Advertisement
MIRROR FOCUS

ಕ್ಯಾನ್ಸರ್ ಚಿಕಿತ್ಸೆಯಲ್ಲೊಂದು ಆಶಾಕಿರಣ

Share
ಕ್ಯಾನ್ಸರ್ ಎಂಬ ಪದ ಕಿವಿಗೆ ಬೀಳುತ್ತಲೇ ಭಯ ಬೀಳುವುದು  ಸಹಜ.  ದೇಹದ ಪ್ರತಿಕಣವನ್ನೂ ಹೀರಿ ಹಿಪ್ಪೆ‌ಮಾಡುವ ಕ್ಯಾನ್ಸರ್ ನ್ನು ಗೆಲ್ಲುವುದಕ್ಕೆ , ಹೋರಾಡುವುದಕ್ಕೆ ವೈದ್ಯಕೀಯ ನೆರವಿನೊಂದಿಗೆ ಮಾನಸಿಕ ಸ್ಥೈರ್ಯವೂ ಅತ್ಯಗತ್ಯ.
ಜಗತ್ತಿನಲ್ಲಿ ದಿನನಿತ್ಯ ಎಷ್ಟೋ ಸಂಶೋಧನೆಗಳು  ಆಗುತ್ತಿರುತ್ತವೆ.  ಅವುಗಳಲ್ಲಿ ಕೆಲವು ಜೀವರಕ್ಷಕಗಳು.  ಇತ್ತೀಚೆಗೆ ನಡೆದ ಸಂಶೋಧನೆ  ನಮ್ಮನ್ನೆಲ್ಲಾ ಅಚ್ಚರಿಗೊಳಿಸಿತು ಮಾತ್ರವಲ್ಲ ಕರುನಾಡಿನ ಜನತೆ ಹೆಮ್ಮೆ ಪಡುವಂತಹ ಸಂಗತಿ ಇದಾಗಿದೆ.  ಈ ಸಂಶೋಧನೆಯ ರುವಾರಿ ನಮ್ಮ  ಊರಿನ ಡಾ. ಶಾಮ ಮಾಯಿಲಂಕೋಡಿ.

ಕ್ಯಾನ್ಸರ್  ಬಗ್ಗೆ  ಅಧ್ಯಯನ ಮಾಡಿಯೇ ಸಿದ್ಧ ಎಂಬುದು  ಶಾಮ ಅವರು ತನ್ನ ಪದವಿ ಪೂರ್ವ ಶಿಕ್ಷಣ ಕಾಲದಲ್ಲೇ ಕಂಡ  ಕನಸಾಗಿತ್ತು . ಇದು ನನಸಾದ ಬಗ್ಗೆ ಅಮ್ಮ ಶ್ಯಾಮಲಾ  ಮಾಯಿಲಂಕೋಡಿ ಹಾಗೂ ತಂದೆ ನಾರಾಯಣ  ಭಟ್ ಮಾಯಿಲಂಕೋಡಿಯವರು   ಹೆಮ್ಮೆಯಿಂದ   ಹೇಳುತ್ತಾರೆ.  ನಾರಾಯಣ ಭಟ್ ರವರು ಕರ್ನಾಟಕ ಬ್ಯಾಂಕ್ ನ ವಿವಿಧ ಹುದ್ದೆಗಳನ್ನು ನಿಭಾಯಿಸಿದವರು. ಸದ್ಯ ಮಂಗಳೂರಿನಲ್ಲಿ ನೆಲೆಸಿದ್ದಾರೆ.

