ವಿದ್ಯಾರ್ಥಿಗಳ ಪರಿಸರ ಕಾಳಜಿ | ಫುಟ್‌ ಬಾಲ್‌ ಕ್ಲಬ್‌ ಮೂಲಕ ಸ್ವಚ್ಛತೆ ನಡೆಸಿದ ಪುಟಾಣಿ ತಂಡ |

July 30, 2024
5:57 AM
ಶಾಲಾ ವಿದ್ಯಾರ್ಥಿಗಳು ಸ್ವಚ್ಛತೆಯ ಅರಿವು ಮೂಡಿಸಿದರು. ಇನ್ನು ಹಿರಿಯರು ಇದನ್ನು ಗಮನಿಸಿದೇ ಹೋದರೆ ಹೇಗೆ..? ಸುಳ್ಯದ ಗುತ್ತಿಗಾರಿನಲ್ಲಿ ವಿದ್ಯಾರ್ಥಿಗಳ ತಂಡದ ಈ ಕಾರ್ಯವು ಎಲ್ಲೆಂದರಲ್ಲಿ ಕಸ ಎಸೆಯುವ ಮಂದಿಗೆ ಜಾಗೃತಿ ಮೂಡಿಸಬೇಕು.

ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಲು ಈಗ ವಿದ್ಯಾರ್ಥಿಗಳ ತಂಡವೂ ಹೆಜ್ಜೆ ಇರಿಸಿದೆ. ಪರಿಸರದ ಬಗ್ಗೆ ಕಾಳಜಿ, ಸ್ವಚ್ಛತೆಯ ಬಗ್ಗೆ ಅರಿವು ಇದೆರಡೂ ವಿದ್ಯಾರ್ಥಿಗಳ ಕಾಳಜಿಗಳಲ್ಲಿ ಒಂದು. ಅಂತಹದ್ದೊಂದು ಕಾರ್ಯ ಸುಳ್ಯ ತಾಲೂಕಿನ ಗುತ್ತಿಗಾರಿನಲ್ಲಿ ನಡೆದಿದೆ. ಗುತ್ತಿಗಾರಿನ ಐಎಫ್‌ಸಿ ಈ ಕಾರ್ಯಕ್ರಮ ಆಯೋಜಿಸಿತು.………ಮುಂದೆ ಓದಿ……..

ಐಎಫ್‌ಸಿ ಎಂದರೆ Important Football Club. ಇದರಲ್ಲಿ ಶಾಲಾ ವಿದ್ಯಾರ್ಥಿಗಳೇ ಇದ್ದಾರೆ. ಬಹುಪಾಲು ಮಂದಿ ಎಲ್ಲರೂ ಎಸ್‌ಎಸ್‌ಎಲ್‌ಸಿ -ಪಿಯುಸಿ ಒಳಗಿನ ವಿದ್ಯಾರ್ಥಿಗಳು. ಕ್ರೀಡೆಯ ಜೊತೆಗೆ  ಅವರ ಆಸಕ್ತಿ ಸ್ವಚ್ಛತೆ ಹಾಗೂ ಪರಿಸರ ಕಾಳಜಿ. ಈಚೆಗೆ ಈ ಕಾರ್ಯಕ್ರಮ ಉದ್ಘಾಟನೆಗೊಂಡು ಸ್ವಚ್ಛತಾ ಅರಿವು ಮೂಡಿಸಿದರು. ಈ ತಂಡದಲ್ಲಿ ಐಎಫ್‌ಸಿ ಅಧ್ಯಕ್ಷರಾದ ಮುಳಿಯ ಸಾತ್ವಿಕ್, ಉಪಾಧ್ಯಕ್ಷರಾದ ಕೌಶಿಕ್ ಶ್ಯಾಮ್, ಸುಮುಖ ರಾಮ್, ಮೋನಿಷ್ ಬಾಕಿಲ, ಪ್ರಧಾನ ಕಾರ್ಯದರ್ಶಿ ಆಶ್ಲೇಷ್   ಕೆ ಡಿ, ಕಾರ್ಯದರ್ಶಿಯರಾದ ಕಿರಣ್ ವಳಲಂಬೆ, ವರ್ಷಿತ್ ಕೆ, ಬಾಲಕೃಷ್ಣ ಉಜಿರಡ್ಕ, ರಾಕೇಶ್ ಮೆಟ್ಟಿನಡ್ಕ ಮತ್ತು ಸದಸ್ಯರಾದ ನಿಖಿಲ್ ಮತ್ತು ಆರ್ಯ ವೈ ಕೆ ಇದ್ದರು.

ಗುತ್ತಿಗಾರು ಪ್ರಾಥಮಿಕ ಕೃಷಿ ಸಹಕಾರ ಸಂಘದ ಅಧ್ಯಕ್ಷರಾದ ವೆಂಕಟ್ ದಂಬೆಕೋಡಿ ಅವರು ಐಎಫ್‌ಸಿ ಧ್ವಜವನ್ನು ತೆರೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ವರ್ತಕ ಸಂಘದ ಅಧ್ಯಕ್ಷ ಶಿವರಾಮ ಕರುವಜೆ,  ಎ.ವಿ. ತೀರ್ಥರಾಮ, ರವಿಪ್ರಕಾಶ್ , ಚಂದ್ರಶೇಖರ ಕಡೋಡಿ, ಕೃಷ್ಣಯ್ಯ ಮೂಲೆತೋಟ ಮತ್ತು ತೇಜಸ್ವಿನಿ ಕಟ್ಟೆಪುಣಿ ಮೊದಲಾದವರಿದ್ದರು.

A group of students has recently taken initiative to raise awareness about cleanliness. Concerned about the environment, promoting cleanliness is a top priority for these students. A recent event in Guthigar, Sullia Taluk, organized by contractor IFC, showcased their efforts in this regard.

IFC stands for Important Football Club, which consists of school students, predominantly from SSLC-PUC. In addition to their passion for sports, the members of this club also share a common interest in cleanliness and environmental awareness. Recently, a program was launched to promote cleanliness, and the members actively raised awareness about the importance of maintaining a clean environment.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ವಳಲಂಬೆಯಲ್ಲಿ ಎ.19 ರಂದು ‘ಸಂಗೀತ ಸಂಭ್ರಮ’
April 15, 2026
10:40 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 15-04-2026 | ಕರ್ನಾಟಕದಲ್ಲಿ ಬಿಸಿಗಾಳಿಯ ನಡುವೆ ಮಳೆಯ ಸುಳಿವು – ಏಪ್ರಿಲ್ 18 ರಿಂದ ಮಳೆ…!
April 15, 2026
2:01 PM
by: ಸಾಯಿಶೇಖರ್ ಕರಿಕಳ
ವಿಷು ಹಬ್ಬದ ಅರ್ಥವೇನು ಗೊತ್ತಾ..? ಸೂರ್ಯ ಸಂಕ್ರಮಣದ ಈ ರಹಸ್ಯ ನಿಮ್ಮ ಜೀವನವೇ ಬದಲಾಯಿಸಬಹುದು..!
April 15, 2026
8:02 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ಬೇಸಿಗೆ ಬಿತ್ತನೆ ಭರ್ಜರಿ ಏರಿಕೆ..! 64 ಲಕ್ಷ ಹೆಕ್ಟೇರ್ ದಾಟಿದ ಕೃಷಿ ವ್ಯಾಪ್ತಿ, 0.77 ಲಕ್ಷ ಹೆಕ್ಟೇರ್ ಹೆಚ್ಚಳ
April 15, 2026
7:47 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror