌಶಲ್ಯಗಳು ಜೀವನದ ದಿಕ್ಕು. ಸ್ವಾವಲಂಬನೆ ಎಂಬುದು ಜೀವನದ ಸಾಧನೆ. ಆದ್ದರಿಂದ ಶಿಕ್ಷಕರು ದಿಕ್ಕು ತೋರಬೇಕು, ಪೋಷಕರು ಧೈರ್ಯ ತುಂಬಬೇಕು, ಸಂಸ್ಥೆಗಳು ಅವಕಾಶ ಕಲ್ಪಿಸಬೇಕು,ಯುವಕರು ಎದ್ದು ನಿಲ್ಲಬೇಕು.
“ಸರ್ವೇ ಭವಂತು ಸುಖಿನಃ” ಎಂಬ ಮಹದಾಕಾಂಕ್ಷೆಯ ಸಾಕಾರಕ್ಕೆ ಕೌಶಲ್ಯಾಭಿವೃದ್ಧಿ ಮತ್ತು ಸ್ವಾವಲಂಬನೆಯೇ ನಿಜವಾದ ಮಾರ್ಗ.
Skill development and self-reliance are essential for today’s youth to bridge the gap between education and employability. Building practical skills and entrepreneurial confidence can strengthen both individual dignity and the socio-economic stability of society.
ಅಜ್ಜಾವರ ಸರ್ಕಾರಿ ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿಗಳು INSPIRE Award ಗೆ ಆಯ್ಕೆಯಾಗಿದ್ದಾರೆ. ವೈಜ್ಞಾನಿಕ…
ನೆಮ್ಮದಿಗಾಗಿ ಬದುಕಬೇಕು, ಹಣ-ಅಧಿಕಾರಕ್ಕಾಗಿ ಅಲ್ಲ ಎಂದು ರಾಮಚಂದ್ರಾಪುರ ಶ್ರೀಗಳು ಕರೆ ನೀಡಿದರು. ಸಂನ್ಯಾಸ…
ಅಡಿಕೆ ದರ ಇಳಿಕೆಗೆ ಆಮದುಗಿಂತ ಅಡಿಕೆ ಕೊಯ್ಲು ಕಾಲದ ಸರಬರಾಜು ಒತ್ತಡ ಮತ್ತು…
ಐದು ವರ್ಷದ ದತ್ತಾಂಶವು ಮಂಗಳೂರು ಅಡಿಕೆ ಮಾರುಕಟ್ಟೆ ಚಕ್ರಾಕಾರ ಸ್ವಭಾವ ಹೊಂದಿರುವುದನ್ನು ತೋರಿಸಿದೆ.…
ದೇಶದ ವಿವಿದೆಡೆ ಮಾರ್ಚ್ ತಿಂಗಳಲ್ಲಿ ಉತ್ತಮ ಮಳೆಯಾಗಿದೆ. ವಿಶೇಷವಾಗಿ ರಾಜ್ಕೋಟ್ನಲ್ಲಿ ಅಸಾಮಾನ್ಯ ಹವಾಮಾನದಿಂದ…
ಹೋರ್ಮುಜ್ ಜಲಸಂಧಿ ಸಂಕಷ್ಟದಿಂದ ಭಾರತಕ್ಕೆ ಗೊಬ್ಬರ ಮತ್ತು ಇಂಧನ ಪೂರೈಕೆ ಮೇಲೆ ಒತ್ತಡ…