MIRROR FOCUS

ಐ ಎ ಎಸ್‌ ಕನಸು ಹೊತ್ತಿರುವ ಗ್ರಾಮೀಣ ಭಾಗದ ವಿದ್ಯಾರ್ಥಿನಿ | ಗುತ್ತಿಗಾರಿನ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ನಿಶ್ಮಿತಾ |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಕೊರೋನಾ ಸಮಯದಲ್ಲಿ ಶಾಲೆ ತೆರೆಯುತ್ತಿಲ್ಲ ಎನ್ನುವ ನೋವಿನ ನಡುವೆಯೂ ಸರ್ಕಾರದ ನಿಯಮಗಳನ್ನು ಪಾಲಿಸಿಕೊಂಡು ನೆಟ್ವರ್ಕ್‌ ಸಮಸ್ಯೆಗಳ ಮಧ್ಯೆಯೂ ಗ್ರಾಮೀಣ ಭಾಗದ ವಿದ್ಯಾರ್ಥಿನಿ ನಿಶ್ಮಿತಾ 623 ಅಂಕ ಪಡೆದಿದ್ದಾಳೆ. ಐ ಎ ಎಸ್‌ ಕನಸು ಹೊತ್ತಿರುವ ನಿಶ್ಮಿತಾ ಗುತ್ತಿಗಾರು ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ.

Advertisement
Advertisement

 

 

ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಕುದ್ರಡ್ಕ ಬಳಿಯ ನಿಶ್ಮಿತಾ ಎಸ್‌ ಎಸ್‌ ಎಲ್‌ ಸಿ ಯಲ್ಲಿ  623  ಅಂಕ ಪಡೆದಿದ್ದಾಳೆ. ಗುತ್ತಿಗಾರು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿಯಾಗಿರುವ ಈಕೆ ಕೊರೋನಾ ಸಂಕಷ್ಟದ ನಡುವೆ ಶಾಲೆ ಆರಂಭ ಆಗದೇ ಇರುವಾಗ ಸತತ ಪರಿಶ್ರಮ ಪಟ್ಟು ಓದಿದ್ದಾಳೆ. ಆನ್‌ ಲೈನ್‌ ತರಗತಿಗೆ ನೆಟ್ವರ್ಕ್‌ ಸಮಸ್ಯೆ ಇದ್ದರೂ ಓದಿನಲ್ಲಿ  ಹಿಂದೆ ಬೀಳಲಿಲ್ಲ. ಸರಕಾರ ನೀಡಿದ ಮಾರ್ಗಸೂಚಿಗಳನ್ನು  ಗಮನಿಸಿದಳು. ಚಂದನ ವಾಹಿನಿಯಲ್ಲಿ  ಬರುತ್ತಿದ್ದ ಪಾಠಗಳನ್ನು  ಕೇಳುತ್ತಿದ್ದಳು. ಯೂಟ್ಯೂಬ್‌ ಲಿಂಕ್‌ ಗಳು ಮೂಲಕ ಪಾಠ ಕೇಳಿದಳು. ಶಾಲೆಯ ಶಿಕ್ಷಕರು ಸರಿಯಾದ ಮಾರ್ಗದರ್ಶನ ನೀಡಿದರು. ಹೀಗೇ ಯಶಸ್ಸಿಗಾಗಿ , ಗುರಿ ತಲುಪಲು ನಿರಂತರ ಓದಿದಳು.  ಹೀಗಾಗಿ ಅಂಕ ಪಡೆಯಲು ಸಾಧ್ಯವಾಗಿತ್ತು ಎನ್ನುತ್ತಾಳೆ ನಿಶ್ಮಿತಾ. ಮುಂದೆ ಐ ಎ ಎಸ್‌ ಮಾಡಬೇಕೆಂಬ ಕನಸು ಹೊತ್ತಿರುವ ನಿಶ್ಮಿತಾ ಈ ನಿಟ್ಟಿನಲ್ಲಿ  ಮುಂದಿನ ವಿದ್ಯಾಭ್ಯಾಸ ನಡೆಸುತ್ತೇನೆ ಎಂದು ಹೇಳುತ್ತಾಳೆ. ಗ್ರಾಮೀಣ ಭಾಗದಲ್ಲಿ ಬೆಳೆದಿರುವ ಕಾರಣ ಜನರ ಸಂಕಷ್ಟ ತಿಳಿಯುತ್ತದೆ , ಈ ಕಾರಣಕ್ಕೆ ಅಧಿಕಾರಿಯಾಗಿ ಜನರ ಸೇವೆ ಮಾಡಬೇಕೆಂಬ ಕನಸಿದೆ ಎನ್ನುತ್ತಾಳೆ. ಈಕೆಯ ತಂದೆ ಗಣಪ್ಪಯ್ಯ ನಾಯ್ಕ್‌ ಅವರು  ಕೃಷಿ ಹಾಗೂ ರಬ್ಬರ್‌ ಟ್ಯಾಪಿಂಗ್‌ ಕೆಲಸ ಮಾಡುತ್ತಾರೆ. ತಾಯಿ ರೇವತಿ ಗೃಹಿಣಿಯಾಗಿದ್ದಾರೆ. ಸಹೋದರ 9  ನೇ ತರಗತಿಯಲ್ಲಿ  ಓದುತ್ತಿದ್ದಾನೆ.

Advertisement
ಗ್ರಾ ಪಂ ಸದಸ್ಯರಿಂದ ಗೌರವ

 

ಸರಕಾರದ ಅಂದಿನ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಅವರು ಎಸ್‌ ಎಸ್‌ ಎಲ್‌ ಸಿ ವಿದ್ಯಾರ್ಥಿಗಳ ಪಾಠದ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದರು. ಗ್ರಾಮೀಣ ಭಾಗದಲ್ಲಿ ನೆಟ್ವರ್ಕ್‌ ಸಮಸ್ಯೆ ಇರುವ ಕಾರಣದಿಂದ ಚಂದನ ವಾಹಿನಿಯಲ್ಲಿ ಮಕ್ಕಳಿಗೆ ಎಸ್‌ ಎಸ್‌ ಎಲ್‌ ಸಿ ಪಾಠಗಳನ್ನು  ನೀಡಲಾಗುತ್ತಿತ್ತು. ಗ್ರಾಮೀಣ ಭಾಗಗಳಲ್ಲಿ  ಈ ಪಾಠ ಪ್ರಯೋಜನವಾಗಿದೆ ಎನ್ನುವುದು  ಇಂತಹ ವಿದ್ಯಾರ್ಥಿಗಳಿಂದ ಈಗ ಬೆಳಕಿಗೆ ಬಂದಿದೆ. 

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಆಂಧ್ರಪ್ರದೇಶಕ್ಕೆ ನಾಲ್ಕು ಕುಮ್ಕಿ ಆನೆಗಳನ್ನು ಹಸ್ತಾಂತರಿಸಿದ ರಾಜ್ಯಸರ್ಕಾರ

ಮಾನವ ಆನೆ ಸಂಘರ್ಷ ತಡೆಗಟ್ಟಲು ಅಕ್ಕ ಪಕ್ಕದ ರಾಜ್ಯಗಳ ಸಹಕಾರ ಅಗತ್ಯ ಎಂದು…

59 minutes ago

ರೈತರಿಗೆ ಉತ್ತಮ ಗುಣಮಟ್ಟದ ಬಿತ್ತನೆ ಬೀಜ ಮತ್ತು ರಸಗೊಬ್ಬರಗಳನ್ನು ಸಮರ್ಪಕವಾಗಿ ಪೂರೈಸಲು ಕ್ರಮ

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ರೈತರಿಗೆ ಉತ್ತಮ ಗುಣಮಟ್ಟದ ಬಿತ್ತನೆ ಬೀಜ ಮತ್ತು ರಸಗೊಬ್ಬರಗಳನ್ನು…

1 hour ago

ಮಳೆ ಹಿನ್ನೆಲೆ | ಅಪಾಯಕಾರಿ ಸ್ಥಳಗಳಲ್ಲಿ ನಿರಂತರ ನಿಗಾವಹಿಸಲು ದ ಕ ಜಿಲ್ಲಾಧಿಕಾರಿ ಸೂಚನೆ

ದಕ್ಷಿಣ ಕನ್ನಡ  ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿರುವುದರಿಂದ  ಸಂಭಾವ್ಯ ನೆರೆ ಹಾಗೂ ಮುಳುಗಡೆ ಪ್ರದೇಶಗಳಲ್ಲಿ…

1 hour ago

ವಾಯುಭಾರ ಕುಸಿತ ರಾಜ್ಯದಲ್ಲಿ ಮುಂದುವರಿದ ಮಳೆ | ಹಲವೆಡೆ ಪ್ರವಾಹ ಭೀತಿ

ವಾಯುಭಾರ ಕುಸಿತದಿಂದಾಗಿ ರಾಜ್ಯದ ಹಲವೆಡೆ ಮಳೆಯಾಗುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಕಳೆದ ಎರಡು…

1 hour ago

2028ರ ವೇಳೆಗೆ ಭಾರತದ ಉಪಗ್ರಹ ಸಂವಹನದ ಮಾರುಕಟ್ಟೆ 20 ಶತಕೋಟಿ  ಡಾಲರ್

ವಿಶ್ವ ದೂರ ಸಂಪರ್ಕ ಮತ್ತು ಮಾಹಿತಿ ಸೊಸೈಟಿ ದಿನ ಹಿನ್ನೆಲೆಯಲ್ಲಿ ಭಾರತೀಯ ದೂರಸಂಪರ್ಕ…

12 hours ago