Advertisement
MIRROR FOCUS

ಶ್ರೀಲಂಕಾದಲ್ಲಿ ಅಡಿಕೆ ನಿಯಂತ್ರಣದ ಸವಾಲು | WHO ವೆಬಿನಾರ್‌ನಲ್ಲಿ ಪ್ರೊ. ಜಯಸಿಂಘೆ

Share

ಆಗ್ನೇಯ ಏಷ್ಯಾದಲ್ಲಿ ಅಡಿಕೆ ಬಳಕೆಯಿಂದ ಉಂಟಾಗುತ್ತಿರುವ ಆರೋಗ್ಯ ಅಪಾಯಗಳ ಕುರಿತು ವಿಶ್ವ ಆರೋಗ್ಯ ಸಂಸ್ಥೆ (WHO) ಆಯೋಜಿಸಿದ್ದ ವೆಬಿನಾರ್‌ನಲ್ಲಿ ಶ್ರೀಲಂಕಾದ ತಜ್ಞರು ಅಡಿಕೆ ನಿಯಂತ್ರಣದಲ್ಲಿ ಎದುರಾಗುತ್ತಿರುವ ಪ್ರಮುಖ ಸವಾಲುಗಳನ್ನು ಪ್ರಸ್ತಾಪಿಸಿದರು.

ಶ್ರೀಲಂಕಾದ ಪರದಿನಿಯಾ ವಿಶ್ವವಿದ್ಯಾಲಯದ ಪ್ರೊಫೆಸರ್ ರೂವಾನ್ ಡಿ. ಜಯಸಿಂಘೆ ಅವರು ದೇಶವನ್ನು ಪ್ರತಿನಿಧಿಸಿ ಮಾತನಾಡಿ, “ಶ್ರೀಲಂಕಾದಲ್ಲಿ ಪುರುಷರಲ್ಲಿ ಬಾಯಿ ಕ್ಯಾನ್ಸರ್ ಅತ್ಯಂತ ಸಾಮಾನ್ಯ ಕ್ಯಾನ್ಸರ್ ಆಗಿದ್ದು, ಧೂಮರಹಿತ ತಂಬಾಕು ಬಳಕೆದಾರರಲ್ಲಿ ಅಡಿಕೆ ಸೇವನೆಯೂ ವ್ಯಾಪಕವಾಗಿದೆ” ಎಂದು ಎಚ್ಚರಿಸಿದರು.

ಪ್ರೊ. ಜಯಸಿಂಘೆ ಪ್ರಕಾರ, ಶ್ರೀಲಂಕಾದಲ್ಲಿ ಅಡಿಕೆ ಸೇವನೆ (ವಿಶೇಷವಾಗಿ ಅಡಿಕೆ ಹುಡಿ) ಸಾಂಸ್ಕೃತಿಕ ಮತ್ತು ಸಾಮಾಜಿಕ ಆಚರಣೆಗಳಿಗೆ ಬಳಕೆ ಇರುವುದರಿಂದ, ಅದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಅತ್ಯಂತ ಕಷ್ಟಕರವಾಗಿದೆ.

ಶ್ರೀಲಂಕಾದಲ್ಲಿ ತಂಬಾಕು ಮತ್ತು ಮದ್ಯವನ್ನು NARTAC (National Authority on Tobacco and Alcohol) ಕಾಯ್ದೆಯಡಿ ನಿಯಂತ್ರಿಸಲಾಗುತ್ತದೆ. ಆದರೆ ಅಡಿಕೆ ಅದರಲ್ಲಿ ಸೇರಿಲ್ಲ. Food Act ಅಡಿಯಲ್ಲಿ ನಿಯಂತ್ರಣ ಪ್ರಯತ್ನಿಸಿದರೂ ಅದರ ವ್ಯಾಖ್ಯಾನದಲ್ಲಿ ಅಡಿಕೆಯು ಸಂಪೂರ್ಣವಾಗಿ ಒಳಗೊಂಡಿಲ್ಲ. ಹೀಗಾಗಿ ಯಾವ ಕಾನೂನಿನಡಿ ಅಡಿಕೆಯನ್ನು ನಿಯಂತ್ರಿಸಬೇಕು ಎಂಬ ಗೊಂದಲ ಮುಂದುವರಿದಿದೆ.

ಕೃಷಿ ಇಲಾಖೆ ಅಡಿಕೆಯನ್ನು “ಗೋಲ್ಡನ್ ಕ್ರಾಪ್” ಎಂದು ಪರಿಗಣಿಸಿ ಅದರ ಬೆಳವಣಿಗೆಯನ್ನು ಉತ್ತೇಜಿಸುತ್ತಿರುವಾಗ, ಆರೋಗ್ಯ ಇಲಾಖೆ ನಿಯಂತ್ರಣಕ್ಕೆ ಯತ್ನಿಸುತ್ತಿರುವುದು ನೀತಿ ಸಂಘರ್ಷಕ್ಕೆ ಕಾರಣವಾಗಿದೆ. ಇನ್ನೊಂದೆಡೆ, ಅಡಿಕೆ ಅನೌಪಚಾರಿಕ ಉತ್ಪನ್ನವಾಗಿದ್ದು ಸರಬರಾಜು ಜಾಲ ಬಹುತೇಕ ನಿಯಂತ್ರಣವಿಲ್ಲದೆ ಸಾಗುತ್ತಿದೆ. ಇದರಿಂದ ಅನುಷ್ಠಾನ ಇನ್ನಷ್ಟು ಕಠಿಣವಾಗಿದೆ. ಬಹುತೇಕ ಬಡ ಜನರಿಗೆ ಅಡಿಕೆ ಮರಗಳು ಜೀವನಾಧಾರವಾಗಿರುವುದರಿಂದ ಸಂಪೂರ್ಣ ನಿಷೇಧ ಸಾಧ್ಯವಿಲ್ಲ ಎಂದು ಪ್ರೊ. ಜಯಸಿಂಘೆ  ಹೇಳಿದರು. ಅಡಿಕೆ ಉತ್ಪನ್ನಗಳು ಅಗ್ಗವಾಗಿದ್ದು ಎಲ್ಲೆಂದರಲ್ಲಿ ಸುಲಭವಾಗಿ ದೊರೆಯುವುದರಿಂದ ಬಳಕೆ ತಡೆಯುವುದು ದೊಡ್ಡ ಸವಾಲು ಆಗಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ಜನರಿಗೆ ತಂಬಾಕಿನ ಅಪಾಯ ಹೆಚ್ಚು ಗೊತ್ತಿದ್ದರೂ, ಅಡಿಕೆ ಬಾಯಿ ಕ್ಯಾನ್ಸರ್ ಉಂಟುಮಾಡುವ ಕಾರ್ಸಿನೋಜೆನಿಕ್ ಉತ್ಪನ್ನ ಎಂಬ ಅರಿವು ಕಡಿಮೆ ಎಂದು ಅವರು ಹೇಳಿದರು. ಶ್ರೀಲಂಕಾದಲ್ಲಿ ಅಡಿಕೆಯ ಆರೋಗ್ಯ ಪರಿಣಾಮಗಳ ಕುರಿತು ಸಂಶೋಧನೆಯಲ್ಲಿ ಹಲವು ಗ್ಯಾಪ್‌ಗಳಿವೆ ಎಂದು ಪ್ರೊ. ಜಯಸಿಂಘೆ ತಿಳಿಸಿದರು.  ದೇಶವ್ಯಾಪಿ ದೀರ್ಘಾವಧಿ ಅಧ್ಯಯನಗಳ ಕೊರತೆ, Dose-response ಅಧ್ಯಯನ ಕಡಿಮೆ, ಮಹಿಳೆಯರು, ಬಾಲಕರು, ಗ್ರಾಮೀಣ ಸಮುದಾಯಗಳ ಬಳಕೆ ಕುರಿತ ಅಧ್ಯಯನ ಅಗತ್ಯ ಇದೆ. ತಂಬಾಕು, ಮದ್ಯ, HPV ವೈರಸ್ ಹಾಗೂ oral microbiome ಜೊತೆಗೆ ಸಂಯೋಜಿತ ಪರಿಣಾಮ ಕುರಿತು ಹೆಚ್ಚಿನ ಸಂಶೋಧನೆ ಬೇಕು. cessation  ಮತ್ತು intervention ಅಧ್ಯಯನಗಳು ವಿರಳ ಕೂಡಾ ಬೇಕಾಗಿದೆ.

ಪ್ರೊ. ಜಯಸಿಂಘೆ ಅವರು ಮುಂದಿನ ಸಂಶೋಧನೆಯ ಆದ್ಯತೆಗಳ ಬಗ್ಗೆ ಮಾತನಾಡುತ್ತಾ, ಬೇರೆ ಅಪಾಯಕಾರಕ ಅಂಶಗಳೊಂದಿಗೆ ಅಡಿಕೆಯ ಅಧ್ಯಯನ, ಸ್ಥಳೀಯ ಅಡಿಕೆ ಜಾತಿ ಹಾಗೂ ತಯಾರಿಕೆ ವಿಧಾನಗಳ ಹೋಲಿಕೆ,  Chemical profiling, genotoxicity ಮತ್ತು mechanistic studies ಅಗತ್ಯವಿದೆ. ಅಡಿಕೆಯಲ್ಲಿ heavy metals ಪ್ರಮಾಣ ಹೆಚ್ಚಿರುವ ಸಾಧ್ಯತೆ ಇದೆ,  ಬಾಯಿ ಕ್ಯಾನ್ಸರ್ ರೋಗಿಗಳಲ್ಲಿ heavy metals ಅಧಿಕವಾಗಿರುವುದಕ್ಕೆ ಕಾರಣ ಹುಡುಕುವ ಸಂಶೋಧನೆ ಅಗತ್ಯ ಇದೆ.

ಒಟ್ಟಾರೆ, ಶ್ರೀಲಂಕಾದಲ್ಲಿ ಅಡಿಕೆ ಬಳಕೆಯು ಸಾಂಸ್ಕೃತಿಕ, ಆರ್ಥಿಕ ಹಾಗೂ ಕಾನೂನು ಅಡಚಣೆಗಳಿಂದ ನಿಯಂತ್ರಣಕ್ಕೆ ಬಾರದಂತಾಗಿದ್ದು, ತಕ್ಷಣವೇ ನೀತಿ ಹಾಗೂ ಸಂಶೋಧನಾ ಕ್ರಮಗಳನ್ನು ಬಲಪಡಿಸಬೇಕಾಗಿದೆ ಎಂದು WHO ವೆಬಿನಾರ್‌ನಲ್ಲಿ  ಅಭಿಪ್ರಾಯಪಟ್ಟರು.

ಇದನ್ನೂ ಓದಿ…. 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಅಡಿಕೆಯಲ್ಲಿ ಎಲೆ ಚುಕ್ಕೆ ರೋಗದ ಸಮಗ್ರ ನಿರ್ವಹಣೆ ಹೇಗೆ..? ತಜ್ಞರಿಂದ ಸಮಗ್ರ ನಿರ್ವಹಣಾ ಮಾರ್ಗಸೂಚಿ – ಸಲಹೆ

ಅಡಿಕೆ ಎಲೆ ಚುಕ್ಕೆ ರೋಗವು ಗಾಳಿ ಮತ್ತು ತೇವಾಂಶದಿಂದ ವೇಗವಾಗಿ ಹರಡುತ್ತಿದ್ದು, ತೋಟಗಳಿಗೆ…

41 minutes ago

ಬಿ ಎಸ್ ಎನ್ ಎಲ್ ವಿರುದ್ಧ ಸುಳ್ಯದ ಗ್ರಾಹಕನಿಗೆ ಜಯ – ಇಂಟರ್ನೆಟ್ ಸೇವೆಯಲ್ಲಿ ವ್ಯತ್ಯಯಕ್ಕೆ ₹30,000 ಪರಿಹಾರ ಆದೇಶ..!

ಇಂಟರ್ನೆಟ್ ಸೇವೆ ವ್ಯತ್ಯಯಕ್ಕೆ ಸುಳ್ಯದ ಗ್ರಾಹಕನಿಗೆ ₹30,000 ಪರಿಹಾರ ನೀಡಲು ಆದೇಶ. ಬಿ…

5 hours ago

ಹವಾಮಾನ ವರದಿ | 01-05-2026 | ಮಳೆಯ ಚಟುವಟಿಕೆ ಕಡಿಮೆಯಾಗುತ್ತಾ? ಮೇ 2ರಿಂದ ಕೆಲವು ದಿನ ಮಳೆ ಕಡಿಮೆ, ಬಳಿಕ ಮತ್ತೆ ಚುರುಕು..!?

ಮೇ 2ರಿಂದ ರಾಜ್ಯದ ಹಲವು ಭಾಗಗಳಲ್ಲಿ ಮಳೆ ಕಡಿಮೆಯಾಗುವ ಸೂಚನೆಗಳು ಕಂಡುಬರುತ್ತಿವೆ. ಮೇ…

6 hours ago

ಚಿಕ್ಕಮಗಳೂರಿನಲ್ಲಿ ದಾಳಿ – ಅಕ್ರಮವಾಗಿ ಸಂಗ್ರಹಿಸಿದ್ದ 181 ಯೂರಿಯಾ ಚೀಲಗಳು ಜಪ್ತಿ

ಚಿಕ್ಕಮಗಳೂರಿನಲ್ಲಿ ಅಕ್ರಮವಾಗಿ ಶೇಖರಿಸಿದ್ದ ಯೂರಿಯಾ ಗೊಬ್ಬರ ಜಪ್ತಿ ಮಾಡಲಾಗಿದೆ. 181 ಚೀಲಗಳು ಹಾಗೂ…

8 hours ago

ರಾಜ್ಯದ ಹಲವು ಜಿಲ್ಲೆಗಳಿಗೆ ಎಲ್ಲೋ ಅಲರ್ಟ್ – ಮುಂದಿನ ಕೆಲ ದಿನ ಮಳೆ ಎಚ್ಚರಿಕೆ..!

ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ ಕೆಲ ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ.…

9 hours ago

ಪದವಿಪೂರ್ವ ಶಿಕ್ಷಣ ಮತ್ತು ನೀಟ್ ಪರೀಕ್ಷೆಯ ಒತ್ತಡ : ಪರ್ಯಾಯ ದೃಷ್ಟಿಕೋನ

NEET ಪರೀಕ್ಷೆಯ ಒತ್ತಡದಿಂದ ವಿದ್ಯಾರ್ಥಿಗಳಲ್ಲಿ ಮಾನಸಿಕ ಸಮಸ್ಯೆಗಳು ಹೆಚ್ಚುತ್ತಿವೆ. ಒತ್ತಡರಹಿತ, ಅನುಭವಾಧಾರಿತ ಶಿಕ್ಷಣ…

9 hours ago