ಗುಜರಾತಿನ ಮುಂದ್ರಾ ಬಂದರು ಮೂಲಕ ಅಡಿಕೆ ಕಳ್ಳಸಾಗಾಣಿಕೆಯ ಮೂಲಕ ಆಮದು ಮಾಡುವ ಪ್ರಯತ್ನವನ್ನು ಡೈರೆಕ್ಟರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್ (DRI) ಅಧಿಕಾರಿಗಳ ತಂಡ ಪತ್ತೆ ಮಾಡಿದೆ. ಸುಮಾರು 81.85 ಮೆಟ್ರಿಕ್ ಟನ್ ಅಡಿಕೆಯನ್ನು ವಶಪಡಿಸಿಕೊಂಡಿದೆ.
ಆಮದು ಸರಕನ್ನು ತಪ್ಪಾಗಿ ಘೋಷಣೆ ಮಾಡಿ ಅಡಿಕೆಯನ್ನು ಭಾರತಕ್ಕೆ ಕಳ್ಳಸಾಗಾಣಿಕೆ ಮೂಲಕ ತರಲಾಗಿತ್ತು.ಈ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳ ತಂಡ ಕಾರ್ಯಾಚರಣೆ ನಡೆಸಿತ್ತು.ಯುಎಇಯ ಜೆಬೆಲ್ ಅಲಿ ಬಂದರಿನಿಂದ ಕಂಟೈನರ್ಗಳಲ್ಲಿ ಸರಕುಗಳು ಮುಂದ್ರಾ ಬಂದರಿಗೆ ಬಂದಿತ್ತು.7.1 ಕೋಟಿ ಮೌಲ್ಯದ 81.85 ಮೆಟ್ರಿಕ್ ಟನ್ ಅಡಿಕೆಯನ್ನು ವಶಕ್ಕೆ ಪಡೆಯಲಾಗಿದೆ. ಪ್ರಕರಣದ ಪ್ರಮುಖ ಆರೋಪಿಯನ್ನು ಕಸ್ಟಮ್ಸ್ ಕಾಯ್ದೆಯಡಿ ಬಂಧಿಸಲಾಗಿದೆ. ಅಡಿಕೆ ಆಮದು ಮೇಲೆ 110% ತೆರಿಗೆ ವಿಧಿಸಲಾಗುತ್ತಿದೆ.ವಿದೇಶಿ ಮುಕ್ತ ವ್ಯಾಪಾರ ನೀತಿಯ ಅಡಿಯಲ್ಲಿ ಅಡಿಕೆ ಆಮದು ಕೂಡಾ ನಿಷೇಧಿಸಿದೆ. ಹೀಗಾಗಿ ಈಗ ಅಡಿಕೆ ಆಮದು ಮೇಲೆ ಬಿಗುವಾದ ಕ್ರಮ ಕೈಗೊಳ್ಳಲಾಗುತ್ತಿದೆ.
2025 ರಲ್ಲಿ ಶನಿ ಮತ್ತು ಬುಧ ಗ್ರಹಗಳ ಸಂಯೋಜನೆಯಿಂದ ನಿರ್ಮಾಣವಾಗುತ್ತಿರುವ ನವಪಂಚಮ ರಾಜಯೋಗವು…
ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಕಾರ್ಯಕ್ರಮ, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಹಾಗೂ…
ಎಲ್ಲಿ ಉಚಿತವೆಂಬ ಆಮಿಶ ಇದೆಯೋ ಅಲ್ಲಿ ತಳ್ಳಾಟವೂ ಇರುತ್ತದೆ. ಸರಕಾರಿ ಬಸ್ ಗಳಲ್ಲಿ…
ಕೊಡಗು ಜಿಲ್ಲೆಯಲ್ಲಿ ಮಳೆ ಹೆಚ್ಚಾಗುತ್ತಿದ್ದು, ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಹೆಚ್ಚಿನ ಗಾಳಿ-ಮಳೆ…
ಈ ಬಾರಿ ಮೇ ತಿಂಗಳಿನಿಂದಲೇ ಮಳೆ ಆರಂಭವಾಗಿದೆ. ಜೂನ್.10 ಕಳೆಯುವ ಹೊತ್ತಿಗೆ ವಾತಾವರಣ…
ಈಗಿನಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಉತ್ತಮ ಮಳೆಯ ಮುನ್ಸೂಚನೆ ಇದ್ದರೂ ನಿರೀಕ್ಷಿತ ಪ್ರಮಾಣದಲ್ಲಿ…