#SuccessStory #Agriculture | ಹಾಲು ಮಾರಿ 1 ಕೋಟಿಯ ಬಂಗ್ಲೆ ಕಟ್ಟಿಕೊಂಡ ಹೈನುಗಾರ | ಪ್ರತಿನಿತ್ಯ ನಡೆಯುತ್ತದೆ ಇಲ್ಲಿ ಗೋಮಾತೆ ಆರಾಧನೆ |

June 26, 2023
1:16 PM

ಹೈನುಗಾರಿಕೆ #DairyFarming ಲಾಭದಾಯಕ ಅಲ್ಲ ಅನ್ನೋದು ಅನೇಕ ರೈತರ ಮಾತು. ಆದರೆ ಜೀವನ ಮಾತ್ರ ಅದರಿಂದ ಸಾಗೋದು ಪಕ್ಕಾ. ಅತ್ಯಧಿಕ ಲಾಭ ದೊರೆಯದಿದ್ದರು ಜೀವನಕ್ಕೆ ಒಂದು ಆಧಾರ ಈ ಹೈನುಗಾರಿಕೆ ಅಂದರೆ ತಪ್ಪಾಗಲಾರದು. ಆದರೆ ಇಲ್ಲೊಬ್ಬರು ಹೈನುಗಾರಿಕೆಯನ್ನು ನಂಬಿ ತಮ್ಮ ಜೀವನವನ್ನೇ ಕಟ್ಟಿಕೊಂಡಿದ್ದಾರೆ. ಅದು ಐಷರಾಮಮಿ ಮನೆ ಕಟ್ಟಿಕೊಳ್ಳುವ ಮೂಲಕ.ಹೇಗೆ ಅವರ ಸಾಧನೆ….?

ಪ್ರಕಾಶ್ ಇಮ್ಡೆ ಅವರು ಮೂಲತಃ ಮಹಾರಾಷ್ಟ್ರದ ಸೋಲಾಪುರದವರು. ಹಸುವಿನ ಹಾಲು #Milk ಮಾರಾಟ ಮಾಡಿಯೇ ಇವರು 1 ಕೋಟಿ ರೂಪಾಯಿ ಮೌಲ್ಯದ ಬಂಗಲೆ ಕಟ್ಟಿಕೋಂಡಿದ್ದಾರೆ. ರೈತ ಪ್ರಕಾಶ್ ಇಮ್ಡೆ ಅವರ ಯಶಸ್ಸಿನ ಕಥೆ ಶುರುವಾಗಿದ್ದು ಕೇವಲ ಒಂದು ಹಸುವಿನಿಂದ.  ಇದುವರೆಗೂ ತಮ್ಮ ಒಂದು ಕರುವನ್ನೂ ಮಾರಾಟ ಮಾಡಿಲ್ಲ. ಹಾಗಾಗಿಯೇ ಇಂದಿಗೂ ಅವರ ಬಳಿ 150 ಕ್ಕೂ ಹೆಚ್ಚು ಹಸುಗಳಿವೆ. 2006 ರಲ್ಲಿ ಹಸು ಲಕ್ಷ್ಮಿ ಮರಣದ ನಂತರ, ಅವರು ಅದರ ವಂಶಾವಳಿಯನ್ನು ಮುಂದುವರೆಸಿದ್ದರು. ಆದರೆ ಈಗ 150ಕ್ಕೂ ಹೆಚ್ಚು ಹಸಗಳೊಂದಿಗೆ ಡೈರಿ ಫಾರ್ಮ್ ನಡೆಸುತ್ತಿದ್ದಾರೆ.

ಸ್ಥಳೀಯರು ಪ್ರೀತಿಯಿಂದ ಪ್ರಕಾಶ್‌ ಇಮ್ಡೆ ಅವರನ್ನು ಬಾಪು ಎಂದು ಕರೆಯುತ್ತಾರಂತೆ. ಪ್ರತಿ ದಿನ ಮೊದಲು ಹಸು ಲಕ್ಷ್ಮಿಯ ಚಿತ್ರಕ್ಕೆ ಪ್ರಾರ್ಥನೆ ಸಲ್ಲಿಸುವ ಮೂಲಕ ದಿನದ ಕೆಲಸವನ್ನು ಪ್ರಾರಂಭಿಸುತ್ತಾರೆ.

ಪ್ರಕಾಶ್‌ ಇಮ್ಡೆ ನಿರ್ಮಿಸಿದ ಬಂಗಲೆಗೆ ಗೋಧನ್ ನಿವಾಸ ಎಂದು ಹೆಸರು ನೀಡಿದ್ದಾರೆ. 1998ರಲ್ಲಿ ಹಸುವಿನ ಹಾಲು ಮತ್ತು ಸಗಣಿ ಮಾರಾಟ ಮಾಡುವ ಉದ್ಯಮ ಆರಂಭಿಸಿದರು. ಆರಂಭದಲ್ಲಿ ಇವರು ತಮ್ಮ ಗ್ರಾಮದ ನಿವಾಸಿಗಳಿಗೆ ಹಾಲು ಮಾರುತ್ತಿದ್ದರು. ಕೇವಲ ಒಂದು ಹಸುವಿನ ಮೇಲೆ ಅವಲಂಬಿತವಾದ ವ್ಯಾಪಾರದಿಂದ, ಅವರು ಈಗ 150 ಕ್ಕೂ ಹೆಚ್ಚು ಹಸುಗಳೊಂದಿಗೆ ಡೈರಿ ಫಾರ್ಮ್ ಅನ್ನು ನಡೆಸುತ್ತಿದ್ದಾರೆ. ಪ್ರಸ್ತುತ ಫಾರ್ಮ್ ದಿನಕ್ಕೆ 1,000 ಲೀಟರ್ ಹಾಲು ಉತ್ಪಾದಿಸುತ್ತದೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಕೀಟನಾಶಕಗಳ ಅತಿಯಾದ ಬಳಕೆ ನಿಯಂತ್ರಣಕ್ಕೆ ನೈಸರ್ಗಿಕ ಕೃಷಿಯೇ ಮದ್ದು
June 23, 2026
7:37 AM
by: ದ ರೂರಲ್ ಮಿರರ್.ಕಾಂ
ಭಾರೀ ಮಳೆ ಎಚ್ಚರಿಕೆ : 13 ರಾಜ್ಯಗಳಿಗೆ IMD ಅಲರ್ಟ್‌ | ಉಳಿದೆಡೆ ಉಷ್ಣ ಅಲೆ ಮುಂದುವರಿಕೆ
June 23, 2026
7:25 AM
by: ದ ರೂರಲ್ ಮಿರರ್.ಕಾಂ
ಕೆಳದಿ ಶಿವಪ್ಪ ನಾಯಕ ಕೃಷಿ ವಿವಿ ಆಡಳಿತ ಮಂಡಳಿಗೆ ಇಬ್ಬರ ನಾಮನಿರ್ದೇಶನ
June 22, 2026
9:01 PM
by: ದ ರೂರಲ್ ಮಿರರ್.ಕಾಂ
ಅಕ್ರಮವಾಗಿ ಅಡಿಕೆ ಆಮದು ಪ್ರಕರಣಕ್ಕೆ ಮತ್ತೊಂದು ಹಿನ್ನಡೆ – ₹2.22 ಕೋಟಿ ಅಡಿಕೆ ಜಪ್ತಿ ಪ್ರಕರಣದಲ್ಲಿ ಕಸ್ಟಮ್ಸ್ ಕ್ರಮಕ್ಕೆ ಹೈಕೋರ್ಟ್ ಮನ್ನಣೆ
June 22, 2026
7:56 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror