Advertisement
ಸುದ್ದಿಗಳು

ಬಂಟ್ವಾಳದ ಅಭಿಮಾನಿಗೆ ಬಾಲಿವುಡ್ ನಟ ಸೋನು ಸೊದ್ ನ ಅಭಿನಂದನೆ

Share
ಬಡವರ ಪಾಲಿಗೆ ಮನೆ ಮಗನಾಗಿ,ದೇಶದ ರಿಯಲ್  ಹೀರೋ ಎಂದು ಕರೆಸಿಕೊಂಡು  ಸಿನಿಮಾದಲ್ಲಿ ಕಳನಾಯಕನಾಗಿ ಅಭಿನಯಿಸುತ್ತಿರುವ ಬಾಲಿವುಡ್ ನಟ ಸೋನು ಸೂದ್ ಕೋರೋನ ಸಂಕಷ್ಟದ ಸಂದರ್ಭದಲ್ಲಿ ಅನೇಕ ಬಡ ಕುಟುಂಬಗಳಿಗೆ ನೆರವಾಗಿದ್ದು ಅವರ ನಿಕಲ್ಮಷ ಸೇವೆಗೆ ಬಂಟ್ವಾಳದ ಅಭಿಮಾನಿಯೊಬ್ಬರು ಅವರ ಕಾರಿನ ಮೈಮೇಲೆ ಸೋನು ಸೂದ್ ಭಾವಚಿತ್ರಗಳ ಹಚ್ಚೆ ಹಾಕಿಸಿ ವಿಶೇಷ ರೀತಿಯ ಮೂಲಕ ಗೌರವವನ್ನು ಸಲ್ಲಿಸಿದ್ದಾರೆ.
ಕೊರೋನ ಎಂಬ ಕಾಣದ ವೈರಸ್ ಅದೆಷ್ಟೋ ಜನರ ಪಾಲಿಗೆ ಯಮನಾಗಿ ಬಡ ಕುಟುಂಬಗಳ ಜೀವನಕೆ ಹೆಮ್ಮರಿಯಂತೆ ವಕ್ಕರಿಸಿದ ಸಂದರ್ಭದಲ್ಲಿ ಸಾವಿರಾರು ಕುಟುಂಬಗಳು ಲಾಕ್ ಡೌನ್ ನಿಂದಾಗಿ ಸಂಕಷ್ಟಕ್ಕೆ ಸಿಲುಕಿದ ಸಂದರ್ಭದಲ್ಲಿ ನೊಂದವರ ಪಾಲಿಗೆ ಮನೆ ಮಗನಂತೆ ಎಲ್ಲರ ಕಷ್ಟಕ್ಕೆ ಸ್ಪಂದಿಸಿದ ನಟ ಸೋನು ಸೂದ್ ಕಳೆದ ವರುಷ ಲಾಕ್ ಡೌನ್ ಆರಂಭವಾದ ನಂತರ ಜನಸಾಮಾನ್ಯರಿಗೆ ಸಹಾಯ ಮಾಡುತ್ತಾ ಬಂದಿದ್ದಾರೆ  ವಲಸೆ ಕಾರ್ಮಿಕರನ್ನು ಮನೆಗೆ ತಲುಪಿಸುವ ವ್ಯವಸ್ಥೆ , ಆಕ್ಸಿ ಜನ್ ಅಗತ್ಯ ಇದವರಿಗೆ ನೆರವಾಗಿ ಬೆಡ್ ವ್ಯವಸ್ಥೆ ಮಾಡಿಸಿ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದಲ್ಲಿ ಒಂದು ಕೋಟಿ ರೂ. ಗೂ ಅಧಿಕ ಉತ್ಪಾದನಾ ಘಟಕ ಕ್ಕೆ ಶೇ .80 ರಷ್ಟು ನೆರವು ನೀಡುವ ಮೂಲಕ ಲಕ್ಷಾಂತರ ಜನರ ಪ್ರೀತಿ , ಆಶೀರ್ವಾದಕೆ ಪಾತ್ರರಾಗಿ ಯುವಕರಿಗೆ ಮತ್ತು ಅವರ ಅಭಿಮಾನಿಗಳಿಗೆ ಸ್ಫೂರ್ತಿಯಾಗಿದ್ದಾರೆ .
ಸೂದ್ ಅವರ ಅನೇಕ ಸಮಾಜ ಸೇವೆಗೆ ಶರಣಾಗಿ ರಿಯಲ್ ಹೀರೋನ ಅಭಿಮಾನಿ ಯದವರಲ್ಲಿ ಕರಾವಳಿಯ ಬಂಟ್ವಾಳದ ಜಕ್ರಿಬೆಟ್ಟು ನಿವಾಸಿ ಶ್ರೀ ಪ್ರಸಾದ್ ಆಚಾರ್ಯ ಕೂಡ ಒಬ್ಬರು ಶ್ರೀ ಟಾಕೀಸ್ ಸ್ಟುಡಿಯೋ ನಡೆಸುತ್ತಾ ಫೋಟೋ/ವಿಡಿಯೋಗ್ರಾಫರ್ ಕಿರುಚಿತ್ರ,ಸಂಗೀತ,ಆಲ್ಬಂ ಚಿತ್ರೀಕರಣದಲ್ಲಿ ತಮ್ಮನ್ನು ತೊಡಗಿಸಿಕೊಂಡು ಹೆಸರಾದ ಇವರು ತಮ್ಮ ಇಯನ್ ಕಾರಿನ ಬಲ ಎಡ ಭಾಗಗಳಲ್ಲಿ ಹಿಂದಿನ ಗಾಜು ತುಂಬೆಲ್ಲ ಕೋವಿಡ್ ಸೇವೆಗಳ ವಿವರ ಹಾಗೂ ಸೋನು ಘೋಷಣೆಯಾದ ‘ನಾನು ಇರುವುದು ರಾಜಕೀಯ ಕ್ಕಾಗಿ ಅಲ್ಲ ಬದಲು ಹೃದಯಗಳ ಗೆಲ್ಲಲು’ ಎಂಬ ಮಾತಿನಂತೆ ಬರಹಗಳನ್ನು ಬರೆಸುವ ಮೂಲಕ ಅಭಿಮಾನಿಯಾಗಿ ಪ್ರೀತಿಯ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ  ಪ್ರಸಾದ್ ಸಹೋದರಿ ಸತ್ ನೀಡಿದ್ದು ಅವರ ಅಭಿಮಾನಕ್ಕೆ ಸೋನು ಸೂದ್ ಟ್ವೀಟ್ ಮೂಲಕ ಅಭಿನಂದಿಸಿದ್ದಾರೆ .
# ಸುಕನ್ಯ ಎನ್. ಆರ್
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಸೌದೆ ಬೇಡಿಕೆ ಏರಿಕೆ ಹಿನ್ನೆಲೆ | ಅಕ್ರಮ ಮರ ಕಡಿತಲೆ ತಡೆಯಲು ಸಚಿವ ಈಶ್ವರ ಖಂಡ್ರೆ ಕಟ್ಟುನಿಟ್ಟಿನ ಸೂಚನೆ

ಸೌದೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆ ಅಕ್ರಮ ಮರ ಕಡಿತಲೆ ತಡೆಯಲು ಸಚಿವ ಈಶ್ವರ…

8 hours ago

ಕೃಷಿ ಗುರಿ ಕೇವಲ ‘ಆಹಾರ ಭದ್ರತೆ’ ಅಲ್ಲ, ಅದನ್ನೂ ಮೀರಿದ ಕೃಷಿ ಚಿಂತನೆ ಅಗತ್ಯ

ಕೃಷಿಯ ಮೂಲಕ ಕೇವಲ ಆಹಾರ ಉತ್ಪಾದನೆ ಹೆಚ್ಚಿಸುವುದಕ್ಕಿಂತ ಸಮಾನ ವಿತರಣೆ, ಪರಿಸರ ಸಂರಕ್ಷಣೆ…

9 hours ago

ಪಶ್ಚಿಮ ಏಷ್ಯಾ ಯುದ್ಧದ ಪರಿಣಾಮ | ಭಾರತೀಯ ಟಯರ್ ಉದ್ಯಮಕ್ಕೆ ತುರ್ತು ನೆರವಿನ ಬೇಡಿಕೆ

ಪಶ್ಚಿಮ ಏಷ್ಯಾ ಯುದ್ಧದ ಪರಿಣಾಮದಿಂದ ಭಾರತೀಯ ಟೈರ್ ಉದ್ಯಮಕ್ಕೆ ರಫ್ತು ಮತ್ತು ವೆಚ್ಚದ…

10 hours ago

ಗೃಹ ಬಳಕೆ ಗ್ಯಾಸ್ ಕೊರತೆ ಇಲ್ಲ : ವದಂತಿಗಳಿಗೆ ಕಿವಿಗೊಡಬೇಡಿ — ಸಮಸ್ಯೆ ಇದ್ದರೆ ಈ ಸಹಾಯವಾಣಿ ಸಂಪರ್ಕಿಸಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗೃಹ ಬಳಕೆ ಗ್ಯಾಸ್ ಸಿಲಿಂಡರ್ ಕೊರತೆ ಇಲ್ಲ ಎಂದು…

11 hours ago

ಪಿಎಂ ಕಿಸಾನ್‌ 22ನೇ ಕಂತು ಬಿಡುಗಡೆಗೆ ಸಿದ್ಧತೆ | 9.32 ಕೋಟಿ ರೈತರಿಗೆ ₹18,640 ಕೋಟಿ ನೇರ ನಗದು

ಪಿಎಂ ಕಿಸಾನ್ ಯೋಜನೆಯ 22ನೇ ಕಂತಿನ ಹಣವನ್ನು ಪ್ರಧಾನಿ ಮೋದಿ ಬಿಡುಗಡೆ ಮಾಡಲಿದ್ದಾರೆ.…

24 hours ago