ಮಲೆನಾಡ ಗಿಡ್ಡ ಗೋತಳಿಗಳನ್ನು ಉಳಿಸಿ ಸಂವರ್ಧಿಸಬೇಕು ಏಕೆ..?

May 15, 2024
2:29 PM
ಮಲೆನಾಡಗಿಡ್ಡ ಹಸುಗಳು ಬಹಳ ಮಹತ್ವದ ಅಂಶಗಳನ್ನು ಹೊಂದಿವೆ. ಅಂತಹ ವಿಶೇಷತೆಗಳ ಕಾರಣದಿಂದಲೇ ಈ ಗೋವುಗಳು ಉಳಿಯಬೇಕು, ಉಳಿಸಬೇಕು.

ಭಾರತೀಯ ಗೋತಳಿಗಳು ಎಲ್ಲವೂ ವಿಶಿಷ್ಟವಾದ ಗುಣಗಳನ್ನು ಹೊಂದಿವೆ. ಹಾಲಿಗಾಗಿ ಮಾತ್ರಾ ಈ ಗೋವುಗಳು ಅಲ್ಲ. ಉಳಿದೆಲ್ಲಾ ಹಸುಗಳಿಗಿಂತ ಹೆಚ್ಚಿನ ಗುಣಧರ್ಮಗಳನ್ನು ಹೊಂದಿವೆ. ಆಯಾ ಭಾಗಕ್ಕೆ ಹೊಂದಿಕೊಳ್ಳುವ ಭಾರತೀಯ ಗೋತಳಿಗಳು ಆಯಾ ಪ್ರದೇಶದಲ್ಲಿ ತನ್ನದೇ ಆದ ವಿಶೇಷತೆಯನ್ನು ಹೊಂದಿದೆ. ಅಂತಹದ್ದರಲ್ಲಿ ಮಲೆನಾಡು ಗಿಡ್ಡ ಗೋತಳಿಯೂ ಒಂದು. ಈ ತಳಿ ಉಳಿಯಬೇಕು ಏಕೆ.? ಇಲ್ಲಿದೆ ಅದರ ವಿಶೇಷತೆಗಳು..…….ಮುಂದೆ ಓದಿ…..

Advertisement
Advertisement
  • ಮಲೆನಾಡ ಗಿಡ್ಡ ಹಸುಗಳು ಔಷಧೀಯಗುಣವುಳ್ಳ ಹಾಲು ಮತ್ತು ಇತರ ಉತ್ಪನ್ನಗಳನ್ನು ನೀಡಬಲ್ಲವು.
  • ಧಾರೋಷ್ಣ ಹಾಲು( ಆಗತಾನೇ ಕರೆದ ಬೆಚ್ಚಗಿನ ಹಾಲು) ಖಾಲಿಹೊಟ್ಟೆಗೆ ಸೇವಿಸಿದರೆ ಪಿತ್ತವನ್ನು ಶಮನ ಮಾಡುವುದು.
  • ಖಾಲಿಹೊಟ್ಟೆಗೆ ನಿರಂತರ ಒಂದು ಚಮಚ ಮಲೆನಾಡಗಿಡ್ಡ ತುಪ್ಪ ಸೇವನೆ ಗ್ಯಾಸ್ಟ್ರೈಟಿಸ್ ನಿವಾರಿಸಬಲ್ಲುದು.
  • ಹೊಟ್ಟೆಯೊಳಗಿನ ಖಾಯಿಲೆಗಳನ್ನು ನಿವಾರಿಸಿ ಜೀರ್ಣಾಂಗ ಕಾರ್ಯ ಸರಿಮಾಡುವುದು ಹಾಗೂ ಕರುಳಿನ ಸಮಸ್ಯೆಗಳನ್ನು ಪರಿಹರಿಸಿ ವಿಸರ್ಜನಾ ಕ್ರಿಯೆಗಳನ್ನು ಸಮರ್ಪಕವಾಗುವಂತೆ ಮಾಡುವುದು.
  • ಮಲೆನಾಡ ಗಿಡ್ಡ ಹಸುವಿನ ಹಾಲಿನಿಂದ ತಯಾರಿಸಿದ ಮೊಸರಿಗೆ ಅಥವಾ ಸಿಹಿಮಜ್ಜಿಗೆಗೆ ಸಕ್ಕರೆ/ ಬೆಲ್ಲ ಸೇರಿಸಿ ಸೇವಿಸುವುದರಿಂದ ಉಷ್ಣ ಸಂಬಂಧಿತ ಉದರ ರೋಗಗಳು ಶಮನವಾಗುವುದು. ಹೊಟ್ಟೆ ಸ್ವಚ್ಛವಾಗುವುದು.
  • ಹಳೆಯ ತುಪ್ಪ ನರಸಮಸ್ಯೆಯಿಂದ ಉಂಟಾದ ನೋವು ನಿವಾರಕವಾಗಿ ಹಚ್ಚಬಹುದು. ಚರ್ಮದ ಸುಕ್ಕು ನೆರಿಗೆಗಳನ್ನು ನಿವಾರಿಸಿ,ನೆತ್ತಿಗೆ ಹಾಕುವುದರಿಂದ ಕಣ್ಣಿನ ದೋಷಗಳನ್ನು ನಿವಾರಿಸುವುದು. ತಲೆ ಮತ್ತು ಪಾದಗಳಿಗೆ ಹಚ್ಚುವುದರಿಂದ ನಿದ್ರಾಹೀನತೆ ನಿವಾರಣೆಯಾಗುವುದು.
  • ಪಂಚಗವ್ಯ ಮತ್ತು ಪಂಚಗವ್ಯಘೃತ ಗಳು ಪಾಪನಿವಾರಣೆಗೆ ಸರ್ವಾಂಗ ಶುದ್ಧಿಗೆ, ವ್ಯಾಧಿ ನಿವಾರಣೆಗೆ ಬಳಕೆಯಾಗುವುದು.…….ಮುಂದೆ ಓದಿ…..
  •  ಗೋಮಯ ಗೋಮೂತ್ರಗಳಿಂದ ತಯಾರಿಸುವ ಜೀವಾಮೃತವು ಮಣ್ಣಿನ ಫಲವತ್ತತೆಯನ್ನು ಕಾಪಾಡಿ ಸಕಲವಿಧದ ಗಿಡ ಮರಗಳಿಗೆ ಉತ್ತಮ ಇಳುವರಿಯನ್ನು ನೀಡಲು ಸಹಕರಿಸುವ ಅತ್ಯತ್ತುಮ ಜೀವಾಣುವರ್ಧಕ.
  • ತಮ್ಮ ಕರುಗಳನ್ನು ಅತ್ಯಂತ ಪ್ರೀತಿಸುವ ಈ ಗೋವುಗಳ ಹಾಲಿನ ಸೇವನೆಯಿಂದ ಮನುಷ್ಯರ ಕೌಟುಂಬಿಕ ಬಾಂಧವ್ಯ ಗಟ್ಟಿಯಾಗುವುದು. ಹಲವಾರು ವರ್ಷಗಳಿಂದ ಕರುವಿಲ್ಲದೆ ಕರೆಯಬಹುದಾದ ಜೆರ್ಸಿ ಎಚ್ಚೆಫ್ ಗಳ ಹಾಲಿನ ಸೇವನೆಯಿಂದ ಮನುಷ್ಯರ ಕೌಟುಂಬಿಕ ಬಾಂಧವ್ಯಗಳು ಕ್ಷೀಣಿಸುತ್ತಿವೆ.
  • ಮಲೆನಾಡ ಗಿಡ್ಡಗಳು ಪ್ರಾಕೃತಿಕ ಏರಿಳಿತಗಳನ್ನು ಸಹಿಸಿಕೊಂಡು ತಮ್ಮನ್ನು ಕಾಪಾಡಿಕೊಳ್ಳಬಲ್ಲವು.
  • ತಮ್ಮ ಗೋಮಯದಿಂದ ಭೂಮಿಗೆ ಅಗತ್ಯವಿರುವ ಜೀವಾಣುಗಳನ್ನು ನೀಡಿ ಮಣ್ಣನ್ನು ಸಮೃದ್ಧಗೊಳಿಸಬಲ್ಲವು.ಜೀವಾಣುಗಳೇ ಪ್ರಕೃತಿಯ ಎಲ್ಲ ಜೀವಜಾಲಗಳಿಗೆ ಆಹಾರದ ಮೂಲ ಎಂಬುದು ಇಂದಿನ ಅತ್ಯಾಧುನಿಕ ಸಂಶೋಧನೆಯಿಂದ ಕಂಡುಬರುತ್ತಾ ಇದೆ. ಸಸ್ಯಗಳಿಗೆ ಪೋಷಕಾಂಶಗಳನ್ನು ಪರಿವರ್ತಿಸಿ ಕೊಡಬಲ್ಲ,ಖನಿಜಾಂಶಗಳನ್ನು ಕರಗಿಸಿಕೊಡಬಲ್ಲ ಜೀವಾಣುಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿರುವುದು ದೇಶೀ ಹಸುಗಳ ಸೆಗಣಿಯಲ್ಲಿ. ಅದರಲ್ಲೂ ಮಲೆನಾಡ ಗಿಡ್ಡಗಳ ಸೆಗಣಿಯ ಪದರಿನ ಮಧ್ಯೆ ಇರುವ ಲೋಳೆಯಂತಹ ವಸ್ತು ಆ ಜೀವಾಣುಗಳ ಆಗರ. ಅವುಗಳನ್ನು ಭೂಮಿಗೆ ನೀಡುತ್ತಾ ಭೂಮಿಯನ್ನು ಸಸ್ಯಶ್ಯಾಮಲೆಯಾಗಿಸುವತ್ತ ಮಲೆನಾಡ ಗಿಡ್ಡಗಳ ಕೊಡುಗೆ ಅಪಾರ.
  • ಮಲೆನಾಡ ಗಿಡ್ಡ ಗೋವುಗಳುದೈವಿಕ ಪ್ರಭಾವಲಯವನ್ನು ಹೆಚ್ಚಿಸಿ ಋಣಾತ್ಮಕ ಶಕ್ತಿಯನ್ನು ದೂರಮಾಡಬಲ್ಲವು. ಇದು ಸೂಕ್ಷ್ಮಾವಲೋಕನಕ್ಕೆ ಮಾತ್ರ ಗೋಚರವಾಗಬಲ್ಲುದು.
  • ಗೋವಂಶವನ್ನು ಮನೆಯ ದಕ್ಷಿಣ ಭಾಗದಲ್ಲಿ ಸಾಕಿದರೆ ವಾಸ್ತುದೋಷವನ್ನು ಪರಿಹರಿಸಬಲ್ಲವು.
  • ಹೊಸದಾಗಿ ಕಟ್ಟುವ ಮನುಷ್ಯರ ಗೃಹಗಳ ಸ್ಥಳದಲ್ಲಿ ಒಂದು ಹಗಲು ಮತ್ತು ಒಂದು ಇರುಳು ಗೋವುಗಳು ನೆಲೆಸಿ ಆಹಾರ ಸೇವಿಸಿ ಗೋಮಯ ಗೋಮೂತ್ರಗಳನ್ನು ಸುರಿಸಿದರೆ ಆ ಸ್ಥಳದ ಸಂಪೂರ್ಣ ಋಣಾತ್ಮಕ ಶಕ್ತಿ ನಿವಾರಣೆಯಾಗುವುದು.
  • ಮಾನವನು ತನ್ನ ಸ್ವಾರ್ಥಕ್ಕಾಗಿ ಮಾಡುವ ಕೆಲಸಗಳಿಂದ ಸಂಗ್ರಹವಾಗುವ ಪಾಪವನ್ನು ಸುಲಭವಾಗಿ ಗೋಗ್ರಾಸ ಗೋ ಸೇವೆಗಳಿಂದ ಪರಿಹರಿಸಲು ಗೋವುಗಳು ಬೇಕೇ ಬೇಕು.
  • ಮನುಷ್ಯನ ಜೊತೆಗೆ ಅನಾದಿಕಾಲದ ಒಡನಾಟದಿಂದ ಮನುಷ್ಯನ ಸ್ವಭಾವ ಅರಿತ ಗೋವುಗಳು ಆತನ ಇಂಗಿತವನ್ನು ಅರಿತು ಶಿಕ್ಷೆ ಮತ್ತು ರಕ್ಷೆ ಎರಡನ್ನೂ ನೀಡಲು ಸಮರ್ಥವಾಗಿರುತ್ತವೆ.

ಅದಕ್ಕಾಗಿಯೇ ಅವುಗಳನ್ನು ಕಾಮಧೇನು(ಬೇಡಿದ್ದನ್ನು ನೀಡುವ ದೇವತಾ ಗೋವು)ವಿನ ಸಂತತಿ ಎಂದು ನಂಬಲಾಗಿದೆ. ಇಂತಹ ಯೋಗ್ಯತೆಗಳಿರುವ ಮಲೆನಾಡಗಿಡ್ಡಗಳನ್ನು ಗುರುತಿಸುವುದು ಹೇಗೆ?

Advertisement

ಮಲೆನಾಡಗಿಡ್ಡಗಳ ಗಾತ್ರ ಚಿಕ್ಕದು. ಆಹಾರ ಕಡಿಮೆಯಾದರೂ ಬೇಗನೆ ಸೊರಗಲಾರವು. ವಿವಿಧ ಬಣ್ಣ ಹಾಗೂ ವಿವಿಧ ಕೊಂಬಿನ ಆಕೃತಿಗಳಲ್ಲಿ ಕಂಡುಬರುವ ಗಿಡ್ಡಗಳು ಸಾಮಾನ್ಯವಾಗಿ ಕಿವಿಯ ಮೂಲಕ ತಮ್ಮ ಪರಿಶುದ್ಧತೆಯನ್ನು ತೋರಿಸ್ತವೆ. ಶಂಖದ ರಚನೆಯಂತಹ ಕಿವಿ,ತುದಿ ಸಾಕಷ್ಟು ಚೂಪಾದ ಆಕೃತಿ.ಕೆಲವಕ್ಕಿ ಕಿವಿಯೊಳಗೆ ಕಪ್ಪಾದ ಮಚ್ಚೆ, ಜೆರ್ಸಿ ಎಚ್ಚೆಫ್ಗಳ ಕಿವಿಗಳನ್ನು ನೋಡಿ ಗಿಡ್ಡಗಳ ಕಿವಿಯ ವ್ಯತ್ಯಾಸವನ್ನು ಕಂಡು ಹಿಡಿಯಬಹುದು. ಕೂದಲು ಅತ್ಯಂತ ಚಿಕ್ಕದಾಗಿರುವುದು. ನೀಳವಾದ ಬಾಲ ಕೆಲವು ಹಸುಗಳ ಬಾಲ ನೆಲಕ್ಕೆ ತಾಗುವಂತಿರುವುದು. ಬಾಲದ ತುದಿಯ ಕೂದಲು ಕೂಡ ತಲೆಕೂದಲಿನಂತೆ ನೀಳವಾಗಿರುವುದು. ಪೃಷ್ಠಭಾಗದ ಎಲುಬುಗಳು ಕಾಣದೆ ವೃತ್ತಾಕಾರವಾಗಿರುವುದು. ಹಣೆ ಹುಬ್ಬು ಬೆನ್ನು ತೊಡೆ ಹಾಗೂ ತೊಡೆಯ ಒಳಭಾಗದಲ್ಲಿ ಸುರುಳಿಯಾಕಾರದ ಕೂದಲಿನ ರಚನೆ. ಬೆನ್ನಿನ ಮೇಲೆ ರೇಖೆಯಂತಹ ರಚನೆ.ಕೆಲವಕ್ಕೆ ನೀಳ ಮುಖ ಇನ್ನು ಕೆಲವಕ್ಕೆ ಗಿಡ್ಡವೂ ಚಿಕ್ಕದೂ ಆದ ಮೂತಿ. ಕರುಗಳು ಹುಟ್ಟಿದ ಕೆಲವೇ ನಿಮಿಷದಲ್ಲಿ ಎದ್ದು ಓಡಾಡುವುದು.
ಹಸುಗಳು ತಮ್ಮ ಕರುವಿಗಾಗಿ ಹಾಲನ್ನು ಕಟ್ಟಿಡುವ ಸ್ವಭಾವ ಹೊಟ್ಟೆ ತುಂಬಿದರೆ ಆಹಾರ ಸ್ವೀಕರಿಸದ ಸ್ವಭಾವ,ಕಡಿಮೆ ನೀರು ಕುಡಿಯುವುದು. ಆಡಿನ ಹಿಕ್ಕೆಯಂತಹ ಸೆಗಣಿಯ ಉಂಡೆಗಳು ಅಥವಾ ಚಪ್ಪಟೆಯಾದ ಪದರುಗಳುಳ್ಳ ಸೆಗಣಿ
ಮೈ ಮೇಲೆ ಸೆಗಣಿಮೆತ್ತದಂತೆ ಶುಚಿಯಾಗಿಟ್ಥುಕೊಳ್ಳುವುದು ಜ್ವರದಂತಹ ಖಾಯಿಲೆ ಬಂದರೆ ಆಹಾರ ಮುಟ್ಟದಿರುವುದು. ಕರುವಿಲ್ಲದೆ ಹಾಲು ಕೊಡದಿರುವುದು. ಕರು ಹಾಕಿ ಮೂರು ನಾಲ್ಕು ತಿಂಗಳು ಮಾತ್ರ ಹಾಲು ಕೊಡುವುದು.

ಇಂತಹ ಹಲವಾರು ಅದ್ಭುತ ವಿಶೇಷತೆಯುಳ್ಳ ಮಲೆನಾಡ ಗಿಡ್ಡ ಗೋ ವಂಶವನ್ನು ಕಟುಕರ ಪಾಲಾಗದಂತೆ ರಕ್ಷಿಸಿ ಸಂವರ್ಧಿಸುವ ಗುರುತರ ಹೊಣೆಗಾರಿಕೆ ಮಾನವರ ಮೇಲಿದೆ.

Advertisement
  • ಗೋವುಗಳು ನಿರ್ಭಯವಾಗಿ ಸ್ವಚ್ಛಂದವಾಗಿ ತಿರುಗಾಡಿ ಮೇಯುವ ಅವಕಾಶವಿದ್ದ ಈ ಗೋರಾಷ್ಟ್ರವೆಂದೇ ಖ್ಯಾತವಾದ ಭರತಭೂಮಿ ಜ್ಞಾನ ಸಾಧನೆಯಲ್ಲಿ ಅತ್ಯುನ್ನತ ಮಟ್ಟಕ್ಕೆ ತಲುಪಲು ಕಾರಣ ಗೋ ಸಂತತಿ.
  • ಕೃಷಿಯಲ್ಲಿ ಸ್ವಾಲಂಬಿತನಕ್ಕೆ ಯಾವತ್ತೂ ಗೋ ಆಧಾರಿತ ಕೃಷಿಯೇ ಅಂತಿಮ ಪರಿಹಾರ.
  • ಆಹಾರವು ಪರಿಶುದ್ಧವೂ ವಿಷಮುಕ್ತವೂ ಆಗಿ ಲಭಿಸಲು ಗೋ ಆಧಾರಿತ ಕೃಷಿಯಿಂದ ಮಾತ್ರ ಸಾಧ್ಯ.

ಆದ್ದರಿಂದ ಸ್ವಚ್ಛ ಪರಿಸರದಲ್ಲಿ ಮುಕ್ತವಾಗಿ ಗೋವುಗಳು ಮೇಯಲು ತಿರುಗಾಡಿ ತಮ್ಮ ಸಂತತಿಯನ್ನು ಬೆಳೆಸುತ್ತಾ ಮುಂದಿನ ಜೀವಜಾಲದ ಪೀಳಿಗೆಯ ಉಳಿವಿಗೆ ಆಧಾರವಾದ ದೇಶೀ ತಳಿಗಳಲ್ಲಿ ಒಂದಾದ ಮಲೆನಾಡ ಗಿಡ್ಡಗಳನ್ನು ಉಳಿಸುವ  ಕಾರ್ಯದಲ್ಲಿ ಮುನ್ನಡೆಯೋಣ.

ಬರಹ :
ಮುರಲೀಕೃಷ್ಣ.ಕೆ.ಜಿ.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮುರಲೀಕೃಷ್ಣ ಕೆ ಜಿ

ಕಡಬ ತಾಲೂಕಿನ ಆಲಂತಾಯ ಗ್ರಾಮದ ಮುರಲೀಕೃಷ್ಣ ಕೆ ಜಿ ಅವರು ಕೃಷಿ ಮತ್ತು ಪೌರೋಹಿತ್ಯದ ವೃತ್ತಿಯನ್ನು ಮಾಡುತ್ತಾರೆ. ಹವ್ಯಾಸವಾಗಿ ಉಪನ್ಯಾಸ ಮತ್ತು ಲೇಖನ ಬರೆಯುತ್ತಾರೆ. ವೇದ ಮತ್ತು ಸಂಸ್ಕೃತ ಅಧ್ಯಯನ ಮಾಡಿ ಸಂಸ್ಕೃತದಲ್ಲಿ ಎಂ ಎ ಮಾಡಿದ್ದಾರೆ. ಭಾರತೀಯ ಗೋವಿನ ಬಗ್ಗೆ ಆಸಕ್ತಿಯಿಂದ ಕೆಲಸ ಮಾಡುತ್ತಾರೆ.

ಇದನ್ನೂ ಓದಿ

ನಮ್ಮ ಪ್ರಧಾನಿಯವರು ಹೇಳಿದಂತೆ ಅಟಕ್ ನಾ, ಲಟ್ ಕಾನಾ, ಬಟ್ ಕಾನಾ ಮಾತು ನಡೆಯುತ್ತಿಲ್ಲ : ರೈತರು ಇಂತ ಕಡೆ ಪ್ರಶ್ನಿಸುವಂತಾಗಬೇಕು
July 26, 2024
11:35 PM
by: The Rural Mirror ಸುದ್ದಿಜಾಲ
ಅರಣ್ಯ ಹಕ್ಕು ಕಾಯ್ದೆಗೆ ತಿದ್ದುಪಡಿ ಕೋರಿ ನಿರ್ಣಯ ಅಂಗೀಕರಿಸಿದ ರಾಜ್ಯ ಸರ್ಕಾರ : ಕೇಂದ್ರ ಸರ್ಕಾಕ್ಕೆ ಕೋರಿಕೆ
July 26, 2024
3:33 PM
by: The Rural Mirror ಸುದ್ದಿಜಾಲ
ತಲೆಮಾರುಗಳ ಕಂದಕವನ್ನು ಮನೆಪಾಠದಿಂದ ಮುಚ್ಚಬಹುದು
July 26, 2024
10:22 AM
by: ಡಾ.ಚಂದ್ರಶೇಖರ ದಾಮ್ಲೆ
ರಾಷ್ಟ್ರೀಯ ಸುಸ್ಥಿರ ಕೃಷಿ ಮತ್ತು ಮಣ್ಣು ಆರೋಗ್ಯ ನಿರ್ವಹಣೆ ಬಗ್ಗೆ
July 25, 2024
6:48 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror