ಬರ್ಮಾ ಅಡಿಕೆ ಕಳ್ಳಸಾಗಣೆ ಏರಿಕೆ | ಏಕೆ ಸಿಗುತ್ತಿಲ್ಲ ಈ ಮಾಫಿಯಾದ ರುವಾರಿ…? |

March 1, 2024
5:17 PM
ಅಸ್ಸಾಂ ಸೇರಿದಂತೆ ಈಶಾನ್ಯ ರಾಜ್ಯಗಳ ಮೂಲಕ ಅಡಿಕೆ ಕಳ್ಳಸಾಗಾಣಿಕೆ ನಿರಂತರವಾಗಿ ನಡೆಯುತ್ತಿದೆ. ಇದೀಗ ಅಕ್ರಮ ಅಡಿಕೆ ಸಾಗಾಟದ ವಿರುದ್ಧ ಅಡಿಕೆ ಬೆಳೆಗಾರರು ಕ್ರಮಕ್ಕೆ ಒತ್ತಾಯಿಸಿದ್ದಾರೆ. ಬಹುದೊಡ್ಡ ಪ್ರಮಾಣದಲ್ಲಿ ಅಡಿಕೆ ಕಳ್ಳಸಾಗಾಣಿಕೆ ನಡೆಯುತ್ತಿದ್ದರೂ ಕಳ್ಳಸಾಗಾಣಿಕೆಯ ರುವಾರಿ ಪತ್ತೆಯಾಗುತ್ತಿಲ್ಲ..!.

ದೇಶಕ್ಕೆ ಬರ್ಮಾ ಅಡಿಕೆ ಅವ್ಯಾಹತವಾಗಿ ಕಳ್ಳಸಾಗಾಣಿಕೆಯಾಗುತ್ತಿದೆ. ಅಲ್ಲಲ್ಲಿ ತಡೆಯಾಗುತ್ತಲೂ ಇದೆ. ಈ ಕಾರಣದಿಂದಲೇ ಅಡಿಕೆ ಮಾರುಕಟ್ಟೆಯಲ್ಲಿ ನಿರೀಕ್ಷಿತ ಏರಿಕೆ ಕಾಣುತ್ತಿಲ್ಲ. ಅಕ್ರಮವಾಗಿ ಅಡಿಕೆ ಭಾರತದೊಳಕ್ಕೆ ಬರುತ್ತಿದ್ದರೂ, ಕೋಟ್ಯಂತರ ತೆರಿಗೆ ನಷ್ಟವಾಗುತ್ತಿದ್ದರೂ ಈ ಕಳ್ಳಸಾಗಾಣಿಕೆಯ ಪ್ರಮುಖ ರುವಾರಿ ಪತ್ತೆಯಾಗದಿರುವುದೇ ಯಕ್ಷ ಪ್ರಶ್ನೆಯಾಗಿದೆ.

ಅಸ್ಸಾಂ ಸೇರಿದಂತೆ ಈಶಾನ್ಯ ರಾಜ್ಯಗಳ ಮೂಲಕ ಅಡಿಕೆ ಕಳ್ಳಸಾಗಾಣಿಕೆ ನಿರಂತರವಾಗಿ ನಡೆಯುತ್ತಿದೆ. ಈಶಾನ್ಯ ರಾಜ್ಯದ ಬಹುತೇಕ ಅಡಿಕೆ ಬೆಳೆಗಾರರು ಕೂಡಾ ಈ ಕಳ್ಳಸಾಗಾಣಿಕೆಗೆ ವಿರೋಧ ವ್ಯಕ್ತಪಡಿಸುತ್ತಿದ್ದರೂ ಅಡಿಕೆ ಸಾಗಾಣಿಕೆಗೆ ತಡೆಯಾಗಿಲ್ಲ.  ಗೋಲಾಘಾಟ್-ಮೇರಪಾನಿಯಲ್ಲಿ ಬರ್ಮಾ ಅಡಿಕೆ ಕಳ್ಳಸಾಗಣೆ ಅವ್ಯಾಹತವಾಗಿ ಏರಿಕೆಯಾಗುತ್ತಿದೆ. ಮ್ಯಾನ್ಮಾರ್‌ನಿಂದ ಗೋಲಾಘಾಟ್ ಜಿಲ್ಲೆಯ ಮೂಲಕ ಅಕ್ರಮ ಬರ್ಮಾ ಅಡಿಕೆ ಸಾಗಾಣಿಕೆ ನಡೆಯುತ್ತಿದೆ. ಅಡಿಕೆ ಕಳ್ಳಸಾಗಾಣಿಕೆಯ ಮಾಫಿಯಾ ಬಹುದೊಡ್ಡ ಜಾಲವಾಗಿ ಈಗ ರೂಪುಗೊಳ್ಳುತ್ತಿದೆ.

ಗೋಲಘಟ್ಟ ನಗರದ ಮೂಲಕ ಬರ್ಮಾ ಅಡಿಕೆ ಸಾಗಾಟದ ವಿರುದ್ಧ ಗೋಲಘಟ್ಟದ ಸಂಘಟನೆಗಳು ಹಾಗೂ ಸಾಮಾಜಿಕ ಹೋರಾಟಗಾರರು ಹಲವು ಬಾರಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದರೆ ಜಿಲ್ಲಾಡಳಿತ ಹಾಗೂ ಗೋಲಘಟ್ಟ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ವ್ಯಕ್ತವಾಗಿದೆ. ಈ ಜಾಲದ ಹಿಂದೆ ದೊಡ್ಡ ಕುಳಗಳು ಇರುವುದೇ ಇದಕ್ಕೆ ಕಾರಣವಾಗಿದೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.

ಈ ಜಾಲವು ಬರ್ಮಾ ಅಡಿಕೆಯನ್ನು ನಾಗಾಲ್ಯಾಂಡ್‌ನ ತಪ್ಪಲಿನಲ್ಲಿ ಸಂಗ್ರಹಿಸುತ್ತಾರೆ ಮತ್ತು ಅದನ್ನು ಮೆರಾಪಾನಿಯಲ್ಲಿರುವ ಸಿಆರ್‌ಪಿಎಫ್ ಗೇಟ್ ಮೂಲಕ ಮತ್ತು ಮೆರಾಪಾನಿ ಪೊಲೀಸ್ ಠಾಣೆಯ ಮುಂದೆ ಪ್ರತಿದಿನ ವಿವಿಧ ವಾಹನಳಲ್ಲಿ ಸಾಗಿಸುತ್ತಾರೆ. ಇತ್ತೀಚೆಗೆ, ಮೇರಾಪಾನಿಯಲ್ಲಿ ಅಡಿಕೆ ಹೊತ್ತ ಲಾರಿ ಅಪಘಾತಕ್ಕೀಡಾಯಿತು. ಬರ್ಮಾ ಸುಪಾರಿ ತುಂಬಿದ್ದ ಅಡಿಕೆಯನ್ನು ಸ್ಥಳೀಯರು ತಡೆದು ಮೇರಪಾನಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಆದರೆ, ಅಡಿಕೆ ಸಾಗಾಟದ ಮಾಫಿಯಾ ಮೆರಪಾನಿ ಪೊಲೀಸ್ ಠಾಣೆಯಿಂದ ಅಡಿಕೆ ತುಂಬಿದ್ದ ಟ್ರಕ್  ಬಿಡಿಸಿಕೊಳ್ಳುವ ಯತ್ನವನ್ನು ಮುಂದುವರೆಸಿದೆ ಎಂದು ಹೋರಾಟಗಾರರು ಆರೋಪ ಮಾಡಿದ್ದಾರೆ.

Illegal Burmese Arecanut transportation through Golaghat district from Myanmar has been rising. Locals intercepted the truck loaded with Burmese Arecanut and handed it over to Merapani police. The Merapani police have already seized the truck loaded with smuggled Arecanut and registered a case.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 22.07.2026 | ಉತ್ತರ ಕನ್ನಡ, ಉಡುಪಿಯಲ್ಲಿ ಉತ್ತಮ ಮಳೆಯ ಸಾಧ್ಯತೆ; ರಾಜ್ಯದಲ್ಲಿ ಮಳೆ ಚಟುವಟಿಕೆ ಮುಂದುವರಿಕೆ
July 22, 2026
3:55 PM
by: ಸಾಯಿಶೇಖರ್ ಕರಿಕಳ
ಆಮದು ಕಳಪೆ ಅಡಿಕೆ ಮಿಶ್ರಣದ ಎಚ್ಚರಿಕೆ- ಬೆಳೆಗಾರರಿಗೆ ಕ್ಯಾಂಪ್ಕೊ ಮನವಿ
July 21, 2026
11:55 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 21-07-2026 | ಕರಾವಳಿ-ಮಲೆನಾಡಿನಲ್ಲಿ ಸಾಧಾರಣ ಮಳೆ ಮುಂದುವರಿಕೆ, ಭಾರೀ ಮಳೆ ಸಾಧ್ಯತೆ ಕಡಿಮೆ
July 21, 2026
4:32 PM
by: ಸಾಯಿಶೇಖರ್ ಕರಿಕಳ
ಅಡಿಕೆ ರೋಗ ಸಂಕಷ್ಟಕ್ಕೆ ಸಂಸತ್ತಿನಲ್ಲಿ ಧ್ವನಿ : ನಿಯಮ 377ರಡಿ ಕ್ಯಾ. ಬ್ರಿಜೇಶ್ ಚೌಟ ಒತ್ತಾಯ
July 20, 2026
10:59 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror