Advertisement
MIRROR FOCUS

ಅಡಿಕೆ ಬೆಳೆ ಸಮಸ್ಯೆ ನಮ್ಮಲ್ಲಿ ಮಾತ್ರವಲ್ಲ.. ಭೂತಾನ್‌ನಲ್ಲೂ ಇದೆ..! ಕಳೆದ 3 ವರ್ಷಗಳಿಂದ ಅಲ್ಲಿ ಏನಾಗುತ್ತಿದೆ..?

Share

ಅಡಿಕೆ ಬೆಳೆಯುವ ನಾಡುಗಳಲ್ಲಿ ಈಗ ವಿವಿಧ ರೋಗಗಳದ್ದೇ ಚರ್ಚೆ. ಎಲೆಚುಕ್ಕಿ, ಹಳದಿ ಎಲೆರೋಗ ಸೇರಿದಂತೆ ಎಳೆ ಅಡಿಕೆ ಬೀಳುವುದು ಚರ್ಚೆಯ ವಿಷಯ. ಕಳೆದ ಮೂರು ವರ್ಷಗಳಿಂದ ಎಲೆಚುಕ್ಕಿ ಜೋರಾಗಿ ಸದ್ದು ಮಾಡುತ್ತಿದೆ. ಈಗ ಎರಡು ವರ್ಷಗಳಿಂದ ವಿಪರೀತ ಎಳೆ ಅಡಿಕೆ ಬೀಳುವುದು ಸಮಸ್ಯೆ. ಅಡಿಕೆ ಬೆಳೆ ವಿಸ್ತರಣೆಯ ನಡುವೆ ಈ ಸಮಸ್ಯೆಗಳು ಸವಾಲಾಗಿದೆ. ಈ ನಡುವೆ ಅಡಿಕೆ ಬೆಳೆಯ ಸಮಸ್ಯೆ ಇಲ್ಲಿ ಮಾತ್ರವಲ್ಲ ಚೀನಾದಲ್ಲಿ, ಭೂತಾನ್‌ನಲ್ಲೂ ಇದೆ. ಕಳೆದ ಮೂರು ವರ್ಷಗಳಲ್ಲಿ ಭೂತಾನ್‌ ನಲ್ಲಿ ಅಡಿಕೆ ಉತ್ಪಾದನೆ ತೀರಾ ಇಳಿಮುಖವಾಗುತ್ತಿದೆ, ಅಡಿಕೆ ಮರಗಳು ಇದ್ದಕ್ಕಿದ್ದಂತೆ ಒಣಗುತ್ತಿದೆ.ಅಡಿಕೆ ಉತ್ಪಾದನೆ ತೀವ್ರವಾಗಿ ಕುಸಿದಿದೆ ಎಂದು ಅಲ್ಲಿನ ಮಾಧ್ಯಮ ವರದಿ ಮಾಡಿದೆ …… ಮುಂದೆ ಓದಿ……

ಭೂತಾನ್‌ನಲ್ಲಿ ಕಳೆದ ಮೂರು ವರ್ಷಗಳಲ್ಲಿ ನೆಟ್ಟ ಮರಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದರೂ ಅಡಿಕೆ ಉತ್ಪಾದನೆ ತೀವ್ರವಾಗಿ ಕುಸಿದಿದೆ ಎಂದು ಅಲ್ಲಿನ ಮಾಧ್ಯಮ ವರದಿ ಮಾಡಿದೆ. 2021 ರಲ್ಲಿ 21,400 ಮೆಟ್ರಿಕ್ ಟನ್  ಇದ್ದ ಅಡಿಕೆ ಇಳುವರಿ 2022 ರಲ್ಲಿ 11,100 ಮೆಟ್ರಿಕ್ ಟನ್ ಗೆ ಇಳಿದಿದೆ.ಇದಕ್ಕೆ ಪ್ರಮುಖವಾಗಿ ದೀರ್ಘಕಾಲದ ಚಳಿಗಾಲ, ಕೀಟಗಳ ಬಾಧೆ ಮತ್ತು ಅಡಿಕೆ ಮರ-ಗಿಡಗಳಲ್ಲಿ ರೋಗ ಬಾಧೆ  ಇಳುವರಿ ಕುಸಿಯಲು ಮತ್ತು ಮರಗಳು ಸಾಯಲು ಕಾರಣ ಎಂದು ರೈತರು ಹೇಳಿದ್ದಾರೆ.ಅಲ್ಲಿನ ಅಂಕಿಅಂಶದ ಪ್ರಕಾರ ಶೇ.50 ಅಡಿಕೆ ಫಸಲು ಮೂರು ವರ್ಷಗಳಿಂದ ಇಳಿಕೆಯಾಗಿದೆ.ಅಲ್ಲಿನ ರಾಷ್ಟ್ರೀಯ ಸರಾಸರಿಯು 2021 ರಲ್ಲಿ ಪ್ರತಿ ಮರಕ್ಕೆ 12 ಕಿಲೋಗ್ರಾಂಗಳಷ್ಟು ಇದ್ದದ್ದು 2022 ರಲ್ಲಿ 8 ಕೆಜಿ ಮತ್ತು 2023 ರಲ್ಲಿ 6 ಕೆಜಿಗೆ ಇಳಿದಿದೆ  ಅಂದರೆ ಉತ್ಪಾದಕತೆ ಕಡಿಮೆಯಾಗಿದೆ.

ಭೂತಾನ್‌ನಲ್ಲಿ ಪ್ರಮುಖವಾಗಿ ಅಡಿಕೆ ಉತ್ಪಾದನೆ ಮಾಡುವ ಜಿಲ್ಲೆ ಸ್ಯಾಮ್ಟೆ. ಇಲ್ಲಿ ಕೂಡಾ ಅಡಿಕೆಗೆ ವಿಪರೀತವಾದ ರೋಗ ಬಾಧೆ ಕಂಡುಬಂದಿದೆ. ಅಲ್ಲಿನ ಅಂಕಿ ಅಂಶದ ಪ್ರಕಾರ  ಆ ಜಿಲ್ಲೆಯಲ್ಲಿ  2021 ರಲ್ಲಿ 1.75 ಮಿಲಿಯನ್ ಇದ್ದ ಒಟ್ಟು ಮರಗಳ ಸಂಖ್ಯೆ 2023 ರ ವೇಳೆಗೆ 1.34 ಮಿಲಿಯನ್‌ಗೆ ಇಳಿದಿದೆ. ಪ್ರತಿ ಮರದ ಇಳುವರಿ 2021 ರಲ್ಲಿ 16 ಕೆಜಿಯಿಂದ 2022 ರಲ್ಲಿ 8 ಕೆಜಿಗೆ ಮತ್ತು 2023 ರಲ್ಲಿ 7 ಕೆಜಿಗೆ ಇಳಿದಿದೆ. ಇದೆಲ್ಲದರ ಕಾರಣದಿಂದ ರೈತರು ಆರ್ಥಿಕ ಸಂಕಷ್ಟಕ್ಕೂ ಒಳಗಾಗಿದ್ದಾರೆ. ಹವಾಮಾನವೇ ಪ್ರಮುಖವಾದ ಕಾರಣ ಎಂದು ರೈತರು ಹೇಳುತ್ತಾರೆ. ಹವಾಮಾನದಿಂದಾಗಿ, ಹೂಬಿಡುವ ಅವಧಿಯಲ್ಲಿ ಕೀಟಗಳು ವೃದ್ಧಿಯಾಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕೃಷಿ ಅಧಿಕಾರಿಗಳು ಹೇಳುತ್ತಾರೆ. ಅಡಿಕೆ ಹೂಬಿಡುವಿಕೆಯ ವೇಳೆ ತೇವಾಂಶಕ್ಕೆ ಬಹುಬೇಗನೆ ಹೊಂದಿಕೊಳ್ಳಬೇಕಾಗುತ್ತದೆ , ಆದರೆ ಪ್ರಸ್ತುತ ಹವಾಮಾನ ಅಡಿಕೆ ಬೆಳೆಗೆ ಪೂರಕವಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸುದ್ದಿಯ ಮೂಲ : kuensel online

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಸಮಯ ತಪ್ಪಿ ತಿಂದ ಆಹಾರವೇ ವಿಷವಾಗಬಹುದು – ರಾಘವೇಶ್ವರ ಶ್ರೀ

ಹಿತವಾದ ಆಹಾರವನ್ನು ಮಿತ ಪ್ರಮಾಣದಲ್ಲಿ ಮತ್ತು ಸಕಾಲದಲ್ಲಿ ಸೇವಿಸುವುದು ಆರೋಗ್ಯಕರ ಜೀವನದ ಮೂಲಮಂತ್ರ…

4 hours ago

ಭಾರೀ ಮಳೆ ಹಿನ್ನೆಲೆ – ಆಗಸ್ಟ್‌ 1ರಂದು ದಕ್ಷಿಣ ಕನ್ನಡದಲ್ಲಿ ಶಾಲೆ-ಕಾಲೇಜುಗಳಿಗೆ ರಜೆ

ಭಾರಿ ಮಳೆಯ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಅಂಗನವಾಡಿ, ಶಾಲೆ, ಪಿಯು, ಐಟಿಐ…

5 hours ago

ಹವಾಮಾನ ವರದಿ | 31-06-2026 | ಆಗಸ್ಟ್ 4ಕ್ಕೆ ಇನ್ನೊಂದು ವಾಯುಭಾರ ಕುಸಿತ ಸಾಧ್ಯತೆ..?

ಕರಾವಳಿ ಹಾಗೂ ಮಲೆನಾಡಿನಲ್ಲಿ ಆಗಸ್ಟ್ 1ರವರೆಗೆ ಬಿಟ್ಟು ಬಿಟ್ಟು ಉತ್ತಮ ಮಳೆಯ ಮುನ್ಸೂಚನೆ…

7 hours ago

ಸುಳ್ಯ ಸುತ್ತಮುತ್ತ ಭಾರೀ ಮಳೆ – ಬಾಳುಗೋಡಿನಲ್ಲಿ ಈ ವರ್ಷದ ಮೊದಲ ಸೇತುವೆ ಮುಳುಗಡೆ, ಹೊಳೆ-ತೋಡುಗಳು ತುಂಬಿ ಹರಿವು

ಸುಳ್ಯ ತಾಲೂಕಿನ ಬಾಳುಗೋಡು, ಹರಿಹರ, ಬಳ್ಪ, ಗುತ್ತಿಗಾರು, ಸುಬ್ರಹ್ಮಣ್ಯ ಸೇರಿದಂತೆ ಹಲವು ಗ್ರಾಮಗಳಲ್ಲಿ…

7 hours ago

ಹಲಸಿನ ಬೀಜದಿಂದ ಖನಿಜಾಂಶ ಸಮೃದ್ಧ ಆಹಾರ – ಬಾಂಗ್ಲಾದೇಶದ ವಿಜ್ಞಾನಿಗಳಿಂದ ಹೊಸ ತಂತ್ರಜ್ಞಾನಕ್ಕೆ ಪೇಟೆಂಟ್

ಬಾಂಗ್ಲಾದೇಶದ ವಿಜ್ಞಾನಿಗಳು ಹಲಸಿನ ಬೀಜದಿಂದ ಖನಿಜಾಂಶ ಸಮೃದ್ಧ ಆಹಾರ ತಯಾರಿಸುವ ತಂತ್ರಜ್ಞಾನಕ್ಕೆ ಪೇಟೆಂಟ್…

15 hours ago