ಈ ಹೊಸ ಸಂಶೋಧನೆ ಕುಗ್ಗುವ ಮನಸಿಗೊಂದು ಆಶಾಕಿರಣವಾಗಿದೆ.  ಒಮ್ಮೆ ಕ್ಯಾನ್ಸರ್ ಬಂದರೆ ಗುಣಮುಖರಾಗುವುದು ಎಲ್ಲೋ ಕೆಲವರು ಎಂಬ ಅಭಿಪ್ರಾಯ ನಮ್ಮಂತಹ ಜನಸಾಮಾನ್ಯರದ್ದು.. ಅದರಲ್ಲೂ ಹಲವು ವಿಧ. ಪಾಪದ್ದು ಜೋರಿಂದು, ಶೀಘ್ರ ಹರಡುವಂತಹುದು, ಒಂದೆಡೆ ಸಣ್ಣಕೆ ಕಂಡು ಇನ್ನೆಲ್ಲೋ ಶರೀರದ ಭಾಗವನ್ನು ಪೂರ್ಣ ಆಪೋಷಣ ತೆಗೆದುಕೊಳ್ಳುವಂತಹುದು. ಇನ್ನೂ ಕೆಲವು ಇವೆ  ಆ ನಮೂನೆಯವು ಪತ್ತೆಯಾಗುವಾಗಲೇ ಕೊನೆಯ ಹಂತವನ್ನು  ರೋಗಿ ತಲುಪಿಯಾಗಿರುತ್ತದೆ. ಈ ನಿಟ್ಟಿನಲ್ಲಿ ಒಂದು ಮಹತ್ವದ  ಸಂಶೋಧನೆ ಹೊಸ ಭರವಸೆಯನ್ನು ನಮ್ಮಲ್ಲಿ ಮೂಡಿಸಿದೆ.
ಅಮೇರಿಕಾದ ಮೆಮೋರಿಯಲ್ ಸ್ಲೋನ್ ಕೆಟ್ಟರಿಂಗ್ ಕ್ಯಾನ್ಸರ್ ಸೆಂಟರ್(MSKCC)   ಟಿ ಸೆಲ್ ಥೆರಪಿ  ಚಿಕಿತ್ಸೆಯನ್ನು ಅಭಿವೃದ್ಧಿ ಪಡಿಸಿದೆ.   ಶೀಫ್ರವಾಗಿ  ಕ್ಯಾನ್ಸರ್ ಮುಕ್ತರಾಗಲು ಈ ಕೋಶ ಥೆರಪಿ ಸಹಾಯ ಮಾಡುತ್ತದೆ. ಮಲ್ಟಿಪಲ್ ಮೈಲೋಮ ಅಂದರೆ ಬಿಳಿ ರಕ್ತಕಣಗಳ  ಕ್ಯಾನ್ಸರ್ ಈವರೆಗೂ ಗುಣಪಡಿಸುವುದು ಅಸಾಧ್ಯವೆಂದೇ ನಂಬಲಾಗಿತ್ತುಈ  ಚಿಕಿತ್ಸೆ ಮಲ್ಟಿಪಲ್ ಮೈಲೋಮವನ್ನು ಗುಣಪಡಿಸುವ ನಿಟ್ಟಿನಲ್ಲಿ ಅಭಿವೃದ್ಧಿ ಪಡಿಸಲಾಗಿತ್ತು.    ಹಾಗೂ  ಮುಂದಿನ ಅಧ್ಯಯನ ಈ ವಿಷಯದಲ್ಲಿ ನಡೆಸಲಾಗುತ್ತಿದೆ. ಈ  ಸಂಶೋಧನಾ ಕಾರ್ಯದ ಪ್ರಮುಖ ವ್ಯಕ್ತಿ  ಯುವ ವೈದ್ಯ ಡಾ ಶಾಮ ನಮ್ಮೂರಿನವೆರೆಂಬುದು  ಖುಷಿಯ ಸಂಗತಿ.
ತಮ್ಮ ಬಾಲ್ಯದ ವಿದ್ಯಾಭ್ಯಾಸವನ್ನು ಮಂಗಳೂರಿನಲ್ಲಿ ಪಡೆದಿದ್ದಾರೆ. ಕೆ. ಎಸ್ ಹೆಗ್ಡೆ ಮೆಡಿಕಲ್ ಕಾಲೇಜಿನಲ್ಲಿ ಓದಿ ಹೆಚ್ಚಿನ  ವಿಧ್ಯಾಭ್ಯಾಸವನ್ನು   ಅಮೇರಿಕಾದ ಪ್ರತಿಷ್ಠಿತ ವಿದ್ಯಾ ಸಂಸ್ಥೆಯಲ್ಲಿ ಪಡೆದರು. ಸಧ್ಯ ನ್ಯೂಯಾರ್ಕ್ ನಗರದಲ್ಲಿ  ಪತ್ನಿ ಶುಭ, ಮಕ್ಕಳಾದ ಗಂಗಾ, ವಿಧಾಂತರಾಮರೊಂದಿಗೆ  ವೃತ್ತಿ ನಿರತರಾಗಿದ್ದಾರೆ.
ಡಾ.ಶಾಮ ಅವರ ಮಹತ್ವಾಕಾಂಕ್ಷೆಯ  ಅಧ್ಯಯನದ ಕನಸುಗಳು  ಸಮಾಜಕ್ಕೆ ಇನ್ನಷ್ಟು  ಉಪಯುಕ್ತ ಕೊಡುಗೆಯನ್ನು ಕೊಡುವಂತಾಗಲಿ  ಎಂಬ ಹಾರೈಕೆ  ನಮ್ಮೆಲ್ಲರದ್ದು.
# ಅಶ್ವಿನಿ ಮೂರ್ತಿ ಅಯ್ಯನಕಟ್ಟೆ.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

Published by
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

Recent Posts

ಶಿರಾಡಿ ಘಾಟ್‌ನಲ್ಲಿ ಸೋಮವಾರ ಟ್ರಾಫಿಕ್‌ ಸಂಕಷ್ಟದ ಸಾಧ್ಯತೆ – ಮುಂಜಾಗ್ರತಾ ಕ್ರಮ ಅಗತ್ಯ

ಮೂರು ದಿನಗಳ ರಜೆ ಮುಗಿಯುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ಮಧ್ಯಾಹ್ನದ ಬಳಿಕ ಶಿರಾಡಿ ಘಾಟ್‌ನಲ್ಲಿ…

1 hour ago

ಹವಾಮಾನ ವರದಿ |13-09-2026 | ಕರ್ನಾಟಕದಲ್ಲಿ ಮಳೆ ಮತ್ತೆ ಹಂತ ಹಂತವಾಗಿ ಚುರುಕಾಗಬಹುದೇ?

ಕರ್ನಾಟಕದಲ್ಲಿ ಸದ್ಯ ಮಳೆ ಕಡಿಮೆಯಾಗಿದ್ದು, ಬಿಸಿಲು ಹೆಚ್ಚಾಗಿರುವ ನಡುವೆಯೇ ಸೆ.14ರಿಂದ ದಕ್ಷಿಣ ಒಳನಾಡಿನಲ್ಲಿ…

10 hours ago

ರೈತರ ಆದಾಯ ಹೆಚ್ಚಿಸಲು ಬಹುಬೆಳೆ, ಪಶುಸಂಗೋಪನೆ, ಮೀನುಗಾರಿಕೆಗೆ ಒತ್ತು

ನೀರಿನ ಕೊರತೆ ಮತ್ತು ಹವಾಮಾನ ಬದಲಾವಣೆಯ ನಡುವೆ ಭತ್ತ–ಗೋಧಿಯಂತಹ ಹೆಚ್ಚಿನ ನೀರು ಮತ್ತು…

14 hours ago

ಹವಾಮಾನ ವರದಿ | 12.09.2026 | ಸೆ.15ರಿಂದ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮಳೆ ಚುರುಕು? ಕರಾವಳಿ–ಮಲೆನಾಡಿನಲ್ಲಿ ಸದ್ಯ ಬಿಸಿಲಿನ ವಾತಾವರಣ

ಕರ್ನಾಟಕದ ಬಹುತೇಕ ಭಾಗಗಳಲ್ಲಿ ಸದ್ಯ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣ ಮುಂದುವರಿಯುವ…

1 day ago

ಹಸುವಿನ ಹಾಲಿಗೆ ಬದಲಾಗಿ ‘ಲ್ಯಾಬ್‌ ಹಾಲು’ – ಇನ್ನು ಕೇವಲ ವಿಜ್ಞಾನಕಲ್ಪನೆ ಅಲ್ಲ..! ಹೊಸ ಅಧ್ಯಯನದ ಲೆಕ್ಕಾಚಾರ

ಇಂಪೀರಿಯಲ್ ಕಾಲೇಜ್ ಲಂಡನ್‌ನ ಅಧ್ಯಯನದ ಪ್ರಕಾರ, precision fermentation ಮೂಲಕ ತಯಾರಿಸುವ ಹಾಲಿಗೆ…

2 days ago

ಅಡಿಕೆಗೆ ಉತ್ತಮ ಬೆಲೆ , ಆದರೂ ಬೆಳೆಗಾರರ ಚಿಂತೆ ಮುಂದುವರಿದಿದೆ – ಕಾರಣವೇನು?

ಅಡಿಕೆ ಧಾರಣೆ ಏರಿಳಿತ ಅಡಿಕೆ ಬೆಳೆಗಾರರನ್ನು ಚಿಂತೆಗೀಡು ಮಾಡುತ್ತಿದೆ. ಇದಕ್ಕೆ ಭಾರತ ಮಾತ್ರವಲ್ಲ…

2 days ago