ನಾಡಿನಾದ್ಯಂತ ಗಣೇಶ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಗುತ್ತಿದೆ.ಮೈಸೂರಿನ ಈ ಗಣಪ ಹಾಗೂ ಇಲ್ಲಿರುವ ಪ್ರತಿಮೆಗಳು ಗಮನ ಸೆಳೆದಿದೆ. ದೇಶ ಹಾಗೂ ರಾಜ್ಯದ ಗಮನಸೆಳೆದ ಮೈಸೂರಿನ ಪ್ರಮುಖರ ಮಣ್ಣಿನ ಆಕೃತಿಯನ್ನು ಗಣಪತಿ ಮೂಲಕ ಪ್ರಸ್ತುತಪಡಿಸುವ ಕಾರ್ಯಕ್ಕೆ ಮೈಸೂರಿನ ಕಲಾವಿದ ರೇವಣ್ಣ ಮುಂದಾಗಿದ್ದಾರೆ. ಇದು ಈ ಬಾರಿಯ ವಿಶೇಷ.
ಈ ಬಾರಿ ಗೌರಿ ಗಣೇಶ ಹಬ್ಬದ ಪ್ರಯುಕ್ತ ವಿಶೇಷ ಗಣೇಶನ ಮಣ್ಣಿನ ಆಕೃತಿಯೊಂದಿಗೆ ವಿವಿಧ ಕ್ಷೇತ್ರಗಳಲ್ಲಿ ಗಮನ ಸೆಳೆದ ಜಿಲ್ಲೆಯ ಪ್ರಮುಖರಾದ ಕಲಾವಿದ ಅರುಣ್ ಯೋಗಿ ರಾಜ್, ಮೇಘಾಲಯ ರಾಜ್ಯಪಾಲ ಹಾಗೂ ಮೈಸೂರಿನವರೇ ಆದ ಸಿ ಹೆಚ್ ವಿಜಯ್ ಶಂಕರ್ ಹಾಗೂ ಮೈಸೂರು ಕೊಡಗು ಸಂಸದ ಯದುವೀರ ಕೃಷ್ಣದತ್ತ ಒಡೆಯರ್ ಹಾಗೂ ಶ್ರೇಷ್ಠ ನಟನೆಗೆ ರಾಷ್ಟ್ರ ಪ್ರಶಸ್ತಿ ಪಡೆದ ನಟ ರಿಷಬ್ ಶೆಟ್ಟಿ ಅವರ ಮಣ್ಣಿನಾಕೃತಿ ರಚಿಸುವ ಮೂಲಕ ಕಲಾವಿದ ಮೈಸೂರಿನ ಕುಂಬಾರಗೇರಿಯ ಕಲಾವಿದ ರೇವಣ್ಣ ಜನರ ಗಮನ ಸೆಳೆದಿದ್ದಾರೆ.
ಮಣ್ಣಿನಲ್ಲಿ ಪರಿಸರ ಮಾಲಿನ್ಯ ಮುಕ್ತ ಬಗೆ ಬಗೆಯ ಗಣಪತಿಗಳನ್ನು ತಯಾರಿಸುವ ಕಲಾವಿದ ರೇವಣ್ಣ ಈ ಬಾರಿ ಗಣೇಶನ ಮಣ್ಣಿನಾಕೃತಿಯೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಮಣ್ಣಿನ ಆಕೃತಿ ಹಾಗೂ ಅಯೋದ್ಯೆಯಲ್ಲಿ ಶ್ರೀರಾಮ ಲಲ್ಲನ ವಿಗ್ರಹ ಕೆತ್ತಿದ ಮೈಸೂರಿನ ಕಲಾವಿದ ಅರುಣ್ ಯೋಗಿ ರಾಜ್ ಅವರ ಮಣ್ಣಿನ ಆಕೃತಿಯನ್ನು ಗಣೇಶನ ವಿಗ್ರಹದಲ್ಲಿ ಪೂಜೆ ಸಲ್ಲಿಸುವ ಮಾದರಿ ತಯಾರಿಸುವ ಮೂಲಕ ಗೌರವ ಸಲ್ಲಿಸಿದ್ದಾರೆ.
ಇಂದು ರಾಜ್ಯದ ವಿವಿದೆಡೆ ಮಳೆಯ ವಾತಾವರಣ ಇದೆ. ಮಳೆಯ ವಾತಾವರಣವು ಮುಂದಿನ 10…
ಗುಜ್ಜೆ ಬೋಂಡಾಕ್ಕೆ ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ : ಗುಜ್ಜೆ 3/4…
ಮಲೆನಾಡಿನ- ಕರಾವಳಿಯ ಅಡಿಕೆ ಬೆಳೆಗಾರರು ಎಲೆಚುಕ್ಕಿ ಹಳದಿ ಎಲೆ ರೋಗಬಾಧೆ ಗಿಂತ ಮೊದಲು…
ಸಾರ್ವಜನಿಕ ಬದುಕು ಅಂದರೆ ಹತ್ತಾರು ಜನರೊಡನೆ ಕೂಡಿ ಕೆಲಸ ಮಾಡಬೇಕು.ಈ ಹತ್ತಾರು ಜನ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ಹಾವೇರಿ, ಗದಗ, ವಿಜಯನಗರ, ಕೊಪ್ಪಳ, ಬಳ್ಳಾರಿ ಜಿಲ್ಲೆಗಳ ಕುಡಿಯುವ ನೀರಿನ ಯೋಜನೆಗಳಿಗೆ ಹಾಗೂ…