Advertisement
ಸುದ್ದಿಗಳು

ಸೆಗಣಿಯಿಂದ ಘನ ಜೀವಾಮೃತ : ಕೃಷಿಗೆ ನೈಸರ್ಗಿಕ ಗೊಬ್ಬರದ ಹೊಸ ಭರವಸೆ

Share

ಭಾರತದ ಕೃಷಿಯಲ್ಲಿ ದೀರ್ಘಕಾಲದಿಂದ ರಾಸಾಯನಿಕ ಗೊಬ್ಬರಗಳ ಬಳಕೆ ಹೆಚ್ಚಾಗುತ್ತಿದ್ದು, ಇದರ ಪರಿಣಾಮವಾಗಿ ಮಣ್ಣಿನ ಆರೋಗ್ಯ ಹದಗೆಟ್ಟಿದೆ. ಈ ಹಿನ್ನೆಲೆಯಲ್ಲಿ ರೈತರು ಕಡಿಮೆ ವೆಚ್ಚದಲ್ಲಿ ನೈಸರ್ಗಿಕ ವಿಧಾನಗಳತ್ತ ಹೆಚ್ಚು ಗಮನ ಹರಿಸುತ್ತಿದ್ದಾರೆ. ಅಂತಹ ಒಂದು ಪರಿಣಾಮಕಾರಿ ಪರಿಹಾರವಾಗಿ ಗೋಮಯದಿಂದ ತಯಾರಿಸುವ “ಘನ ಜೀವಾಮೃತ” (Solid Jeevamrit) ಪದ್ಧತಿ ಪ್ರಚಾರಕ್ಕೆ ಬರುತ್ತಿದೆ.

Advertisement
Advertisement

ಕಿಸಾನ್ ಇಂಡಿಯಾ ಪ್ರಕಟಿಸಿದ ವರದಿ ಪ್ರಕಾರ, ಈ ಘನ ಜೀವಾಮೃತ ಬಳಕೆ ಮಾಡಿದರೆ ರಾಸಾಯನಿಕ ಗೊಬ್ಬರಗಳ ಅಗತ್ಯವೇ ಕಡಿಮೆಯಾಗುತ್ತದೆ. ಅಲ್ಲದೇ, ಮಣ್ಣಿನ ಫಲವತ್ತತೆ ಹೆಚ್ಚಾಗಿ ಬೆಳೆಗಳಿಗೆ ಭರ್ಜರಿ ಇಳುವರಿ ಸಿಗುತ್ತದೆ ಎನ್ನಲಾಗಿದೆ.

ಘನ ಜೀವಾಮೃತ ಎಂದರೇನು? :  ಜೀವಾಮೃತ ಎಂದರೆ ದೇಶಿ ಹಸುವಿನ ಗೋಮಯ, ಗೋಮೂತ್ರ, ಬೆಲ್ಲ, ಕಡಲೆ ಹಿಟ್ಟು ಹಾಗೂ ಸ್ವಲ್ಪ ಮಣ್ಣನ್ನು ಸೇರಿಸಿ ತಯಾರಿಸುವ ಜೀವಂತ ಜೈವಿಕ ಗೊಬ್ಬರ. ಸಾಮಾನ್ಯವಾಗಿ ದ್ರವ ರೂಪದಲ್ಲಿ ಬಳಸುವ ಜೀವಾಮೃತ ಈಗ ಘನ ರೂಪದಲ್ಲೂ ತಯಾರಿಸಲಾಗುತ್ತಿದೆ. ಇದನ್ನು ರೈತರು ಸುಲಭವಾಗಿ ಸಂಗ್ರಹಿಸಿ ಬೆಳೆಗಳಿಗೆ ಬಳಸಬಹುದು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ಘನ ಜೀವಾಮೃತ ತಯಾರಿಸುವ ವಿಧಾನ :  ಘನ ಜೀವಾಮೃತ ತಯಾರಿಸಲು ಮುಖ್ಯವಾಗಿ-  ದೇಶಿ ಹಸುವಿನ ಗೋಮಯ, ಗೋಮೂತ್ರ, ಬೆಲ್ಲ, ಕಡಲೆ ಹಿಟ್ಟು, ಸ್ಥಳೀಯ ಮಣ್ಣು  – ಇವೆಲ್ಲವನ್ನು ಸೇರಿಸಿ ಮಿಶ್ರಣ ಮಾಡಿ ಕೆಲವು ದಿನ ಹುಳಿ ಬರುವಂತೆ ಇಡಬೇಕು. ನಂತರ ಇದನ್ನು ನೆರಳಿನಲ್ಲಿ ಒಣಗಿಸಿ ಘನ ರೂಪದಲ್ಲಿ ಸಂಗ್ರಹಿಸಬಹುದು.

