Advertisement
MIRROR FOCUS

ಹಣ್ಣಡಿಕೆ ಒಣಗಿಸುವ ತಂತ್ರಜ್ಞಾನದತ್ತ ಮುಖ ಮಾಡಿದ ವಿಟ್ಲದ ಪಿಂಗಾರ ಸಂಸ್ಥೆ | ಅಡಿಕೆ ದಾಸ್ತಾನಿಗೆ ನೈಟ್ರೋಜನ್‌ ಗ್ಯಾಸ್ ತಂತ್ರಜ್ಞಾನ ಬಳಕೆ |

Share

ವಿಟ್ಲದ ಪಿಂಗಾರ ರೈತ ಉತ್ಪಾದಕ ಕಂಪನಿ ಮತ್ತೊಂದು ಪ್ರಯತ್ನಕ್ಕೆ ಇಳಿದಿದೆ. ಈಗಾಗಲೇ ದೋಟಿ ಕೊಯ್ಲು ಮೂಲಕ ರೈತರ ಸಮಸ್ಯೆಯನ್ನು ಬಹುಪಾಲು ಕಡಿಮೆ ಮಾಡಿದ ಪಿಂಗಾರ ಈಗ ಅಡಿಕೆ ದಾಸ್ತಾನಿಗೆ ನೈಟ್ರೋಜನ್‌ ಗ್ಯಾಸ್‌ ಹಾಗೂ ಹಣ್ಣಡಿಕೆ ಒಣಗಿಸಲು ಹ್ಯುಮಿಡಿಪೈಯರ್‌ ಯಂತ್ರವನ್ನು ಬಳಸಿಕೊಳ್ಳು ನಿರ್ಧರಿಸಿದೆ. ಎರಡನೇ ದಿನದಲ್ಲಿ  ಹಣ್ಣಡಿಕೆ ಒಣಗಿಸುವ ವ್ಯವಸ್ಥೆಗೆ ಪಿಂಗಾರ ಮುಂದಾಗಿದೆ.

Advertisement
Advertisement

ವಿಟ್ಲದ ಪಿಂಗಾರ ಸಂಸ್ಥೆಯು ಅಡಿಕೆ ಹಾಗೂ ತೆಂಗು ಕೊಯ್ಲು ಮಾಡಲು ತಂಡವನ್ನು ರಚನೆ ಮಾಡಿ ಯಶಸ್ವಿಯಾಗಿದೆ. ಅನೇಕ ಕೃಷಿಕರ ಸಮಸ್ಯೆಗೆ ಪರಿಹಾರವನ್ನು ಕಂಡಿಕೊಂಡ ಸಂಸ್ಥೆ ಇದೀಗ ಅಡಿಕೆ ದಾಸ್ತಾನು ಮಾಡಲು ನೈಟ್ರೋಜನ್‌ ಗ್ಯಾಸ್‌ ಬಳಕೆ ಮಾಡುವುದು  ಹಾಗೂ ಹಣ್ಣಡಿಕೆ ಒಣಗಿಸಲು ಡ್ರೈಯರ್‌ ಬಳಕೆ ಮಾಡಲು ಮುಂದಾಗಿದೆ. ಆದರೆ ಸದ್ಯ ಹಣ್ಣಡಿಕೆಯನ್ನು ರೈತರಿಂದ ಖರೀದಿ ಮಾಡಿ ಒಣಗಿಸಿ ಬಳಿಕ ಮಾರಾಟ ಮಾಡುವ ಯೋಜನೆ ಇದೆ. ಅಡಿಕೆ ಒಣಗಿಸಿ ಕೊಡುವ ಬಗ್ಗೆ ಸದ್ಯ ಯಾವುದೇ ಯೋಜನೆಯನ್ನು ಹಾಕಿಕೊಂಡಿಲ್ಲ.

ಪಿಂಗಾರ ಸಂಸ್ಥೆಯು ಹಣ್ಣಡಿಕೆ ಖರೀದಿ ಮಾಡಿ ಅದನ್ನು  ಹ್ಯುಮುಡಿಪೈಯರ್‌ ಯಂತ್ರದ ಮೂಲಕ ಒಣಗಿಸುವ ಯೋಜನೆ ಇದಾಗಿದೆ. ಅಂದರೆ ಪ್ರಿಜ್‌ ಬಳಕೆಯ ಸರಿಯಾದ ಉಲ್ಟಾ ಪ್ರಕ್ರಿಯೆ ಇದೆ. ಬಿಸಿ ಗಾಳಿ ಒಳಗೆ ತೆಗೆದುಕೊಂಡು ತಣ್ಣಗಿನ ಗಾಳಿ ಅಂದರೆ ತೇವಾಂಶವನ್ನು ಹೊರಹಾಕುತ್ತದೆ. ಯಂತ್ರ ಆವಿಷ್ಕಾರ ಮಾಡಿದವರು ಕೃಷಿ ಕುಟುಂಬದವರೇ ಆದ್ದರಿಂದ ಅಡಿಕೆ ಒಣಗಿಸುವ ಸಮಸ್ಯೆಯನ್ನು ಬಲ್ಲವರಾಗಿದ್ದರೆ. ಈ ತಂತ್ರಜ್ಞಾನದ ಮೂಲಕ ಯಂತ್ರದ ಒಳಗೆ 70 ಡಿಗ್ರಿ ಉಷ್ಣತೆ ಇರುತ್ತದೆ. ಹೀಗಾಗಿ ಹಣ್ಣಡಿಕೆ ಎರಡೇ ದಿನದಲ್ಲಿ  ಒಣಗಲು ಸಾಧ್ಯ ಇದೆ. ಅಡಿಕೆ ಮಾತ್ರವಲ್ಲ ಕಾಳುಮೆಣಸು, ಕೊಬ್ಬರಿ ಸಹಿತ ಎಲ್ಲಾ ಕೃಷಿ ವಸ್ತುಗಳೂ ಬೇಗನೆ ಒಣಗುತ್ತದೆ.

ಸದ್ಯ ಹಣ್ಣಡಿಕೆ ಖರೀದಿಯ ಬಗ್ಗೆ ಮಾತ್ರಾ ಯೋಜನೆ ರೂಪಿಸಿದ್ದು, ಅಡಿಕೆ ಒಣಗಿಸಿ ಮತ್ತೆ ರೈತರಿಗೆ ನೀಡುವ ಯೋಜನೆ ಮಾಡಿಲ್ಲ ಎಂದು ಸಂಸ್ಥೆಯ ಅಧ್ಯಕ್ಷ ರಾಮ್‌ ಕಿಶೋರ್‌ ಮಂಚಿ ಹೇಳುತ್ತಾರೆ.

ಅಡಿಕೆ ದಾಸ್ತಾನು ಮಾಡಲು ಈಗಾಗಲೇ ಸಂಸ್ಥೆಯು ಕಟ್ಟಡಗಳನ್ನು ಸಿದ್ಧ ಮಾಡಲು ಯೋಜನೆ ಹಾಕಿಕೊಂಡಿದೆ. ನೈಟ್ರೋಜನ್‌ ಗ್ಯಾಸ್‌ ಬಳಸಿ ಅಡಿಕೆ ದಾಸ್ತಾನು ಮಾಡುವುದು ಈಗಾಗಲೇ ಯಶಸ್ವಿಯಾಗಿದೆ. ರೈತರ ಅಡಿಕೆಯನ್ನು ದಾಸ್ತಾನು ಮಾಡಿ ಮತ್ತೆ ಹಿಂದಿರುಗಿಸಿ ರೈತರಿಗೆ ನೀಡುವ ಅಥವಾ ಮಾರಾಟ ಮಾಡುವ ಯೋಜನೆಯೂ ಇದೆ ಎಂದು ರಾಮ ಕಿಶೋರ್‌ ಮಂಚಿ ಹೇಳುತ್ತಾರೆ.

ಮಳೆಗಾಲದಲ್ಲಿ ಹಣ್ಣಡಿಕೆ ಒಣಗಿಸಲು ಸಮಸ್ಯೆ ಅಡಿಕೆ ಬೆಳೆಗಾರರಿಗೆ ಇದೆ. ಇದಕ್ಕಾಗಿ ಹಣ್ಣಡಿಕೆಯನ್ನು ಉತ್ತಮ ಧಾರಣೆಗೆ ಪಿಂಗಾರ ಸಂಸ್ಥೆಗೆ ಮಾರಾಟ ಮಾಡುವ ಅವಕಾಶ ಇನ್ನು ಮುಂದೆ ಬೆಳೆಗಾರರಿಗೆ ಸಿಗಲಿದೆ. ಇದರ ಜೊತೆಗೆ ಅಡಿಕೆ ದಾಸ್ತಾನು ಮಾಡುವುದು ಕೂಡಾ ಅಡಿಕೆ ಬೆಳೆಗಾರರಿಗೆ ಬಹುದೊಡ್ಡ ಸಮಸ್ಯೆ ಇದಕ್ಕೂ ಕೂಡಾ ಪಿಂಗಾರ ಸಂಸ್ಥೆ  ಈಗ ಅವಕಾಶ ನೀಡುತ್ತಿದೆ.

Viitla Pingara Former Producer Company has decided to use nitrogen gas for Arecanut stock and humidifier machine for drying the Areca fruit. 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

Published by
ಮಹೇಶ್ ಪುಚ್ಚಪ್ಪಾಡಿ

Recent Posts

ಅಡಿಕೆಯ ಬಗ್ಗೆ ಹೊಸ ಅಧ್ಯಯನ | ಕ್ಯಾನ್ಸರ್‌ ಅಷ್ಟೇ ಅಲ್ಲ… ಹೃದಯ ರೋಗ ಮತ್ತು ಮೆಟಾಬಾಲಿಕ್ ಸಮಸ್ಯೆಯೂ ಇದೆ…!

ಅಡಿಕೆ ಜಗಿಯುವುದು ಕೇವಲ ಸಾಂಪ್ರದಾಯಿಕ ಅಭ್ಯಾಸ ಮಾತ್ರವಲ್ಲ,  ಅದು ಗಂಭೀರ ಆರೋಗ್ಯ ಅಪಾಯಗಳಿಗೆ…

17 hours ago

ರಾಜ್ಯದಲ್ಲಿ ಹೆಚ್ಚುತ್ತಿರುವ ಮಾನವ–ವನ್ಯಜೀವಿ ಸಂಘರ್ಷ | ಶಾಶ್ವತ ಪರಿಹಾರಕ್ಕೆ ಕೇಂದ್ರದ ಗಮನ ಸೆಳೆದು ಕುಮಾರಸ್ವಾಮಿ ಮನವಿ

ರಾಜ್ಯದಲ್ಲಿ ಹೆಚ್ಚುತ್ತಿರುವ ಮಾನವ–ವನ್ಯಜೀವಿ ಸಂಘರ್ಷ ಹಾಗೂ ಆನೆ ದಾಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು…

17 hours ago

ಮೆಕ್ಕೆಜೋಳ ಖರೀದಿ ಕೇಂದ್ರಗಳಿಂದ 3,412 ರೈತರಿಗೆ ಲಾಭ

ದಾವಣಗೆರೆ ಜಿಲ್ಲೆಯಲ್ಲಿ 5 ಮೆಕ್ಕೆಜೋಳ ಖರೀದಿ ಕೇಂದ್ರಗಳಿಂದ 3,412 ರೈತರು 87,258 ಕ್ವಿಂಟಲ್…

17 hours ago

ಜಲಜೀವನ್ ಮಿಷನ್ ವೇಗಕ್ಕೆ ಕಟ್ಟುನಿಟ್ಟಿನ ಗಡಿ : ಉಳಿದ ಕಾಮಗಾರಿಗಳು ತ್ವರಿತ ಪೂರ್ಣಗೊಳಿಸಿ

ಜಲಜೀವನ್‌ ಮಿಷನ್ ಯೋಜನೆಯ ಕಾಮಗಾರಿಗಳನ್ನು ಆದಷ್ಟು ಶೀಘ್ರ ಪೂರ್ಣಗೊಳಿಸುವಂತೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್…

18 hours ago

ಕೃಷಿಯ ಮೌನ ಆಕ್ರಂದನ | ಕಾಡಂಚಿನ ಅಡಿಕೆ ತೋಟಗಳ ಅಳಲು

ಕರಾವಳಿ ಕರ್ನಾಟಕದ ಅಡಿಕೆ ತೋಟಗಳು ಕಾಡುಪ್ರಾಣಿಗಳ ಹಾವಳಿಯಿಂದ ಭಾರೀ ನಷ್ಟ ಅನುಭವಿಸುತ್ತಿವೆ. ಮಾನವ–ವನ್ಯಜೀವಿ…

18 hours ago

ಜಾಗತಿಕ ಒತ್ತಡ – ಗ್ರಾಮೀಣ ಜೀವನೋಪಾಯ | ಅಡಿಕೆ ಕುರಿತ ನಿಜವಾದ ಚರ್ಚೆ ಈಗ ಆರಂಭವಾಗಬೇಕು

ಭಾರತವು ಜಗತ್ತಿನ ಅತಿದೊಡ್ಡ ಅಡಿಕೆ ಉತ್ಪಾದಕ ರಾಷ್ಟ್ರವಾಗಿದ್ದು, ಜಾಗತಿಕ ಉತ್ಪಾದನೆಯ ಸುಮಾರು 63…

18 hours ago