Advertisement
MIRROR FOCUS

ಅಡಿಕೆ ಬೆಳೆ ಸಮಸ್ಯೆ ನಮ್ಮಲ್ಲಿ ಮಾತ್ರವಲ್ಲ.. ಭೂತಾನ್‌ನಲ್ಲೂ ಇದೆ..! ಕಳೆದ 3 ವರ್ಷಗಳಿಂದ ಅಲ್ಲಿ ಏನಾಗುತ್ತಿದೆ..?

Share

ಅಡಿಕೆ ಬೆಳೆಯುವ ನಾಡುಗಳಲ್ಲಿ ಈಗ ವಿವಿಧ ರೋಗಗಳದ್ದೇ ಚರ್ಚೆ. ಎಲೆಚುಕ್ಕಿ, ಹಳದಿ ಎಲೆರೋಗ ಸೇರಿದಂತೆ ಎಳೆ ಅಡಿಕೆ ಬೀಳುವುದು ಚರ್ಚೆಯ ವಿಷಯ. ಕಳೆದ ಮೂರು ವರ್ಷಗಳಿಂದ ಎಲೆಚುಕ್ಕಿ ಜೋರಾಗಿ ಸದ್ದು ಮಾಡುತ್ತಿದೆ. ಈಗ ಎರಡು ವರ್ಷಗಳಿಂದ ವಿಪರೀತ ಎಳೆ ಅಡಿಕೆ ಬೀಳುವುದು ಸಮಸ್ಯೆ. ಅಡಿಕೆ ಬೆಳೆ ವಿಸ್ತರಣೆಯ ನಡುವೆ ಈ ಸಮಸ್ಯೆಗಳು ಸವಾಲಾಗಿದೆ. ಈ ನಡುವೆ ಅಡಿಕೆ ಬೆಳೆಯ ಸಮಸ್ಯೆ ಇಲ್ಲಿ ಮಾತ್ರವಲ್ಲ ಚೀನಾದಲ್ಲಿ, ಭೂತಾನ್‌ನಲ್ಲೂ ಇದೆ. ಕಳೆದ ಮೂರು ವರ್ಷಗಳಲ್ಲಿ ಭೂತಾನ್‌ ನಲ್ಲಿ ಅಡಿಕೆ ಉತ್ಪಾದನೆ ತೀರಾ ಇಳಿಮುಖವಾಗುತ್ತಿದೆ, ಅಡಿಕೆ ಮರಗಳು ಇದ್ದಕ್ಕಿದ್ದಂತೆ ಒಣಗುತ್ತಿದೆ.ಅಡಿಕೆ ಉತ್ಪಾದನೆ ತೀವ್ರವಾಗಿ ಕುಸಿದಿದೆ ಎಂದು ಅಲ್ಲಿನ ಮಾಧ್ಯಮ ವರದಿ ಮಾಡಿದೆ …… ಮುಂದೆ ಓದಿ……

ಭೂತಾನ್‌ನಲ್ಲಿ ಕಳೆದ ಮೂರು ವರ್ಷಗಳಲ್ಲಿ ನೆಟ್ಟ ಮರಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದರೂ ಅಡಿಕೆ ಉತ್ಪಾದನೆ ತೀವ್ರವಾಗಿ ಕುಸಿದಿದೆ ಎಂದು ಅಲ್ಲಿನ ಮಾಧ್ಯಮ ವರದಿ ಮಾಡಿದೆ. 2021 ರಲ್ಲಿ 21,400 ಮೆಟ್ರಿಕ್ ಟನ್  ಇದ್ದ ಅಡಿಕೆ ಇಳುವರಿ 2022 ರಲ್ಲಿ 11,100 ಮೆಟ್ರಿಕ್ ಟನ್ ಗೆ ಇಳಿದಿದೆ.ಇದಕ್ಕೆ ಪ್ರಮುಖವಾಗಿ ದೀರ್ಘಕಾಲದ ಚಳಿಗಾಲ, ಕೀಟಗಳ ಬಾಧೆ ಮತ್ತು ಅಡಿಕೆ ಮರ-ಗಿಡಗಳಲ್ಲಿ ರೋಗ ಬಾಧೆ  ಇಳುವರಿ ಕುಸಿಯಲು ಮತ್ತು ಮರಗಳು ಸಾಯಲು ಕಾರಣ ಎಂದು ರೈತರು ಹೇಳಿದ್ದಾರೆ.ಅಲ್ಲಿನ ಅಂಕಿಅಂಶದ ಪ್ರಕಾರ ಶೇ.50 ಅಡಿಕೆ ಫಸಲು ಮೂರು ವರ್ಷಗಳಿಂದ ಇಳಿಕೆಯಾಗಿದೆ.ಅಲ್ಲಿನ ರಾಷ್ಟ್ರೀಯ ಸರಾಸರಿಯು 2021 ರಲ್ಲಿ ಪ್ರತಿ ಮರಕ್ಕೆ 12 ಕಿಲೋಗ್ರಾಂಗಳಷ್ಟು ಇದ್ದದ್ದು 2022 ರಲ್ಲಿ 8 ಕೆಜಿ ಮತ್ತು 2023 ರಲ್ಲಿ 6 ಕೆಜಿಗೆ ಇಳಿದಿದೆ  ಅಂದರೆ ಉತ್ಪಾದಕತೆ ಕಡಿಮೆಯಾಗಿದೆ.

ಭೂತಾನ್‌ನಲ್ಲಿ ಪ್ರಮುಖವಾಗಿ ಅಡಿಕೆ ಉತ್ಪಾದನೆ ಮಾಡುವ ಜಿಲ್ಲೆ ಸ್ಯಾಮ್ಟೆ. ಇಲ್ಲಿ ಕೂಡಾ ಅಡಿಕೆಗೆ ವಿಪರೀತವಾದ ರೋಗ ಬಾಧೆ ಕಂಡುಬಂದಿದೆ. ಅಲ್ಲಿನ ಅಂಕಿ ಅಂಶದ ಪ್ರಕಾರ  ಆ ಜಿಲ್ಲೆಯಲ್ಲಿ  2021 ರಲ್ಲಿ 1.75 ಮಿಲಿಯನ್ ಇದ್ದ ಒಟ್ಟು ಮರಗಳ ಸಂಖ್ಯೆ 2023 ರ ವೇಳೆಗೆ 1.34 ಮಿಲಿಯನ್‌ಗೆ ಇಳಿದಿದೆ. ಪ್ರತಿ ಮರದ ಇಳುವರಿ 2021 ರಲ್ಲಿ 16 ಕೆಜಿಯಿಂದ 2022 ರಲ್ಲಿ 8 ಕೆಜಿಗೆ ಮತ್ತು 2023 ರಲ್ಲಿ 7 ಕೆಜಿಗೆ ಇಳಿದಿದೆ. ಇದೆಲ್ಲದರ ಕಾರಣದಿಂದ ರೈತರು ಆರ್ಥಿಕ ಸಂಕಷ್ಟಕ್ಕೂ ಒಳಗಾಗಿದ್ದಾರೆ. ಹವಾಮಾನವೇ ಪ್ರಮುಖವಾದ ಕಾರಣ ಎಂದು ರೈತರು ಹೇಳುತ್ತಾರೆ. ಹವಾಮಾನದಿಂದಾಗಿ, ಹೂಬಿಡುವ ಅವಧಿಯಲ್ಲಿ ಕೀಟಗಳು ವೃದ್ಧಿಯಾಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕೃಷಿ ಅಧಿಕಾರಿಗಳು ಹೇಳುತ್ತಾರೆ. ಅಡಿಕೆ ಹೂಬಿಡುವಿಕೆಯ ವೇಳೆ ತೇವಾಂಶಕ್ಕೆ ಬಹುಬೇಗನೆ ಹೊಂದಿಕೊಳ್ಳಬೇಕಾಗುತ್ತದೆ , ಆದರೆ ಪ್ರಸ್ತುತ ಹವಾಮಾನ ಅಡಿಕೆ ಬೆಳೆಗೆ ಪೂರಕವಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸುದ್ದಿಯ ಮೂಲ : kuensel online

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಬೇವಿನ ಬೀಜದಿಂದ ಆದಾಯದ ಅವಕಾಶ ! ಚಿಕ್ಕಮಗಳೂರಿನ ಯುವ ರೈತನ ಸಕ್ಸಸ್ ಸ್ಟೋರಿ

ಚಿಕ್ಕಮಗಳೂರಿನ ರೈತ ಶಿವಪ್ರಸಾದ್ ಬೇವಿನ ಬೀಜ ಸಂಸ್ಕರಣೆಯ ಮೂಲಕ ಯಶಸ್ಸು ಕಂಡಿದ್ದಾರೆ. ಅವರ…

2 days ago

ಕಡಿಮೆ ಮಳೆ ಮತ್ತು ಪಶ್ಚಿಮ ಏಷ್ಯಾ ಬಿಕ್ಕಟ್ಟು : ಭಾರತದ ಕೃಷಿಗೆ ಎದುರಾಗುತ್ತಿರುವ ಸವಾಲು

ಕಡಿಮೆ ಮಳೆ ಮತ್ತು ಪಶ್ಚಿಮ ಏಷ್ಯಾ ಬಿಕ್ಕಟ್ಟು ಭಾರತೀಯ ಕೃಷಿಗೆ ದೊಡ್ಡ ಹೊಡೆತವಾಗುವ…

3 days ago

ಯಾದಗಿರಿಯಲ್ಲಿ ಬಿಸಿಗಾಳಿ ಎಚ್ಚರಿಕೆ – ‘ಯೆಲ್ಲೋ ಅಲರ್ಟ್’ ಘೋಷಣೆ, ಮುನ್ನೆಚ್ಚರಿಕೆ ಪಾಲಿಸಿ..!

ಯಾದಗಿರಿಯಲ್ಲಿ ಬಿಸಿಗಾಳಿ ಹೆಚ್ಚಾಗುವ ಸಾಧ್ಯತೆ ಹಿನ್ನೆಲೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಸಾರ್ವಜನಿಕರು ಹಾಗೂ…

3 days ago

ಬೇಸಿಗೆಯಲ್ಲಿಯೂ ಎಳ್ಳು ಬೆಳೆದು ದಾಖಲೆ: ಕಲಬುರಗಿ ಯುವ ರೈತನಿಗೆ ರಾಜ್ಯದ ಮೆಚ್ಚುಗೆ!

ಬೇಸಿಗೆಯಲ್ಲಿಯೂ ಎಳ್ಳು ಬೆಳೆದು ಉತ್ತಮ ಇಳುವರಿ ಪಡೆದ ವಿಜಯಕುಮಾರ್ ಪಾಟೀಲ್ ಇತರ ರೈತರಿಗೆ…

3 days ago

2026 ಮುಂಗಾರು ಮುನ್ಸೂಚನೆ – ಕೇರಳಕ್ಕೆ ನಿರೀಕ್ಷೆಗಿಂತ ಮುನ್ನವೇ ಆಗಮನ? – ಮಳೆ ಕಡಿಮೆಯಾಗುವ ಸಾಧ್ಯತೆ- ಕೃಷಿಗೆ ದೊಡ್ಡ ಸವಾಲು

2026ರ ಮುಂಗಾರು ಬೇಗ ಆರಂಭವಾಗುವ ಸಾಧ್ಯತೆ ಇದ್ದರೂ, ಮಳೆಯ ಪ್ರಮಾಣ ಕಡಿಮೆಯಾಗಬಹುದು. ಇದು…

4 days ago

ಈರುಳ್ಳಿಯಲ್ಲಿ ಇಳುವರಿ ಹೆಚ್ಚಿಸುವ ರಹಸ್ಯ..! ಜೇನುನೊಣಗಳ ಪರಾಗಸ್ಪರ್ಶದಿಂದ ಡಬಲ್ ಲಾಭ

ಈರುಳ್ಳಿ ಬೆಳೆಯಲ್ಲಿ ಜೇನುನೊಣಗಳ ಪರಾಗಸ್ಪರ್ಶದಿಂದ ಇಳುವರಿ ಹೆಚ್ಚಿಸಬಹುದು ಎಂದು ತಜ್ಞರು ತಿಳಿಸಿದ್ದಾರೆ. ರೈತರಿಗೆ…

4 days ago