ರೈತರಿಗೆ ಇದರಿಂದ ಲಾಭವೇನು? :  ಘನ ಜೀವಾಮೃತದ ಬಳಕೆ ರೈತರಿಗೆ ಅನೇಕ ರೀತಿಯಲ್ಲಿ ಸಹಕಾರಿಯಾಗುತ್ತದೆ. ಮಣ್ಣಿನ ಜೀವಂತಿಕೆ ಹೆಚ್ಚಳ, ಸೂಕ್ಷ್ಮ ಜೀವಾಣುಗಳ ಬೆಳವಣಿಗೆ ಹೆಚ್ಚಳ,  ಬೆಳೆಗಳಿಗೆ ಉತ್ತಮ ಪೋಷಕಾಂಶ ಪೂರೈಕೆ,  ರಾಸಾಯನಿಕ ಗೊಬ್ಬರ ವೆಚ್ಚದಲ್ಲಿ ಉಳಿತಾಯ, ದೀರ್ಘಕಾಲ ಮಣ್ಣಿನ ಫಲವತ್ತತೆ ಉಳಿಯುವುದು,ಇಳುವರಿ ಮತ್ತು ಬೆಳೆ ಗುಣಮಟ್ಟ ಹೆಚ್ಚಳ. ಈ ಗೊಬ್ಬರವು ಮಣ್ಣಿನಲ್ಲಿ ಸೂಕ್ಷ್ಮಜೀವಿಗಳ ಚಟುವಟಿಕೆಯನ್ನು ಹೆಚ್ಚಿಸಿ, ಬೆಳೆಗಳಿಗೆ ಸಹಜವಾಗಿ ಪೋಷಕಾಂಶ ಲಭ್ಯವಾಗುವಂತೆ ಮಾಡುತ್ತದೆ.

ರಾಸಾಯನಿಕ ಗೊಬ್ಬರಕ್ಕೆ ಪರ್ಯಾಯವಾಗಬಹುದೇ? :  ತಜ್ಞರ ಪ್ರಕಾರ, ಸಂಪೂರ್ಣವಾಗಿ ರಾಸಾಯನಿಕ ಗೊಬ್ಬರವನ್ನು ಬಿಡುವುದು ಸವಾಲಾದರೂ, ಜೀವಾಮೃತದಂತಹ ನೈಸರ್ಗಿಕ ಜೈವಿಕ ಗೊಬ್ಬರ ಬಳಕೆಯಿಂದ ಅದರ ಅವಲಂಬನೆ ಕಡಿಮೆಯಾಗಬಹುದು. ಇದರಿಂದ ಮಣ್ಣು ಆರೋಗ್ಯಕರವಾಗುತ್ತದೆ ಮತ್ತು ಪರಿಸರವೂ ರಕ್ಷಿತವಾಗುತ್ತದೆ.

ಮಣ್ಣಿನ ಆರೋಗ್ಯ ಪುನಶ್ಚೇತನಕ್ಕೆ ಅಗತ್ಯ :  ಮಣ್ಣಿನ ಫಲವತ್ತತೆ ಮತ್ತು ಕೃಷಿಯ ಭವಿಷ್ಯ ಉಳಿಸಲು ಇಂತಹ ನೈಸರ್ಗಿಕ ಪದ್ಧತಿಗಳು ಬಹುಮುಖ್ಯವಾಗುತ್ತಿವೆ. “ಕೃಷಿ ಮಣ್ಣನ್ನು ಉಳಿಸಬೇಕು, ಆಗ ರೈತ ಬದುಕನ್ನು ಉಳಿಸಬಹುದು”. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಸರ್ಕಾರಿ ಶಾಲೆ ಮಕ್ಕಳಿಗೆ ಚೆಸ್ ಪಾಠ | ದ.ಕ ದಲ್ಲಿ “ಚೆಸ್ ಇನ್ ಸ್ಕೂಲ್” ಆರಂಭ | ಗ್ರಾಮೀಣ ಮಕ್ಕಳಿಗೆ ಬೌದ್ಧಿಕ ಅವಕಾಶ

ದಕ್ಷಿಣ ಕನ್ನಡ ಜಿಲ್ಲೆಯ ಸರ್ಕಾರಿ ಶಾಲಾ ಮಕ್ಕಳಿಗೆ ಚೆಸ್ ಆಟವನ್ನು ಪರಿಚಯಿಸುವ “ಚೆಸ್…

4 hours ago

ಕೊಳೆ ರೋಗ ನಿಯಂತ್ರಣಕ್ಕೂ ತೆರಿಗೆ…? ಮೈಲುತುತ್ತಿಗೆ ಸುಂಕ – ಅಡಿಕೆ ರೈತನಿಗೆ ಮತ್ತೊಂದು ಹೊರೆ..!

ಅಡಿಕೆ ಬೆಳೆಗಾರ ಇಂದು ಕೇವಲ ಬೆಳೆಗಾರನಲ್ಲ. ಅವನು ಹವಾಮಾನ ಬದಲಾವಣೆ, ರೋಗದ ಸಮಸ್ಯೆ,…

10 hours ago

ದೇಶದಲ್ಲಿ ರಬಿ ಋತು ಬಿತ್ತನೆ ದಾಖಲೆ ಹೆಚ್ಚಳ | 660.48 ಲಕ್ಷ ಹೆಕ್ಟೇರ್‌ಗೆ ಏರಿದ ಒಟ್ಟು ವಿಸ್ತೀರ್ಣ

ಕೇಂದ್ರ ಕೃಷಿ ಸಚಿವಾಲಯವು ಜನವರಿ 23, 2026ರವರೆಗಿನ ರಬಿ ಬೆಳೆ(ಚಳಿಗಾಲದ ಬಿತ್ತನೆ) ಬಿತ್ತನೆಯ…

11 hours ago

ಯೂರಿಯಾ ಮಾರಾಟ 3.8% ಏರಿಕೆ | ದೇಶೀಯ ಉತ್ಪಾದನೆ ಕುಸಿತ, ಆಮದು 85% ಹೆಚ್ಚಳ

ದೇಶದಲ್ಲಿನ ಕೃಷಿ ಬೆಳೆಗಳಿಗೆ ಅಗತ್ಯವಾದ ಪೋಷಕಾಂಶ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ರಸಗೊಬ್ಬರ ವಲಯವು ದೇಶೀಯ…

11 hours ago

ಶುದ್ಧ ಹಿಮಾಲಯವೂ ಸುರಕ್ಷಿತವಲ್ಲ..! ಮರುಭೂಮಿ ಧೂಳಿನೊಂದಿಗೆ ಹರಡುವ ರೋಗಕಾರಕಗಳು

ಹಿಮಾಲಯವನ್ನು ಶುದ್ಧ ಮತ್ತು ಸುರಕ್ಷಿತ ವಾತಾವರಣದ ಪ್ರತೀಕವೆಂದುಕೊಂಡಿದ್ದರೂ, ಜಾಗತಿಕ ಹವಾಮಾನ ಬದಲಾವಣೆ ಹಾಗೂ…

11 hours ago

ಕೃಷಿ ಆಧಾರಿತ ಕೈಗಾರಿಕೆ ಉತ್ತೇಜನದಿಂದ ರೈತರ ಭವಿಷ್ಯ ರೂಪಾಂತರ

ರಾಜಸ್ಥಾನದಲ್ಲಿ ಕೃಷಿ ಆಧಾರಿತ ಕೈಗಾರಿಕೆಗಳನ್ನು ಉತ್ತೇಜಿಸುವ ಮೂಲಕ ರೈತರ ಭವಿಷ್ಯವನ್ನು ಸಂಪೂರ್ಣವಾಗಿ ಬದಲಾಯಿಸಬಹುದು…

11 hours ago