ಬಡವರ ಪಾಲಿಗೆ ಮನೆ ಮಗನಾಗಿ,ದೇಶದ ರಿಯಲ್ ಹೀರೋ ಎಂದು ಕರೆಸಿಕೊಂಡು ಸಿನಿಮಾದಲ್ಲಿ ಕಳನಾಯಕನಾಗಿ ಅಭಿನಯಿಸುತ್ತಿರುವ ಬಾಲಿವುಡ್ ನಟ ಸೋನು ಸೂದ್ ಕೋರೋನ ಸಂಕಷ್ಟದ ಸಂದರ್ಭದಲ್ಲಿ ಅನೇಕ ಬಡ ಕುಟುಂಬಗಳಿಗೆ ನೆರವಾಗಿದ್ದು ಅವರ ನಿಕಲ್ಮಷ ಸೇವೆಗೆ ಬಂಟ್ವಾಳದ ಅಭಿಮಾನಿಯೊಬ್ಬರು ಅವರ ಕಾರಿನ ಮೈಮೇಲೆ ಸೋನು ಸೂದ್ ಭಾವಚಿತ್ರಗಳ ಹಚ್ಚೆ ಹಾಕಿಸಿ ವಿಶೇಷ ರೀತಿಯ ಮೂಲಕ ಗೌರವವನ್ನು ಸಲ್ಲಿಸಿದ್ದಾರೆ.
ಕೊರೋನ ಎಂಬ ಕಾಣದ ವೈರಸ್ ಅದೆಷ್ಟೋ ಜನರ ಪಾಲಿಗೆ ಯಮನಾಗಿ ಬಡ ಕುಟುಂಬಗಳ ಜೀವನಕೆ ಹೆಮ್ಮರಿಯಂತೆ ವಕ್ಕರಿಸಿದ ಸಂದರ್ಭದಲ್ಲಿ ಸಾವಿರಾರು ಕುಟುಂಬಗಳು ಲಾಕ್ ಡೌನ್ ನಿಂದಾಗಿ ಸಂಕಷ್ಟಕ್ಕೆ ಸಿಲುಕಿದ ಸಂದರ್ಭದಲ್ಲಿ ನೊಂದವರ ಪಾಲಿಗೆ ಮನೆ ಮಗನಂತೆ ಎಲ್ಲರ ಕಷ್ಟಕ್ಕೆ ಸ್ಪಂದಿಸಿದ ನಟ ಸೋನು ಸೂದ್ ಕಳೆದ ವರುಷ ಲಾಕ್ ಡೌನ್ ಆರಂಭವಾದ ನಂತರ ಜನಸಾಮಾನ್ಯರಿಗೆ ಸಹಾಯ ಮಾಡುತ್ತಾ ಬಂದಿದ್ದಾರೆ ವಲಸೆ ಕಾರ್ಮಿಕರನ್ನು ಮನೆಗೆ ತಲುಪಿಸುವ ವ್ಯವಸ್ಥೆ , ಆಕ್ಸಿ ಜನ್ ಅಗತ್ಯ ಇದವರಿಗೆ ನೆರವಾಗಿ ಬೆಡ್ ವ್ಯವಸ್ಥೆ ಮಾಡಿಸಿ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದಲ್ಲಿ ಒಂದು ಕೋಟಿ ರೂ. ಗೂ ಅಧಿಕ ಉತ್ಪಾದನಾ ಘಟಕ ಕ್ಕೆ ಶೇ .80 ರಷ್ಟು ನೆರವು ನೀಡುವ ಮೂಲಕ ಲಕ್ಷಾಂತರ ಜನರ ಪ್ರೀತಿ , ಆಶೀರ್ವಾದಕೆ ಪಾತ್ರರಾಗಿ ಯುವಕರಿಗೆ ಮತ್ತು ಅವರ ಅಭಿಮಾನಿಗಳಿಗೆ ಸ್ಫೂರ್ತಿಯಾಗಿದ್ದಾರೆ .
ಸೂದ್ ಅವರ ಅನೇಕ ಸಮಾಜ ಸೇವೆಗೆ ಶರಣಾಗಿ ರಿಯಲ್ ಹೀರೋನ ಅಭಿಮಾನಿ ಯದವರಲ್ಲಿ ಕರಾವಳಿಯ ಬಂಟ್ವಾಳದ ಜಕ್ರಿಬೆಟ್ಟು ನಿವಾಸಿ ಶ್ರೀ ಪ್ರಸಾದ್ ಆಚಾರ್ಯ ಕೂಡ ಒಬ್ಬರು ಶ್ರೀ ಟಾಕೀಸ್ ಸ್ಟುಡಿಯೋ ನಡೆಸುತ್ತಾ ಫೋಟೋ/ವಿಡಿಯೋಗ್ರಾಫರ್ ಕಿರುಚಿತ್ರ,ಸಂಗೀತ,ಆಲ್ಬಂ ಚಿತ್ರೀಕರಣದಲ್ಲಿ ತಮ್ಮನ್ನು ತೊಡಗಿಸಿಕೊಂಡು ಹೆಸರಾದ ಇವರು ತಮ್ಮ ಇಯನ್ ಕಾರಿನ ಬಲ ಎಡ ಭಾಗಗಳಲ್ಲಿ ಹಿಂದಿನ ಗಾಜು ತುಂಬೆಲ್ಲ ಕೋವಿಡ್ ಸೇವೆಗಳ ವಿವರ ಹಾಗೂ ಸೋನು ಘೋಷಣೆಯಾದ ‘ನಾನು ಇರುವುದು ರಾಜಕೀಯ ಕ್ಕಾಗಿ ಅಲ್ಲ ಬದಲು ಹೃದಯಗಳ ಗೆಲ್ಲಲು’ ಎಂಬ ಮಾತಿನಂತೆ ಬರಹಗಳನ್ನು ಬರೆಸುವ ಮೂಲಕ ಅಭಿಮಾನಿಯಾಗಿ ಪ್ರೀತಿಯ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ ಪ್ರಸಾದ್ ಸಹೋದರಿ ಸತ್ ನೀಡಿದ್ದು ಅವರ ಅಭಿಮಾನಕ್ಕೆ ಸೋನು ಸೂದ್ ಟ್ವೀಟ್ ಮೂಲಕ ಅಭಿನಂದಿಸಿದ್ದಾರೆ .
# ಸುಕನ್ಯ ಎನ್. ಆರ್
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel