ಅಡಿಕೆ ಸಿಪ್ಪೆಯ ಅಂಶಗಳು ಬ್ಯಾಟರಿ ತಂತ್ರಜ್ಞಾನಕ್ಕೆ ಬಳಕೆ | ಅಡಿಕೆ ಸಿಪ್ಪೆಯ ಪರ್ಯಾಯ ಬಳಕೆಯ ಹೆಜ್ಜೆ |

December 12, 2023
7:36 PM
ಅಡಿಕೆ ಸಿಪ್ಪೆಯ ಅಂಶಗಳನ್ನು ಬ್ಯಾಟರಿ ತಂತ್ರಜ್ಞಾನದಲ್ಲಿ ಬಳಕೆ ಮಾಡುವ ಬಗ್ಗೆ ಅಧ್ಯಯನ ನಡೆದಿದೆ.

ಅಡಿಕೆ ಸಿಪ್ಪೆಯ ಹೊಸ ಬಳಕೆಯ ಬಗ್ಗೆ ಕೆಲವು ವರ್ಷಗಳಿಂದ ಅಧ್ಯಯನ ನಡೆಯುತ್ತಿತ್ತು. ಇದೀಗ ಸಂಶೋಧಕರ ತಂಡವು ಅಡಿಕೆ ಸಿಪ್ಪೆಯ ಅಂಶಗಳನ್ನು ಬ್ಯಾಟರಿ ತಂತ್ರಜ್ಞಾನದಲ್ಲಿ ಬಳಕೆ ಮಾಡುವ ಬಗ್ಗೆ ಅಧ್ಯಯನ ಮಾಡಿದ್ದಾರೆ. ಇದು ಹೊಸ ಸಾಧ್ಯತೆಯನ್ನು ತೆರೆದಿರಿಸಿದೆ.

Advertisement
Advertisement

ಹೊಸ ಬೆಳೆವಣಿಗೆಯೊಂದರಲ್ಲಿ ಅಡಿಕೆ ಸಿಪ್ಪೆಯೂ ಈಗ ಬಳಕೆಯ ಕಡೆಗೆ ಹೆಜ್ಜೆ ಹಾಕುತ್ತಿದೆ. ಭವಿಷ್ಯದಲ್ಲಿ ಅಡಿಕೆ ಸಿಪ್ಪೆಯ ಬೇಡಿಕೆಯ ಸಾಧ್ಯತೆಯನ್ನು ತೆರೆದಿರಿಸಿದೆ. ಸಂಶೋಧಕರ ತಂಡವು ಅಡಿಕೆಯ ಸಿಪ್ಪೆಯಿಂದ ನ್ಯಾನೊ ಸಂಯುಕ್ತಗಳನ್ನು ಯಶಸ್ವಿಯಾಗಿ ಪ್ರತ್ಯೇಕಿಸಿ, ಬ್ಯಾಟರಿ ತಂತ್ರಜ್ಞಾನದಲ್ಲಿ ಪ್ರಗತಿಗೆ ದಾರಿ ಮಾಡಿಕೊಟ್ಟಿದೆ. ತಂಡವು ಲಿಥಿಯಂ-ಐಯಾನ್ ಬ್ಯಾಟರಿಗಳಲ್ಲಿ ಬಳಸಲು ನ್ಯಾನೊ ಸಿಲಿಕಾನ್ ಅನ್ನು ಅಡಿಕೆ ಸಿಪ್ಪೆಯಿಂದ ಉತ್ಪಾದಿಸಿದೆ. ಅಡಿಕೆ ಸಿಪ್ಪೆಯಿಂದ ಬೇರ್ಪಟ್ಟ ಸಿಲಿಕಾನ್ ನ್ಯಾನೊಕಾಂಪೊಸಿಟ್‌ಗಳ ವಿಶಿಷ್ಟ ಆಕಾರ ಮತ್ತು ರಚನೆಯು ಬ್ಯಾಟರಿಯು ಬಹು ಕಾಲದ ಚಾರ್ಜ್ ಮತ್ತು ಡಿಸ್ಚಾರ್ಜ್ ಗಳಿಗೆ ಒಳಗಾಗಲು ಅನುವು ಮಾಡಿಕೊಡುತ್ತದೆ ಎನ್ನುವುದು ಸಂಶೋಧನೆಯಿಂದ ತಿಳಿದಿದೆ.

ಕೇರಳದ ಕಣ್ಣೂರು ವಿಶ್ವವಿದ್ಯಾನಿಲಯದ ಸ್ವಾಮಿ ಅನಂತ ತೀರ್ಥ ಕ್ಯಾಂಪಸ್‌ನ ಸ್ಕೂಲ್ ಆಫ್ ಕೆಮಿಕಲ್ ಸೈನ್ಸಸ್‌ನ ಪ್ರಮುಖ ಸಂಶೋಧಕರಾದ ಅಂಜಲಿ ಪರವನ್ನೂರ್ ಮತ್ತು ಬೈಜು ವಿಜಯನ್ ಅವರ ಪ್ರಕಾರ, ಈ ಸಿಲಿಕಾನ್ ಆಧಾರಿತ ಲಿಥಿಯಂ ಬ್ಯಾಟರಿಗಳು ಪ್ರಸ್ತುತ ಪ್ರಚಲಿತದಲ್ಲಿರುವ ಗ್ರ್ಯಾಫೈಟ್ ಆಧಾರಿತ ಎಲೆಕ್ಟ್ರೋಡ್‌ಗಳಿಗೆ ಹೋಲಿಸಿದರೆ ನಾಲ್ಕು ಪಟ್ಟು ಶೇಖರಣಾ ಸಾಮರ್ಥ್ಯವನ್ನು ಪ್ರದರ್ಶಿಸುತ್ತವೆ.

ಅಡಿಕೆ ಸಿಪ್ಪೆಯನ್ನು ಮೌಲ್ಯವರ್ಧಿತ ಉತ್ಪನ್ನಗಳಾಗಿ ಪರಿವರ್ತಿಸುವ ಮೂಲಕ, ಈ ತಂಡವು ಕೃಷಿ ತ್ಯಾಜ್ಯವನ್ನು ನಿರ್ವಹಿಸಲು ಪ್ರಾಯೋಗಿಕ ಪರಿಹಾರವನ್ನು ನೀಡಿದೆ, ಮಾತ್ರವಲ್ಲ ಪರಿಸರ ಸ್ನೇಹಿಯಾದ ಮಹತ್ತರವಾದ ಹೆಜ್ಜೆಯೂ ಆಗಿದೆ.

A new use for Arecanut husks has been under study for a few years. Now a team of researchers has studied the use of Arecanut shell components in battery technology. This opens up new possibilities.

Advertisement

Source : The Hindu

Advertisement

Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ವಿಶ್ವಪರಿಸರ ದಿನ | ತಾಯಿಯ ಹೆಸರಲ್ಲಿ ಒಂದು ಮರ -2.0 ಅಭಿಯಾನ
June 5, 2025
7:47 AM
by: The Rural Mirror ಸುದ್ದಿಜಾಲ
ಮದುವೆಯ ವಿಳಂಬಕ್ಕೆ ಈ ಕಾರಣವೂ ಇರಬಹುದು..! ಪರಿಹಾರ ಕ್ರಮಗಳು ಇಲ್ಲಿದೆ ನೋಡಿ
June 5, 2025
7:17 AM
by: ದ ರೂರಲ್ ಮಿರರ್.ಕಾಂ
ಅಡುಗೆಯ ಕಚ್ಚಾ ಎಣ್ಣೆಯ ಮೇಲಿನ ಆಮದು ಸುಂಕ ಕಡಿತ | ತೆಂಗಿಗಿಲ್ಲ ಆತಂಕ.. | ಧಾರಣೆ ಇಳಿಕೆಯ ಆತಂಕವಿಲ್ಲ |
June 4, 2025
11:06 AM
by: ಡಾ|ವಿಘ್ನೇಶ್ವರ ಭಟ್‌ ವರ್ಮುಡಿ
ಅರಣ್ಯದ ಬಗ್ಗೆ ಹೊಸ ಪ್ರಜ್ಞೆಯನ್ನು ಜನರು ಜಾಗೃತಗೊಳಿಸಬೇಕು
June 4, 2025
7:27 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group